ಕುತೂಹಲಕರ ಘಟ್ಟದಲ್ಲಿ ಹಾವೇರಿಜಿಲ್ಲಾ ನೌಕರರ ಸಂಘ ಚುನಾವಣೆ; 3 ಸ್ಥಾನಗಳಿಗೆ 6ಜನ ಸ್ಪರ್ಧೆ
ಹಾವೇರಿ: ಕರ್ನಾ ಟಕ ರಾಜ್ಯ ಸರ್ಕಾರಿ ನೌಕ ರರ ಸಂಘದ ಹಾವೇರಿಜಿಲ್ಲಾ
ಘಟಕದ 2024-2029ನೇ ಸಾಲಿನ ಅವಧಿ ಜಿಲ್ಲಾಧ್ಯಕ್ಷರು, ಜಿಲ್ಲಾ ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯರ ಆಯ್ಕೆಗೆ ಡಿ.4ರಂದು ಚುನಾವಣೆ ನಡೆಯಲಿದ್ದು, ಮೂರು ಹುದ್ದೆಗಳಿಗೆ ಆರು ಜನ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದಿಗ ಚುನಾವಣೆ ಕೂತುಹಲಕರ ಘಟ್ಟ ತಲುಪಿದ್ದು, ಆರು ಜನರಲ್ಲಿ ಮೂವರನ್ನು ಆಯ್ಕೆ ಮಾಡುವ ಹಕ್ಕನ್ನು 64ಜನ ಮತದಾರರು ಹೊಂದಿದ್ದಾರೆ.
ಚನಾವಣಾ ವೇಳಾಪಟ್ಟಿಯ ಪ್ರಕಾರ ಜಿಲ್ಲಾಧ್ಯಕ್ಷರು, ಜಿಲ್ಲಾ ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯರ ಆಯ್ಕೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದ ಬುಧವಾರ ಸಂಜೆ 5ರವರೆಗೆ ದಿನಾಂಕ: 27-11-2024 ಸಂಜೆ 5.00 ಗಂಟೆವರೆಗೆ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸಿದ್ದಣ್ಣ ಯಲಿಗಾರ, ಕರಿಗಾರ ಮಲ್ಲೇಶ ನಾಮಪತ್ರ ಸಲ್ಲಿಸಿದ್ದಾರೆ. ಖಜಾಂಚಿ ಸ್ಥಾನಕ್ಕೆ ಕಮಗಾಲ ದಾವಲಸಾಬ, ಶಂಕರ ನಾಯ್ಕ, ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಅಕ್ಷಯ ಗುರುನಾಥ ಪಾಟೀಲ,ಮುನೀಶ್ವರ ಚೂರಿ ನಾಮಪತ್ರ ಸಲ್ಲಿಸಿದ್ದಾರೆ.ನಾಮಪತ್ರಗಳ ಪರಿಶೀಲನೆ ನ.28ರಂದು ನಡೆಯಲಿದ್ದು, ಪರಿಶೀಲನೆ ನಂತರ ಉಮೇದುವಾರಿಕೆ ವಾಪಸ್ಸು ಪಡೆಯಲು ನ.29ಕೊನೆ ದಿನವಾ ಗಿದೆ. ಒಂದು ವೇಳೆ 6ಜನರಲ್ಲಿ 3ನಾಮಪತ್ರಗಳನ್ನು ವಾಪಾಸು ಪಡೆದರೆ, ಜಿಲ್ಲಾ ಸಂಘಕ್ಕೆ ಅವಿರೋಧ ಆಯ್ಕೆ ನಡೆಯಲಿದೆ. ನಾಮ ಪತ್ರಗಳನ್ನು ವಾಪಾಸು ಪಡೆಯದಿದ್ದರೇ ಡಿ.4ರಂದು ಜಿಲ್ಲಾ ಸಂಘದ ಕಚೇರಿಯಲ್ಲಿ ಮೂರು ಸ್ಥಾನಗಳ ಆಯ್ಕೆಗೆ ಚುನಾವಣೆ ನಡೆಯಲಿದೆ. ಎರಡು ಬಣಗಳ ನಡುವೆ ನೇರ ಸ್ಪರ್ಧೆ ಇದ್ದು, ಮತದಾರರು ಯಾರನ್ನು ಆಯ್ಕೆ ಮಾಡು ವರೋ ಕಾದು ನೋಡಬೇಕಿದೆ. ಸದ್ಯಕ್ಕಂತು ಹಾವೇರಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ ಕೂತುಹಲಕರ ಘಟ್ಟ ತಲುಪಿದೆ.