
ಗುತ್ತಲದಲ್ಲಿ ಮಾಜಿ ಪ್ರಧಾನಿ ದೇವೇಗೌಡ್ರ ೯೪ ನೇ ಹುಟ್ಟು ಹಬ್ಬ ಆಚರಣೆ
ಹಾವೇರಿ : ಹೇಮಾವತಿಯ ವರ ಪುತ್ರ, ರಾಜಕೀಯ ಭೀಷ್ಮ, ದೇಶ ಕಂಡ ಅಪ್ರತಿಮ ನಾಯಕ, ಸೂರ್ಯರತ್ನ ಪ್ರಶಸ್ತಿ ಹಾಗೂ ಬಸವ ಪ್ರಶಸ್ತಿ ಪುರಸ್ಕೃತರು, ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಏಕೈಕ ಕನ್ನಡಿಗ ಮಾಜಿ ಪ್ರಧಾನಮಂತ್ರಿ ಹಾಗೂ ಹಾಲಿ ರಾಜ್ಯ ಸಭಾ ಸದಸ್ಯರಾದ ಹೆಚ್.ಡಿ. ದೇವೆಗೌಡರ ೯೪ ನೇ ವರ್ಷದ ಹುಟ್ಟು ಹಬ್ಬವನ್ನು ತಾಲೂಕ ಗುತ್ತಲ ಪಟ್ಟಣದ ಸಿದ್ಧೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಹಾಗೂ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ, ರೋಗಿಗಳ ಆರೋಗ್ಯ ವಿಚಾರಿಸಿ, ಹಣ್ಣು -ಹಂಪಲು ವಿತರಿಸುವ ಮೂಲಕ ಜೆ ಡಿ ಎಸ್ ರಾಜ್ಯ ಉಪಾಧ್ಯಕ್ಷ ಕೆ.ಎಸ್. ಸಿದ್ಧಬಸಪ್ಪ ಯಾದವ್ ಹಾಗೂ ಪಕ್ಷದ ಮುಖಂಡರೊಂದಿಗೆ ಆಚರಿಸಲಾಯಿತು.
ಜೆ ಡಿ ಎಸ್ ರಾಜ್ಯ ಉಪಾಧ್ಯಕ್ಷ ಕೆ ಎಸ್ ಸಿದ್ಧಬಸಪ್ಪ ಯಾದವ್ ಮಾತನಾಡಿ ಹೆಚ್ ಡಿ ದೇವೆಗೌಡರು ಪ್ರಧಾನ ಮಂತ್ರಿಗಳಾದ ಸಂರ್ಭದಲ್ಲಿ ಕರ್ನಾಟಕಕ್ಕೆ ಪ್ರತ್ಯೇಕ ರೇಲ್ವೆ ವಲಯ ಹುಬ್ಬಳ್ಳಿ ರೇಲ್ವೆ ವರ್ಕಶಾಪಿಗೆ ಕಾಯಕಲ್ಪ ನೀಡಿದರು. ೧೧ ತಿಂಗಳಲ್ಲಿ ರಾಜ್ಯದಲ್ಲಿ ೧೦೦೦ ಕಿ. ಮೀ ರೈಲು ಮಾರ್ಗ, ಆಲಮಟ್ಟಿ ಆಣೆಕಟ್ಟಿನ ಎತ್ತರದ ಹೆಚ್ಚಳ, ಉತ್ತರ ಕರ್ನಾಟಕಕ್ಕೆ ೧೭ ಹೊಸ ಸಕ್ಕರೆ ಕಾರ್ಖಾನೆಗಳು. ರಾಜ್ಯದ ಯು,ಕೆ,ಪಿ ಗೆ ಕೇಂದ್ರದಿಂದ ಹಣಕಾಸಿನ ನೆರವು ನೀಡಿದರು. ರಕ್ಷಣ ಇಲಾಖೆ ಜಾಗ ಬಿ ಬಿ ಎಮ್ ಪಿ ಗೆ ಹಸ್ತಾಂತರ, ಬಡವರಿಗೆಲ್ಲ ಪಡಿತರ ಅನ್ನಭಾಗ್ಯ, ಬೆಂಗಳೂರಿಗೆ ಭಗೀರಥರಾದ ದೇವೆಗೌಡರು ಭದ್ರಾವತಿ ಉಕ್ಕಿನ ಕಾರ್ಖಾನೆ, ರಾಜ್ಯದ ಕೇಂದ್ರ ಉದ್ಯಮಿಗಳು ಮತ್ತು ಕಾರ್ಮಿಕರಿಗೆ ಕಾಯಕಲ್ಪ ನೀಡಿದರು. ಬೆಂಗಳೂರಿಗೆ ಮೂಲಸೌಕರ್ಯ ಗ್ರಾಮೀಣ ಅಭಿವೃದ್ಧಿಗೆ ವಿಶೇಷ ಆಧ್ಯತೆ ನೀಡಿದರು ಎಂದರು.
ಈ ಸಂದರ್ಭದಲ್ಲಿ ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ. ಪ್ರಭಾಕರ ಕುಂದೂರ, ಡಾ. ದೀಪ್ತಿ ಮಮದಾಪುರ, ಡಾ. ಬೀರೇಶ, ಡಾ. ವಿದ್ಯಾ ಅನಂತರಡ್ಡಿ, ಕೃಷ್ಣಪ್ಪ ಕನ್ನಮ್ಮನವರ, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಲಿಂಗರಾಜ, ಮಾಲತೇಶ ಪುಟ್ಟನಗೌಡ್ರ, ರಜಾಕಸಾಬ ಕೊಕ್ಕರಗುಂದಿ, ರಾಜು ನದಾಫ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.

