ಗೋಕಾಕ ವರದಿ ಅನುಷ್ಠಾನಕ್ಕಾಗಿ ಆಗ್ರಹಿಸಿ ಹಿಂಡಲಗಾ ಜೇಲು ಸೇರಿದ್ದ “ಹಾವೇರಿಗರಿಗೆ ಸಿಕ್ಕಿಲ್ಲ ಹಾವೇರಿನ್ಯಾಯ”!

Date:

ಶಿವಬಸಪ್ಪ ಚೌಶೆಟ್ಟಿ ಅವರು ಹಿಂಡಲಗಾ ಜೇಲಿನಲ್ಲಿದ್ದ ಬಗ್ಗೆ ದಾಖಲೆ.

ಗೋಕಾಕ ವರದಿ ಅನುಷ್ಠಾನಕ್ಕಾಗಿ ಆಗ್ರಹಿಸಿ ಹಿಂಡಗಾ ಜೇಲು ಸೇರಿದ್ದ                           “ಹಾವೇರಿಗರಿಗೆ ಸಿಕ್ಕಿಲ್ಲ ಹಾವೇರಿನ್ಯಾಯ”!
ಮಾಲತೇಶ ಅಂಗೂರ
ಹಾವೇರಿ: ಕನ್ನಡಕ್ಕಾಗಿ ನಡೆದ ಹೋರಾಟಗಳಲ್ಲಿ ಗಟ್ಟಿ ಧ್ವನಿಮೊಳಗಿಸುವಲ್ಲಿ ಯಾವಗಲೂ ಸದಾ ಮುಂದಡಿ ಇಡುವ ಉತ್ತರ ಕರ್ನಾಟಕದ ಹೆಬ್ಬಾಗಲು ಹಾವೇರಿಜಿಲ್ಲೆ ಜನರು ರಾಜ್ಯದ ಇತರೆಡೆಗಿಂತ ಒಂದು ಹೆಜ್ಜೆಮುಂದು. ಈಹಿಂದೆ ಅಂದರೆ ಗುಂಡುರಾವ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಗೋಕಾಕ ವರದಿ ಅನುಷ್ಠಾನಕ್ಕಾಗಿ ಆಗ್ರಹಿಸಿ ನಡೆದ ಚಳುವಳಿಯಲ್ಲಿ ಮೊದಲಿರಾಗಿ ಹಾವೇರಿಜಿಲ್ಲೆಯ ಕನ್ನಡಪರ ಹೋರಾಟಗಾರರು ಭಾಗವಹಿಸಿ ಬೆಳಗಾವಿಯ ಹಿಂಡಲಗಾ ಜೇಲಿನಲ್ಲಿ ಮೂರುದಿನಗಳಕಾಲ ಇದ್ದುಬಂದಿದ್ದರು. ಇದೀಗ ಕನ್ನಡದ ಗಟ್ಟಿ ನೆಲದಲ್ಲಿ ನಡೆದಿರುವ ೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಈ ಹೋರಾಟಗಾರರನ್ನು ಕಡೆಗಣಿಸುವ ಮೂಲಕ ಹಾವೇರಿಯ ಹೋರಾಟಗಾರರಿಗೆ ಹಾವೇರಿಯನ್ಯಾಯ ಸಿಕ್ಕಿಲ್ಲ.
೧೯೮೩ರಸುಮಾರಿನಲ್ಲಿ ಕನ್ನಡ ನಾಡು ನುಡಿ ಉಳಿವಿಗಾಗಿ ಹಾಗೂ ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿ ಕನ್ನಡ ಜಾರಿಗೆ ಆಗಬೇಕೆಂದು ಆರಂಭವಾದ ಗೋಕಾಕ ಚಳುವಳಿ ಕಾವು ಪಡೆದುಕೊಳ್ಳುತ್ತಿದ್ದ ಕಾಲವದು. ದಿ.ಪಾಪು, ದಿ.ಚಂದ್ರಶೇಖರ ಪಾಟೀಲ ಅವರುಗಳು ಕೇಂದ್ರ ಕನ್ನಡ ಕ್ರಿಯಾ ಸಮಿತಿಯನ್ನು ರಚಿಸಿಕೊಂಡು ಹೋರಾಟ ಆರಂಭಿಸಿದ್ದ ವೇಳೆ ಹಾವೇರಿಂiiಲ್ಲಿ ಕನ್ನಡಪರ ಹೋರಾಟಗಾರರು ಚಳುವಳಿ ನಡೆಸಿದರು. ಇಲ್ಲಿನ ಪುರಸಿದ್ದೇಶ್ವರ ದೇವಸ್ಥಾನದಿಂದ ೧೦೦ಕ್ಕೂ ಹೆಚ್ಚುಜನರು ಅಂದಿನ ಕನ್ನಡ ವಿರೋಧಿ ಸರ್ಕಾರದ ವಿರುದ್ಧ ಧಿಕ್ಕಾರಕೂಗುತ್ತಾ ಎಂಜಿರಸ್ತೆಯ ಮೂಲಕ ತಹಶೀಲ್ದಾರ ಕಚೇರಿಗೆ ಮನವಿ ಕೊಡಲು ಪ್ರತಿಭಟನಾ ಮೆರವಣಿಗೆಯ ಮೂಲಕ ಆಗಮಿಸುತ್ತಿದ್ದ ವೇಳೆ ಪೊಲೀಸರು ಈ ೬೩ಹೋರಾಟಗಾರರನ್ನು ಬಂಧಿಸಿ ಬೆಳಗಾವಿಬಳಿಯ ಹಿಂಡಲಗಾ ಜೇಲಿಗೆ ಹಾಕಿದ್ದರು. ಹಾವೇರಿ ನಗರ ನೂರಾರು ಜನರು ಭಾಗವಹಿಸಿದ್ದರು ಅವರಲ್ಲಿ ೬೩ ಜನರು ಈ ಚಳಿವಳಿಯ ಸಂದರ್ಭದಲ್ಲಿ ಬಂಧಿತರಾಗಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸಿದ್ದರು.
ಕನ್ನಡ ನಾಡು ನುಡಿಗಾಗಿ ನಡೆದ ಹೋರಾಟದಲ್ಲಿ ಹೋರಾಡಿ ಜೇಲು ಸೇರಿ ಮೂರುದಿನ ಶಿಕ್ಷೆ ಅನುಭವಿಸಿ ಬಂದ ಈ ೬೩ ಜನರಲ್ಲಿ ಸಾರ್ವಜನಿಕರು ಹೇಳುವಂತೆ ಅಬ್ಬಾಬ್ಬಾ ಎಂದರೂ ಈಗ ೧೫ರಿಂದ ೨೦ಜನರು ಜನ ಜೀವಿಸಿರಬಹುದು. ಪ್ರಮುಖವಾಗಿ ಸಕ್ರಿಯವಾಗಿರುವವರು ಕಾ.ರುದ್ರಪ್ಪ ಜಾಬೀನ, ಅಶೋಕಸಿಂಗ್ ರಜಪೂತ, ಎಮ್.ಎಸ್.ಕೋರಿಶೆಟ್ಟರ್, ಶಿವಬಸಪ್ಪ ಚೌಶೆಟ್ಟಿ, ಸಾತೇನಹಳ್ಳಿ, ಎಸ್.ಕೆ.ಕಳ್ಳಿಮನಿ, ಸೇರಿದಂತೆ ಪ್ರಮುಖರಿದ್ದಾರೆ. ಆದರೆ ಇವರು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಗಮನಕ್ಕೆ ಬಾರದಿರುವುದು ವಿಷಾದಕರ ಸಂಗತಿಯಾಗಿದೆ.
ಅಖಿಲ ಭಾರತ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ ನಗರದಲ್ಲಿ ಜ.೬ರಿಂದ ೮ರವರೆಗೆ ಜರಗುತ್ತಿದೆ. ಇಂತಹ ಸಂದರ್ಭದಲ್ಲಿ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿದ್ದ ಹಾವೇರಿ ಜಿಲ್ಲೆಯವರನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ಅದು ದೊಡ್ಡ ಪಟ್ಟಿಯಾಗುತ್ತದೆ ಎಂದು ಅಂದುಕೊಂಡರೂ ಕನಿಷ್ಟ ಪಕ್ಷ ಹಾವೇರಿ ನಗರದ ಮಹನೀಯರನ್ನು ಗಣನೆಗೆ ತಗೆದುಕೊಂಡು ಅವರಿಗೆ ಸನ್ಮಾನಿಸುವ ಮೂಲಕ ಪರಿಷತ್ತು ತನ್ನನ್ನೆ ತಾನು ಗೌರವಿಸಿಕೊಳ್ಳ ಬಹುದಾದ ಅವಕಾಶವನ್ನು ಕಳೆದುಕೊಂಡಿದೆ.
ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡುವಂತೆ ಆಗ್ರಹಿಸಿ ೮೦ರ ದಶಕದಲ್ಲಿ ಆರಂಭವಾಗಿದ್ದ ವಿ.ಕೃ.ಗೋಕಾಕ್ ಚಳುವಳಿಗೆ ರಾಜ್ಯದ ಮೂಲ ಮೂಲೆಯಿಂದ ಜನತೆ ಆಗಮಿಸಿದಂತೆ ಹಾವೇರಿ ಜಿಲ್ಲೆಯಿಂದಲೂ ಅನೇಕರು ಪಾಲ್ಗೊಂಡಿದ್ದರು. ಇಂತಹವರಲ್ಲಿ ಹಾವೇರಿ ನಗರದ ೬೩ ಜನರು ಎನ್ನುವುದು ಹೆಮ್ಮೆಯ ಸಂಗತಿ. ರಾಜ್ಯದಲ್ಲಿ ಕನ್ನಡ ಪ್ರಥಮ ಭಾಷೆಯಾಗಿ ಜಾರಿಗೆ ಆಗಬೇಕೆಂದು ಹೋರಾಡದ ಇಂತಹ ಮಹನೀಯರನ್ನು ಗಣನೆಗೆ ತಗೆದುಕೊಳ್ಳದೇ ಇದ್ದುದು ವಿಪರ್ಯಾಸದ ಸಂಗತಿ. ಕನ್ನಡ ನಾಡು ನುಡಿಗಾಗಿ ಹೋರಾಡಿದವರನ್ನು ಕಡೆಗಣಿಸಿದ್ದು ದೊಡ್ಡ ತಪ್ಪು. ಇಂತಹ ಮಹನೀಯರಿಗೆ ಗೌರವ ಸಲ್ಲಿಸುವ ಮೂಲಕ ಆದ ತಪ್ಪನ್ನು ಸರಿಪಡಿಸುವ ಕೆಲಸಕ್ಕೆ ಜಿಲ್ಲಾಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮುಂದಾಗುವುದೇ ಕಾದು ನೋಡಬೇಕು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಶಿವಬಸಪ್ಪ ಚೌಶೆಟ್ಟಿ ಅವರು ಹಿಂಡಲಗಾ ಜೇಲಿನಲ್ಲಿದ್ದ ಬಗ್ಗೆ ದಾಖಲೆ.

ಗೋಕಾಕ ವರದಿ ಅನುಷ್ಠಾನಕ್ಕಾಗಿ ಆಗ್ರಹಿಸಿ ಹಿಂಡಗಾ ಜೇಲು ಸೇರಿದ್ದ                           “ಹಾವೇರಿಗರಿಗೆ ಸಿಕ್ಕಿಲ್ಲ ಹಾವೇರಿನ್ಯಾಯ”!
ಮಾಲತೇಶ ಅಂಗೂರ
ಹಾವೇರಿ: ಕನ್ನಡಕ್ಕಾಗಿ ನಡೆದ ಹೋರಾಟಗಳಲ್ಲಿ ಗಟ್ಟಿ ಧ್ವನಿಮೊಳಗಿಸುವಲ್ಲಿ ಯಾವಗಲೂ ಸದಾ ಮುಂದಡಿ ಇಡುವ ಉತ್ತರ ಕರ್ನಾಟಕದ ಹೆಬ್ಬಾಗಲು ಹಾವೇರಿಜಿಲ್ಲೆ ಜನರು ರಾಜ್ಯದ ಇತರೆಡೆಗಿಂತ ಒಂದು ಹೆಜ್ಜೆಮುಂದು. ಈಹಿಂದೆ ಅಂದರೆ ಗುಂಡುರಾವ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಗೋಕಾಕ ವರದಿ ಅನುಷ್ಠಾನಕ್ಕಾಗಿ ಆಗ್ರಹಿಸಿ ನಡೆದ ಚಳುವಳಿಯಲ್ಲಿ ಮೊದಲಿರಾಗಿ ಹಾವೇರಿಜಿಲ್ಲೆಯ ಕನ್ನಡಪರ ಹೋರಾಟಗಾರರು ಭಾಗವಹಿಸಿ ಬೆಳಗಾವಿಯ ಹಿಂಡಲಗಾ ಜೇಲಿನಲ್ಲಿ ಮೂರುದಿನಗಳಕಾಲ ಇದ್ದುಬಂದಿದ್ದರು. ಇದೀಗ ಕನ್ನಡದ ಗಟ್ಟಿ ನೆಲದಲ್ಲಿ ನಡೆದಿರುವ ೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಈ ಹೋರಾಟಗಾರರನ್ನು ಕಡೆಗಣಿಸುವ ಮೂಲಕ ಹಾವೇರಿಯ ಹೋರಾಟಗಾರರಿಗೆ ಹಾವೇರಿಯನ್ಯಾಯ ಸಿಕ್ಕಿಲ್ಲ.
೧೯೮೩ರಸುಮಾರಿನಲ್ಲಿ ಕನ್ನಡ ನಾಡು ನುಡಿ ಉಳಿವಿಗಾಗಿ ಹಾಗೂ ಕರ್ನಾಟಕದಲ್ಲಿ ಆಡಳಿತ ಭಾಷೆಯಾಗಿ ಕನ್ನಡ ಜಾರಿಗೆ ಆಗಬೇಕೆಂದು ಆರಂಭವಾದ ಗೋಕಾಕ ಚಳುವಳಿ ಕಾವು ಪಡೆದುಕೊಳ್ಳುತ್ತಿದ್ದ ಕಾಲವದು. ದಿ.ಪಾಪು, ದಿ.ಚಂದ್ರಶೇಖರ ಪಾಟೀಲ ಅವರುಗಳು ಕೇಂದ್ರ ಕನ್ನಡ ಕ್ರಿಯಾ ಸಮಿತಿಯನ್ನು ರಚಿಸಿಕೊಂಡು ಹೋರಾಟ ಆರಂಭಿಸಿದ್ದ ವೇಳೆ ಹಾವೇರಿಂiiಲ್ಲಿ ಕನ್ನಡಪರ ಹೋರಾಟಗಾರರು ಚಳುವಳಿ ನಡೆಸಿದರು. ಇಲ್ಲಿನ ಪುರಸಿದ್ದೇಶ್ವರ ದೇವಸ್ಥಾನದಿಂದ ೧೦೦ಕ್ಕೂ ಹೆಚ್ಚುಜನರು ಅಂದಿನ ಕನ್ನಡ ವಿರೋಧಿ ಸರ್ಕಾರದ ವಿರುದ್ಧ ಧಿಕ್ಕಾರಕೂಗುತ್ತಾ ಎಂಜಿರಸ್ತೆಯ ಮೂಲಕ ತಹಶೀಲ್ದಾರ ಕಚೇರಿಗೆ ಮನವಿ ಕೊಡಲು ಪ್ರತಿಭಟನಾ ಮೆರವಣಿಗೆಯ ಮೂಲಕ ಆಗಮಿಸುತ್ತಿದ್ದ ವೇಳೆ ಪೊಲೀಸರು ಈ ೬೩ಹೋರಾಟಗಾರರನ್ನು ಬಂಧಿಸಿ ಬೆಳಗಾವಿಬಳಿಯ ಹಿಂಡಲಗಾ ಜೇಲಿಗೆ ಹಾಕಿದ್ದರು. ಹಾವೇರಿ ನಗರ ನೂರಾರು ಜನರು ಭಾಗವಹಿಸಿದ್ದರು ಅವರಲ್ಲಿ ೬೩ ಜನರು ಈ ಚಳಿವಳಿಯ ಸಂದರ್ಭದಲ್ಲಿ ಬಂಧಿತರಾಗಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸಿದ್ದರು.
ಕನ್ನಡ ನಾಡು ನುಡಿಗಾಗಿ ನಡೆದ ಹೋರಾಟದಲ್ಲಿ ಹೋರಾಡಿ ಜೇಲು ಸೇರಿ ಮೂರುದಿನ ಶಿಕ್ಷೆ ಅನುಭವಿಸಿ ಬಂದ ಈ ೬೩ ಜನರಲ್ಲಿ ಸಾರ್ವಜನಿಕರು ಹೇಳುವಂತೆ ಅಬ್ಬಾಬ್ಬಾ ಎಂದರೂ ಈಗ ೧೫ರಿಂದ ೨೦ಜನರು ಜನ ಜೀವಿಸಿರಬಹುದು. ಪ್ರಮುಖವಾಗಿ ಸಕ್ರಿಯವಾಗಿರುವವರು ಕಾ.ರುದ್ರಪ್ಪ ಜಾಬೀನ, ಅಶೋಕಸಿಂಗ್ ರಜಪೂತ, ಎಮ್.ಎಸ್.ಕೋರಿಶೆಟ್ಟರ್, ಶಿವಬಸಪ್ಪ ಚೌಶೆಟ್ಟಿ, ಸಾತೇನಹಳ್ಳಿ, ಎಸ್.ಕೆ.ಕಳ್ಳಿಮನಿ, ಸೇರಿದಂತೆ ಪ್ರಮುಖರಿದ್ದಾರೆ. ಆದರೆ ಇವರು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಗಮನಕ್ಕೆ ಬಾರದಿರುವುದು ವಿಷಾದಕರ ಸಂಗತಿಯಾಗಿದೆ.
ಅಖಿಲ ಭಾರತ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ ನಗರದಲ್ಲಿ ಜ.೬ರಿಂದ ೮ರವರೆಗೆ ಜರಗುತ್ತಿದೆ. ಇಂತಹ ಸಂದರ್ಭದಲ್ಲಿ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿದ್ದ ಹಾವೇರಿ ಜಿಲ್ಲೆಯವರನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ಅದು ದೊಡ್ಡ ಪಟ್ಟಿಯಾಗುತ್ತದೆ ಎಂದು ಅಂದುಕೊಂಡರೂ ಕನಿಷ್ಟ ಪಕ್ಷ ಹಾವೇರಿ ನಗರದ ಮಹನೀಯರನ್ನು ಗಣನೆಗೆ ತಗೆದುಕೊಂಡು ಅವರಿಗೆ ಸನ್ಮಾನಿಸುವ ಮೂಲಕ ಪರಿಷತ್ತು ತನ್ನನ್ನೆ ತಾನು ಗೌರವಿಸಿಕೊಳ್ಳ ಬಹುದಾದ ಅವಕಾಶವನ್ನು ಕಳೆದುಕೊಂಡಿದೆ.
ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡುವಂತೆ ಆಗ್ರಹಿಸಿ ೮೦ರ ದಶಕದಲ್ಲಿ ಆರಂಭವಾಗಿದ್ದ ವಿ.ಕೃ.ಗೋಕಾಕ್ ಚಳುವಳಿಗೆ ರಾಜ್ಯದ ಮೂಲ ಮೂಲೆಯಿಂದ ಜನತೆ ಆಗಮಿಸಿದಂತೆ ಹಾವೇರಿ ಜಿಲ್ಲೆಯಿಂದಲೂ ಅನೇಕರು ಪಾಲ್ಗೊಂಡಿದ್ದರು. ಇಂತಹವರಲ್ಲಿ ಹಾವೇರಿ ನಗರದ ೬೩ ಜನರು ಎನ್ನುವುದು ಹೆಮ್ಮೆಯ ಸಂಗತಿ. ರಾಜ್ಯದಲ್ಲಿ ಕನ್ನಡ ಪ್ರಥಮ ಭಾಷೆಯಾಗಿ ಜಾರಿಗೆ ಆಗಬೇಕೆಂದು ಹೋರಾಡದ ಇಂತಹ ಮಹನೀಯರನ್ನು ಗಣನೆಗೆ ತಗೆದುಕೊಳ್ಳದೇ ಇದ್ದುದು ವಿಪರ್ಯಾಸದ ಸಂಗತಿ. ಕನ್ನಡ ನಾಡು ನುಡಿಗಾಗಿ ಹೋರಾಡಿದವರನ್ನು ಕಡೆಗಣಿಸಿದ್ದು ದೊಡ್ಡ ತಪ್ಪು. ಇಂತಹ ಮಹನೀಯರಿಗೆ ಗೌರವ ಸಲ್ಲಿಸುವ ಮೂಲಕ ಆದ ತಪ್ಪನ್ನು ಸರಿಪಡಿಸುವ ಕೆಲಸಕ್ಕೆ ಜಿಲ್ಲಾಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮುಂದಾಗುವುದೇ ಕಾದು ನೋಡಬೇಕು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...