ಚರಂಡಿಯಲ್ಲಿ ಕೊಚ್ಚಿಹೋದ ಬಾಲಕ ನಿವೇದನ ಮರಣ-ನಗರಸಭೆ ಇಬ್ಬರು ಅಧಿಕಾರಿಗಳ ತಲೆದಂಡ
ಹಾವೇರಿ: ಅರಣ್ಯ ಇಲಾಖೆಯವರು ಮರ ತೆರವುಗೊಳಿಸಿದ ನಂತರ ಗುಂಡಿಯನ್ನು ಮುಚ್ಚುವಲ್ಲಿ ನಿಲರ್ಕ್ಷತೋರಿದ ಕಾರಣಕ್ಕೆ ಆ ಗುಂಡಿ ಕಾಣದೇ ಗುರುವಾರ ಚರಂಡಿಯಲ್ಲಿ ತುಂಬಿಹರಿಯುತ್ತಿರುವ ನೀರಿನಲ್ಲಿ ಕೊಚ್ಚಿಹೋಗಿ ನಿವೇದನ ಗುಡುಗೇರಿ ಮೃತಪಟ್ಟಿರುತ್ತಾನೆ. ಈ ಅವಗಡಕ್ಕೆ ನಗರಸಭೆಯ ಪೌರಾಯುಕ್ತ ಪರಶುರಾಮ ಚಲವಾದಿ, ಕಿರಿಯ ಆರೋಗ್ಯ ನಿರೀಕ್ಷಕ ರಮೇಶ ಮುಂಜೋಜಿ ಕಾರಣರೆಂದು ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ವಿಜಯಮಾಂಹಾಂತೇಶ ದಾನಮ್ಮನವರ ಗುರುವಾರ ಸಂಜೆ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರ ಸೂಚನೆಯ ಮೇರೆಗೆ ಈ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಹಾವೇರಿ ನಗರಸಭೆ ವ್ಯಾಪ್ತಿಯಲ್ಲಿ ವಾರ್ಡ೦೯ ರಲ್ಲಿ ಶಿವಾಜಿನಗರ ೩ನೇ ಕ್ರಾಸ್ ಯುನಿಯನ್ ಬ್ಯಾಂಕ್ ಹತ್ತಿರ ಇರುವ ದೊಡ್ಡ ಅಲದಮರವನ್ನು ಕೊರೆಯಲು ನಗರಸಭೆ ಪೌರಾಯುಕ್ತರ ವಿನಂತಿ ಮೇರೆಗೆ ಗಟಾರ ಆಗಲಿಕರಣಕ್ಕಾಗಿ ಹಾವೇರಿ ವಲಯ ಅರಣ್ಯ ಅಧಿಕಾರಿಗಳು ಆಲದಮರವನ್ನು ತೆರವುಗೊಳಿಸಿದ್ದರು.
ತೆರೆವುಗೊಳಿಸಿದ ನಂತರ ಚರಂಡಿಯ ಮೇಲೆ ಇರುವ ಕಲ್ಲನ್ನು ಮುಚ್ಚದೆ ಹಾಗೆ ಬಿಟ್ಟಿರುವುದರಿಂದ ಅ.೧೭ರ ಗುರುವಾರ ಮುಂಜಾನೆ ಸಮಯದಲ್ಲಿ ಸ್ಥಳೀಯ ನಿವಾಸಿ ನಿವೇದನ ಬಸವರಾಜ ಗುಡುಗೇರಿ(೧೨) ಧಾರಾಕಾರ ಮಳೆಯಿಂದ ಚರಂಡಿಯಲ್ಲಿ ತುಂಬಿಹರಿಯುತ್ತಿರುವ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿರುತ್ತಾನೆ.
ಈ ದುರ್ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ನಗರಸಭೆ ಸಂಬಂಧಿಸಿದ ಸಿಬ್ಬಂದಿಯವರನ್ನು ಕೂಡಲೇ ಅಮಾನತುಗೊಳಿಸಲು ದೂರವಾಣಿ ಮೂಲಕ ತಿಳಿಸಿದ ಹಿನ್ನಲೆಯಲ್ಲಿ ಪೌರಾಯುಕ್ತರು ಮತ್ತು ಕಿರಿಯ ಆರೋಗ್ಯ ನಿರೀಕ್ಷಕರು ತೆರೆದ ಚರಂಡಿಯನ್ನು ಮುಚ್ಚದೆ ಕರ್ತವ್ಯದಲ್ಲಿ ನಿರ್ಲಕ್ಷತನ ತೋರಿರುವುದು ಈ ದುರ್ಘಟನೆಗೆ ಕಾರಣ ಎಂಬುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.
ಪೌರಾಯುಕ್ತರನ್ನು ಹಾಗೂ ದುರ್ಘಟನೆ ನಡೆದ ವ್ಯಾಪ್ತಿಯ ಕಿರಿಯ ಆರೋಗ್ಯ ನಿರೀಕ್ಷಕರ ವಿರುದ್ಧ ಪ್ರಕೃತಿ ವಿಕೋಪ ಕಾಯ್ದೆ ೨೦೦೫ ಕಲಂ ೫೬ರಡಿ ಮತ್ತು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು ೨೦೨೧ ನಿಯಮ ೦೩ ನೇದ್ದನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು ೧೯೫೭ರ ನಿಯಮ ೧೦ರ ಅನ್ವಯ ಶಿಸ್ತುಕ್ರಮ ಜರುಗಿಸಲು ಸರ್ಕಾರಕ್ಕೆ ಘಟನ್ನೋತ್ತರ ಮಂಜೂರಾತಿಯನ್ನು ನಿರೀಕ್ಷಿಸಿ ಸದರಿಯವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಪೌರಾಯುಕ್ತರ ಹುದ್ದೆಯ ಪ್ರಭಾರವನ್ನು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ವೀರಮಲ್ಲಪ್ಪ ಪೂಜಾರ, ಅವರು ತಕ್ಷಣವೇ ವಹಿಸಿಕೊಳ್ಳಲು ಆದೇಶಿಸಿದ್ದಾರೆ.
ಚರಂಡಿಯಲ್ಲಿ ಕೊಚ್ಚಿಹೋದ ಬಾಲಕ ನಿವೇದನ ಮರಣ-ನಗರಸಭೆ ಇಬ್ಬರು ಅಧಿಕಾರಿಗಳ ತಲೆದಂಡ
Date:
ಚರಂಡಿಯಲ್ಲಿ ಕೊಚ್ಚಿಹೋದ ಬಾಲಕ ನಿವೇದನ ಮರಣ-ನಗರಸಭೆ ಇಬ್ಬರು ಅಧಿಕಾರಿಗಳ ತಲೆದಂಡ
ಹಾವೇರಿ: ಅರಣ್ಯ ಇಲಾಖೆಯವರು ಮರ ತೆರವುಗೊಳಿಸಿದ ನಂತರ ಗುಂಡಿಯನ್ನು ಮುಚ್ಚುವಲ್ಲಿ ನಿಲರ್ಕ್ಷತೋರಿದ ಕಾರಣಕ್ಕೆ ಆ ಗುಂಡಿ ಕಾಣದೇ ಗುರುವಾರ ಚರಂಡಿಯಲ್ಲಿ ತುಂಬಿಹರಿಯುತ್ತಿರುವ ನೀರಿನಲ್ಲಿ ಕೊಚ್ಚಿಹೋಗಿ ನಿವೇದನ ಗುಡುಗೇರಿ ಮೃತಪಟ್ಟಿರುತ್ತಾನೆ. ಈ ಅವಗಡಕ್ಕೆ ನಗರಸಭೆಯ ಪೌರಾಯುಕ್ತ ಪರಶುರಾಮ ಚಲವಾದಿ, ಕಿರಿಯ ಆರೋಗ್ಯ ನಿರೀಕ್ಷಕ ರಮೇಶ ಮುಂಜೋಜಿ ಕಾರಣರೆಂದು ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ವಿಜಯಮಾಂಹಾಂತೇಶ ದಾನಮ್ಮನವರ ಗುರುವಾರ ಸಂಜೆ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರ ಸೂಚನೆಯ ಮೇರೆಗೆ ಈ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಹಾವೇರಿ ನಗರಸಭೆ ವ್ಯಾಪ್ತಿಯಲ್ಲಿ ವಾರ್ಡ೦೯ ರಲ್ಲಿ ಶಿವಾಜಿನಗರ ೩ನೇ ಕ್ರಾಸ್ ಯುನಿಯನ್ ಬ್ಯಾಂಕ್ ಹತ್ತಿರ ಇರುವ ದೊಡ್ಡ ಅಲದಮರವನ್ನು ಕೊರೆಯಲು ನಗರಸಭೆ ಪೌರಾಯುಕ್ತರ ವಿನಂತಿ ಮೇರೆಗೆ ಗಟಾರ ಆಗಲಿಕರಣಕ್ಕಾಗಿ ಹಾವೇರಿ ವಲಯ ಅರಣ್ಯ ಅಧಿಕಾರಿಗಳು ಆಲದಮರವನ್ನು ತೆರವುಗೊಳಿಸಿದ್ದರು.
ತೆರೆವುಗೊಳಿಸಿದ ನಂತರ ಚರಂಡಿಯ ಮೇಲೆ ಇರುವ ಕಲ್ಲನ್ನು ಮುಚ್ಚದೆ ಹಾಗೆ ಬಿಟ್ಟಿರುವುದರಿಂದ ಅ.೧೭ರ ಗುರುವಾರ ಮುಂಜಾನೆ ಸಮಯದಲ್ಲಿ ಸ್ಥಳೀಯ ನಿವಾಸಿ ನಿವೇದನ ಬಸವರಾಜ ಗುಡುಗೇರಿ(೧೨) ಧಾರಾಕಾರ ಮಳೆಯಿಂದ ಚರಂಡಿಯಲ್ಲಿ ತುಂಬಿಹರಿಯುತ್ತಿರುವ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿರುತ್ತಾನೆ.
ಈ ದುರ್ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ನಗರಸಭೆ ಸಂಬಂಧಿಸಿದ ಸಿಬ್ಬಂದಿಯವರನ್ನು ಕೂಡಲೇ ಅಮಾನತುಗೊಳಿಸಲು ದೂರವಾಣಿ ಮೂಲಕ ತಿಳಿಸಿದ ಹಿನ್ನಲೆಯಲ್ಲಿ ಪೌರಾಯುಕ್ತರು ಮತ್ತು ಕಿರಿಯ ಆರೋಗ್ಯ ನಿರೀಕ್ಷಕರು ತೆರೆದ ಚರಂಡಿಯನ್ನು ಮುಚ್ಚದೆ ಕರ್ತವ್ಯದಲ್ಲಿ ನಿರ್ಲಕ್ಷತನ ತೋರಿರುವುದು ಈ ದುರ್ಘಟನೆಗೆ ಕಾರಣ ಎಂಬುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.
ಪೌರಾಯುಕ್ತರನ್ನು ಹಾಗೂ ದುರ್ಘಟನೆ ನಡೆದ ವ್ಯಾಪ್ತಿಯ ಕಿರಿಯ ಆರೋಗ್ಯ ನಿರೀಕ್ಷಕರ ವಿರುದ್ಧ ಪ್ರಕೃತಿ ವಿಕೋಪ ಕಾಯ್ದೆ ೨೦೦೫ ಕಲಂ ೫೬ರಡಿ ಮತ್ತು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು ೨೦೨೧ ನಿಯಮ ೦೩ ನೇದ್ದನ್ನು ಕರ್ನಾಟಕ ನಾಗರೀಕ ಸೇವಾ ನಿಯಮಗಳು ೧೯೫೭ರ ನಿಯಮ ೧೦ರ ಅನ್ವಯ ಶಿಸ್ತುಕ್ರಮ ಜರುಗಿಸಲು ಸರ್ಕಾರಕ್ಕೆ ಘಟನ್ನೋತ್ತರ ಮಂಜೂರಾತಿಯನ್ನು ನಿರೀಕ್ಷಿಸಿ ಸದರಿಯವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಪೌರಾಯುಕ್ತರ ಹುದ್ದೆಯ ಪ್ರಭಾರವನ್ನು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ವೀರಮಲ್ಲಪ್ಪ ಪೂಜಾರ, ಅವರು ತಕ್ಷಣವೇ ವಹಿಸಿಕೊಳ್ಳಲು ಆದೇಶಿಸಿದ್ದಾರೆ.