ಚುಟುಕು ಸಾಹಿತ್ಯಕ್ಕೆ ಪತ್ರಿಕೆಗಳು ಹೆಚ್ಚಿನ ಆದ್ಯತೆ ನೀಡಲಿ ;ಡಾ.ಸುಬುಧೇಂದ್ರ ತೀರ್ಥ, ಶ್ರೀ ಪಾದಂಗಳು

Date:

ಹಾವೇರಿ: ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು
 ಚುಟುಕು ಸಾಹಿತ್ಯವನ್ನು ಕಡೆಗಣಿಸುತ್ತಿವೆ.
ಕೆಲವು ವರ್ಷಗಳ ಹಿಂದೆ ಚುಟುಕು ಪದ್ಯಗಳಿಲ್ಲದೆ ಪತ್ರಿಕೆ ಪ್ರಕಟವಾಗುತ್ತಿರಲಿಲ್ಲ. ಆದರೆ ಕ್ರಮೇಣ ಚುಟುಕು ಪದ್ಯಗಳು ಪತ್ರಿಕೆಗಳಲ್ಲಿ ಕಣ್ಮರೆಯಾಗುತ್ತಾ ಬಂದವು, ಕಡಿಮೆ ಪದಗಳಲ್ಲಿ ಅಗಾಧವಾದ ಜೀವನಾನುಭವ ಕಟ್ಟಿಕೊಡುವ ಚುಟುಕು ಪದ್ಯಗಳಿಗೆ ಪತ್ರಿಕೆಗಳು ಹೆಚ್ಚಿನ ಆದ್ಯತೆ ನೀಡಿ ಚುಟುಕು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಬೇಕೆಂದು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ  ಡಾ.ಸುಬುಧೇಂದ್ರ ತೀರ್ಥ, ಶ್ರೀ ಪಾದಂಗಳು ಅವರು ಕರೆ ನೀಡಿದರು.
ಡಿ.25 ರಂದು ಮಂತ್ರಾಲಯದ ರಾಯರ ಮಠದ ಯಜ್ಞ ಶಾಲೆಯ ಶ್ರೀ ಸುಷಮೀಂದ್ರ ವೇದಿಕೆಯಲ್ಲಿ
 ಕರ್ನಾಟಕ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಹುಬ್ಬಳ್ಳಿ
ಹಾಗೂ ರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯ
 ಇವರ ಸಂಯುಕ್ತ ಆಶ್ರಯದಲ್ಲಿ  ಅಖಿಲ ಭಾರತ ಕ ಚು ಸಾ ಪ ನಾಲ್ಕನೇ ಸಮ್ಮೇಳನ, ದಶಮಾನೋತ್ಸವ ಸಂಭ್ರಮ, ಗೌರವ ಪ್ರಶಸ್ತಿ ಪ್ರದಾನ
ಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಭಾಷೆ ಆಗಲಿ ಹತ್ತು ಹಲವು ಆಲೋಚನೆ ಗಳಿಂದ ಸಾಹಿತಿ ಭಾವಾಭಿ
ಅಭಿವ್ಯಕ್ತಿ ಪಡಿಸುವ ಚುಟುಕು ಮೂಲಕ ವೈಶಿಷ್ಟ್ಯ ಪೂರ್ಣ ಸಾಹಿತ್ಯ ಅನಾವರಣ ಗೊಳಿಸುತ್ತಾನೆ.
ಕರ್ನಾಟಕ ರಾಜ್ಯದಲ್ಲೂ ಅನೇಕ ಹೆಸರಾಂತ ಸಾಹಿತಿಗಳು ಕೇವಲ ಎರಡು ಮೂರು ಸಾಲಿನಲ್ಲಿ ಅಂತ್ಯಂತ ತೀಕ್ಷಣವಾದ ವಿಚಾರ ಪ್ರಚೋದಕ ಸದಭಿರುಚಿಯ ಸಾಹಿತ್ಯ ರಚನೆ ಮಾಡಿದ್ದಾರೆ. ಚುಟುಕು ಸಾಹಿತ್ಯದ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಕೇಲಸ ಆಗಬೇಕು.ಈ ನಿಟ್ಟಿನಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಉತ್ತಮ ಕೆಲಸ ಮಾಡುತ್ತಿದೆ . ಕಲೆ, ಸಾಹಿತ್ಯ, ಸಂಸ್ಕೃತಿ, ಕಾರ್ಯಕ್ರಮಗಳಿಗೆ ಶ್ರೀ ಮಂತ್ರಾಲಯದ ಮಠವು ಜಾತಿ ಬೇಧ ಎನ್ನದೆ ಪ್ರೋತ್ಸಾಹ ನೀಡುತ್ತಿದೆ ಎಂದು ಶ್ರೀಗಳು ತಿಳಿಸಿದರು.
 ಇಂದು ಪ್ರತಿಯೊಬ್ಬರೂ ಸುಖ ಬಯಸುತ್ತಾರೆ, ಕ್ಷಣಿಕ ಸುಖದಿಂದ ಸಂತೃಪ್ತಿ ಅಸಾಧ್ಯ . ಜೀವನದಲ್ಲಿ ಸಾಧಿಸ ಬೇಕೆಂಬ ಅಚಲವಾದ ಗುರಿ ಬೇಕು. ಶಾಂತಿ , ಸಹನೆ , ಶೃದ್ದೆಯ ಮೂಲಕ  ನಮ್ಮಗಳ ಕೆಲಸಗಳಲ್ಲಿ ಪರಿಣಿತಿ ಸಾಧಿಸಿ ಯಶಸ್ಸು ಕಾಣಬಹುದು ಎಂದು  ಡಾ.ಸುಬುಧೇಂದ್ರ ತೀರ್ಥ, ಶ್ರೀ ಪಾದಂಗಳು  ಹೇಳಿದರು.
ಸಮ್ಮೇಳನದ ಸರ್ವಾಧಕ್ಷ ಪಂಡಿತ್ ರಾಘವೇಂದ್ರ ಸ್ವಾಮಿಗಳ ಮಠದ ವ್ಯವಸ್ಥಾಪಕ ಎಸ್ ಕೆ ಶ್ರೀನಿವಾಸ್ ರಾವ್ , ಮಂತ್ರಾಲಯದ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಪ್ರಾಚಾರ್ಯ ಎನ್. ವಾದಿರಾಜ ಆಚಾರ್ಯ,ಕಚುಸಾಪ ಪ್ರಸಾರಾಂಗ ನಿರ್ದೆಶಕ ಚನ್ನಬಸಪ್ಪ ಧಾರವಾಡ ಶೆಟ್ಟರ್  ಮತ್ತಿತರರು ಉಪಸ್ಥಿತರಿದ್ದರು.
ಪರಿಷತ್ತು  ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ ವಿವಿಧ ಶಾಲೆಗಳಿಗೆ ೧.೫೦ಲ್ಷ ಪುಸ್ತಕಗಳನ್ನು ವಿತರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ವಾಚನಾಭಿರುಚಿ ಮೂಡಿಸುವ ಕಾರ್ಯಮಾಡುತ್ತಿದೆ ಎಂದರು.
ಗಂಗಯ್ಯ  ಕುಲಕರ್ಣಿ ಸ್ವಾಗತಿಸಿದರು,
ಜಿ.ಡಿ . ಮುತಾಲಿಕ್ ದೇಸಾಯಿ ವಂದಿಸಿದರು.
ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

 

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿ: ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು
 ಚುಟುಕು ಸಾಹಿತ್ಯವನ್ನು ಕಡೆಗಣಿಸುತ್ತಿವೆ.
ಕೆಲವು ವರ್ಷಗಳ ಹಿಂದೆ ಚುಟುಕು ಪದ್ಯಗಳಿಲ್ಲದೆ ಪತ್ರಿಕೆ ಪ್ರಕಟವಾಗುತ್ತಿರಲಿಲ್ಲ. ಆದರೆ ಕ್ರಮೇಣ ಚುಟುಕು ಪದ್ಯಗಳು ಪತ್ರಿಕೆಗಳಲ್ಲಿ ಕಣ್ಮರೆಯಾಗುತ್ತಾ ಬಂದವು, ಕಡಿಮೆ ಪದಗಳಲ್ಲಿ ಅಗಾಧವಾದ ಜೀವನಾನುಭವ ಕಟ್ಟಿಕೊಡುವ ಚುಟುಕು ಪದ್ಯಗಳಿಗೆ ಪತ್ರಿಕೆಗಳು ಹೆಚ್ಚಿನ ಆದ್ಯತೆ ನೀಡಿ ಚುಟುಕು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಬೇಕೆಂದು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ  ಡಾ.ಸುಬುಧೇಂದ್ರ ತೀರ್ಥ, ಶ್ರೀ ಪಾದಂಗಳು ಅವರು ಕರೆ ನೀಡಿದರು.
ಡಿ.25 ರಂದು ಮಂತ್ರಾಲಯದ ರಾಯರ ಮಠದ ಯಜ್ಞ ಶಾಲೆಯ ಶ್ರೀ ಸುಷಮೀಂದ್ರ ವೇದಿಕೆಯಲ್ಲಿ
 ಕರ್ನಾಟಕ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಹುಬ್ಬಳ್ಳಿ
ಹಾಗೂ ರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯ
 ಇವರ ಸಂಯುಕ್ತ ಆಶ್ರಯದಲ್ಲಿ  ಅಖಿಲ ಭಾರತ ಕ ಚು ಸಾ ಪ ನಾಲ್ಕನೇ ಸಮ್ಮೇಳನ, ದಶಮಾನೋತ್ಸವ ಸಂಭ್ರಮ, ಗೌರವ ಪ್ರಶಸ್ತಿ ಪ್ರದಾನ
ಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಭಾಷೆ ಆಗಲಿ ಹತ್ತು ಹಲವು ಆಲೋಚನೆ ಗಳಿಂದ ಸಾಹಿತಿ ಭಾವಾಭಿ
ಅಭಿವ್ಯಕ್ತಿ ಪಡಿಸುವ ಚುಟುಕು ಮೂಲಕ ವೈಶಿಷ್ಟ್ಯ ಪೂರ್ಣ ಸಾಹಿತ್ಯ ಅನಾವರಣ ಗೊಳಿಸುತ್ತಾನೆ.
ಕರ್ನಾಟಕ ರಾಜ್ಯದಲ್ಲೂ ಅನೇಕ ಹೆಸರಾಂತ ಸಾಹಿತಿಗಳು ಕೇವಲ ಎರಡು ಮೂರು ಸಾಲಿನಲ್ಲಿ ಅಂತ್ಯಂತ ತೀಕ್ಷಣವಾದ ವಿಚಾರ ಪ್ರಚೋದಕ ಸದಭಿರುಚಿಯ ಸಾಹಿತ್ಯ ರಚನೆ ಮಾಡಿದ್ದಾರೆ. ಚುಟುಕು ಸಾಹಿತ್ಯದ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಕೇಲಸ ಆಗಬೇಕು.ಈ ನಿಟ್ಟಿನಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಉತ್ತಮ ಕೆಲಸ ಮಾಡುತ್ತಿದೆ . ಕಲೆ, ಸಾಹಿತ್ಯ, ಸಂಸ್ಕೃತಿ, ಕಾರ್ಯಕ್ರಮಗಳಿಗೆ ಶ್ರೀ ಮಂತ್ರಾಲಯದ ಮಠವು ಜಾತಿ ಬೇಧ ಎನ್ನದೆ ಪ್ರೋತ್ಸಾಹ ನೀಡುತ್ತಿದೆ ಎಂದು ಶ್ರೀಗಳು ತಿಳಿಸಿದರು.
 ಇಂದು ಪ್ರತಿಯೊಬ್ಬರೂ ಸುಖ ಬಯಸುತ್ತಾರೆ, ಕ್ಷಣಿಕ ಸುಖದಿಂದ ಸಂತೃಪ್ತಿ ಅಸಾಧ್ಯ . ಜೀವನದಲ್ಲಿ ಸಾಧಿಸ ಬೇಕೆಂಬ ಅಚಲವಾದ ಗುರಿ ಬೇಕು. ಶಾಂತಿ , ಸಹನೆ , ಶೃದ್ದೆಯ ಮೂಲಕ  ನಮ್ಮಗಳ ಕೆಲಸಗಳಲ್ಲಿ ಪರಿಣಿತಿ ಸಾಧಿಸಿ ಯಶಸ್ಸು ಕಾಣಬಹುದು ಎಂದು  ಡಾ.ಸುಬುಧೇಂದ್ರ ತೀರ್ಥ, ಶ್ರೀ ಪಾದಂಗಳು  ಹೇಳಿದರು.
ಸಮ್ಮೇಳನದ ಸರ್ವಾಧಕ್ಷ ಪಂಡಿತ್ ರಾಘವೇಂದ್ರ ಸ್ವಾಮಿಗಳ ಮಠದ ವ್ಯವಸ್ಥಾಪಕ ಎಸ್ ಕೆ ಶ್ರೀನಿವಾಸ್ ರಾವ್ , ಮಂತ್ರಾಲಯದ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಪ್ರಾಚಾರ್ಯ ಎನ್. ವಾದಿರಾಜ ಆಚಾರ್ಯ,ಕಚುಸಾಪ ಪ್ರಸಾರಾಂಗ ನಿರ್ದೆಶಕ ಚನ್ನಬಸಪ್ಪ ಧಾರವಾಡ ಶೆಟ್ಟರ್  ಮತ್ತಿತರರು ಉಪಸ್ಥಿತರಿದ್ದರು.
ಪರಿಷತ್ತು  ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ ವಿವಿಧ ಶಾಲೆಗಳಿಗೆ ೧.೫೦ಲ್ಷ ಪುಸ್ತಕಗಳನ್ನು ವಿತರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ವಾಚನಾಭಿರುಚಿ ಮೂಡಿಸುವ ಕಾರ್ಯಮಾಡುತ್ತಿದೆ ಎಂದರು.
ಗಂಗಯ್ಯ  ಕುಲಕರ್ಣಿ ಸ್ವಾಗತಿಸಿದರು,
ಜಿ.ಡಿ . ಮುತಾಲಿಕ್ ದೇಸಾಯಿ ವಂದಿಸಿದರು.
ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.

 

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...