ಜಿಂಕೆಗಳನ್ನು ಕೊಂದಿರುವ ಚಿರತೆಗಳು-ನಿದ್ದೆಯಲ್ಲಿದ್ದಾರೆಯೇ ಅರಣ್ಯ ಇಲಾಖೆ ಅಧಿಕಾರಿಗಳು!
ಹಾವೇರಿ: ಹಾವೇರಿನಗರದ ಸುತ್ತ -ಮುತ್ತ ಕಾಣಿಸಿಕೊಂಡಿರುವ ಜೋಡಿ ಚಿರತೆಗಳು ಎರಡು ಚಿಂಕೆಗಳನ್ನು ಕೊಂದು ತಿಂದಿರುವ ಘಟನೆ ಸೋಮವಾರ ಕಂಡು ಬಂದಿದೆ. ಹಾವೇರಿಗೆ ಸಮೀಪದ ವೀರಾಪುರಗ್ರಾಮದ ಬಳಿ ನಗರದ ಆಶ್ರಯ ನಿವೇಶನಗಳ ಬಳಿ ಹೊಲವೊಂದರಲ್ಲಿ ಅರ್ಧ ತಿಂದಿರುವಚಿಂಕೆಗಳ ಕಳೆಬರಗಳು ಕಂಡು ಬಂದಿದ್ದು, ಭಾನುವಾರ ರಾತ್ರಿ ಚಿರತೆಗಳು ಜಿಂಕೆಗಳನ್ನು ಭೇಟಿಯಾಡಿರುವ ದೃಶ್ಯಗಳನ್ನು ಗ್ರಾಮಸ್ಥರು ನೋಡಿದ್ದಾರೆ.
ನಾಗೇಂದ್ರಮನಟ್ಟಿ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕುದಿನಗಳಿಂದ ಜೋಡಿ ಚಿರತೆಗಳ ಓಡಾಟ ಕಂಡು ಬಂದಿದ್ದು, ತೋಟದಮನೆಯಲ್ಲಿನ ಮೂರುನಾಯಿಗಳನ್ನು ಚಿರತೆಗಳು ಕೊಂದು ತಿಂದಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿ ಬೆನ್ನಲ್ಲಿಯೇ ಜೋಡಿ ಜಿಂಕೆಗಳನ್ನು ಚಿರತೆಗಳು ಕೊಂದು ತಿಂದಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಕಬ್ಬಿನ ಹೊಲಗಳಲ್ಲಿ ನೆಲೆ ಕಂಡುಕೊಂಡಿದ್ದ ಚಿರತೆಗಳು ಕಬ್ಬು ಕಟಾವು ಮಾಡುತ್ತಿರುವ ಹಿನ್ನಲೆಯಲ್ಲಿ ಬಯಲಿಗೆ ಬಂದಿದ್ದು, ಕೆಲವು ದಿನಗಳ ಹಿಂದೆ ತಾಲೂಕಿನ ಕುಳೇನೂರು ಗ್ರಾಮದಲ್ಲಿ ಹಾಗೂ ಹಾವೇರಿಯ ಹೆಗ್ಗೇರೆಕೆರೆ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದವು. ಇದೀಗ ಹಾವೇರಿಯ ಗಣಜೂರುಬಲಿಯ ಅರಣ್ಯದಲ್ಲಿ ಹೆಚ್ಚಾಗಿ ಓಡಾಡುತ್ತಿರುವ ಚಿರತೆಗಳು ಇದೀಗ ನಾಗೇಂದ್ರಮನಟ್ಟಿ ಪ್ರದೇಶಗಳಲ್ಲಿ ಕಾಣಿಸಿಕೊಂಡಿವೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಚಿರತಗಳನ್ನು ಸೆರೆಹಿಡಿಯಲು ಸಾರ್ವಜನಿಕರು ಆಗ್ರಹಿಸಿದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಕುಂಭಕರ್ಣ ನಿದ್ರೆಯಲ್ಲಿರುವಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಚಿರತೆಗಳು ಅಗಡಿ ರಸ್ತೆಯ ಹಿರೇಗುಡ್ಡದ ಹತ್ತಿರ ಹಾಗೂ ರಸ್ತೆಗಳಲ್ಲಿ ಹಲವಾರು ದಿನಗಳಿಂದ ಎರಡು ಓಡಾಡುತ್ತಿದ್ದು ಸುತ್ತಮುತ್ತಲಿನ ರೈತರಿಗೆ ಭಯದ ವಾತಾವರಣ ಉಂಟಾಗಿದ್ದು. ಕಳ್ಳಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತ ವೀರಾಪುರ, ಮಾಳಾಪುರ ಮತ್ತು ಕಳ್ಳಿಹಾಳ ಗ್ರಾಮದ ಜನರು, ಹಾವೇರಿ, ಗಣಜೂರು, ಕರ್ಜಗಿ ಜನರು ಆತಂಕದಿಂದ ಇದ್ದಾರೆ, ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಗಳ ಓಡಾಟದ ಸ್ಥಳದಲ್ಲಿ ಭೋನುಗಳನ್ನು ಅಳವಡಿಸುವ ಮೂಲಕ ಚಿರತೆಗಳನ್ನು ಸೆರೆಹಿಡಿದು ಜನರಲ್ಲಿನ ಆತಂಕವನ್ನು ದೂರ ಮಾಡಲು ಜನತೆ ಆಗ್ರಹಿಸಿದ್ದಾರೆ.
ಜಿಂಕೆಗಳನ್ನು ಕೊಂದಿರುವ ಚಿರತೆಗಳು-ನಿದ್ದೆಯಲ್ಲಿದ್ದಾರೆಯೇ ಅರಣ್ಯ ಇಲಾಖೆ ಅಧಿಕಾರಿಗಳು!
Date:
ಜಿಂಕೆಗಳನ್ನು ಕೊಂದಿರುವ ಚಿರತೆಗಳು-ನಿದ್ದೆಯಲ್ಲಿದ್ದಾರೆಯೇ ಅರಣ್ಯ ಇಲಾಖೆ ಅಧಿಕಾರಿಗಳು!
ಹಾವೇರಿ: ಹಾವೇರಿನಗರದ ಸುತ್ತ -ಮುತ್ತ ಕಾಣಿಸಿಕೊಂಡಿರುವ ಜೋಡಿ ಚಿರತೆಗಳು ಎರಡು ಚಿಂಕೆಗಳನ್ನು ಕೊಂದು ತಿಂದಿರುವ ಘಟನೆ ಸೋಮವಾರ ಕಂಡು ಬಂದಿದೆ. ಹಾವೇರಿಗೆ ಸಮೀಪದ ವೀರಾಪುರಗ್ರಾಮದ ಬಳಿ ನಗರದ ಆಶ್ರಯ ನಿವೇಶನಗಳ ಬಳಿ ಹೊಲವೊಂದರಲ್ಲಿ ಅರ್ಧ ತಿಂದಿರುವಚಿಂಕೆಗಳ ಕಳೆಬರಗಳು ಕಂಡು ಬಂದಿದ್ದು, ಭಾನುವಾರ ರಾತ್ರಿ ಚಿರತೆಗಳು ಜಿಂಕೆಗಳನ್ನು ಭೇಟಿಯಾಡಿರುವ ದೃಶ್ಯಗಳನ್ನು ಗ್ರಾಮಸ್ಥರು ನೋಡಿದ್ದಾರೆ.
ನಾಗೇಂದ್ರಮನಟ್ಟಿ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕುದಿನಗಳಿಂದ ಜೋಡಿ ಚಿರತೆಗಳ ಓಡಾಟ ಕಂಡು ಬಂದಿದ್ದು, ತೋಟದಮನೆಯಲ್ಲಿನ ಮೂರುನಾಯಿಗಳನ್ನು ಚಿರತೆಗಳು ಕೊಂದು ತಿಂದಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿ ಬೆನ್ನಲ್ಲಿಯೇ ಜೋಡಿ ಜಿಂಕೆಗಳನ್ನು ಚಿರತೆಗಳು ಕೊಂದು ತಿಂದಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಕಬ್ಬಿನ ಹೊಲಗಳಲ್ಲಿ ನೆಲೆ ಕಂಡುಕೊಂಡಿದ್ದ ಚಿರತೆಗಳು ಕಬ್ಬು ಕಟಾವು ಮಾಡುತ್ತಿರುವ ಹಿನ್ನಲೆಯಲ್ಲಿ ಬಯಲಿಗೆ ಬಂದಿದ್ದು, ಕೆಲವು ದಿನಗಳ ಹಿಂದೆ ತಾಲೂಕಿನ ಕುಳೇನೂರು ಗ್ರಾಮದಲ್ಲಿ ಹಾಗೂ ಹಾವೇರಿಯ ಹೆಗ್ಗೇರೆಕೆರೆ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದವು. ಇದೀಗ ಹಾವೇರಿಯ ಗಣಜೂರುಬಲಿಯ ಅರಣ್ಯದಲ್ಲಿ ಹೆಚ್ಚಾಗಿ ಓಡಾಡುತ್ತಿರುವ ಚಿರತೆಗಳು ಇದೀಗ ನಾಗೇಂದ್ರಮನಟ್ಟಿ ಪ್ರದೇಶಗಳಲ್ಲಿ ಕಾಣಿಸಿಕೊಂಡಿವೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಚಿರತಗಳನ್ನು ಸೆರೆಹಿಡಿಯಲು ಸಾರ್ವಜನಿಕರು ಆಗ್ರಹಿಸಿದರೂ ಸಹ ಅರಣ್ಯ ಇಲಾಖೆಯ ಅಧಿಕಾರಿಗಳು ಕುಂಭಕರ್ಣ ನಿದ್ರೆಯಲ್ಲಿರುವಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಚಿರತೆಗಳು ಅಗಡಿ ರಸ್ತೆಯ ಹಿರೇಗುಡ್ಡದ ಹತ್ತಿರ ಹಾಗೂ ರಸ್ತೆಗಳಲ್ಲಿ ಹಲವಾರು ದಿನಗಳಿಂದ ಎರಡು ಓಡಾಡುತ್ತಿದ್ದು ಸುತ್ತಮುತ್ತಲಿನ ರೈತರಿಗೆ ಭಯದ ವಾತಾವರಣ ಉಂಟಾಗಿದ್ದು. ಕಳ್ಳಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತ ವೀರಾಪುರ, ಮಾಳಾಪುರ ಮತ್ತು ಕಳ್ಳಿಹಾಳ ಗ್ರಾಮದ ಜನರು, ಹಾವೇರಿ, ಗಣಜೂರು, ಕರ್ಜಗಿ ಜನರು ಆತಂಕದಿಂದ ಇದ್ದಾರೆ, ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಗಳ ಓಡಾಟದ ಸ್ಥಳದಲ್ಲಿ ಭೋನುಗಳನ್ನು ಅಳವಡಿಸುವ ಮೂಲಕ ಚಿರತೆಗಳನ್ನು ಸೆರೆಹಿಡಿದು ಜನರಲ್ಲಿನ ಆತಂಕವನ್ನು ದೂರ ಮಾಡಲು ಜನತೆ ಆಗ್ರಹಿಸಿದ್ದಾರೆ.