ಜಿಲ್ಲೆಯಾದ್ಯಂತ ಮಕರ ಸಂಕ್ರಾಂತಿ ಸಂಭ್ರಮದ ಆಚರಣೆ-ಸಂಕ್ರಾಂತಿ ಪ್ರತಿಯೊಬ್ಬರಿಗೂ ಸಂತಸ- ಸಮೃದ್ಧಿ ದಯಪಾಲಿಸಲಿ: ಬಸವಶಾಂತಲಿಂಗಶ್ರೀ
ಹಾವೇರಿ: ಹೊಸವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ಜಿಲ್ಲೆಯಾದ್ಯಂತ ಮಂಗಳವಾರ ಜನರು ಸಡಗರ,ಸಂಭ್ರಮದಿಂದ ಆಚರಿಸಿದೆರು. ಜಿಲ್ಲೆಯ ವಿವಿಧ ಕಡೆಗಳಲ್ಲಿನ ನದಿಗಳು, ತ್ರಿವೇಣಿ ಸಂಗಮ ಹಾಗೂ ಕೆರೆಕಟ್ಟೆಗಳಲ್ಲಿನ ನೀರಿನಲ್ಲಿ ಎಳ್ಳು ಸೇರಿಸಿಪುಣ್ಯ ಸ್ಥಾನ ಮಾಡಿ ಮಕರ ಸಂಕ್ರಾಂತಿಯ ಎಳ್ಳು – ಬೆಲ್ಲವನ್ನು ಹಂಚುವ ಮೂಲಕ ಎಳ್ಳು ತಿನ್ನುವ ಮೂಲಕ ಎಳ್ಳು – ಬೆಲ್ಲವನ್ನು ಪರಸ್ಪರ ಹಂಚುವ ಮೂಲಕ ಹಬ್ಬದ ಖುಷಿಯನ್ನು,ಸಂತೋಷವನ್ನು ಹಂಚಿಕೊಂಡು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಸದಾ ಹೊಸತನಕ್ಕೆ ಹಾಗೂ ಜ್ಞಾನ ಹಂಚುವಿಕೆಗೆ ಹೆಸರಾಗಿರುವ ಹಾವೇರಿಯ ಹೊಸಮಠದಲ್ಲಿ ಬಸವಕೇಂದ್ರ ಶ್ರೀಹೊಸಮಠ, ಹಾವೇರಿ ಅಕ್ಕನ ಬಳಗ ಸಂಯುಕ್ತಾಶ್ರಯದಲ್ಲಿ ಮಕರ ಸಂಕ್ರಾಂತಿಯನ್ನು ಮಂಗಳವಾರ ವಿಶೇಷವಾಗಿ ಆಚರಿಸಲಾಯಿತು.
ಮಠದಲ್ಲಿ ಭಕ್ತರು ಸಿರಿಧಾನ್ಯಗಳಿಂದ ರಂಗೋಲಿ ಬಿಡಿಸಿ, ಕಬ್ಬಿನ ಜಲ್ಲೆಗಳಿಂದ ಮಡಿಕೆಗಳನ್ನು ಅಲಂಕರಿಸಿ ಸಿರಿಧಾನ್ಯಗಳಿಂದ ತಯಾರಿಸಿದ ಭಕ್ಷಗಳನ್ನು ಸವಿದರು. ಹೊಸಮಠದ ಬಸವಶಾಂತಲಿಂಗ ಸ್ವಾಮಿಜಿ ಮಾತನಾಡಿ ಮಕರ ಸಂಕ್ರಾಂತಿಯ ದಿನದಂದು ಎಳ್ಳು ಮತ್ತು ಬೆಲ್ಲಕ್ಕೆ ಹೆಚ್ಚಿನ ಮಹತ್ವವಿದೆ. ಆದುದರಿಂದ ಇದನ್ನು ತಿಲ ಸಂಕ್ರಾಂತಿ ಎಂದೂ ಕರೆಯುತ್ತಾರೆ. ಮಕರ ಸಂಕ್ರಾಂತಿಯು ಎಲ್ಲರಿಗೂ ಒಳಿತುಮಾಡಲಿ ಎಂದು ಶುಭಹಾರೈಸಿ ಎಳ್ಳು ಬೆಲ್ಲ ವಿತರಿಸಿದರು.
ಸಂಕ್ರಾಂತಿ ಬಂತು, ಸುಗ್ಗಿ ತಂತು ಎಂಬ ಮಾತು ಕೇಳಿಬರುತ್ತಿದೆ. ಜೀವನದಲ್ಲಿ ಎಲ್ಲಾ ಕಹಿ ಮರೆತು ಒಳ್ಳೆಯ ಬಾಂಧವ್ಯ ಹೊಂದೋಣ ಎಂಬಸಂದೇಶ ಹಬ್ಬಗಳುಸಾರುತ್ತವೆ.ಹೊಸ ದಿಕ್ಕಿನಲ್ಲಿ ಉದಯಿಸುತ್ತಿರುವ ಸೂರ್ಯ ಪ್ರತಿಯೊಬ್ಬರ ಬಾಳಲಿ ಸಂತಸ ಸಮೃದ್ಧಿ ಮತ್ತು ಸುಖ ಶಾಂತಿ ದಯಪಾಲಿಸಲಿ. ಭಾರತದ ಸಂಸ್ಕೃತಿ,ಧರ್ಮ ಮತ್ತು ಕೃಷಿಯೊಂದಿಗೆ
ಆಳವಾಗಿ ಸಂಬಂಧ ಹೊಂದಿರುವ ಹಬ್ಬವಾಗಿದೆ,ಸಂಕ್ರಾಂತಿ ಹಬ್ಬವು ಭಾರತದಾದ್ಯಂತ ವೈವಿಧ್ಯಮ ಸಮುದಾಯಗಳನ್ನು ಒಂದುಗೂಡಿಸುತ್ತದೆ, ಸೂರ್ಯನ ಉತ್ತರದ ಪ್ರಯಾಣವನ್ನು ಮಾತ್ರವಲ್ಲದೇ ನವೀಕರಣ-ಸಮೃದ್ಧಿ ಮತ್ತು ಕೌಟುಂಬಿಕ ಸಂಬಂಧಗಳು ಬಲಪಡಿಸುವ ಭರವಸೆಯೂ ಸಹ ಆಚರಿಸಿದೆ. ಧಾರ್ಮಿಕ ದೃಷ್ಟಿಕೋನದಿಂದ ಮಕರ ಸಂಕ್ರಾಂತಿಯು ಹಿಂದುಗಳಿಗೆ ಪವಿತ್ರವಾದ ಅನುಕರಣೆ ಹೊಂದಿದೆ.ವಿಶೇಷವಾಗಿ ಸೂರ್ಯ ದೇವರ ಆರಾಧನೆ ಸಮರ್ಪಿಸಲಾಗಿದೆ ಎಂದು ಹೊಸಮಠ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಕಮಲ ಬುಕ್ಕುಶೆಟ್ಟಿ, ರತ್ನ ಹೀರೆಮಠ,ಶಾಂತಾಬಾಯಿ ಶಿರೂರು ಮತ್ತಿತರ ಮಹಿಳೆಯರು ಪಾಲ್ಗೊಂಡಿದ್ದರು.ಅಕ್ಕನ ಬಳಗದವರು ಪ್ರಾರ್ಥಿಸಿದರು.