“ಟಿಕೆಟ್ ಹಂಚಿಕೆಯಲ್ಲಿ ಭೋವಿ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸದಿದ್ದರೇ ಬಿಜೆಪಿಗೆ ತಕ್ಕಪಾಠ”
ಭೋವಿ ಸಮಾಜದ ಮುಖಂಡರ ಎಚ್ಚರಿಕೆ
ಹಾವೇರಿ: ಪ್ರಸ್ತುತ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಹಂಚಿಕೆಯಲ್ಲಿ ಭಾರತೀಯ ಜನತಾ ಪಕ್ಷವು ಭೋವಿ ಸಮಾಜವನ್ನು ಕಡೆಗಣಿಸಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದೇ ಭೋವಿ ಸಮಾಜದ ಶಾಸಕರು. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾರಣವಾಗಿರುವ ಭೋವಿ ಸಮಾಜವನ್ನು ಟಿಕೆಟ್ ಹಂಚಿಕೆಯಲ್ಲಿ ಪರಿಗಣಿಸದೇ ಬಿಜೆಪಿ ಬಹಳ ದ್ರೋಹ ಬಗೆದಿದೆ. “ಟಿಕೆಟ್ ಹಂಚಿಕೆಯಲ್ಲಿ ಭೋವಿ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸದಿದ್ದರೇ ಬಿಜೆಪಿಗೆ ತಕ್ಕಪಾಠ”ಕಲಿಸುವುದಾಗಿ ಅಖಿಲ ಕರ್ನಾಟಕ ಭೋವಿ (ವಡ್ಡರ)ಸಂಘದ ಜಿಲ್ಲಾಧ್ಯಕ್ಷ ರವಿ ಪೂಜಾರ ಎಚ್ಚರಿಕೆ ನೀಡಿದರು.
ಶುಕ್ರವಾರ ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ ಸಮಾಜದ ಮುಖಂಡರು, ಮಾಜಿ ಸಚಿವರಾದ ಮಹದೇವಪುರ ವಿಧಾನಸಭೆಯ ಶಾಸಕರಾದ ಅರವಿಂದ ಲಿಂಬಾವಳಿ ಅವರಿಗೆ ಇಲ್ಲಿಯವರೆಗೂ ಬಿಜೆಪಿ ಟಿಕೆಟ್ ಘೋಷಣೆ ಮಾಡಿಲ್ಲ. ಲಿಂಬಾವಳಿ ಅವರು ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿ ಆಗಿರುವುದರಿಂದ ಬಿಜೆಪಿಯ ಕೆಲವು ನಾಯಕರು ಇವರನ್ನು ಹತ್ತಿಕ್ಕಲು ಷಡ್ಯಂತ್ರ ನಡೆಸಿದ್ದಾರೆ. ಪಕ್ಷದ ಪರವಾಗಿ ನಿಷ್ಠೆಯಿಂದ ಕೆಲಸಮಾಡಿ “ಕರ್ನಾಟಕದ ಚುನಾವಣೆಯ ಚಾಣುಕ್ಯ ಎನಿಸಿಕೊಂಡಿರುವ ಅರವಿಂದ ಲಿಂಬಾವಳಿ” ಅವರಿಗೆ ಬಿಜೆಪಿ ಇನ್ನು ಟಿಕೆಟ್ ಘೊಷಣೆ ಮಾಡದೇ ಭೋವಿ ಸಮಾಜಕ್ಕೆ ಬಹುದೊಡ್ಡ ಅನ್ಯಾಯವನ್ನು ಮಾಡಲಾಗಿದೆ.
ಭೋವಿ ಸಮಾಜದ ಇನ್ನೊಬ್ಬ ಮುಖಂಡ ಹೊಸದುರ್ಗ ವಿಧಾನಸಭೆಯ ಶಾಸಕರಾದ ಗೂಳಿಹಟ್ಟಿ ಶೇಖರ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದಿಲ್ಲ. ಶೇಖರ ಅವರು ಗೆಲ್ಲುವ ಅಭ್ಯರ್ಥಿಯಾಗಿದ್ದಾರೆ. ಅವರನ್ನು ತಿರಸ್ಕಾರ ಮಾಡಲಾಗಿದೆ. ೨೦೦೮ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿದ್ದು ನಮ್ಮ ಭೋವಿ ಸಮಾಜದ ಶಾಸಕರಾದ ಗೂಳಿಹಟ್ಟಿ ಶೇಖರ, ಶಿವರಾಜ ತಂಗಡಗಿ, ವೆಂಕಟರಮಣಪ್ಪ ಇವರ ಬೆಂಬಲದಿಂದ ಎನ್ನುವುದನ್ನ ಬಿಜೆಪಿ ನಾಯಕರು ಮರೆತಂತಿದೆ. ತಳಮಟ್ಟದ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ ಅರವಿಂದ ಲಿಂಬಾವಳಿ ಅವರನ್ನು ತುಳಿಯುವ ಷಡ್ಯಂತ್ರವನ್ನು ಭೋವಿ ಸಮಾಜ ಖಂಡಿಸುತ್ತದೆ ಎಂದು ರವಿ ಪೂಜಾರ ತಿಳಿಸಿದರು.
ಬಿಜೆಪಿಯನ್ನು ಅಧಿಕಾರಕ್ಕೆ ತಂದವರನ್ನು ಅಧಿಕಾರದಿಂದ ದೂರವಿರುವ ಪ್ರಯತ್ನ ಮಾಡಿದರೇ ನಮ್ಮ ಭೋವಿ ಸಮಾಜದ ಜನ ಅಂತ ಪಕ್ಷವನ್ನು ಅಧಿಕಾರಕ್ಕೆ ಬರದಹಾಗೆ ಮಾಡುತ್ತಾರೆ. ಭೋವಿ ಸಮಾಜವನ್ನು ನಿರ್ಲಕ್ಷ ಮಾಡುವ ಪಕ್ಷವನ್ನು ಭೋವಿ ಸಮಾಜದ ಮತದಾರರ ನಿರ್ಲಕ್ಷ ಮಾಡುತ್ತಾರೆ. ಭೋವಿ ಸಮಾಜಕ್ಕೆ ಟಿಕೆಟ್ ಹಂಚಿಕೆಯಲ್ಲಿ ಆಗಿರುವ ಅನ್ಯಾಯವನ್ನ ಸರಿಪಡಿಸಿಸುವುದರ ಜೊತೆಗೆ ಸಮಾಜಕ್ಕೆ ಟಿಕೆಟ್ ಹಂಚಿಕೆಯಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿಯನ್ನ ಸಮಾಜವು ಖಂಡಿಸುತ್ತದೆ. ಈ ರೀತಿಯ ನಿರ್ಲಕ್ಷಕ್ಕೆ ಬಿಜಪಿ ಪಕ್ಷಕ್ಕೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ರವಿ ಪೂಜಾರ ಈ ವಿಷಯದ ಬಗ್ಗೆ ಮುಖ್ಯಮಂತ್ರಿಗಳು, ಬಿಜೆಪಿಯ ರಾಜ್ಯ,ರಾಷ್ಟ್ರ ಅಧ್ಯಕ್ಷರು,ವರಿಷ್ಠರು ಗಂಭೀರವಾಗಿ ಪರಿಗಣಿಸಿ ಭೋವಿ ಸಮಾಜಕ್ಕೆ ಆಗಿರವ ಅನ್ಯಾಯವನ್ನ ಸರಿಪಡಿಸವಂತೆ ಅವರುಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭೋವಿ ಸಮಾಜದ ಮುಖಂಡರುಗಳಾದ ಎಚ್.ಕೆ.ವಡ್ಡರ, ದ್ಯಾಮಣ್ಣ ಅರಸನಾಳ, ಜಗದೀಶ ಸವಣೂರ, ಕರೆಲ್ಲಪ್ಪ ವಡ್ಡರ, ಮಂಜನಾಥ ಗುಡುಗೇರಿ, ಮಹೇಶ ಕುರಂದವಾಡ, ಪ್ರಕಾಶ ವಡ್ಡರ, ದಾಸಪ್ಪ ಕರ್ಜಗಿ, ಹನುಮಂತಪ್ಪ ಬಂಡಿವಡ್ಡರ, ನಾಗರಾಜ ಬಂಡಿವಡ್ಡರ ಹಾಜರಿದ್ದರು.
“ಟಿಕೆಟ್ ಹಂಚಿಕೆಯಲ್ಲಿ ಭೋವಿ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸದಿದ್ದರೇ ಬಿಜೆಪಿಗೆ ತಕ್ಕಪಾಠ” ಭೋವಿ ಸಮಾಜದ ಮುಖಂಡರ ಎಚ್ಚರಿಕೆ
Date:
“ಟಿಕೆಟ್ ಹಂಚಿಕೆಯಲ್ಲಿ ಭೋವಿ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸದಿದ್ದರೇ ಬಿಜೆಪಿಗೆ ತಕ್ಕಪಾಠ”
ಭೋವಿ ಸಮಾಜದ ಮುಖಂಡರ ಎಚ್ಚರಿಕೆ
ಹಾವೇರಿ: ಪ್ರಸ್ತುತ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಹಂಚಿಕೆಯಲ್ಲಿ ಭಾರತೀಯ ಜನತಾ ಪಕ್ಷವು ಭೋವಿ ಸಮಾಜವನ್ನು ಕಡೆಗಣಿಸಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದೇ ಭೋವಿ ಸಮಾಜದ ಶಾಸಕರು. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾರಣವಾಗಿರುವ ಭೋವಿ ಸಮಾಜವನ್ನು ಟಿಕೆಟ್ ಹಂಚಿಕೆಯಲ್ಲಿ ಪರಿಗಣಿಸದೇ ಬಿಜೆಪಿ ಬಹಳ ದ್ರೋಹ ಬಗೆದಿದೆ. “ಟಿಕೆಟ್ ಹಂಚಿಕೆಯಲ್ಲಿ ಭೋವಿ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸದಿದ್ದರೇ ಬಿಜೆಪಿಗೆ ತಕ್ಕಪಾಠ”ಕಲಿಸುವುದಾಗಿ ಅಖಿಲ ಕರ್ನಾಟಕ ಭೋವಿ (ವಡ್ಡರ)ಸಂಘದ ಜಿಲ್ಲಾಧ್ಯಕ್ಷ ರವಿ ಪೂಜಾರ ಎಚ್ಚರಿಕೆ ನೀಡಿದರು.
ಶುಕ್ರವಾರ ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ ಸಮಾಜದ ಮುಖಂಡರು, ಮಾಜಿ ಸಚಿವರಾದ ಮಹದೇವಪುರ ವಿಧಾನಸಭೆಯ ಶಾಸಕರಾದ ಅರವಿಂದ ಲಿಂಬಾವಳಿ ಅವರಿಗೆ ಇಲ್ಲಿಯವರೆಗೂ ಬಿಜೆಪಿ ಟಿಕೆಟ್ ಘೋಷಣೆ ಮಾಡಿಲ್ಲ. ಲಿಂಬಾವಳಿ ಅವರು ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿ ಆಗಿರುವುದರಿಂದ ಬಿಜೆಪಿಯ ಕೆಲವು ನಾಯಕರು ಇವರನ್ನು ಹತ್ತಿಕ್ಕಲು ಷಡ್ಯಂತ್ರ ನಡೆಸಿದ್ದಾರೆ. ಪಕ್ಷದ ಪರವಾಗಿ ನಿಷ್ಠೆಯಿಂದ ಕೆಲಸಮಾಡಿ “ಕರ್ನಾಟಕದ ಚುನಾವಣೆಯ ಚಾಣುಕ್ಯ ಎನಿಸಿಕೊಂಡಿರುವ ಅರವಿಂದ ಲಿಂಬಾವಳಿ” ಅವರಿಗೆ ಬಿಜೆಪಿ ಇನ್ನು ಟಿಕೆಟ್ ಘೊಷಣೆ ಮಾಡದೇ ಭೋವಿ ಸಮಾಜಕ್ಕೆ ಬಹುದೊಡ್ಡ ಅನ್ಯಾಯವನ್ನು ಮಾಡಲಾಗಿದೆ.
ಭೋವಿ ಸಮಾಜದ ಇನ್ನೊಬ್ಬ ಮುಖಂಡ ಹೊಸದುರ್ಗ ವಿಧಾನಸಭೆಯ ಶಾಸಕರಾದ ಗೂಳಿಹಟ್ಟಿ ಶೇಖರ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದಿಲ್ಲ. ಶೇಖರ ಅವರು ಗೆಲ್ಲುವ ಅಭ್ಯರ್ಥಿಯಾಗಿದ್ದಾರೆ. ಅವರನ್ನು ತಿರಸ್ಕಾರ ಮಾಡಲಾಗಿದೆ. ೨೦೦೮ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿದ್ದು ನಮ್ಮ ಭೋವಿ ಸಮಾಜದ ಶಾಸಕರಾದ ಗೂಳಿಹಟ್ಟಿ ಶೇಖರ, ಶಿವರಾಜ ತಂಗಡಗಿ, ವೆಂಕಟರಮಣಪ್ಪ ಇವರ ಬೆಂಬಲದಿಂದ ಎನ್ನುವುದನ್ನ ಬಿಜೆಪಿ ನಾಯಕರು ಮರೆತಂತಿದೆ. ತಳಮಟ್ಟದ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ ಅರವಿಂದ ಲಿಂಬಾವಳಿ ಅವರನ್ನು ತುಳಿಯುವ ಷಡ್ಯಂತ್ರವನ್ನು ಭೋವಿ ಸಮಾಜ ಖಂಡಿಸುತ್ತದೆ ಎಂದು ರವಿ ಪೂಜಾರ ತಿಳಿಸಿದರು.
ಬಿಜೆಪಿಯನ್ನು ಅಧಿಕಾರಕ್ಕೆ ತಂದವರನ್ನು ಅಧಿಕಾರದಿಂದ ದೂರವಿರುವ ಪ್ರಯತ್ನ ಮಾಡಿದರೇ ನಮ್ಮ ಭೋವಿ ಸಮಾಜದ ಜನ ಅಂತ ಪಕ್ಷವನ್ನು ಅಧಿಕಾರಕ್ಕೆ ಬರದಹಾಗೆ ಮಾಡುತ್ತಾರೆ. ಭೋವಿ ಸಮಾಜವನ್ನು ನಿರ್ಲಕ್ಷ ಮಾಡುವ ಪಕ್ಷವನ್ನು ಭೋವಿ ಸಮಾಜದ ಮತದಾರರ ನಿರ್ಲಕ್ಷ ಮಾಡುತ್ತಾರೆ. ಭೋವಿ ಸಮಾಜಕ್ಕೆ ಟಿಕೆಟ್ ಹಂಚಿಕೆಯಲ್ಲಿ ಆಗಿರುವ ಅನ್ಯಾಯವನ್ನ ಸರಿಪಡಿಸಿಸುವುದರ ಜೊತೆಗೆ ಸಮಾಜಕ್ಕೆ ಟಿಕೆಟ್ ಹಂಚಿಕೆಯಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿಯನ್ನ ಸಮಾಜವು ಖಂಡಿಸುತ್ತದೆ. ಈ ರೀತಿಯ ನಿರ್ಲಕ್ಷಕ್ಕೆ ಬಿಜಪಿ ಪಕ್ಷಕ್ಕೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ರವಿ ಪೂಜಾರ ಈ ವಿಷಯದ ಬಗ್ಗೆ ಮುಖ್ಯಮಂತ್ರಿಗಳು, ಬಿಜೆಪಿಯ ರಾಜ್ಯ,ರಾಷ್ಟ್ರ ಅಧ್ಯಕ್ಷರು,ವರಿಷ್ಠರು ಗಂಭೀರವಾಗಿ ಪರಿಗಣಿಸಿ ಭೋವಿ ಸಮಾಜಕ್ಕೆ ಆಗಿರವ ಅನ್ಯಾಯವನ್ನ ಸರಿಪಡಿಸವಂತೆ ಅವರುಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭೋವಿ ಸಮಾಜದ ಮುಖಂಡರುಗಳಾದ ಎಚ್.ಕೆ.ವಡ್ಡರ, ದ್ಯಾಮಣ್ಣ ಅರಸನಾಳ, ಜಗದೀಶ ಸವಣೂರ, ಕರೆಲ್ಲಪ್ಪ ವಡ್ಡರ, ಮಂಜನಾಥ ಗುಡುಗೇರಿ, ಮಹೇಶ ಕುರಂದವಾಡ, ಪ್ರಕಾಶ ವಡ್ಡರ, ದಾಸಪ್ಪ ಕರ್ಜಗಿ, ಹನುಮಂತಪ್ಪ ಬಂಡಿವಡ್ಡರ, ನಾಗರಾಜ ಬಂಡಿವಡ್ಡರ ಹಾಜರಿದ್ದರು.