
ಡಾ.ವಿ.ಕೃ.ಗೋಕಾಕ್ರ ೧೧೬ನೇ ಜನ್ಮದಿನಚಾರಣೆ
ಹಾವೇರಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ವಿ.ಕೃ.ಗೋಕಾಕ್ ಅವರ ೧೧೬ನೇ ಜನ್ಮದಿನವನ್ನು ಹಾವೇರಿಯಲ್ಲಿ ಆಚರಿಸಲಾಯಿತು.
ನಗರದ ಗುರು ಭವನ ಎದುರಿಗೆ ಇರುವ ಗೋಕಾಕ್ ಅವರ ಪುತ್ಥಳಿಗೆ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್ ಹೂಮಾಲೆ ಅರ್ಪಿಸಿ ಗೌರವಿಸಿದರು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಹಿರೇಮಠ, ವಯಸ್ಕರ ಶಿಕ್ಷಣ ಅಧಿಕಾರಿ ಆರ್.ವಿ.ಚಿನ್ನಿಕಟ್ಟಿ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಕಸಾಪ ತಾಲೂಕಾಧ್ಯಕ್ಷ ವೈ.ಬಿ.ಆಲದಕಟ್ಟಿ, ಸಾಹಿತಿ ಕಲಾವಿದರ ಬಳಗದ ವಿರೂಪಾಕ್ಷ ಹಾವನೂರ, ಮಾಲತೇಶ ಅಂಗೂರ, ಈರಣ್ಣ ಬೆಳವಡಿ, ಪೃಥ್ವಿರಾಜ್ ಬೆಟಗೇರಿ, ಚಂದ್ರಶೇಖರ ಮಾಳಗಿ, ಶ್ರೀನಿವಾಸ ಹಂಚಾಟೆ, ನೀಲಪ್ಪ ಮಣ್ಣಮ್ಮನವರ, ಕೆ.ಎನ್.ಜಾನ್ವೇಕರ್, ಶಶಿಕಲಾ ಅಕ್ಕಿ, ಸವಿತಾ ಮಣ್ಣಮ್ಮನವರ, ನೇತ್ರಾವತಿ ಅಂಗಡಿ, ಪರಮೇಶ್ವರ ಬಾಳಿಕಾಯಿ, ರೂಪಶ್ರೀ ಸೊಬರದ, ಮುರಗೇಶ ಹುಂಬಿ ಇದ್ದರು.

