‘ತಂತ್ರಜ್ಞಾನಕ್ಕಿಂತ ಆಹಾರಕ್ಕೆ ಆದ್ಯತೆ ಸಿಗಲಿ’: ಸೊಪ್ಪಿನ ಮೇಳಕ್ಕೆ ಚಾಲನೆ, ಬಸವಶಾಂತಲಿಂಗಶ್ರೀ ಅಭಿಮತ

Date:

‘ತಂತ್ರಜ್ಞಾನಕ್ಕಿಂತ ಆಹಾರಕ್ಕೆ ಆದ್ಯತೆ ಸಿಗಲಿ’
ಸೊಪ್ಪಿನ ಮೇಳಕ್ಕೆ ಚಾಲನೆ, ಬಸವಶಾಂತಲಿಂಗಶ್ರೀ ಅಭಿಮತ

ಹಾವೇರಿ: ವಾಟ್ಸಪ್‌ಯುಗದಲ್ಲಿ ಇಂದಿನ ಯುವ ಜನಾಂಗ ಜಂಕ್‌ಪುಡ್‌ಜಾಲದಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ, ಎಷ್ಟೋ ಯವಕರ ಸೊಪ್ಪನ್ನೇ ನೋಡಿಲ್ಲ. ಯುವಕರು ತಂತ್ರಜ್ಞಾನಕ್ಕೆ ಕೊಡುವ ಆದ್ಯತೆಯನ್ನು ಆಹಾರಕ್ಕೂ ಕೊಡಬೇಕು. ಆರೋಗ್ಯವೇ ಭಾಗ್ಯ ಎಂಬ ನುಡಿಗೆ ಅನುಗುಣವಾಗಿ, ಉತ್ತಮ ಆಹಾರ ಸೇವನೆಯನ್ನು ರೂಢಿಸಿಕೊಳ್ಳಬೇಕು ಎಂದು ಹೊಸಮಠದ ಬಸವ ಬಸವಶಾಂತಲಿಂಗ ಸ್ವಾಮೀಜಿ ಕರೆ ನೀಡಿದರು.
ಶನಿವಾರ ಇಲ್ಲಿನ ಹೊಸಮಠದ ಸಮುದಾಯ ಭವನದಲ್ಲಿ ಮೈಸೂರಿನ ಸಹಜ ಸಮೃದ್ಧಿ ಸಂಸ್ಥೆ ಹಾಗೂ ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸೊಪ್ಪಿನ ವೈವಿಧ್ಯ ಜನಪ್ರಿಯಗೊಳಿಸುವ ಉದ್ದೇಶದಿಂದ ಆಯೋಜಿಸಿದ್ದ ಎರಡು ದಿನಗಳ “ಸೊಪ್ಪಿನ ಮೇಳ”ಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸೊಪ್ಪಿನಲ್ಲಿ ಅಪಾರ ಪೋಷಕಾಂಶ ಇವೆ. ಇಂಥ ಸೊಪ್ಪಿನ ಲೋಕದ ಅನಾವರಣವನ್ನು ಹಾವೇರಿಯಲ್ಲಿ ಮೊದಲ ಬಾರಿಗೆ ಮಾಡಿರುವುದು ಸಂತಸದ ಸಂಗತಿ. ಕೇವಲ ನಾಲ್ಕೈದು ಬಗೆಯ ಸೊಪ್ಪುಗಳು ಜನಪ್ರಿಯವಾಗಿದ್ದು, ನಿಸರ್ಗದಲ್ಲಿ ಸಿಗುವ ಇನ್ನಿತರ ಸೊಪ್ಪುಗಳನ್ನು ಸಹ ಸೇವನೆಗೆ ಬಳಸಿಕೊಳ್ಳಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಎಂ.ವೈ.ಮೀಶಿ ಮಾತನಾಡಿ, ಆರೋಗ್ಯ ಸಂರಕ್ಷಣೆ ದೃಷ್ಟಿಯಿಂದ ಸೊಪ್ಪುಗಳ ಬಳಕೆ ಅನಿವಾರ್ಯವಾಗಿದೆ. ಪೌಷ್ಟಿಕಾಂಶಭರಿತ ಸೊಪ್ಪುಗಳು, ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ ಎಂದು ಬಣ್ಣಿಸಿದರು.
ಕೃಷಿಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ತಂದುಕೊಡುವ ಸೊಪ್ಪುಗಳು ಆರೋಗ್ಯಕ್ಕೆ ಬಹಳ ಮುಖ್ಯ. ಕಡಿಮೆ ಜಮೀನಿನಲ್ಲಿ ನಿಗದಿತವಾಗಿ ಸತತ ಆದಾಯ ಪಡೆಯುವ ರೈತರ ಯಶಸ್ವಿ ಪ್ರಯೋಗವನ್ನು ಉಳಿದ ರೈತರೂ ಅನುಸರಿಸಬೇಕು ಎಂದು ಸಲಹೆ ಮಾಡಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿ ವಿಜಯಲಕ್ಷ್ಮೀ ಮಾತನಾಡಿ, ಬಗೆಬಗೆಯ ಸೊಪ್ಪುಗಳಿಂದ ರುಚಿಯಾದ ಅಡುಗೆ ಹಾಗೂ ತಿಂಡಿ ತಿನಿಸು ಮಾಡಲು ಸಾಧ್ಯ. ಇಂದಿನ ಯುವಪೀಳಿಗೆಯು ಜಂಕ್ ಫುಡ್ ಬಿಟ್ಟು, ದೇಸಿ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಎಚ್.ಡಿ ಕೋಟೆಯ ಜೇನುಕುರುಬ ಸಮುದಾಯದ ನಾಯಕಿ ಪಾರ್ವತಿ ಅವರು, ಬುಡಕಟ್ಟು ಸಮುದಾಯಗಳು ಈಗಲೂ ಬಳಸುವ ಕಾಡಿನ ಸೊಪ್ಪುಗಳ ಬಗ್ಗೆ ಅನುಭವ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ‘ಸಖತ್ ಸೊಪ್ಪು’ ಪುಸ್ತಕ ಬಿಡುಗಡೆ ಮಾಡಲಾಯಿತು. ದೇಸಿ ತಳಿ ಸಂರಕ್ಷಕ ಶ್ರೇಣಿಕರಾಜ್ ಯಳವತ್ತಿ ಅಧ್ಯಕ್ಷತೆ ವಹಿಸಿದ್ದರು.
ಸಹಜ ಸಮೃದ್ಧ ಕಾರ್ಯದರ್ಶಿ ಆನಂದತೀರ್ಥ ಪ್ಯಾಟಿ ಪ್ರಾಸ್ತಾವಿಕ ಮಾತಾಡಿದರು. ಅಭಿಷೇಕ್ ಸ್ವಾಗತಿಸಿದರು. ಶಾಂತಕುಮಾರ್ ನಿರೂಪಿಸಿದರು. ಶ್ರೀದೇವಿ ಬಿ. ವಂದಿಸಿದರು.

ಸೊಪ್ಪು ಮೇಳದ ವಿಶೇಷತೆ
ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗವು ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಜೊತೆಗೂಡಿ ಆಯೋಜಿಸಿರುವ ‘ಸೊಪ್ಪಿನ ಮೇಳ’ದಲ್ಲಿ ನೂರಕ್ಕೂ ಹೆಚ್ಚಿನ ಸೊಪ್ಪುಗಳ ಪ್ರದರ್ಶನ ಇದೆ. ಧಾರವಾಡ, ಹಾವೇರಿ, ಬೆಳಗಾವಿ, ಮೈಸೂರು ಮತ್ತು ತುಮಕೂರು ಭಾಗಗಳ ರೈತರು ಬಗೆ ಬಗೆಯ ಸೊಪ್ಪು ಮತ್ತು ಸೊಪ್ಪಿನ ಮೌಲ್ಯವರ್ಧಿತ ಪದಾರ್ಥಗಳನ್ನು ಪ್ರದರ್ಶನ- ಮತ್ತು ಮಾರಾಟ ಮಾಡಿದ್ದಾರೆ. ದಿನ ಬಳಕೆಯ ಸೊಪ್ಪು, ಔಷಧೀಯ ಸೊಪ್ಪು, ಸಾಗುವಳಿ ಮಾಡದ ನಿಸರ್ಗದತ್ತ ಸೊಪ್ಪು, ಕಾಡಿನ ಸೊಪ್ಪು, ಬಳ್ಳಿ ಸೊಪ್ಪು, ಮರಾಧಾರಿತ ಸೊಪ್ಪು ಮತ್ತು ವಿದೇಶಿ ಸೊಪ್ಪುಗಳನ್ನು ಈ ಪ್ರದರ್ಶನದಲ್ಲಿ ನೋಡಬಹುದು. ತಾರಸಿ ತೋಟ ಹಾಗೂ ಹಿತ್ತಿಲು ಜಾಗದಲ್ಲಿ ಕೈತೋಟ ಮಾಡುವವರಿಗೆ ಬಿತ್ತನೆ ಬೀಜ ಸಿಗಲಿವೆ. ಜಿಲ್ಲೆಯ ಹಿರೇಬೆಂಡಿಗೇರಿಯ ರೈತ ನನ್ನೆಸಾಬ ದಿವಾನವರ ಸಾವಯುವ ಕೃಷಿಯಲ್ಲಿ ಬೆಳೆದ ೧೦ಕೆ.ಜಿ ತೂಕದ ಸೂರೆಕಾಯಿಗಳು ಜನರ ಗಮನ ಸೆಳೆದವು.

ಮೇಳದಲ್ಲಿ ಯಾವೇಲ್ಲ ಸೊಪ್ಪುಗಳಿವೆ?
ಸೊಪ್ಪಿನಮೇಲದಲ್ಲಿ ಸೊಪ್ಪುಗಳ ಲೋಕವೇ ಅನಾವರಣಗೊಂಡಿದೆ. ಪಾಲಕ್ ಸೊಪ್ಪು, ಮೆಂತ್ಯೆ ಸೊಪ್ಪು, ಕೊತ್ತಂಬರಿ ಸೊಪ್ಪು ಕೇಳಿದ್ದ ನಮಗೆ ಈ ಸೊಪ್ಪು ಮೇಳದಲ್ಲಿ ಸಿಗುವ ವಿವಿಧ ರೀತಿಯ ಸೊಪ್ಪುಗಳ ಹೆಸರು ಕೇಳಿದರೆ ಅಚ್ಚರಿ ಆಗೋದು ಖಂಡಿತ. ಈ ಸೊಪ್ಪುಗಳು ರುಚಿಗಷ್ಟೇ ಅಲ್ಲ ಆರೋಗ್ಯದ ದೃಷ್ಟಿಯಿಂದಲೂ ಮಹತ್ವ ಪಡೆದಿವೆ. ಸೊಪ್ಪು ಮೇಳದಲ್ಲಿ ರಾಜ್ಯ ವಿವಿಧ ಭಾಗಗಳಿಂದ ಬಂದ ಜನು ಇಲ್ಲಿ ಸೊಪ್ಪು ಮಾರಾಟ ಮಾಡುತ್ತಿದ್ದಾರೆ. ನೂರಕ್ಕೂ ಹೆಚ್ಚಿನ ಸೊಪ್ಪು ಪ್ರದರ್ಶನಕ್ಕೆ ಬಂದಿತ್ತು. ಮೇಳದ ವಿಷೇಷ ಎಂದರೆ ಅರಿಸಿನ ಎಲೆಯ ಐಸ್ ಕ್ರೀಂ ಮತ್ತು ಮಿಂಟ್ ಐಸ್ ಕ್ರೀಂ. ಇದರೊಂದಿಗೆ ಮಲೆನಾಡಿನ ಖಾದ್ಯಗಳು ಸೊಪ್ಪು ಮೇಳಕ್ಕೆ ಬಂದವರ ಹೊಟ್ಟೆ ತಣಿಸಿವೆ. ಬೆರಕೆ ಸೊಪ್ಪು, ಹಕ್ಕರಕಿ ಸೊಪ್ಪು, ವಿಶೇಷವಾಗಿ ದಂಟು ಸೊಪ್ಪು, ಹರಿವೆ ಸೊಪ್ಪು, ಅಣ್ಣೇ ಸೊಪ್ಪು, ಸೊಕ್ಕತ್ತಿ ಸೊಪ್ಪು, ಬಸಳೆ ಸೊಪ್ಪು, ರಾಜಗೀರ ಸೊಪ್ಪು, ಕಿರಕಸಾಲಿ ಸೊಪ್ಪು, ನೈಸರ್ಗಿಕವಾಗಿ ಬೆಳೆಯುವ ಸೀಗೆ ಸೊಪ್ಪು, ಲೆಟ್ಯೂಸ್, ಕಾಲೆ, ಅಸ್ಟಾರಗಸ್‌ನಂತಹ ಹೊಸ ತಲೆಮಾರಿನ ಸೊಪ್ಪುಗಳು ಹೆಚ್ಚಿನ ಜನರ ಆಕರ್ಷಣೆಗೆ ಕಾರಣವಾಗಿತ್ತು. ಕಾಡಿನಲ್ಲಿ ಸಿಗುವ ಯಾವ ಸೊಪ್ಪಿನಲ್ಲಿ ಯಾವ ರೀತಿಯ ಔಷಧೀಯ ಗುಣಗಳಿವೆ? ಯಾವ ಸೊಪ್ಪುಗಳನ್ನು ತಿಂದರೆ ಒಳ್ಳೆಯದು? ಇವೆಲ್ಲದರ ಬಗ್ಗೆ ಮಾಹಿತಿ ನೀಡುವಲ್ಲಿ ಹಾವೇರಿಯಲ್ಲಿ ನಡೆದ ಸೊಪ್ಪಿನ ಮೇಳ ಯಶಸ್ವಿಯಾಯಿತು.

 
ಮೇಳದಲ್ಲಿಂದು

ಸೊಪ್ಪಿನಿಂದ ಮಾಡುವ ಅಡುಗೆ ಕುರಿತು ‘ಅಜ್ಜಿಯ ಮಡಿಲು- ಸೊಪ್ಪಿನ ಕಡಲು’ ಎಂಬ ಕಾರ್ಯಕ್ರಮವನ್ನು ತುಮಕೂರಿನ ಮುರಳೀಧರ ಗುಂಗುರಮಳೆ ಇವರು ಭಾನುವಾರ ಬೆಳಿಗ್ಗೆ ನಡೆಸಿಕೊಡಲಿದ್ದಾರೆ. ಕ್ರಾಪ್ಸ್೪ಎಚ್’ಡಿ ಯೋಜನೆ ಆಶ್ರಯದಲ್ಲಿ ಮಧ್ಯಾಹ್ನ ೧೨ ಗಂಟೆಗೆ “ಸೊಪ್ಪಿನ ಅಡುಗೆ ಸ್ಪರ್ಧೆ” ಏರ್ಪಡಿಸಲಾಗಿದೆ. ವಿವಿಧ ಬಗೆಯ ಸೊಪ್ಪುಗಳನ್ನು ಬಳಸಿ ತಯಾರಿಸಿದ ಸಾಂಪ್ರದಾಯಿಕ ಅಥವಾ ಹೊಸ ಬಗೆಯ ಅಡುಗೆಗೆಳನ್ನು ತಯಾರಿಸಿ ಮೇಳಕ್ಕೆ ತರಬಹುದು. ನಿರ್ಲಕ್ಯಕ್ಕೆ ಗುರಿಯಾದ ಮತ್ತು ಹೆಚ್ಚು ಪ್ರಚಲಿತದಲ್ಲಿಲ್ಲದ ಸೊಪ್ಪುಗಳನ್ನು ಬಳಸಿ ಮಾಡಿದ ಅಡುಗೆಗಳಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಗುತ್ತದೆ. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಇದರ ಜತೆಗೆ, ಬೆಳಿಗ್ಗೆ ೧೦ ಗಂಟೆಗೆ ೫ರಿಂದ ೧೨ ವರ್ಷದ ಮಕ್ಕಳಿಗಾಗಿ “ಸೊಪ್ಪು- ನಾ ಕಂಡಂತೆ” ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.

 

LEAVE A REPLY

Please enter your comment!
Please enter your name here

Subscribe

spot_imgspot_img

Popular

‘ತಂತ್ರಜ್ಞಾನಕ್ಕಿಂತ ಆಹಾರಕ್ಕೆ ಆದ್ಯತೆ ಸಿಗಲಿ’
ಸೊಪ್ಪಿನ ಮೇಳಕ್ಕೆ ಚಾಲನೆ, ಬಸವಶಾಂತಲಿಂಗಶ್ರೀ ಅಭಿಮತ

ಹಾವೇರಿ: ವಾಟ್ಸಪ್‌ಯುಗದಲ್ಲಿ ಇಂದಿನ ಯುವ ಜನಾಂಗ ಜಂಕ್‌ಪುಡ್‌ಜಾಲದಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ, ಎಷ್ಟೋ ಯವಕರ ಸೊಪ್ಪನ್ನೇ ನೋಡಿಲ್ಲ. ಯುವಕರು ತಂತ್ರಜ್ಞಾನಕ್ಕೆ ಕೊಡುವ ಆದ್ಯತೆಯನ್ನು ಆಹಾರಕ್ಕೂ ಕೊಡಬೇಕು. ಆರೋಗ್ಯವೇ ಭಾಗ್ಯ ಎಂಬ ನುಡಿಗೆ ಅನುಗುಣವಾಗಿ, ಉತ್ತಮ ಆಹಾರ ಸೇವನೆಯನ್ನು ರೂಢಿಸಿಕೊಳ್ಳಬೇಕು ಎಂದು ಹೊಸಮಠದ ಬಸವ ಬಸವಶಾಂತಲಿಂಗ ಸ್ವಾಮೀಜಿ ಕರೆ ನೀಡಿದರು.
ಶನಿವಾರ ಇಲ್ಲಿನ ಹೊಸಮಠದ ಸಮುದಾಯ ಭವನದಲ್ಲಿ ಮೈಸೂರಿನ ಸಹಜ ಸಮೃದ್ಧಿ ಸಂಸ್ಥೆ ಹಾಗೂ ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸೊಪ್ಪಿನ ವೈವಿಧ್ಯ ಜನಪ್ರಿಯಗೊಳಿಸುವ ಉದ್ದೇಶದಿಂದ ಆಯೋಜಿಸಿದ್ದ ಎರಡು ದಿನಗಳ “ಸೊಪ್ಪಿನ ಮೇಳ”ಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸೊಪ್ಪಿನಲ್ಲಿ ಅಪಾರ ಪೋಷಕಾಂಶ ಇವೆ. ಇಂಥ ಸೊಪ್ಪಿನ ಲೋಕದ ಅನಾವರಣವನ್ನು ಹಾವೇರಿಯಲ್ಲಿ ಮೊದಲ ಬಾರಿಗೆ ಮಾಡಿರುವುದು ಸಂತಸದ ಸಂಗತಿ. ಕೇವಲ ನಾಲ್ಕೈದು ಬಗೆಯ ಸೊಪ್ಪುಗಳು ಜನಪ್ರಿಯವಾಗಿದ್ದು, ನಿಸರ್ಗದಲ್ಲಿ ಸಿಗುವ ಇನ್ನಿತರ ಸೊಪ್ಪುಗಳನ್ನು ಸಹ ಸೇವನೆಗೆ ಬಳಸಿಕೊಳ್ಳಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಎಂ.ವೈ.ಮೀಶಿ ಮಾತನಾಡಿ, ಆರೋಗ್ಯ ಸಂರಕ್ಷಣೆ ದೃಷ್ಟಿಯಿಂದ ಸೊಪ್ಪುಗಳ ಬಳಕೆ ಅನಿವಾರ್ಯವಾಗಿದೆ. ಪೌಷ್ಟಿಕಾಂಶಭರಿತ ಸೊಪ್ಪುಗಳು, ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ ಎಂದು ಬಣ್ಣಿಸಿದರು.
ಕೃಷಿಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ತಂದುಕೊಡುವ ಸೊಪ್ಪುಗಳು ಆರೋಗ್ಯಕ್ಕೆ ಬಹಳ ಮುಖ್ಯ. ಕಡಿಮೆ ಜಮೀನಿನಲ್ಲಿ ನಿಗದಿತವಾಗಿ ಸತತ ಆದಾಯ ಪಡೆಯುವ ರೈತರ ಯಶಸ್ವಿ ಪ್ರಯೋಗವನ್ನು ಉಳಿದ ರೈತರೂ ಅನುಸರಿಸಬೇಕು ಎಂದು ಸಲಹೆ ಮಾಡಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿ ವಿಜಯಲಕ್ಷ್ಮೀ ಮಾತನಾಡಿ, ಬಗೆಬಗೆಯ ಸೊಪ್ಪುಗಳಿಂದ ರುಚಿಯಾದ ಅಡುಗೆ ಹಾಗೂ ತಿಂಡಿ ತಿನಿಸು ಮಾಡಲು ಸಾಧ್ಯ. ಇಂದಿನ ಯುವಪೀಳಿಗೆಯು ಜಂಕ್ ಫುಡ್ ಬಿಟ್ಟು, ದೇಸಿ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಎಚ್.ಡಿ ಕೋಟೆಯ ಜೇನುಕುರುಬ ಸಮುದಾಯದ ನಾಯಕಿ ಪಾರ್ವತಿ ಅವರು, ಬುಡಕಟ್ಟು ಸಮುದಾಯಗಳು ಈಗಲೂ ಬಳಸುವ ಕಾಡಿನ ಸೊಪ್ಪುಗಳ ಬಗ್ಗೆ ಅನುಭವ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ‘ಸಖತ್ ಸೊಪ್ಪು’ ಪುಸ್ತಕ ಬಿಡುಗಡೆ ಮಾಡಲಾಯಿತು. ದೇಸಿ ತಳಿ ಸಂರಕ್ಷಕ ಶ್ರೇಣಿಕರಾಜ್ ಯಳವತ್ತಿ ಅಧ್ಯಕ್ಷತೆ ವಹಿಸಿದ್ದರು.
ಸಹಜ ಸಮೃದ್ಧ ಕಾರ್ಯದರ್ಶಿ ಆನಂದತೀರ್ಥ ಪ್ಯಾಟಿ ಪ್ರಾಸ್ತಾವಿಕ ಮಾತಾಡಿದರು. ಅಭಿಷೇಕ್ ಸ್ವಾಗತಿಸಿದರು. ಶಾಂತಕುಮಾರ್ ನಿರೂಪಿಸಿದರು. ಶ್ರೀದೇವಿ ಬಿ. ವಂದಿಸಿದರು.

ಸೊಪ್ಪು ಮೇಳದ ವಿಶೇಷತೆ
ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗವು ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಜೊತೆಗೂಡಿ ಆಯೋಜಿಸಿರುವ ‘ಸೊಪ್ಪಿನ ಮೇಳ’ದಲ್ಲಿ ನೂರಕ್ಕೂ ಹೆಚ್ಚಿನ ಸೊಪ್ಪುಗಳ ಪ್ರದರ್ಶನ ಇದೆ. ಧಾರವಾಡ, ಹಾವೇರಿ, ಬೆಳಗಾವಿ, ಮೈಸೂರು ಮತ್ತು ತುಮಕೂರು ಭಾಗಗಳ ರೈತರು ಬಗೆ ಬಗೆಯ ಸೊಪ್ಪು ಮತ್ತು ಸೊಪ್ಪಿನ ಮೌಲ್ಯವರ್ಧಿತ ಪದಾರ್ಥಗಳನ್ನು ಪ್ರದರ್ಶನ- ಮತ್ತು ಮಾರಾಟ ಮಾಡಿದ್ದಾರೆ. ದಿನ ಬಳಕೆಯ ಸೊಪ್ಪು, ಔಷಧೀಯ ಸೊಪ್ಪು, ಸಾಗುವಳಿ ಮಾಡದ ನಿಸರ್ಗದತ್ತ ಸೊಪ್ಪು, ಕಾಡಿನ ಸೊಪ್ಪು, ಬಳ್ಳಿ ಸೊಪ್ಪು, ಮರಾಧಾರಿತ ಸೊಪ್ಪು ಮತ್ತು ವಿದೇಶಿ ಸೊಪ್ಪುಗಳನ್ನು ಈ ಪ್ರದರ್ಶನದಲ್ಲಿ ನೋಡಬಹುದು. ತಾರಸಿ ತೋಟ ಹಾಗೂ ಹಿತ್ತಿಲು ಜಾಗದಲ್ಲಿ ಕೈತೋಟ ಮಾಡುವವರಿಗೆ ಬಿತ್ತನೆ ಬೀಜ ಸಿಗಲಿವೆ. ಜಿಲ್ಲೆಯ ಹಿರೇಬೆಂಡಿಗೇರಿಯ ರೈತ ನನ್ನೆಸಾಬ ದಿವಾನವರ ಸಾವಯುವ ಕೃಷಿಯಲ್ಲಿ ಬೆಳೆದ ೧೦ಕೆ.ಜಿ ತೂಕದ ಸೂರೆಕಾಯಿಗಳು ಜನರ ಗಮನ ಸೆಳೆದವು.

ಮೇಳದಲ್ಲಿ ಯಾವೇಲ್ಲ ಸೊಪ್ಪುಗಳಿವೆ?
ಸೊಪ್ಪಿನಮೇಲದಲ್ಲಿ ಸೊಪ್ಪುಗಳ ಲೋಕವೇ ಅನಾವರಣಗೊಂಡಿದೆ. ಪಾಲಕ್ ಸೊಪ್ಪು, ಮೆಂತ್ಯೆ ಸೊಪ್ಪು, ಕೊತ್ತಂಬರಿ ಸೊಪ್ಪು ಕೇಳಿದ್ದ ನಮಗೆ ಈ ಸೊಪ್ಪು ಮೇಳದಲ್ಲಿ ಸಿಗುವ ವಿವಿಧ ರೀತಿಯ ಸೊಪ್ಪುಗಳ ಹೆಸರು ಕೇಳಿದರೆ ಅಚ್ಚರಿ ಆಗೋದು ಖಂಡಿತ. ಈ ಸೊಪ್ಪುಗಳು ರುಚಿಗಷ್ಟೇ ಅಲ್ಲ ಆರೋಗ್ಯದ ದೃಷ್ಟಿಯಿಂದಲೂ ಮಹತ್ವ ಪಡೆದಿವೆ. ಸೊಪ್ಪು ಮೇಳದಲ್ಲಿ ರಾಜ್ಯ ವಿವಿಧ ಭಾಗಗಳಿಂದ ಬಂದ ಜನು ಇಲ್ಲಿ ಸೊಪ್ಪು ಮಾರಾಟ ಮಾಡುತ್ತಿದ್ದಾರೆ. ನೂರಕ್ಕೂ ಹೆಚ್ಚಿನ ಸೊಪ್ಪು ಪ್ರದರ್ಶನಕ್ಕೆ ಬಂದಿತ್ತು. ಮೇಳದ ವಿಷೇಷ ಎಂದರೆ ಅರಿಸಿನ ಎಲೆಯ ಐಸ್ ಕ್ರೀಂ ಮತ್ತು ಮಿಂಟ್ ಐಸ್ ಕ್ರೀಂ. ಇದರೊಂದಿಗೆ ಮಲೆನಾಡಿನ ಖಾದ್ಯಗಳು ಸೊಪ್ಪು ಮೇಳಕ್ಕೆ ಬಂದವರ ಹೊಟ್ಟೆ ತಣಿಸಿವೆ. ಬೆರಕೆ ಸೊಪ್ಪು, ಹಕ್ಕರಕಿ ಸೊಪ್ಪು, ವಿಶೇಷವಾಗಿ ದಂಟು ಸೊಪ್ಪು, ಹರಿವೆ ಸೊಪ್ಪು, ಅಣ್ಣೇ ಸೊಪ್ಪು, ಸೊಕ್ಕತ್ತಿ ಸೊಪ್ಪು, ಬಸಳೆ ಸೊಪ್ಪು, ರಾಜಗೀರ ಸೊಪ್ಪು, ಕಿರಕಸಾಲಿ ಸೊಪ್ಪು, ನೈಸರ್ಗಿಕವಾಗಿ ಬೆಳೆಯುವ ಸೀಗೆ ಸೊಪ್ಪು, ಲೆಟ್ಯೂಸ್, ಕಾಲೆ, ಅಸ್ಟಾರಗಸ್‌ನಂತಹ ಹೊಸ ತಲೆಮಾರಿನ ಸೊಪ್ಪುಗಳು ಹೆಚ್ಚಿನ ಜನರ ಆಕರ್ಷಣೆಗೆ ಕಾರಣವಾಗಿತ್ತು. ಕಾಡಿನಲ್ಲಿ ಸಿಗುವ ಯಾವ ಸೊಪ್ಪಿನಲ್ಲಿ ಯಾವ ರೀತಿಯ ಔಷಧೀಯ ಗುಣಗಳಿವೆ? ಯಾವ ಸೊಪ್ಪುಗಳನ್ನು ತಿಂದರೆ ಒಳ್ಳೆಯದು? ಇವೆಲ್ಲದರ ಬಗ್ಗೆ ಮಾಹಿತಿ ನೀಡುವಲ್ಲಿ ಹಾವೇರಿಯಲ್ಲಿ ನಡೆದ ಸೊಪ್ಪಿನ ಮೇಳ ಯಶಸ್ವಿಯಾಯಿತು.

 
ಮೇಳದಲ್ಲಿಂದು

ಸೊಪ್ಪಿನಿಂದ ಮಾಡುವ ಅಡುಗೆ ಕುರಿತು ‘ಅಜ್ಜಿಯ ಮಡಿಲು- ಸೊಪ್ಪಿನ ಕಡಲು’ ಎಂಬ ಕಾರ್ಯಕ್ರಮವನ್ನು ತುಮಕೂರಿನ ಮುರಳೀಧರ ಗುಂಗುರಮಳೆ ಇವರು ಭಾನುವಾರ ಬೆಳಿಗ್ಗೆ ನಡೆಸಿಕೊಡಲಿದ್ದಾರೆ. ಕ್ರಾಪ್ಸ್೪ಎಚ್’ಡಿ ಯೋಜನೆ ಆಶ್ರಯದಲ್ಲಿ ಮಧ್ಯಾಹ್ನ ೧೨ ಗಂಟೆಗೆ “ಸೊಪ್ಪಿನ ಅಡುಗೆ ಸ್ಪರ್ಧೆ” ಏರ್ಪಡಿಸಲಾಗಿದೆ. ವಿವಿಧ ಬಗೆಯ ಸೊಪ್ಪುಗಳನ್ನು ಬಳಸಿ ತಯಾರಿಸಿದ ಸಾಂಪ್ರದಾಯಿಕ ಅಥವಾ ಹೊಸ ಬಗೆಯ ಅಡುಗೆಗೆಳನ್ನು ತಯಾರಿಸಿ ಮೇಳಕ್ಕೆ ತರಬಹುದು. ನಿರ್ಲಕ್ಯಕ್ಕೆ ಗುರಿಯಾದ ಮತ್ತು ಹೆಚ್ಚು ಪ್ರಚಲಿತದಲ್ಲಿಲ್ಲದ ಸೊಪ್ಪುಗಳನ್ನು ಬಳಸಿ ಮಾಡಿದ ಅಡುಗೆಗಳಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಗುತ್ತದೆ. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಇದರ ಜತೆಗೆ, ಬೆಳಿಗ್ಗೆ ೧೦ ಗಂಟೆಗೆ ೫ರಿಂದ ೧೨ ವರ್ಷದ ಮಕ್ಕಳಿಗಾಗಿ “ಸೊಪ್ಪು- ನಾ ಕಂಡಂತೆ” ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.

 

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...