ತುಂಗಭದ್ರಾ ನದಿಯ ನೀರಿನ ಹರಿವು ಬಂದ್- ಹಾವೇರಿಗೆ ಹಾಹಾ ಕಾರವಾಗದಿರಲಿ ಬೇಸಿಗೆಯಲಿ
ಹಾವೇರಿ: ಜಿಲ್ಲಾ ಕೇಂದ್ರ ಸ್ಥಳವಾದ ಹಾವೇರಿನಗರಕ್ಕೆ ನೀರು ಸರಬರಾಜು ಮಾಡುವ ತಾಲೂಕಿನ ಕಂಚಾರಗಟ್ಟಿಯಯಬಳಿ ಹರಿದಿರುವ ತುಂಗಭದ್ರಾನದಿಯ ನೀರಿನ ಹೊರ ಹರಿವು ಬಂದ್ ಆಗಿದ್ದು, ಸದ್ಯ ನೀರು ಸರಬರಾಜು ಮಾಡುವ ಜಾಕ್ವೆಲ್ಬಳಿ ೧೫ದಿನಗಳಿಗೆ ಆಗುವಷ್ಟು ನೀರಿನ ಸಂಗ್ರಹ ಇದ್ದು, ಜನೇವರಿ ಅಂತ್ಯದವರೆಗೆ ನೀರು ಸರಬರಾಜಿನಲ್ಲಿ ಯಾವದೇ ವ್ಯತ್ಯಯಗಳು ಆಗದಿರುವ ಸಾಧ್ಯತೆ ಇಲ್ಕಲ. ಆದರೆ, ಬೇಸಿಗೆಯ ಆರಂಭದ ಫ್ರೆಬ್ರವರಿ ತಿಂಗಳಿಗೆ ನದಿಯಲ್ಲಿನ ನೀರು ಸಂಪೂರ್ಣ ಬತ್ತಿ ಹೋದರೆ ಹಾವೇರಿಜನರಿಗೆ ಹೆಗ್ಗೇರೆಕೆರೆ ನೀರು ಪೂರೈಕೆ ಅನಿವಾರ್ಯವಾಗಲಿದೆ.
ಸ್ಥಳೀಯ ನಗರಸಭೆಯ ಅಧ್ಯಕ್ಷೆ ಶೆಶಿಕಲಾ ರಾಮು ಮಾಳಗಿ, ಎಇಇ ರಾಯಕರ ಮತ್ತಿತರರು ಬುಧವಾರ ಕಂಚಾರಗಟ್ಟಿಯ ಜಾಕ್ವೆಲ್ಗೆ ಭೇಟಿ ನೀಡಿ ನೀರಿನ ಹರಿವನ್ನು ವೀಕ್ಷಿಸಿ ನೀರು ಸಂಗ್ರಹಕ್ಕೆ ನದಿಯಲ್ಲಿನ ಸಂಪನ್ಮೂಲ ಬಳಸಿಕೊಂಡು ಸೇತುವೆಗೆ ಅಡ್ಡವಾಗಿ ನೀರು ತಡೆಯಲು ಮರಳಿನ ಜೀಚಲಗಳ ತಡೆಗೋಡೆಗೆ ಸೂಚನೆ ನೀಡಿದ್ದಾರೆ. ಆಮೂಲಕ ಸಾಧ್ಯವಾದಷ್ಟು ನೀರನ್ನು ಸಂಗ್ರಹಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಪ್ರತಿ ವರ್ಷ ತುಂಗಭದ್ರಾ ನದಿಯ ನೀರನ್ನು ಜನವರಿಯಲ್ಲಿಯೇ ಸೇತುವೆಗೆ ಅಡ್ಡವಾಗಿ ಮರಳಿನಚೀಲದ ತಡೆಗೋಡೆ ನಿರ್ಮಿಸಿ ನೀರು ತಡೆ ಹಿಡಿದು ನಗರದ ಜನತೆಗೆ ಬೇಸಿಗೆಯಲ್ಲಿ ಯಾವುದೇ ತೊಂದರೆ ಆಗದಂತೆ ಹಿಂದಿನಿಂದಲೂ ನೋಡಿಕೊಳ್ಳಲಾಗುತ್ತಿತ್ತು. ಪ್ರತಿವರ್ಷ ಇದಕ್ಕಾಗಿ ಪ್ರಕೃತಿ ವಿಕೋಪದ ನಿಧಿಯಲ್ಲಿ ೧೦ ಲಕ್ಷ ವ್ಯಯಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಹಣವನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡುತ್ತಾ ಬಂದಿದ್ದರು. ಆದರೆ, ಈ ಬಾರಿ ಜಿಲ್ಲಾಡಳಿತ ಮರಳಿನ ಚೀಲದ ತಡೆಗೋಡೆ ನಿರ್ಮಿಸಲು ಹಣ ನೀಡಲಿಲ್ಲವೋ? ಈ ಬಗ್ಗೆ ನಗರಸಭೆಯಿಂದ ಜಿಲ್ಲಾಡಳಿತಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿಲ್ಲವೋ? ತಿಳಿದಿಲ್ಲ. ಈವರೆಗೆ ನದಿಯ ನೀರು ತಡೆಯಲು ತಡೆಗೋಡೆ ನಿರ್ಮಿಸಿಲ್ಲ. ಹೀಗಾಗಿ ನದಿಯ ನೀರು ಹೊರ ಹರಿವು ಬಂದ್ ಆಗಿದ್ದು, ಈಗ ತಡೆಗೋಡೆ ನಿರ್ಮಿಸುವುದು ವ್ಯರ್ಥ ಪ್ರಯತ್ನವಾಗಿದೆ.
ಈಗ ಸಂಗ್ರವಾಗಿರುವ ನೀರು ಪೂರೈಸಲು ಯಾವುದೇ ತೊಂದರೆಗಳಲ್ಲ. ಆದರೆ ನೀರು ಖಾಲಿಯಾದ ನಂತರದ ದಿನಗಳಲ್ಲಿ ನಗರದ ಜನತೆಗೆ ಯಾವ ರೀತಿಯಲ್ಲಿ ನೀರು ಸರಬರಾಜು ಮಾಡಬೇಕು?. ಸದ್ಯ ಹಾವೇರಿಯ ಹೆಗ್ಗೆರೆಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹ ಇದ್ದು, ಈಗಾಗಲೇ ಈ ನೀರನ್ನು ನಗರಕ್ಕೆ ಸರಬರಾಜು ಮಾಡಲಾಗುತ್ತದೆ. ಒಂದು ವೇಳೆ ತುಂಗಭದ್ರಾನದಿಯ ನೀರು ಸರಬರಾಜು ಬಂದ್ ಆದರೆ ಹೆಗ್ಗೆರೆಕೆರೆ ನೀರು ಸರಬರಾಜು ಅನಿವಾರ್ಯವಾಗುತ್ತದೆ. ನೀರು ಸರಬರಾಜು ವಿಷಯದಲ್ಲಿ ಜನರನ್ನು ಯಾವ ರೀತಿಯಲ್ಲಿ ಸಮಾದಾನ ಮಾಡಬೇಕು ಎನ್ನುವುದೇ ನಗರಸಭೆಗೆ ದೊಡ್ಡ ಸವಾಲಾಗಿದೆ.
ಹಾವೇರಿ: ಜಿಲ್ಲಾ ಕೇಂದ್ರ ಸ್ಥಳವಾದ ಹಾವೇರಿನಗರಕ್ಕೆ ನೀರು ಸರಬರಾಜು ಮಾಡುವ ತಾಲೂಕಿನ ಕಂಚಾರಗಟ್ಟಿಯಯಬಳಿ ಹರಿದಿರುವ ತುಂಗಭದ್ರಾನದಿಯ ನೀರಿನ ಹೊರ ಹರಿವು ಬಂದ್ ಆಗಿದ್ದು, ಸದ್ಯ ನೀರು ಸರಬರಾಜು ಮಾಡುವ ಜಾಕ್ವೆಲ್ಬಳಿ ೧೫ದಿನಗಳಿಗೆ ಆಗುವಷ್ಟು ನೀರಿನ ಸಂಗ್ರಹ ಇದ್ದು, ಜನೇವರಿ ಅಂತ್ಯದವರೆಗೆ ನೀರು ಸರಬರಾಜಿನಲ್ಲಿ ಯಾವದೇ ವ್ಯತ್ಯಯಗಳು ಆಗದಿರುವ ಸಾಧ್ಯತೆ ಇಲ್ಕಲ. ಆದರೆ, ಬೇಸಿಗೆಯ ಆರಂಭದ ಫ್ರೆಬ್ರವರಿ ತಿಂಗಳಿಗೆ ನದಿಯಲ್ಲಿನ ನೀರು ಸಂಪೂರ್ಣ ಬತ್ತಿ ಹೋದರೆ ಹಾವೇರಿಜನರಿಗೆ ಹೆಗ್ಗೇರೆಕೆರೆ ನೀರು ಪೂರೈಕೆ ಅನಿವಾರ್ಯವಾಗಲಿದೆ.
ಸ್ಥಳೀಯ ನಗರಸಭೆಯ ಅಧ್ಯಕ್ಷೆ ಶೆಶಿಕಲಾ ರಾಮು ಮಾಳಗಿ, ಎಇಇ ರಾಯಕರ ಮತ್ತಿತರರು ಬುಧವಾರ ಕಂಚಾರಗಟ್ಟಿಯ ಜಾಕ್ವೆಲ್ಗೆ ಭೇಟಿ ನೀಡಿ ನೀರಿನ ಹರಿವನ್ನು ವೀಕ್ಷಿಸಿ ನೀರು ಸಂಗ್ರಹಕ್ಕೆ ನದಿಯಲ್ಲಿನ ಸಂಪನ್ಮೂಲ ಬಳಸಿಕೊಂಡು ಸೇತುವೆಗೆ ಅಡ್ಡವಾಗಿ ನೀರು ತಡೆಯಲು ಮರಳಿನ ಜೀಚಲಗಳ ತಡೆಗೋಡೆಗೆ ಸೂಚನೆ ನೀಡಿದ್ದಾರೆ. ಆಮೂಲಕ ಸಾಧ್ಯವಾದಷ್ಟು ನೀರನ್ನು ಸಂಗ್ರಹಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಪ್ರತಿ ವರ್ಷ ತುಂಗಭದ್ರಾ ನದಿಯ ನೀರನ್ನು ಜನವರಿಯಲ್ಲಿಯೇ ಸೇತುವೆಗೆ ಅಡ್ಡವಾಗಿ ಮರಳಿನಚೀಲದ ತಡೆಗೋಡೆ ನಿರ್ಮಿಸಿ ನೀರು ತಡೆ ಹಿಡಿದು ನಗರದ ಜನತೆಗೆ ಬೇಸಿಗೆಯಲ್ಲಿ ಯಾವುದೇ ತೊಂದರೆ ಆಗದಂತೆ ಹಿಂದಿನಿಂದಲೂ ನೋಡಿಕೊಳ್ಳಲಾಗುತ್ತಿತ್ತು. ಪ್ರತಿವರ್ಷ ಇದಕ್ಕಾಗಿ ಪ್ರಕೃತಿ ವಿಕೋಪದ ನಿಧಿಯಲ್ಲಿ ೧೦ ಲಕ್ಷ ವ್ಯಯಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಹಣವನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡುತ್ತಾ ಬಂದಿದ್ದರು. ಆದರೆ, ಈ ಬಾರಿ ಜಿಲ್ಲಾಡಳಿತ ಮರಳಿನ ಚೀಲದ ತಡೆಗೋಡೆ ನಿರ್ಮಿಸಲು ಹಣ ನೀಡಲಿಲ್ಲವೋ? ಈ ಬಗ್ಗೆ ನಗರಸಭೆಯಿಂದ ಜಿಲ್ಲಾಡಳಿತಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿಲ್ಲವೋ? ತಿಳಿದಿಲ್ಲ. ಈವರೆಗೆ ನದಿಯ ನೀರು ತಡೆಯಲು ತಡೆಗೋಡೆ ನಿರ್ಮಿಸಿಲ್ಲ. ಹೀಗಾಗಿ ನದಿಯ ನೀರು ಹೊರ ಹರಿವು ಬಂದ್ ಆಗಿದ್ದು, ಈಗ ತಡೆಗೋಡೆ ನಿರ್ಮಿಸುವುದು ವ್ಯರ್ಥ ಪ್ರಯತ್ನವಾಗಿದೆ.
ಈಗ ಸಂಗ್ರವಾಗಿರುವ ನೀರು ಪೂರೈಸಲು ಯಾವುದೇ ತೊಂದರೆಗಳಲ್ಲ. ಆದರೆ ನೀರು ಖಾಲಿಯಾದ ನಂತರದ ದಿನಗಳಲ್ಲಿ ನಗರದ ಜನತೆಗೆ ಯಾವ ರೀತಿಯಲ್ಲಿ ನೀರು ಸರಬರಾಜು ಮಾಡಬೇಕು?. ಸದ್ಯ ಹಾವೇರಿಯ ಹೆಗ್ಗೆರೆಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹ ಇದ್ದು, ಈಗಾಗಲೇ ಈ ನೀರನ್ನು ನಗರಕ್ಕೆ ಸರಬರಾಜು ಮಾಡಲಾಗುತ್ತದೆ. ಒಂದು ವೇಳೆ ತುಂಗಭದ್ರಾನದಿಯ ನೀರು ಸರಬರಾಜು ಬಂದ್ ಆದರೆ ಹೆಗ್ಗೆರೆಕೆರೆ ನೀರು ಸರಬರಾಜು ಅನಿವಾರ್ಯವಾಗುತ್ತದೆ. ನೀರು ಸರಬರಾಜು ವಿಷಯದಲ್ಲಿ ಜನರನ್ನು ಯಾವ ರೀತಿಯಲ್ಲಿ ಸಮಾದಾನ ಮಾಡಬೇಕು ಎನ್ನುವುದೇ ನಗರಸಭೆಗೆ ದೊಡ್ಡ ಸವಾಲಾಗಿದೆ.
ನೀರು ಸಂಗ್ರಹಕ್ಕೆ ಅಗತ್ಯ ಕ್ರಮ

ಹಾವೇರಿನಗರಕ್ಕೆ ನೀರು ಸರಬರಾಜು ಮಾಡುವ ಕಂಚಾರಗಟ್ಟಿ ಜಾಕೆವೆಲ್ಗೆ ನಗರಸಭೆಯ ಅಧಿಕಾರಿಗಳೊಂದಿಗೆ ಭೇಟಿ ಕೊಟ್ಟು ವೀಕ್ಷಣೆ ಮಾಡಿರುವೆ. ನಗರಕ್ಕೆ ನೀರು ಸರಬರಾಜು ಆಗುವ ನೀರಿನ ಪ್ರಮಾಣದಲ್ಲಿ ಇಳಿಕೆ ಆಗುತ್ತಿರುವ ಬಗ್ಗೆ, ನಗರಸಭೆಯ ಸಂಪನ್ಮೂಲವನ್ನು ಬಳಿಸಿಕೊಂಡ ನೀರಿನ ಸಂಗ್ರಹಕ್ಕೆ ಸೂಕ್ತ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ನಗರಸಭೆಯ ಅಧ್ಯಕ್ಷೆ ಶೆಶಿಕಲಾ ರಾಮು ಮಾಳಗಿ ತಿಳಿಸಿದ್ದಾರೆ.