“ನಾನವನಲ್ಲ” ಬೊಮ್ಮಾಯಿ ತಂತ್ರ ಯಶಸ್ವಿ! ಶಿಗ್ಗಾಂವ ಕ್ಷೇತ್ರದ ಉಪಚುನಾವಣೆಗೆ “ಭರತ”ನಿಗೆ ಬಿಜೆಪಿ ಟಿಕೆಟ್ ಘೋಷಣೆ
ಹಾವೇರಿ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಾಜಿ ಸಿ.ಎಂ. ಬಸವರಾಜ್ ಬೊಮ್ಮಾಯಿ ಹಾವೇರಿಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಾನಲ್ಲ. ನಾನು ಎಂಪಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎನ್ನುವುದು ಮಾಧ್ಯಮಗಳ ಸೃಷ್ಟಿ ಎಂದು ಹೇಳುತ್ತಲೇ “ನಾನವನಲ್ಲ” ಎನ್ನುವ ತಂತ್ರ ಪ್ರಯೋಗಿಸಿ ಒಳಗಿಂದ ಒಳಗೆ “ನಾನು ಅವನೂ ಹೌದು” ಎನ್ನುವ ಪ್ರಯೋಗದ ಮೂಲಕ ಬಿಜೆಪಿ ಎಂಪಿ ಟಿಕೆಟ್ ಪಡೆದು ಸಂಸದರಾಗಿ ಆಯ್ಕೆಯಾಗಿದ್ದು ಇದೀಗ ಇತಿಹಾಸ. ಇದೀಗ ಮತ್ತೆ ಬೊಮ್ಮಾಯಿ ಅವರ “ನಾನವನಲ್ಲ” ಎನ್ನುವತಂತ್ರವನ್ನು ಪ್ರಯೋಗಿಸಿ ತಮ್ಮ ಪುತ್ರ ಭರತ ಬೊಮ್ಮಾಯಿಗೆ ಬಿಜೆಪಿ ಕೊಡಿವಲ್ಲಿ ಯಶಸ್ವಿಯಾಗಿದ್ದಾರೆ.
ಭಾನುವಾರ ರಾತ್ರಿ ೮-೩೦ರ ಸುಮಾರಿಗೆ ಭರತ ಬೊಮ್ಮಾಯಿಗೆ ಬಿಜೆಪಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ. ಭಾನುವಾರ ಮಧ್ಯಾಹ್ನ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು “ಶಿಗ್ಗಾವಿಯಲ್ಲಿ ಯಾರು ಅಭ್ಯರ್ಥಿ ಎನ್ನುವುದು, ಯಾರು ಗೆಲ್ಲುತ್ತಾರೆ ಎನ್ನುವ ಆಧಾರದ ಮೇಲೆ ನಿರ್ಧಾರ ಆಗುತ್ತದೆ. ನಾವು ಉಪಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ.
ಶಿಗ್ಗಾವಿಯಲ್ಲಿ ಸ್ಥಳೀಯ ಮುಖಂಡರು ಭರತ್ ಬೊಮ್ಮಾಯಿಯವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿನ ಜನರು ಮತ್ತು ನಾಯಕರ ನಡುವೆ ಏನು ಮಾತುಕತೆಯಾಗಿದೆಯೊ ಗೊತ್ತಿಲ್ಲ. ಆದರೆ, ನಾನು ಇಷ್ಟು ವರ್ಷ ಅಲ್ಲಿ ಉತ್ತಮ ಕೆಲಸ ಮಾಡಿರುವುದರಿಂದ ಅಲ್ಲಿನ ಜನರು ನನ್ನ ಮಗನ ಹೆಸರು ಹೇಳಿರಬಹುದು. ಆದರೆ, ನಾನು ವೈಯಕ್ತಿಕ ಕಾರಣದಿಂದ ನನ್ನ ಮಗನಿಗೆ ಟಿಕೆಟ್ ಬೇಡ ಅಂತ ಅಂತ ಹೇಳಿದ್ದೇನೆ ಎಂದಿದ್ದರು. ಇತ್ತ ಭಾನುವಾರರಾತ್ರಿ ಬಿಜೆಪಿ ಭರತ ಬೊಮ್ಮಾಯಿಗೆ ಟಿಕೆಟ್ ಘೋಷu ಮಾಡಿದೆ. ಈ ಮೂಲಕ ಬಸವರಾಜ ಬೊಮ್ಮಾಯಿ ಅವರ ತಂತ್ರ ಯಶಸ್ವಿಯಾಗಿದೆ.
ಭರತ ಬೊಮ್ಮಾಯಿ ಪರಿಚಯ: ಬಸವರಾಜ ಬೊಮ್ಮಾಯಿ-ಚನ್ನಮ್ಮ ದಂಪತಿಗಳ ಪುತ್ರನಾಗಿರುವ ಭರತ ಬೊಮ್ಮಾಯಿ ಹುಟ್ಟಿದ್ದು ೩೧ ಮಾರ್ಚ್ ೧೯೮೯ರಲ್ಲಿ. ಸಿಂಗಪುರದಲ್ಲಿನ ಪ್ರಸಿದ್ಧ ಸಿಂಗಾಪುರ್ ಮ್ಯಾನೇಜ್ಮೆಂಟ್ ಯುನಿವರ್ಸಿಟಿಯಲ್ಲಿ ಎಂಬಿಎ ಪದವಿ ಪಡೆದಿರುವ ಇವರು ಯುಎಸ್ಎನ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ತಂದೆ ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಕೈಗಾರಿಕೋದ್ಯಮಿಯಾಗಿ ಹೆಸರು ಮಾಡಿರುವ ಇವರು ಆಟೋಟೆಕ್ ಇಂಜಿನಿಯರ್ಸ್, ವೆಲ್ ಟೆಕ್ ಕಾರ್ಪೊರೇಷನ್ ಇಂಡಸ್ಟ್ರಿ, ಐಶ್ವರ್ಯ ಎನರ್ಜಿ ಮ್ಯಾಗ್ನೆಟಿಕ್ ಇಂಜಿನಿಯರ್ಸ್ ,ಐ ಬಿ ಕ್ಯೂ ಅಪಾರೆಲ್ಸ್, ಪ್ರಭಂಜನ ಆಪಾರೆಲ್ಸ್ ಸೇರಿದಂತೆ ಅನೇಕ ಉದ್ಯಮಗಳನ್ನು ನಡೆಸುತ್ತಿದ್ದಾರೆ.
ಇವರು ನಾನು ಪ್ರಾರಂಭಿಸಿದ ಮತ್ತು ಅಭಿವೃದ್ಧಿಪಡಿಸಿದ ಕಂಪನಿಗಳು ಯುವ ಮನಸ್ಸುಗಳನ್ನು ಬೆಂಬಲಿಸಲು ಮತ್ತು ಪೋಷಿಸಲು ಸಾರ್ವಜನಿಕ/ಖಾಸಗಿ ಪಾಲುದಾರಿಕೆಗಳನ್ನು ಬೆಂಬಲಿಸಲು ಮತ್ತು ಕೇಂದ್ರೀಕರಿಸಲು ಉದಯೋನ್ಮುಖ ಪ್ರವೃತ್ತಿಗಳು ಮತ್ತು ಉತ್ತಮ ಅಭ್ಯಾಸಗಳನ್ನು ಅಳವಡಿಸುತ್ತಿವೆ.
ಒಬ್ಬ ವಾಣಿಜ್ಯೋದ್ಯಮಿಯಾಗಿ ಹಂತ ಹಂತವಾಗಿ ಯಶಸ್ಸು ಕಂಡಿರುವ ಇವರು ಇದೀಗ ತಮ್ಮ ಕುಟುಂಬದ ರಾಜಕೀಯ ಹಿನ್ನಲೆಯ ಮೂಲಕ ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಪಡೆದಿದ್ದಾರೆ. ಉದ್ಯಮದಲ್ಲಿ ಯಶಸ್ಸು ಕಂಡಿರುವ ಇವರು ರಾಜಕೀಯದಲ್ಲಿ ಯಶಸ್ಸು ಕಾಣುವರೇ ಇನ್ನೇನು ಕೆಲವೆ ದಿನಗಳಲ್ಲಿ ಗೊತ್ತಾಗಲಿದೆ.
ಹಾವೇರಿ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಾಜಿ ಸಿ.ಎಂ. ಬಸವರಾಜ್ ಬೊಮ್ಮಾಯಿ ಹಾವೇರಿಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಾನಲ್ಲ. ನಾನು ಎಂಪಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎನ್ನುವುದು ಮಾಧ್ಯಮಗಳ ಸೃಷ್ಟಿ ಎಂದು ಹೇಳುತ್ತಲೇ “ನಾನವನಲ್ಲ” ಎನ್ನುವ ತಂತ್ರ ಪ್ರಯೋಗಿಸಿ ಒಳಗಿಂದ ಒಳಗೆ “ನಾನು ಅವನೂ ಹೌದು” ಎನ್ನುವ ಪ್ರಯೋಗದ ಮೂಲಕ ಬಿಜೆಪಿ ಎಂಪಿ ಟಿಕೆಟ್ ಪಡೆದು ಸಂಸದರಾಗಿ ಆಯ್ಕೆಯಾಗಿದ್ದು ಇದೀಗ ಇತಿಹಾಸ. ಇದೀಗ ಮತ್ತೆ ಬೊಮ್ಮಾಯಿ ಅವರ “ನಾನವನಲ್ಲ” ಎನ್ನುವತಂತ್ರವನ್ನು ಪ್ರಯೋಗಿಸಿ ತಮ್ಮ ಪುತ್ರ ಭರತ ಬೊಮ್ಮಾಯಿಗೆ ಬಿಜೆಪಿ ಕೊಡಿವಲ್ಲಿ ಯಶಸ್ವಿಯಾಗಿದ್ದಾರೆ.
ಭಾನುವಾರ ರಾತ್ರಿ ೮-೩೦ರ ಸುಮಾರಿಗೆ ಭರತ ಬೊಮ್ಮಾಯಿಗೆ ಬಿಜೆಪಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ. ಭಾನುವಾರ ಮಧ್ಯಾಹ್ನ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು “ಶಿಗ್ಗಾವಿಯಲ್ಲಿ ಯಾರು ಅಭ್ಯರ್ಥಿ ಎನ್ನುವುದು, ಯಾರು ಗೆಲ್ಲುತ್ತಾರೆ ಎನ್ನುವ ಆಧಾರದ ಮೇಲೆ ನಿರ್ಧಾರ ಆಗುತ್ತದೆ. ನಾವು ಉಪಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ.
ಶಿಗ್ಗಾವಿಯಲ್ಲಿ ಸ್ಥಳೀಯ ಮುಖಂಡರು ಭರತ್ ಬೊಮ್ಮಾಯಿಯವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿನ ಜನರು ಮತ್ತು ನಾಯಕರ ನಡುವೆ ಏನು ಮಾತುಕತೆಯಾಗಿದೆಯೊ ಗೊತ್ತಿಲ್ಲ. ಆದರೆ, ನಾನು ಇಷ್ಟು ವರ್ಷ ಅಲ್ಲಿ ಉತ್ತಮ ಕೆಲಸ ಮಾಡಿರುವುದರಿಂದ ಅಲ್ಲಿನ ಜನರು ನನ್ನ ಮಗನ ಹೆಸರು ಹೇಳಿರಬಹುದು. ಆದರೆ, ನಾನು ವೈಯಕ್ತಿಕ ಕಾರಣದಿಂದ ನನ್ನ ಮಗನಿಗೆ ಟಿಕೆಟ್ ಬೇಡ ಅಂತ ಅಂತ ಹೇಳಿದ್ದೇನೆ ಎಂದಿದ್ದರು. ಇತ್ತ ಭಾನುವಾರರಾತ್ರಿ ಬಿಜೆಪಿ ಭರತ ಬೊಮ್ಮಾಯಿಗೆ ಟಿಕೆಟ್ ಘೋಷu ಮಾಡಿದೆ. ಈ ಮೂಲಕ ಬಸವರಾಜ ಬೊಮ್ಮಾಯಿ ಅವರ ತಂತ್ರ ಯಶಸ್ವಿಯಾಗಿದೆ.
ಭರತ ಬೊಮ್ಮಾಯಿ ಪರಿಚಯ: ಬಸವರಾಜ ಬೊಮ್ಮಾಯಿ-ಚನ್ನಮ್ಮ ದಂಪತಿಗಳ ಪುತ್ರನಾಗಿರುವ ಭರತ ಬೊಮ್ಮಾಯಿ ಹುಟ್ಟಿದ್ದು ೩೧ ಮಾರ್ಚ್ ೧೯೮೯ರಲ್ಲಿ. ಸಿಂಗಪುರದಲ್ಲಿನ ಪ್ರಸಿದ್ಧ ಸಿಂಗಾಪುರ್ ಮ್ಯಾನೇಜ್ಮೆಂಟ್ ಯುನಿವರ್ಸಿಟಿಯಲ್ಲಿ ಎಂಬಿಎ ಪದವಿ ಪಡೆದಿರುವ ಇವರು ಯುಎಸ್ಎನ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ತಂದೆ ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಕೈಗಾರಿಕೋದ್ಯಮಿಯಾಗಿ ಹೆಸರು ಮಾಡಿರುವ ಇವರು ಆಟೋಟೆಕ್ ಇಂಜಿನಿಯರ್ಸ್, ವೆಲ್ ಟೆಕ್ ಕಾರ್ಪೊರೇಷನ್ ಇಂಡಸ್ಟ್ರಿ, ಐಶ್ವರ್ಯ ಎನರ್ಜಿ ಮ್ಯಾಗ್ನೆಟಿಕ್ ಇಂಜಿನಿಯರ್ಸ್ ,ಐ ಬಿ ಕ್ಯೂ ಅಪಾರೆಲ್ಸ್, ಪ್ರಭಂಜನ ಆಪಾರೆಲ್ಸ್ ಸೇರಿದಂತೆ ಅನೇಕ ಉದ್ಯಮಗಳನ್ನು ನಡೆಸುತ್ತಿದ್ದಾರೆ.
ಇವರು ನಾನು ಪ್ರಾರಂಭಿಸಿದ ಮತ್ತು ಅಭಿವೃದ್ಧಿಪಡಿಸಿದ ಕಂಪನಿಗಳು ಯುವ ಮನಸ್ಸುಗಳನ್ನು ಬೆಂಬಲಿಸಲು ಮತ್ತು ಪೋಷಿಸಲು ಸಾರ್ವಜನಿಕ/ಖಾಸಗಿ ಪಾಲುದಾರಿಕೆಗಳನ್ನು ಬೆಂಬಲಿಸಲು ಮತ್ತು ಕೇಂದ್ರೀಕರಿಸಲು ಉದಯೋನ್ಮುಖ ಪ್ರವೃತ್ತಿಗಳು ಮತ್ತು ಉತ್ತಮ ಅಭ್ಯಾಸಗಳನ್ನು ಅಳವಡಿಸುತ್ತಿವೆ.
ಒಬ್ಬ ವಾಣಿಜ್ಯೋದ್ಯಮಿಯಾಗಿ ಹಂತ ಹಂತವಾಗಿ ಯಶಸ್ಸು ಕಂಡಿರುವ ಇವರು ಇದೀಗ ತಮ್ಮ ಕುಟುಂಬದ ರಾಜಕೀಯ ಹಿನ್ನಲೆಯ ಮೂಲಕ ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಪಡೆದಿದ್ದಾರೆ. ಉದ್ಯಮದಲ್ಲಿ ಯಶಸ್ಸು ಕಂಡಿರುವ ಇವರು ರಾಜಕೀಯದಲ್ಲಿ ಯಶಸ್ಸು ಕಾಣುವರೇ ಇನ್ನೇನು ಕೆಲವೆ ದಿನಗಳಲ್ಲಿ ಗೊತ್ತಾಗಲಿದೆ.
—
malatesh angur
sub-editor
kourava daily,
haveri
sub-editor
kourava daily,
haveri