ಸಾಂಕೇತಿಕ ಚಿತ್ರ………….
ಪತ್ರಕರ್ತರಿಗೆ ಅವಮಾನ, ಗದ್ದಲಮಾಡುವವರಿಗೆ ಸನ್ಮಾನ! ಕೆಲವು ಪೊಲೀಸರಿಗೆ ಯಾರು ಬುದಿ ಹೇಳ ಬೇಕು?
ಹಾವೇರಿ” ಸಾಹಿತ್ಯ ಸಮ್ಮೇಳನದ ವರದಿಮಾಡಲು ರಾಜ್ಯದ ಮೂಲೆ ಮೂಲೆಗಳಿಂದ ಮಾಧ್ಯಮ ಪ್ರತಿನಿಧಿಗಳು ಹಾವೇರಿನಗರಕ್ಕೆ ಆಗಮಿಸಿದ್ದಾರೆ. ಮೂಲಸೌಲಭ್ಯಗಳ ಕೊರತೆ ಇರುವ ಹಾವೇರಿನಗರದಲ್ಲಿ ಹೊರಗಿನಿಂದ ಬಂದವವರಿಗೆ ಆತಿಥ್ಯ ಒದಗಿಸುವುದು ಸ್ವಲ್ಪಮಟ್ಟಿಗೆ ಕಷ್ಟದಾಯಕವಾಗಿದೆ. ಆದರೆ ಜಿಲ್ಲಾ ಆಡಳಿತ , ವಾರ್ತಾ ಇಲಾಖೆಯ ಶಕ್ತಿ ಮೀರಿ ಮಾಧ್ಯಮ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆಯನ್ನು ಸ್ಥಳೀಯ ಲಾಜ್ಗಳಲ್ಲಿ ಹಾಗೂ ವಿವಿಧ ವಸತಿನಿಲಯಗಳಲ್ಲಿ ಕಲ್ಪಿಸಿದೆ. ಸಮ್ಮೇಳನ ಸಭಾಂಗಣಕ್ಕೆ ತೆರಳು ಪಾಸ್ಗಳನ್ನು ಹಾಗೂ ವಾಹನಗಳಿಗೆ ವಾಹನ ಪಾಸುಗಳನ್ನು ನೀಡಿದೆ.
ಆದರೆ ಶುಕ್ರವಾರ ಸಮ್ಮೇಳನದ ವರದಿಗಾಗಿ ವಿವಿಧ ವಾಹನಗಳಲ್ಲಿ ಸಭಾಂಗಣಕ್ಕೆ ತೆರಳುತ್ತಿದ್ದ ಹಲವಾರು ಮಾಧ್ಯಮ ಪ್ರತಿನಿಧಿಗಳು ಪೊಲೀಸ್ ಬೆದರಿಕೆ ಎದುರಿಸಬೇಕಾಯಿತು. ಪಾಸ್ ಇವೆ, ಜಿಲ್ಲಾಡಳಿತದಿಂದ ಪಾಸ್ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಸಹಿ ಇರುವ ಪಾಸ್ ಇವು ಎಂದು ಮಾಧ್ಯಮ ಪ್ರತಿನಿಧಿಗಳು ಪೊಲೀಸರಿಗೆ , ಕೆಲವು ಪೊಲೀಸ್ ಅಧಿಕಾರಿಗಳಿಗೆ ಮಾಧ್ಯಮ ಪ್ರತಿನಿಧಿಗಳು ಪರಿಪರಿಯಾಗಿ ಹೇಳಿದರೂ ಸಹ ಪೊಲೀಸ್ರು ಕೆಲವು ಪತ್ರಕರ್ತರ ಜೊತೆಗೆ ಅನಾಗರಿಕರಂತೆ ನಡೆಸುಕೊಂಡು ವಾಹಗಳನ್ನು ನಿಗದಿಪಡಿಸಿದ ಮರ್ಗದಲ್ಲಿ ಬಿಡದೇ ತಮ್ಮ ಪೊಲೀಸ್ ದರ್ಪವನ್ನು ಪ್ರದರ್ಶಿಸಿದರು.
ಪತ್ರಕರ್ತರ ಕಣ್ಣೆದುರಿಗೆ ರಾಜಕೀಯ ಪಕ್ಷದ ಕಾರ್ಯಕರ್ತರನ್ನು ಗುರುತುಹಿಡಿದು ಸಮ್ಮೇಳನ ಸಭಾಂಗಣಕ್ಕೆ ಕಳಿಸುತ್ತಿದ್ದ ಕೆಲವು ಪೊಲೀಸರಿಗೆ ಸ್ವತಃ ಜಿಲ್ಲಾಡಳಿತ ನೀಡಿದ ವಾಹನಪಾಸ್ಗಳನ್ನು ಮತ್ತು ಗುರುತು ಪತ್ರವನ್ನು ತೊರಿಸಿದರೂ ಇವುಗಳನ್ನು ಗಣನೆಗೆ ತಗೆದುಕೊಳ್ಳದೇ ರಾಜಕಾರಣಿಗಳಿಗೆ ಗೌರವಿಸಿ ಅವರಿ ಸೆಲ್ಯುಟ್ ಹೊಡೆದು ಅವರನ್ನು ಒಳಕ್ಕೆ ಕಳಿಸಿ ಪತ್ರಕರ್ತರನ್ನು ಹೊರಕ್ಕೆ ದೂಡಿದ್ದು ವಿಪರ್ಯಾಸವೇ ಸರಿ.
ಈ ಬಗ್ಗೆ ಅಂದರೆ ಕೆಲವು ಪೊಲೀಸ್ರಿಗೆ ತಿಳುವಳಿಕೆ ನೀಡಿ ಎಂದು ಮೊದಲೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವ ಮಾಡಿಕೊಂಡ ಸಂದರ್ಭದಲ್ಲಿ ಅಧಿಕಾರಿಗಳಿಂದ ಈಬಗ್ಗೆ ಮುನ್ನಚ್ಚರಿಕೆ ಕ್ರಮ ವಹಿಸುವ ಭರವಸೆ ದೊರೆತಿತ್ತು. ಆದರೆ ಸಮ್ಮೇಳನದ ಆರಂಭದದಿನ ಕೆಲವು ಪತ್ರಕರ್ತರಿಗೆ ಪೊಲೀಸರು ನೀಡಿದ ಸನ್ಮಾನದಿಂದ ಬೇಸತ್ತ ಕೆಲು ಪತ್ರಕರ್ತರ ಬೇಸರ ವ್ಯಕ್ತಪಡಿಸಿ, ಯಾಕಾದರೂ ಹಾವೇರಿಗೆ ಬಂದಿವೋ ಎಂದು ತಮ್ಮನ್ನೆ ತಾವು ಶಪಿಸಿಕೊಳ್ಳುತ್ತಾ ಬಂದ ದಾರಿಗೆ ಸುಂಕ ಇಲ್ಲ ಎನ್ನವಂತೆ ಮುನ್ನಡೆದರು.
ಅಷ್ಟಕ್ಕೂ ಈರೀತಿಯ ಅಘಡಗಳು ನಡೆಯುತ್ತವೆ ಎನ್ನುವ ಮುನ್ನಚ್ಚರಿಕೆ ನೀಡಿದಾಗಲೂ ಸಹ ಪೊಲೀಸರು ಕೆಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅಗೌರವದಿಂದ ನಡೆದುಕೊಂಡಿದ್ದು., ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗುವ ಕೆಲವು ಪೊಲೀಸರಿಗೆ ಯಾರು ಬುದ್ದಿಹೇಳಬೇಕು?.