
ಪ್ರಕಾಶ ಮೊರಬದಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರಾಜ್ಯ ಪ್ರಶಸ್ತಿ
ಹಾವೇರಿ: ಹಾವೇರಿ ತಾಲೂಕಿನ ಯಲಗಚ್ಚಗ್ರಾಮದ ಪ್ರತಿಭಾವಂತ ನೃತ್ಯ ಪಟು, ಯಲಗಚ್ಚಗ್ರಾಮದಲ್ಲಿ ಪುನಿತ್ರಾಜ್ಕುಮಾರ ದೇವಸ್ಥಾನ ನಿರ್ಮಿಸಿ ದೊಡ್ಮನೆ ಅಪ್ಪಟ ಅಭಿಮಾನಿಯಾಗಿರುವ ಪ್ರಕಾಶ ಮೊರಬದಗೆ ಕರ್ನಾಟಕ ರತ್ನ ಶ್ರೀಪವರ್ಸ್ಟಾರ್ ಪುನೀತ್ರಾಜಕುಮಾರ್ ರಾಜ್ಯ ಪ್ರಶಸ್ತಿ ೨೦೨೬ಕ್ಕೆ ಭಾಜನರಾಗಿದ್ದಾರೆ. ಮಾ.೧೫ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಟಿವಿ-೪ ಕನ್ನಡ ನ್ಯೂಸ್ ಚಾನೆಲ್ವತಿಯಿಂದ ಕರ್ನಾಟಕ ರತ್ನ ಪವರ್ಸ್ಟಾರ್ ಪುನೀತ್ರಾಜಕುಮಾರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಯಲಗಚ್ಚ ಗ್ರಾಮದ ಯುವ ಪ್ರತಿಭಾವಂತ ನೃತ್ಯ ನಿರ್ದೇಶಕ ,ಕಲಾವಿದ, ಸಮಾಜ ಸೇವಕ, ಹಾಗೂ ಒಬ್ಬ ಸಾಮಾನ್ಯ ತರಕಾರಿ ಮಾರುವ ಯುವಕ ಬಹುಮುಖ ಪ್ರತಿಭೆಯ ಪ್ರಕಾಶ ಮೊರಬದಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಂನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರತ್ನ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಪ್ರಶಸ್ತಿಯನ್ನು ಕಾರ್ಯಕ್ರಮ ಆಯೋಜಕರಾಗಿ ಆಯೋಜಿಸಿದ, ಡಾ. ಸಾಯಿ ಸತೀಶ್ ತೋಟಯ್ಯ ,ಶ್ರೀ ಶಿರಡಿ ಸಾಯಿ ದೀಪ ಮೀಡಿಯಾ ಬ್ರಾಡಕಾಸ್ಟಿಂಗ್ ಸರ್ವಿಸ್, ಶ್ರೀಶಿರಡಿ ಸಾಯಿ ದೀಪ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಸಂಸ್ಥೆಯ ವತಿಯಿಂದ ಕಾರ್ಯಕ್ರಮ ಜರುಗಿತು.

