ಫೆ.೧ಕ್ಕೆ ಮುಕ್ತೇಶ್ವರ್
ದೇವಸ್ಥಾನದ ಉದ್ಘಾಟನೆ
ಹಾವೇರಿ:
ಬ್ಯಾಡಗಿ
ತಾಲೂಕಿನ
ಹಳೇ
ಶಿಡೇನೂರ್
ಗ್ರಾಮದಲ್ಲಿ
ನಿರ್ಮಿಸಲಾಗಿರುವ
ಮುಕ್ತೇಶ್ವರ್
ದೇವಸ್ಥಾನದ
ಉಧ್ಘಾಟನೆ
ಫೆ.೧ರಂದು ಜರುಗಲಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ
ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಸಚಿವರು, ಶಾಸಕರು
ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ಜ.೫೦ರಿಂದ ಶಿವಪುಪುರಾಣ
ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು
ಎಂದು ಶಾಸಕ ಹಾಗೂ ಎಸ್ಸಿ/ಎಸ್ಟಿ ಆಯೋಗದ ಅಧ್ಯಕ್ಷ ನೆಹರು
ಓಲೇಕಾರ ತಿಳಿಸಿದರು.
ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು
೫ಕೋಟಿರೂಗಳಿಗೂ ಅಧಿಕ ಹಣದಲ್ಲಿ ನಿರ್ಮಿಸಲಾಗಿರುವ ಮುಕ್ತೇಶ್ವರ
ದೇವಸ್ಥಾನದ ಪ್ರತಿಯೊಂದು ಕೆಲಸವು ಪುರಾತನ ದೇವಾಲಯಗಳ
ರೀತಿಯಲ್ಲಿ ಕಲ್ಲಿನಲ್ಲಿ ಕೆತ್ತಿದ ಕುಸುರಿನ ವಾಸ್ತುಶಿಲ್ಪ ಕಲೆಯ
ಅತ್ಯದ್ಭುತವಾಗಿದೆ, ದೇವಸ್ಥಾನದ ಸುತ್ತಲೂ ಆವರಿಸಿರುವ ಕೆರೆಯ
ನೀರು ದೇವಸ್ಥಾನಕ್ಕೆ ಮೆರಗುತಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಸಿ.ಕೋರಿ,ಸಂಗಮೇಶ ಮತ್ತಿತರರು ಇದ್ದರು.