ಬಾಪೂ ಜೀವನ ಪರಿಚಯಿಸುವ ಗಾಂಧಿ ಭವನ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ  ಫೆ.೧೮ಕ್ಕೆ

Date:

 

ಬಾಪೂ ಜೀವನ ಪರಿಚಯಿಸುವ ಗಾಂಧಿ ಭವನ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ  ಫೆ.೧೮ಕ್ಕೆ

ಜಗತ್ತಿನ ಶಾಂತಿಧೂತ ಮಹಾತ್ಮಗಾಂಧೀಜಿ ಅವರ ಜೀವನ ದರ್ಶನವನ್ನು ವಿದ್ಯಾರ್ಥಿ ಯುವ ಸಮೂಹಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಹಾವೇರಿ ನಗರದಲ್ಲಿ ನಿರ್ಮಾಣಗೊಂಡಿರುವ ನೂತನ ಗಾಂಧಿ ಭವನ ಇಂದು ಲೋಕಾರ್ಪಣೆಗೊಳ್ಳುತ್ತಿದೆ. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಫೆಬ್ರುವರಿ ೧೮ರ ಭಾನುವಾರ ಮಧ್ಯಾಹ್ನ ೩ ಗಂಟೆಗೆ ಉದ್ಘಾಟನೆ ಮಾಡಲಿದ್ದಾರೆ.
ಶಾಂತಿ, ಸಹನೆ, ಸತ್ಯ, ಅಹಿಂಸೆ ಹಾಗೂ ಸತ್ಯಾಗ್ರಹ ಮಾರ್ಗದಿಂದ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮಗಾಂಧೀಜಿ ಅವರು ಇಡಿ ಜಗತ್ತಿನ ಗಮನ ಸೆಳೆದರು. ವಿವಿಧ ದೇಶಗಳ ಗಣ್ಯವ್ಯಕ್ತಿಗಳು ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶಗಳನ್ನು ಕೊಂಡಾಡಿದ್ದಾರೆ.
ಗಾಂಧೀಜಿ ಅವರು ಈ ದೇಶಕ್ಕೆ ಸ್ವಾತಂತ್ರ್ಯವನ್ನಷ್ಟೇ ಅಲ್ಲ, ಇಡಿ ಜಗತ್ತಿಗೆ ಶಾಂತಿ, ಸೋದರತ್ವದ, ಸ್ವಾವಲಂಬನೆಯ ಪಾಠವನ್ನು ಕಲಿಸಿಕೊಟ್ಟರು. ಮಹಾತ್ಮಗಾಂಧೀಜಿ ಒಬ್ಬ ವ್ಯಕಿಯಾಗದೇ ಒಂದು ಶಕ್ತಿಯಾಗಿದ್ದರು, ರಾಷ್ಟ್ರ ನಿರ್ಮಾಣದಲ್ಲಿ ಗಾಂಧಿ ಅವರ ಪ್ರಮುಖ ಪಾತ್ರವಿದೆ. ನನ್ನ ಜೀವನವೇ ನನ್ನ ಸಂದೇಶ ಎಂದು ಮಹಾತ್ಮ ಗಾಂಧೀಜಿ ಹೇಳುತ್ತಿದ್ದರು.
ಇಂತಹ ಮಹಾನ್ ವ್ಯಕ್ತಿ ಜೀವನ ಚರಿತ್ರೆ ಮುಂದಿನ ಪೀಳಿಗೆಗೆ ಪರಿಚಯಿಸುವ ಹಿನ್ನಲೆಯಲ್ಲಿ ೨೦೧೬-೧೭ನೇ ಸಾಲಿನ ಆಯವ್ಯಯದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಮಹಾತ್ಮಗಾಂಧೀಜಿ ಅವರ ವಿಚಾರಧಾರೆಗಳನ್ನು ಪ್ರಚುರ ಪಡಿಸಲು ಅನುಕೂಲವಾಗುವಂತೆ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ರೂ.೩.೦೦ ಕೋಟಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣ ಮಾಡುವಂತೆ ಘೋಷಣೆ ಮಾಡಿದ್ದರು. ನೂತನ ಗಾಂಧಿ ಭವನ ಕಟ್ಟಡ ನಿರ್ಮಾಣಕ್ಕೆ ದಿನಾಂಕ ೦೨-೧೦-೨೦೧೭ ರಂದು ಅಂದಿನ ಮುಜರಾಯಿ ಖಾತೆ ಸಚಿವರಾಗಿದ್ದ ಹಾಲಿ ಕರ್ನಾಟಕ ವಿಧಾನಸಭೆ ಉಪ ಸಭಾಧ್ಯಕ್ಷರು ಹಾಗೂ ಹಾವೇರಿ ಶಾಸಕರಾದ ಶ್ರೀ ರುದ್ರಪ್ಪ ಲಮಾಣಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಯೋಗಾಯೋಗವೆನ್ನುವಂತೆ ಉದ್ಘಾಟನೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿದ್ದಾರೆ ಹಾಗೂ ರುದ್ರಪ್ಪ ಲಮಾಣಿ ಅವರು ಶಾಸಕರಾಗಿದ್ದಾರೆ ಇಬ್ಬರೂ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು
ಜೊತೆಯಾಗಲಿದ್ದಾರೆ.
ಹಾವೇರಿ ನಗರದ ಮಧ್ಯಭಾಗದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತೆ ಮಹಾತ್ಮಗಾಂಧೀಜಿ ಅವರು ೧೯೩೪ರಲ್ಲಿ ಶಿಲ್ಯಾನ್ಯಾಸ ನೆರವೇರಿಸಿದ ಧರ್ಮಶಾಲಾ ಕಟ್ಟಡ ಇರುವ (ಶಿಥಿಲಗೊಂಡಿರುವ) ಜಾಗೆಯಲ್ಲಿ ನೂತನವಾಗಿ ಗಾಂಧಿ ಭವನ ನಿರ್ಮಾಣ ಮಾಡಲಾಗಿದೆ. ಹಾವೇರಿ ಜಿಲ್ಲಾ ನಿರ್ಮಿತಿ ಕೇಂದ್ರದಿಂದ ಕಟ್ಟಡ ಕಾಮಗಾರಿ ಅನುಷ್ಠಾನಗೊಂಡಿದೆ.
ಎರಡು ಅಂತಸ್ತಿನ ಗಣ್ಯರ ವಿಶ್ರಾಂತಿ ಕೊಠಡಿಗೆ ಚರಕ ಕುಟೀರ, ಸ್ವದೇಶಿ ಕುಟೀರ, ಸಬರಮತಿ ಕುಟೀರ, ಸಭಾಂಗಣಕ್ಕೆ ಸತ್ಯಾಗ್ರಹಾ ಸಭಾ ಎಂದು ನಾಮಕರಣ ಮಾಡಲಾಗಿದೆ. ಹಿಂಬದಿಯಲ್ಲಿ ಬಾಪೂ ಬಯಲು ರಂಗಮಂದಿರ ನಿರ್ಮಾಣಗೊಂಡಿದೆ.
ಫೋಟೋ ಗ್ಯಾಲರಿಗೆ ಮೋಹನ್ ದಾಸ್-ಟು- ಮಹಾತ್ಮ ಬಾಪೂ ಜೀವನ ವೃತ್ತಾಂತ ತೆರೆದಿಡುವ ಅಪರೂಪದ ಛಾಯಾಚಿತ್ರಗಳನ್ನು ಅಳವಡಿಸಲಾಗಿದೆ. ಗಾಂಧೀಜಿ ಅವರ ಜೀವನ ದರ್ಶನ, ಕರ್ನಾಟಕದಲ್ಲಿ ಗಾಂಧೀಜಿ ಅವರು ಭೇಟಿ ನೀಡಿದ ಕ್ಷಣಗಳು ಹಾಗೂ ಹಾವೇರಿ ಜಿಲ್ಲೆಗೆ ಗಾಂಧಿ ಭೇಟಿ ನೀಡಿದ ಅಪರೂಪದ ಛಾಯಾಚಿತ್ರಗಳು ಗಮನ ಸೆಳೆಯುತ್ತವೆ.
ಗಾಂಧೀಜಿ ಅವರ ಕುರಿತಾದ ಅಧ್ಯಯನಕ್ಕೆ ಸತ್ಯಶೋಧನೆ ಹೆಸರಿನಲ್ಲಿ ಗ್ರಂಥಾಲಯ ತೆರೆಯಲಾಗಿದೆ. ಗಾಂಧೀಜಿ ಅವರ ಚಿಂತನಾ ಕಾರ್ಯಕ್ರಮಕ್ಕೆ ಸತ್ಯಾನ್ವೇಷಣೆ ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಿದೆ. ಅಪರೂಪದ ಪುಸ್ತಕಗಳನ್ನು ಖರೀದಿಸಿ ಯುವ ಸಮೂಹಕ್ಕೆ ಗಾಂಧೀಜಿ ಅವರ ಬಹುಮುಖ ವ್ಯಕ್ತಿತ್ವ ಪರಿಚಯಿಸಲು ಉದ್ದೇಶಿಸಲಾಗಿದೆ.
ಕೆಳ ಮಹಡಿಯ ಮುಖ್ಯ ದ್ವಾರದ ಪ್ರವೇಶದ ಎಡಬದಿಯಲ್ಲಿ ಗಾಂಧಿ ಮತ್ತು ಕಸ್ತೂರಬಾ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಬಲಬದಿಯ ಸ್ವಾಗತ ಕೌಂಟರ್‌ಗೆ ಚಂಪಾರಣ್ಯ ಎಂದು, ಎಡಬದಿಯ ಕಚೇರಿ ಕೊಠಡಿಗೆ ಮೋಹನದಾಸ್ ಕುಟೀರ್, ಬಲ ಭಾಗದಲ್ಲಿ ಕೊಠಡಿಗೆ ಕಸ್ತೂರಬಾ ಕುಟೀರ ಎಂದು ನಾಮಕರಣ ಮಾಡಲಾಗಿದೆ. ಮುಖ್ಯ ಹಾಲ್‌ನಲ್ಲಿ ಚರಕದಲ್ಲಿ ನೂಲು ತೆಗೆಯುವ ಆಕರ್ಷಕ ಗಾಂಧಿ ಪ್ರತಿಮೆ ಸ್ಥಾಪಿಸಲಾಗಿದೆ. ಮುಂಭಾಗದಲ್ಲಿ ಹಾಸಿಗೆಯಲ್ಲಿ ಕುಳಿತು ಪ್ರಾರ್ಥನೆಮಾಡುವ ವ್ಯವಸ್ಥೆ ಮಾಡಲಾಗಿದೆ. ಈ ಭಾಗಕ್ಕೆ ಹೃದಯ ಕುಂಜ್ ಎಂದು ನಾಮಕರಣ ಮಾಡಲಾಗಿದೆ. ಮೆಲುಧ್ವನಿಯಯಲ್ಲಿ ಗಾಂಧಿ ಪ್ರೀಯ ಗೀತೆಗಳಾದ ರಘುಪತಿ ರಾಘವ ರಾಜಾರಾಂ ಹಾಗೂ ವೈಷ್ಣವೋ ಜನತೆ… ಭಜನಗಳ ಆಡಿಯೋ ಅಳವಡಿಸಲಾಗಿದೆ.
ಕಟ್ಟಡದ ಹೊರ ಆವರಣದ ಮುಂಭಾಗದಲ್ಲಿ ದಂಡಿ ಯಾತ್ರೆಯಲ್ಲಿ ಗಾಂಧೀಜಿ ಹಾಗೂ ಅವರೊಂದಿಗೆ ಹೆಜ್ಜೆಹಾಕಿದವರ ಪ್ರತಿಮೆ ಹಾಗೂ ಉಪ್ಪಿನ ಸತ್ಯಾಗ್ರಹ ಯಾತ್ರೆಯಲ್ಲಿ ಗಾಂಧೀಜಿ ಅವರೊಂದಿಗೆ ಜಿಲ್ಲೆಯ ಸ್ವಾತಂತ್ರ್ಯ ಯೋಧ ಮೈಲಾರ ಮಹದೇವಪ್ಪನವರು ಭಾಗವಹಿಸಿದ ಪ್ರತಿಮೆ ಹಾಗೂ ಮುಂಭಾಗದಲ್ಲಿ ಧ್ಯಾನಸ್ಥ ಗಾಂಧೀಜಿ ಅವರ ಬೃಹತ್ ಕಂಚಿನ ಐದುವರೆ ಅಡಿಯ ಪುತ್ಥಳಿ, ಗಾಂಧೀಜಿ ಅವರು ಬಳಸಿದ ವಸ್ತುಗಳ ಪ್ರತಿಕೃತಿಗಳು ಗಮನ ಸೆಳೆಯುತ್ತವೆ. ಹಾಗೂ ಪ್ರವೇಶ ದ್ವಾರದ ರಕ್ಷಣಾ ಕೊಠಡಿಗೆ ಫಿನಿಕ್ಸ್ ಆಶ್ರಮ ಎಂದು ನಾಮಕರಣ ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ವಿಶೇಷ ಆಸಕ್ತಿಯಿಂದ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಗಾಂಧಿ ಭವನ ನಿರಂತರ ಚಟುವಟಿಕೆಯಿಂದ ಇರಿಸಲು ತಿಂಗಳಿಗೊಂದು ಸಂವಾದ, ವಿಚಾರ ಸಂಕಿರಣ, ಗಾಂಧಿ ಕುರಿತಾದ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ.
ಹಾವೇರಿಯಲ್ಲಿ ಗಾಂಧಿ ಹೆಜ್ಜೆ ಗುರುತುಗಳು
ಗಾಂಧೀಜಿಗೆ ಕರುನಾಡು ಎಂದರೆ, ಅದು ಎಲ್ಲಿಲ್ಲದ ಪ್ರೀತಿ, ಉತ್ಸಾಹ ಅದೆ? ಬಾರಿ ರಾಜ್ಯಕ್ಕೆ ಭೇಟಿ ನೀಡಿ ಇಲ್ಲಿಯೇ ತಂಗಿ ಪ್ರಕೃತಿ ಸೌಂದರ್ಯ ಸವಿದು ಹಾಡಿಹೊಗಳಿದ್ದಾರೆ. ನಂದಿಬೆಟ್ಟದಲ್ಲಿ ತಂಗಿದ್ದಾಗ ನಂದಿಬೆಟ್ಟ ನನ್ನ ನೆಚ್ಚಿನ ತಾಣ ಎಂದು ವೈಭವೀಕರಿಸಿ ತಮ್ಮ ಆತ್ಮ ಚರಿತ್ರೆಯಲ್ಲಿ ಬರೆದು ಗುಣಗಾನ ಮಾಡಿದ್ದಾರೆ.
ಗಾಂಧೀಜಿ ಹರಿಜನರ ಏಳ್ಗೆಗಾಗಿ ಹರಿಜನ ನಿಧಿ ಸಂಗ್ರಹಿಸಲು ೧೯೩೪ ರಂದು ನಾಡಿಗೆ ಧಾವಿಸಿ ರಾಜ್ಯದಾದ್ಯಂತ ನಿಧಿ ಸಂಗ್ರಹ ಮಾಡಲು ವಿವಿಧ ಪ್ರದೇಶಗಳಿಗೆ ಭೇಟಿನೀಡಿದರು. ಜನರಿಗೆ ಹರಿಜನರ ಬದುಕು ಸುಧಾರಿಸಲು ನಾವೆಲ್ಲರೂ ಶ್ರಮಿಸಬೇಕು. ಹರಿಜನರನ್ನು ದೈವ ಸ್ವರೂಪಿಗಳಂತೆ ಕಾಣಬೇಕು ಎಂದು ಸಂದೇಶ ನೀಡುತ್ತ ನಾಡಿನಾದ್ಯಂತ ನಿಧಿ ಸಂಗ್ರಹಿಸಿದರು.

ಹಾವೇರಿ ಹೈಸ್ಕೂಲ್ ಮೈದಾನದಲ್ಲಿ ಗಾಂಧಿ
ರಾಜ್ಯದಾದ್ಯಂತ ವಿವಿಧ ನಗರದ ಮೂಲಕ ಕಾರವಾರಕ್ಕೆ ಧಾವಿಸಿ ನಿಧಿ ಸಂಗ್ರಹಿಸಿದ ನಂತರ ಹಾವೇರಿ ನಗರದ ಕಡೆ ನಿಧಿ ಸಂಗ್ರಹಿಸಲು ಹೋಗಬೇಕು ಎಂದು ಗಾಂಧಿ ನೇತೃತ್ವದ ತಂಡ ನಿರ್ಣಯಿಸಿ ಅಂದು ಸಂಜೆಯೇ ಹೊರಟರು. ಹಾವೇರಿ ನಗರಕ್ಕೆ ಧಾವಿಸುವಾಗ ಸೂರ್ಯಾಸ್ತದ ಹ? ಬೀರತೊಡಗಿತು. ಆಗಮನ ನಂತರ ನಗರದ ಪ್ರೌಢಶಾಲೆಯ ಬೃಹತ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧಿ ಅವರ ಆಗಮನಕ್ಕೆ ಕಾತುರದಿಂದ ಕಾಯುತ್ತಿದ್ದ ಮೂವತ್ತು ಸಾವಿರ ಗಾಂಧಿ ಅನುಯಾಯಿಗಳು ಜಯ ಘೋ?ದೊಂದಿಗೆ ಸ್ವಾಗತಿಸಿದರು. ಗಾಂಧಿ ಅವರ ಶುಭ ನುಡಿಗಳನ್ನು ಆಲಿಸಲು ಉತ್ಸುಕರಾಗಿ ಸಾರ್ವಜನಿಕರಿಗೆ ಗದ್ದಲದಲ್ಲಿ ಸರಿಯಾಗಿ ಕೇಳಲೇ ಇಲ್ಲ. ಗಾಂಧಿ ಅವರ ಮಾತುಗಳನ್ನು ಕನ್ನಡಕ್ಕೆ ಅನುವಾದಿಸಿ ಜನರಿಗೆ ಅರ್ಥೈಸುವಲ್ಲಿ ಹರ್ಡೇಕರ್ ಮಂಜಪ್ಪ ನವರು ಸಫಲರಾದರು.

ಹಾವೇರಿಯಲ್ಲಿ ಹರಿಜನ ನಿಧಿ ಸಂಗ್ರಹಿಸಿದ ಗಾಂಧಿ
“ಬಾಪು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಹರಿಜನರ ಏಳಿಗೆಗಾಗಿ ಹರಿಜನ ನಿಧಿ ಸಂಗ್ರಹಿಸುವ ಕಾರ್ಯ ಪ್ರಾರಂಭಿಸಿದ್ದೇವೆ. ನಮ್ಮೊಂದಿಗೆ ನಿಮ್ಮ ಕೈ ಒಗ್ಗೂಡಲಿ” ಎಂದು ಹೇಳಿದರು.
ಗಾಂಧೀಜಿ ಅವರ ಮಾತುಗಳಿಂದ ಪ್ರೇರಣೆಗೆ ಒಳಪಟ್ಟ ಹಾವೇರಿ ಮಹಿಳೆಯರು ತಮ್ಮ ಒಡವೆಗಳನ್ನು ತೆಗೆದು ವೀಳ್ಯೆದಲ್ಲಿಟ್ಟು ಗಾಂಧೀಜಿ ಅವರಿಗೆ ನೀಡಿ ಮುಗುಳ್ನಗೆ ಬೀರುತ್ತ ಶುಭ ಹಾರೈಸಿದರು.
ಹಾವೇರಿಯಲ್ಲಿ ಹರಿಜನ ಶಿಕ್ಷಣ ಸುಧಾರಣೆಗೆ ಧರ್ಮ ಶಾಲೆ ಆರಂಭ
ನಗರದಲ್ಲಿ ಹರಿಜನರ ಶಿಕ್ಷಣವನ್ನು ಸುಧಾರಿಸಲು ಹರಿಜನ ಶಾಲೆ ಹಾಗೂ ಸಾರ್ವಜನಿಕ ಧರ್ಮಶಾಲೆಯನ್ನು ಸ್ಥಾಪಿಸಿದರು. ಶಿಕ್ಷಣ ಸರ್ವ ಸಮಾಜಕ್ಕೆ ದೊರೆಯಲಿ ಎಲ್ಲ ಸಮುದಾಯದವರು ಏಳಿಗೆ ಕಾಣಲಿ ಎಂದು ಶುಭ ಸಂದೇಶ ನುಡಿದರು.
ಮೈಲಾರ ಮಹದೇವಪ್ಪ ಅವರ ಮನೆಗೆ ಭೇಟಿ ನೀಡಿದ ಗಾಂಧಿ
ಗಾಂಧೀಜಿ ಮೈಲಾರ ಮಹದೇವಪ್ಪ ಅವರನ್ನು ಕಾಣಲು ಅಂದು ರಾತ್ರಿಯೇ ಮೋಟೆಬೆನ್ನೂರು ಗ್ರಾಮಕ್ಕೆ ಪ್ರಯಾಣಿಸಿದರು. ಮಹದೇವಪ್ಪರ ತಾಯಿ ಬಸಮ್ಮನವರು ತಾವೇ ನೂತ ನೂಲಿನ ಮಾಲೆಯನ್ನು ಗಾಂಧೀಜಿಗೆ ಹಾಕುತ್ತ ಆನಂದಭಾ?ದೊಂದಿಗೆ ಸ್ವಾಗತ ಕೋರಿದರು. ತಾಯಿ ಬಸಮ್ಮನನ್ನು ಸಂತೈಸುತ್ತ ಗಾಂಧಿ ಮೈಲಾರ ಮಹದೇವಪ್ಪ ಅವರ ಪತ್ನಿ ಶ್ರೀಮತಿ ಸಿದ್ದಮ್ಮರನ್ನು ವಿಚಾರಿಸಿ ಶುಭ ಹಾರೈಸಿದರು. ತಾಯಿ ಬಸಮ್ಮ ತಡ ಮಾಡದೆ ಹರಿಜನ ನಿಧಿಗೆ ತಮ್ಮ ಒಡವೆಗಳನ್ನು ನೀಡಿ ಗಾಂಧಿ ಅವರ ಮೆಚ್ಚುಗೆಗೆ ಪಾತ್ರರಾದರು.
ಮೋಟೆಬೆನ್ನೂರಿನ ಕೋಟೆ ಬಯಲಿನಲ್ಲಿ ಖಾದಿ ಪ್ರಚಾರ
ಗ್ರಾಮದ ಕೋಟೆ ಬಯಲಿನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರನ್ನು ಉದ್ದೇಶಿಸಿ ಮಾತನಾಡಿ, “ಎಲ್ಲರೂ ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸಬೇಕು. ಖಾದಿಯನ್ನು ಕಡ್ಡಾಯವಾಗಿ ಧರಿಸಿ ರಾಷ್ಟ್ರಪ್ರೇಮವನ್ನು ಮೆರೆಯಬೇಕು ಹಾಗೂ ಹರಿಜನರ ನಿಧಿಗೆ ನಿಮ್ಮ ಕೈಲಾದ? ಧನಸಹಾಯ ನೀಡಿ ಹರಿಜನರ ಏಳಿಗೆಗೆ ಪಾತ್ರರಾಗಬೇಕು ಎಂದು ಸಂದೇಶ ನೀಡಿದರು.
ಹಾವೇರಿಯ ಮುರುಘಾಮಠದಲ್ಲಿ ಗಾಂಧಿ ವಾಸ್ತವ್ಯ
ಮೋಟೆಬೆನ್ನೂರಿನಿಂದ ಪುನಃ ಹಾವೇರಿ ಪಟ್ಟಣಕ್ಕೆ ಆಗಮಿಸಿದ ಗಾಂಧಿಯವರ ತಂಡ ಮುರುಘಾಮಠದಲ್ಲಿ ಬಿಡಾರ ಹೂಡಿದರು. ಮರುದಿನ ೧೯೩೪ ಮಾರ್ಚ್ ೦೨ರ ಬೆಳಗ್ಗೆ ಹಾವೇರಿ ಪ್ರೌಢಶಾಲೆಯಲ್ಲಿ ರವೀಂದ್ರನಾಥ್ ಟ್ಯಾಗೋರ್‌ರ ಭಾವಚಿತ್ರವನ್ನು ಅನಾವರಣಗೊಳಿಸಿ ಬ್ಯಾಡಗಿಯತ್ತ ಪ್ರಯಾಣ ಬೆಳೆಸಿದರು.
ಬ್ಯಾಡಗಿಯಲ್ಲಿ ಚಿಣ್ಣರೊಂದಿಗೆ ಗಾಂಧಿ

ಬ್ಯಾಡಗಿಗೆ ಆಗಮಿಸಿದ ಗಾಂಧೀಜಿ ಅಲ್ಲಿನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ ಜನತೆಯನ್ನು ಅಭಿನಂದಿಸಿದರು. ನಾಡಿನ ಪ್ರವಾಸದ ಉದ್ದಕ್ಕೂ ಚಿಣ್ಣರು ಗಾಂಧಿಯವರನ್ನು ನೋಟ್ ಪುಸ್ತಕಗಳನ್ನು ನೀಡಿ ಕನ್ನಡದಲ್ಲಿ ನಿಮ್ಮ ಹಸ್ತಾಕ್ಷರ ನೀಡಿ ಬಾಪೂಜಿ ಎಂದು ಕೇಳಿಕೊಳ್ಳುತ್ತಿದ್ದರು. ಆಗ ಮಹಾತ್ಮರು ನಗುತ್ತಾ “ನೀವು ಹರಿಜನ ನಿಧಿಗೆ ಎ? ದೇಣಿಗೆ ಕೊಡುವಿರಿ? ಮತ್ತು ನೀವು ಕಡ್ಡಾಯವಾಗಿ ಖಾದಿ ಧರಿಸುತ್ತೇವೆ ಎಂದು ವಚನಕೊಡಿ. ಆಮೇಲೆ ನಾನು ಕನ್ನಡದಲ್ಲಿ ಸಹಿ ಮಾಡಿಕೊಡುತ್ತೇನೆ ಎಂದು ಹೇಳುತ್ತಿದ್ದರು. ಮಕ್ಕಳು ಎಂಟಾಣೆ, ರೂಪಾಯಿ ನೀಡಿ, ಖಾದಿಯನ್ನೇ ಧರಿಸುತ್ತೇವೆಂದು ವಚನ ಕೊಟ್ಟವರಿಗೆಲ್ಲಾ ಗಾಂಧೀಜಿ ಆಗತಾನೇ ಕನ್ನಡ ಅಕ್ಷರಗಳನ್ನು ಕಲಿತ ಮಕ್ಕಳು ನಿಧಾನವಾಗಿ ಬರೆಯುವಂತೆ ‘ಮೋ.ಕ.ಗಾಂಧಿ’ ಎಂದು ಸಹಿಮಾಡಿಕೊಡುತ್ತಿದ್ದರು. ಗಾಂಧೀಜಿ ಕನ್ನಡದಲ್ಲಿ ತಮ್ಮ ಹೆಸರನ್ನು ಬರೆಯುತ್ತಿದ್ದನ್ನೇ ಎಲ್ಲರೂ ಬಹು ಆಸಕ್ತಿಯಿಂದ ಗಮನಿಸಿ ಸಂತೋ? ವ್ಯಕ್ತಪಡಿಸುತ್ತಿದ್ದರು.
ಬ್ಯಾಡಗಿಯಿಂದ -ರಾಣೇಬೆನ್ನೂರಿಗೆ ತೃತೀಯ ದರ್ಜೆ ರೈಲಿನಲ್ಲಿ ಗಾಂಧಿ
ಬ್ಯಾಡಗಿಯಿಂದ ನಿರ್ಗಮಿಸಿದ ನಂತರ ಗಾಂಧಿ ರೈಲಿನಲ್ಲಿ ತೃತಿಯ ದರ್ಜೆ ಬೋಗಿಯಲ್ಲಿ ಸಾರ್ವಜನಿಕರೊಂದಿಗೆ ಪ್ರಯಾಣಿಸಿ ರಾಣೇಬೆನ್ನೂರು ನಗರಕ್ಕೆ ಆಗಮಿಸಿದರು. ನಿಲ್ದಾಣದಲ್ಲಿಯೇ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿ ಹಲವಾರು ವಿ?ಯಗಳ ಕುರಿತು ಚರ್ಚಿಸಿದರು. ರಾಣೇಬೆನ್ನೂರು ಜನರು ಹರಿಜನ ನಿಧಿಗೆ ರೂ.೫೧೫ ಅರ್ಪಿಸಿದರು. ಗಾಂಧೀಜಿ ನಂತರ ದಾವಣಗೆರೆಯತ್ತ ಪ್ರಯಾಣ ಬೆಳೆಸಿದರು.
ಹಾವೇರಿ ಜಿಲ್ಲೆಯ ಜನತೆಯ ಔದಾರ್ಯ ಮೆಚ್ಚಿದ ಗಾಂಧೀಜಿ
ಹಾವೇರಿ ಜಿಲ್ಲೆಯಾದ್ಯಂತ ಹೋದಲೆಲ್ಲಾ ಗಾಂಧೀಜಿಗೆ ಹರಿಜನ ನಿಧಿಗೆ ಮಹಿಳೆಯರು ನೀಡಿದ ಒಡವೆಗಳನ್ನು ಸಂಗ್ರಹಿಸಿದರು. ಕರ್ನಾಟಕ ಹೆಣ್ಣುಮಕ್ಕಳ ತ್ಯಾಗಬುದ್ಧಿ ಅವರಿಗೆ ಅಪಾರ ಹರುಷವನ್ನು ತಂದಿತು. ಈ ಜನರ ಔದಾರ್ಯಕ್ಕೆ ಪ್ರತಿಯಾಗಿ ನಾನೇನು ಕೊಡಬಲ್ಲೆ? ಎಂದು ಪದೇ ಪದೇ ಹೇಳುತ್ತಿದ್ದರು.


ಡಾ.ಬಿ.ಆರ್.ರಂಗನಾಥ್,
ಜಿಲ್ಲಾ ವಾರ್ತಾಧಿಕಾರಿಗಳು,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

Popular

 

ಬಾಪೂ ಜೀವನ ಪರಿಚಯಿಸುವ ಗಾಂಧಿ ಭವನ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ  ಫೆ.೧೮ಕ್ಕೆ

ಜಗತ್ತಿನ ಶಾಂತಿಧೂತ ಮಹಾತ್ಮಗಾಂಧೀಜಿ ಅವರ ಜೀವನ ದರ್ಶನವನ್ನು ವಿದ್ಯಾರ್ಥಿ ಯುವ ಸಮೂಹಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಹಾವೇರಿ ನಗರದಲ್ಲಿ ನಿರ್ಮಾಣಗೊಂಡಿರುವ ನೂತನ ಗಾಂಧಿ ಭವನ ಇಂದು ಲೋಕಾರ್ಪಣೆಗೊಳ್ಳುತ್ತಿದೆ. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಫೆಬ್ರುವರಿ ೧೮ರ ಭಾನುವಾರ ಮಧ್ಯಾಹ್ನ ೩ ಗಂಟೆಗೆ ಉದ್ಘಾಟನೆ ಮಾಡಲಿದ್ದಾರೆ.
ಶಾಂತಿ, ಸಹನೆ, ಸತ್ಯ, ಅಹಿಂಸೆ ಹಾಗೂ ಸತ್ಯಾಗ್ರಹ ಮಾರ್ಗದಿಂದ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮಗಾಂಧೀಜಿ ಅವರು ಇಡಿ ಜಗತ್ತಿನ ಗಮನ ಸೆಳೆದರು. ವಿವಿಧ ದೇಶಗಳ ಗಣ್ಯವ್ಯಕ್ತಿಗಳು ಮಹಾತ್ಮ ಗಾಂಧೀಜಿ ಅವರ ತತ್ವಾದರ್ಶಗಳನ್ನು ಕೊಂಡಾಡಿದ್ದಾರೆ.
ಗಾಂಧೀಜಿ ಅವರು ಈ ದೇಶಕ್ಕೆ ಸ್ವಾತಂತ್ರ್ಯವನ್ನಷ್ಟೇ ಅಲ್ಲ, ಇಡಿ ಜಗತ್ತಿಗೆ ಶಾಂತಿ, ಸೋದರತ್ವದ, ಸ್ವಾವಲಂಬನೆಯ ಪಾಠವನ್ನು ಕಲಿಸಿಕೊಟ್ಟರು. ಮಹಾತ್ಮಗಾಂಧೀಜಿ ಒಬ್ಬ ವ್ಯಕಿಯಾಗದೇ ಒಂದು ಶಕ್ತಿಯಾಗಿದ್ದರು, ರಾಷ್ಟ್ರ ನಿರ್ಮಾಣದಲ್ಲಿ ಗಾಂಧಿ ಅವರ ಪ್ರಮುಖ ಪಾತ್ರವಿದೆ. ನನ್ನ ಜೀವನವೇ ನನ್ನ ಸಂದೇಶ ಎಂದು ಮಹಾತ್ಮ ಗಾಂಧೀಜಿ ಹೇಳುತ್ತಿದ್ದರು.
ಇಂತಹ ಮಹಾನ್ ವ್ಯಕ್ತಿ ಜೀವನ ಚರಿತ್ರೆ ಮುಂದಿನ ಪೀಳಿಗೆಗೆ ಪರಿಚಯಿಸುವ ಹಿನ್ನಲೆಯಲ್ಲಿ ೨೦೧೬-೧೭ನೇ ಸಾಲಿನ ಆಯವ್ಯಯದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಮಹಾತ್ಮಗಾಂಧೀಜಿ ಅವರ ವಿಚಾರಧಾರೆಗಳನ್ನು ಪ್ರಚುರ ಪಡಿಸಲು ಅನುಕೂಲವಾಗುವಂತೆ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿ ರೂ.೩.೦೦ ಕೋಟಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣ ಮಾಡುವಂತೆ ಘೋಷಣೆ ಮಾಡಿದ್ದರು. ನೂತನ ಗಾಂಧಿ ಭವನ ಕಟ್ಟಡ ನಿರ್ಮಾಣಕ್ಕೆ ದಿನಾಂಕ ೦೨-೧೦-೨೦೧೭ ರಂದು ಅಂದಿನ ಮುಜರಾಯಿ ಖಾತೆ ಸಚಿವರಾಗಿದ್ದ ಹಾಲಿ ಕರ್ನಾಟಕ ವಿಧಾನಸಭೆ ಉಪ ಸಭಾಧ್ಯಕ್ಷರು ಹಾಗೂ ಹಾವೇರಿ ಶಾಸಕರಾದ ಶ್ರೀ ರುದ್ರಪ್ಪ ಲಮಾಣಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಯೋಗಾಯೋಗವೆನ್ನುವಂತೆ ಉದ್ಘಾಟನೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿದ್ದಾರೆ ಹಾಗೂ ರುದ್ರಪ್ಪ ಲಮಾಣಿ ಅವರು ಶಾಸಕರಾಗಿದ್ದಾರೆ ಇಬ್ಬರೂ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು
ಜೊತೆಯಾಗಲಿದ್ದಾರೆ.
ಹಾವೇರಿ ನಗರದ ಮಧ್ಯಭಾಗದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತೆ ಮಹಾತ್ಮಗಾಂಧೀಜಿ ಅವರು ೧೯೩೪ರಲ್ಲಿ ಶಿಲ್ಯಾನ್ಯಾಸ ನೆರವೇರಿಸಿದ ಧರ್ಮಶಾಲಾ ಕಟ್ಟಡ ಇರುವ (ಶಿಥಿಲಗೊಂಡಿರುವ) ಜಾಗೆಯಲ್ಲಿ ನೂತನವಾಗಿ ಗಾಂಧಿ ಭವನ ನಿರ್ಮಾಣ ಮಾಡಲಾಗಿದೆ. ಹಾವೇರಿ ಜಿಲ್ಲಾ ನಿರ್ಮಿತಿ ಕೇಂದ್ರದಿಂದ ಕಟ್ಟಡ ಕಾಮಗಾರಿ ಅನುಷ್ಠಾನಗೊಂಡಿದೆ.
ಎರಡು ಅಂತಸ್ತಿನ ಗಣ್ಯರ ವಿಶ್ರಾಂತಿ ಕೊಠಡಿಗೆ ಚರಕ ಕುಟೀರ, ಸ್ವದೇಶಿ ಕುಟೀರ, ಸಬರಮತಿ ಕುಟೀರ, ಸಭಾಂಗಣಕ್ಕೆ ಸತ್ಯಾಗ್ರಹಾ ಸಭಾ ಎಂದು ನಾಮಕರಣ ಮಾಡಲಾಗಿದೆ. ಹಿಂಬದಿಯಲ್ಲಿ ಬಾಪೂ ಬಯಲು ರಂಗಮಂದಿರ ನಿರ್ಮಾಣಗೊಂಡಿದೆ.
ಫೋಟೋ ಗ್ಯಾಲರಿಗೆ ಮೋಹನ್ ದಾಸ್-ಟು- ಮಹಾತ್ಮ ಬಾಪೂ ಜೀವನ ವೃತ್ತಾಂತ ತೆರೆದಿಡುವ ಅಪರೂಪದ ಛಾಯಾಚಿತ್ರಗಳನ್ನು ಅಳವಡಿಸಲಾಗಿದೆ. ಗಾಂಧೀಜಿ ಅವರ ಜೀವನ ದರ್ಶನ, ಕರ್ನಾಟಕದಲ್ಲಿ ಗಾಂಧೀಜಿ ಅವರು ಭೇಟಿ ನೀಡಿದ ಕ್ಷಣಗಳು ಹಾಗೂ ಹಾವೇರಿ ಜಿಲ್ಲೆಗೆ ಗಾಂಧಿ ಭೇಟಿ ನೀಡಿದ ಅಪರೂಪದ ಛಾಯಾಚಿತ್ರಗಳು ಗಮನ ಸೆಳೆಯುತ್ತವೆ.
ಗಾಂಧೀಜಿ ಅವರ ಕುರಿತಾದ ಅಧ್ಯಯನಕ್ಕೆ ಸತ್ಯಶೋಧನೆ ಹೆಸರಿನಲ್ಲಿ ಗ್ರಂಥಾಲಯ ತೆರೆಯಲಾಗಿದೆ. ಗಾಂಧೀಜಿ ಅವರ ಚಿಂತನಾ ಕಾರ್ಯಕ್ರಮಕ್ಕೆ ಸತ್ಯಾನ್ವೇಷಣೆ ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಿದೆ. ಅಪರೂಪದ ಪುಸ್ತಕಗಳನ್ನು ಖರೀದಿಸಿ ಯುವ ಸಮೂಹಕ್ಕೆ ಗಾಂಧೀಜಿ ಅವರ ಬಹುಮುಖ ವ್ಯಕ್ತಿತ್ವ ಪರಿಚಯಿಸಲು ಉದ್ದೇಶಿಸಲಾಗಿದೆ.
ಕೆಳ ಮಹಡಿಯ ಮುಖ್ಯ ದ್ವಾರದ ಪ್ರವೇಶದ ಎಡಬದಿಯಲ್ಲಿ ಗಾಂಧಿ ಮತ್ತು ಕಸ್ತೂರಬಾ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಬಲಬದಿಯ ಸ್ವಾಗತ ಕೌಂಟರ್‌ಗೆ ಚಂಪಾರಣ್ಯ ಎಂದು, ಎಡಬದಿಯ ಕಚೇರಿ ಕೊಠಡಿಗೆ ಮೋಹನದಾಸ್ ಕುಟೀರ್, ಬಲ ಭಾಗದಲ್ಲಿ ಕೊಠಡಿಗೆ ಕಸ್ತೂರಬಾ ಕುಟೀರ ಎಂದು ನಾಮಕರಣ ಮಾಡಲಾಗಿದೆ. ಮುಖ್ಯ ಹಾಲ್‌ನಲ್ಲಿ ಚರಕದಲ್ಲಿ ನೂಲು ತೆಗೆಯುವ ಆಕರ್ಷಕ ಗಾಂಧಿ ಪ್ರತಿಮೆ ಸ್ಥಾಪಿಸಲಾಗಿದೆ. ಮುಂಭಾಗದಲ್ಲಿ ಹಾಸಿಗೆಯಲ್ಲಿ ಕುಳಿತು ಪ್ರಾರ್ಥನೆಮಾಡುವ ವ್ಯವಸ್ಥೆ ಮಾಡಲಾಗಿದೆ. ಈ ಭಾಗಕ್ಕೆ ಹೃದಯ ಕುಂಜ್ ಎಂದು ನಾಮಕರಣ ಮಾಡಲಾಗಿದೆ. ಮೆಲುಧ್ವನಿಯಯಲ್ಲಿ ಗಾಂಧಿ ಪ್ರೀಯ ಗೀತೆಗಳಾದ ರಘುಪತಿ ರಾಘವ ರಾಜಾರಾಂ ಹಾಗೂ ವೈಷ್ಣವೋ ಜನತೆ… ಭಜನಗಳ ಆಡಿಯೋ ಅಳವಡಿಸಲಾಗಿದೆ.
ಕಟ್ಟಡದ ಹೊರ ಆವರಣದ ಮುಂಭಾಗದಲ್ಲಿ ದಂಡಿ ಯಾತ್ರೆಯಲ್ಲಿ ಗಾಂಧೀಜಿ ಹಾಗೂ ಅವರೊಂದಿಗೆ ಹೆಜ್ಜೆಹಾಕಿದವರ ಪ್ರತಿಮೆ ಹಾಗೂ ಉಪ್ಪಿನ ಸತ್ಯಾಗ್ರಹ ಯಾತ್ರೆಯಲ್ಲಿ ಗಾಂಧೀಜಿ ಅವರೊಂದಿಗೆ ಜಿಲ್ಲೆಯ ಸ್ವಾತಂತ್ರ್ಯ ಯೋಧ ಮೈಲಾರ ಮಹದೇವಪ್ಪನವರು ಭಾಗವಹಿಸಿದ ಪ್ರತಿಮೆ ಹಾಗೂ ಮುಂಭಾಗದಲ್ಲಿ ಧ್ಯಾನಸ್ಥ ಗಾಂಧೀಜಿ ಅವರ ಬೃಹತ್ ಕಂಚಿನ ಐದುವರೆ ಅಡಿಯ ಪುತ್ಥಳಿ, ಗಾಂಧೀಜಿ ಅವರು ಬಳಸಿದ ವಸ್ತುಗಳ ಪ್ರತಿಕೃತಿಗಳು ಗಮನ ಸೆಳೆಯುತ್ತವೆ. ಹಾಗೂ ಪ್ರವೇಶ ದ್ವಾರದ ರಕ್ಷಣಾ ಕೊಠಡಿಗೆ ಫಿನಿಕ್ಸ್ ಆಶ್ರಮ ಎಂದು ನಾಮಕರಣ ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ವಿಶೇಷ ಆಸಕ್ತಿಯಿಂದ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಗಾಂಧಿ ಭವನ ನಿರಂತರ ಚಟುವಟಿಕೆಯಿಂದ ಇರಿಸಲು ತಿಂಗಳಿಗೊಂದು ಸಂವಾದ, ವಿಚಾರ ಸಂಕಿರಣ, ಗಾಂಧಿ ಕುರಿತಾದ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ.
ಹಾವೇರಿಯಲ್ಲಿ ಗಾಂಧಿ ಹೆಜ್ಜೆ ಗುರುತುಗಳು
ಗಾಂಧೀಜಿಗೆ ಕರುನಾಡು ಎಂದರೆ, ಅದು ಎಲ್ಲಿಲ್ಲದ ಪ್ರೀತಿ, ಉತ್ಸಾಹ ಅದೆ? ಬಾರಿ ರಾಜ್ಯಕ್ಕೆ ಭೇಟಿ ನೀಡಿ ಇಲ್ಲಿಯೇ ತಂಗಿ ಪ್ರಕೃತಿ ಸೌಂದರ್ಯ ಸವಿದು ಹಾಡಿಹೊಗಳಿದ್ದಾರೆ. ನಂದಿಬೆಟ್ಟದಲ್ಲಿ ತಂಗಿದ್ದಾಗ ನಂದಿಬೆಟ್ಟ ನನ್ನ ನೆಚ್ಚಿನ ತಾಣ ಎಂದು ವೈಭವೀಕರಿಸಿ ತಮ್ಮ ಆತ್ಮ ಚರಿತ್ರೆಯಲ್ಲಿ ಬರೆದು ಗುಣಗಾನ ಮಾಡಿದ್ದಾರೆ.
ಗಾಂಧೀಜಿ ಹರಿಜನರ ಏಳ್ಗೆಗಾಗಿ ಹರಿಜನ ನಿಧಿ ಸಂಗ್ರಹಿಸಲು ೧೯೩೪ ರಂದು ನಾಡಿಗೆ ಧಾವಿಸಿ ರಾಜ್ಯದಾದ್ಯಂತ ನಿಧಿ ಸಂಗ್ರಹ ಮಾಡಲು ವಿವಿಧ ಪ್ರದೇಶಗಳಿಗೆ ಭೇಟಿನೀಡಿದರು. ಜನರಿಗೆ ಹರಿಜನರ ಬದುಕು ಸುಧಾರಿಸಲು ನಾವೆಲ್ಲರೂ ಶ್ರಮಿಸಬೇಕು. ಹರಿಜನರನ್ನು ದೈವ ಸ್ವರೂಪಿಗಳಂತೆ ಕಾಣಬೇಕು ಎಂದು ಸಂದೇಶ ನೀಡುತ್ತ ನಾಡಿನಾದ್ಯಂತ ನಿಧಿ ಸಂಗ್ರಹಿಸಿದರು.

ಹಾವೇರಿ ಹೈಸ್ಕೂಲ್ ಮೈದಾನದಲ್ಲಿ ಗಾಂಧಿ
ರಾಜ್ಯದಾದ್ಯಂತ ವಿವಿಧ ನಗರದ ಮೂಲಕ ಕಾರವಾರಕ್ಕೆ ಧಾವಿಸಿ ನಿಧಿ ಸಂಗ್ರಹಿಸಿದ ನಂತರ ಹಾವೇರಿ ನಗರದ ಕಡೆ ನಿಧಿ ಸಂಗ್ರಹಿಸಲು ಹೋಗಬೇಕು ಎಂದು ಗಾಂಧಿ ನೇತೃತ್ವದ ತಂಡ ನಿರ್ಣಯಿಸಿ ಅಂದು ಸಂಜೆಯೇ ಹೊರಟರು. ಹಾವೇರಿ ನಗರಕ್ಕೆ ಧಾವಿಸುವಾಗ ಸೂರ್ಯಾಸ್ತದ ಹ? ಬೀರತೊಡಗಿತು. ಆಗಮನ ನಂತರ ನಗರದ ಪ್ರೌಢಶಾಲೆಯ ಬೃಹತ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧಿ ಅವರ ಆಗಮನಕ್ಕೆ ಕಾತುರದಿಂದ ಕಾಯುತ್ತಿದ್ದ ಮೂವತ್ತು ಸಾವಿರ ಗಾಂಧಿ ಅನುಯಾಯಿಗಳು ಜಯ ಘೋ?ದೊಂದಿಗೆ ಸ್ವಾಗತಿಸಿದರು. ಗಾಂಧಿ ಅವರ ಶುಭ ನುಡಿಗಳನ್ನು ಆಲಿಸಲು ಉತ್ಸುಕರಾಗಿ ಸಾರ್ವಜನಿಕರಿಗೆ ಗದ್ದಲದಲ್ಲಿ ಸರಿಯಾಗಿ ಕೇಳಲೇ ಇಲ್ಲ. ಗಾಂಧಿ ಅವರ ಮಾತುಗಳನ್ನು ಕನ್ನಡಕ್ಕೆ ಅನುವಾದಿಸಿ ಜನರಿಗೆ ಅರ್ಥೈಸುವಲ್ಲಿ ಹರ್ಡೇಕರ್ ಮಂಜಪ್ಪ ನವರು ಸಫಲರಾದರು.

ಹಾವೇರಿಯಲ್ಲಿ ಹರಿಜನ ನಿಧಿ ಸಂಗ್ರಹಿಸಿದ ಗಾಂಧಿ
“ಬಾಪು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಹರಿಜನರ ಏಳಿಗೆಗಾಗಿ ಹರಿಜನ ನಿಧಿ ಸಂಗ್ರಹಿಸುವ ಕಾರ್ಯ ಪ್ರಾರಂಭಿಸಿದ್ದೇವೆ. ನಮ್ಮೊಂದಿಗೆ ನಿಮ್ಮ ಕೈ ಒಗ್ಗೂಡಲಿ” ಎಂದು ಹೇಳಿದರು.
ಗಾಂಧೀಜಿ ಅವರ ಮಾತುಗಳಿಂದ ಪ್ರೇರಣೆಗೆ ಒಳಪಟ್ಟ ಹಾವೇರಿ ಮಹಿಳೆಯರು ತಮ್ಮ ಒಡವೆಗಳನ್ನು ತೆಗೆದು ವೀಳ್ಯೆದಲ್ಲಿಟ್ಟು ಗಾಂಧೀಜಿ ಅವರಿಗೆ ನೀಡಿ ಮುಗುಳ್ನಗೆ ಬೀರುತ್ತ ಶುಭ ಹಾರೈಸಿದರು.
ಹಾವೇರಿಯಲ್ಲಿ ಹರಿಜನ ಶಿಕ್ಷಣ ಸುಧಾರಣೆಗೆ ಧರ್ಮ ಶಾಲೆ ಆರಂಭ
ನಗರದಲ್ಲಿ ಹರಿಜನರ ಶಿಕ್ಷಣವನ್ನು ಸುಧಾರಿಸಲು ಹರಿಜನ ಶಾಲೆ ಹಾಗೂ ಸಾರ್ವಜನಿಕ ಧರ್ಮಶಾಲೆಯನ್ನು ಸ್ಥಾಪಿಸಿದರು. ಶಿಕ್ಷಣ ಸರ್ವ ಸಮಾಜಕ್ಕೆ ದೊರೆಯಲಿ ಎಲ್ಲ ಸಮುದಾಯದವರು ಏಳಿಗೆ ಕಾಣಲಿ ಎಂದು ಶುಭ ಸಂದೇಶ ನುಡಿದರು.
ಮೈಲಾರ ಮಹದೇವಪ್ಪ ಅವರ ಮನೆಗೆ ಭೇಟಿ ನೀಡಿದ ಗಾಂಧಿ
ಗಾಂಧೀಜಿ ಮೈಲಾರ ಮಹದೇವಪ್ಪ ಅವರನ್ನು ಕಾಣಲು ಅಂದು ರಾತ್ರಿಯೇ ಮೋಟೆಬೆನ್ನೂರು ಗ್ರಾಮಕ್ಕೆ ಪ್ರಯಾಣಿಸಿದರು. ಮಹದೇವಪ್ಪರ ತಾಯಿ ಬಸಮ್ಮನವರು ತಾವೇ ನೂತ ನೂಲಿನ ಮಾಲೆಯನ್ನು ಗಾಂಧೀಜಿಗೆ ಹಾಕುತ್ತ ಆನಂದಭಾ?ದೊಂದಿಗೆ ಸ್ವಾಗತ ಕೋರಿದರು. ತಾಯಿ ಬಸಮ್ಮನನ್ನು ಸಂತೈಸುತ್ತ ಗಾಂಧಿ ಮೈಲಾರ ಮಹದೇವಪ್ಪ ಅವರ ಪತ್ನಿ ಶ್ರೀಮತಿ ಸಿದ್ದಮ್ಮರನ್ನು ವಿಚಾರಿಸಿ ಶುಭ ಹಾರೈಸಿದರು. ತಾಯಿ ಬಸಮ್ಮ ತಡ ಮಾಡದೆ ಹರಿಜನ ನಿಧಿಗೆ ತಮ್ಮ ಒಡವೆಗಳನ್ನು ನೀಡಿ ಗಾಂಧಿ ಅವರ ಮೆಚ್ಚುಗೆಗೆ ಪಾತ್ರರಾದರು.
ಮೋಟೆಬೆನ್ನೂರಿನ ಕೋಟೆ ಬಯಲಿನಲ್ಲಿ ಖಾದಿ ಪ್ರಚಾರ
ಗ್ರಾಮದ ಕೋಟೆ ಬಯಲಿನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರನ್ನು ಉದ್ದೇಶಿಸಿ ಮಾತನಾಡಿ, “ಎಲ್ಲರೂ ರಾಷ್ಟ್ರೀಯ ಚಳುವಳಿಯಲ್ಲಿ ಭಾಗವಹಿಸಬೇಕು. ಖಾದಿಯನ್ನು ಕಡ್ಡಾಯವಾಗಿ ಧರಿಸಿ ರಾಷ್ಟ್ರಪ್ರೇಮವನ್ನು ಮೆರೆಯಬೇಕು ಹಾಗೂ ಹರಿಜನರ ನಿಧಿಗೆ ನಿಮ್ಮ ಕೈಲಾದ? ಧನಸಹಾಯ ನೀಡಿ ಹರಿಜನರ ಏಳಿಗೆಗೆ ಪಾತ್ರರಾಗಬೇಕು ಎಂದು ಸಂದೇಶ ನೀಡಿದರು.
ಹಾವೇರಿಯ ಮುರುಘಾಮಠದಲ್ಲಿ ಗಾಂಧಿ ವಾಸ್ತವ್ಯ
ಮೋಟೆಬೆನ್ನೂರಿನಿಂದ ಪುನಃ ಹಾವೇರಿ ಪಟ್ಟಣಕ್ಕೆ ಆಗಮಿಸಿದ ಗಾಂಧಿಯವರ ತಂಡ ಮುರುಘಾಮಠದಲ್ಲಿ ಬಿಡಾರ ಹೂಡಿದರು. ಮರುದಿನ ೧೯೩೪ ಮಾರ್ಚ್ ೦೨ರ ಬೆಳಗ್ಗೆ ಹಾವೇರಿ ಪ್ರೌಢಶಾಲೆಯಲ್ಲಿ ರವೀಂದ್ರನಾಥ್ ಟ್ಯಾಗೋರ್‌ರ ಭಾವಚಿತ್ರವನ್ನು ಅನಾವರಣಗೊಳಿಸಿ ಬ್ಯಾಡಗಿಯತ್ತ ಪ್ರಯಾಣ ಬೆಳೆಸಿದರು.
ಬ್ಯಾಡಗಿಯಲ್ಲಿ ಚಿಣ್ಣರೊಂದಿಗೆ ಗಾಂಧಿ

ಬ್ಯಾಡಗಿಗೆ ಆಗಮಿಸಿದ ಗಾಂಧೀಜಿ ಅಲ್ಲಿನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ ಜನತೆಯನ್ನು ಅಭಿನಂದಿಸಿದರು. ನಾಡಿನ ಪ್ರವಾಸದ ಉದ್ದಕ್ಕೂ ಚಿಣ್ಣರು ಗಾಂಧಿಯವರನ್ನು ನೋಟ್ ಪುಸ್ತಕಗಳನ್ನು ನೀಡಿ ಕನ್ನಡದಲ್ಲಿ ನಿಮ್ಮ ಹಸ್ತಾಕ್ಷರ ನೀಡಿ ಬಾಪೂಜಿ ಎಂದು ಕೇಳಿಕೊಳ್ಳುತ್ತಿದ್ದರು. ಆಗ ಮಹಾತ್ಮರು ನಗುತ್ತಾ “ನೀವು ಹರಿಜನ ನಿಧಿಗೆ ಎ? ದೇಣಿಗೆ ಕೊಡುವಿರಿ? ಮತ್ತು ನೀವು ಕಡ್ಡಾಯವಾಗಿ ಖಾದಿ ಧರಿಸುತ್ತೇವೆ ಎಂದು ವಚನಕೊಡಿ. ಆಮೇಲೆ ನಾನು ಕನ್ನಡದಲ್ಲಿ ಸಹಿ ಮಾಡಿಕೊಡುತ್ತೇನೆ ಎಂದು ಹೇಳುತ್ತಿದ್ದರು. ಮಕ್ಕಳು ಎಂಟಾಣೆ, ರೂಪಾಯಿ ನೀಡಿ, ಖಾದಿಯನ್ನೇ ಧರಿಸುತ್ತೇವೆಂದು ವಚನ ಕೊಟ್ಟವರಿಗೆಲ್ಲಾ ಗಾಂಧೀಜಿ ಆಗತಾನೇ ಕನ್ನಡ ಅಕ್ಷರಗಳನ್ನು ಕಲಿತ ಮಕ್ಕಳು ನಿಧಾನವಾಗಿ ಬರೆಯುವಂತೆ ‘ಮೋ.ಕ.ಗಾಂಧಿ’ ಎಂದು ಸಹಿಮಾಡಿಕೊಡುತ್ತಿದ್ದರು. ಗಾಂಧೀಜಿ ಕನ್ನಡದಲ್ಲಿ ತಮ್ಮ ಹೆಸರನ್ನು ಬರೆಯುತ್ತಿದ್ದನ್ನೇ ಎಲ್ಲರೂ ಬಹು ಆಸಕ್ತಿಯಿಂದ ಗಮನಿಸಿ ಸಂತೋ? ವ್ಯಕ್ತಪಡಿಸುತ್ತಿದ್ದರು.
ಬ್ಯಾಡಗಿಯಿಂದ -ರಾಣೇಬೆನ್ನೂರಿಗೆ ತೃತೀಯ ದರ್ಜೆ ರೈಲಿನಲ್ಲಿ ಗಾಂಧಿ
ಬ್ಯಾಡಗಿಯಿಂದ ನಿರ್ಗಮಿಸಿದ ನಂತರ ಗಾಂಧಿ ರೈಲಿನಲ್ಲಿ ತೃತಿಯ ದರ್ಜೆ ಬೋಗಿಯಲ್ಲಿ ಸಾರ್ವಜನಿಕರೊಂದಿಗೆ ಪ್ರಯಾಣಿಸಿ ರಾಣೇಬೆನ್ನೂರು ನಗರಕ್ಕೆ ಆಗಮಿಸಿದರು. ನಿಲ್ದಾಣದಲ್ಲಿಯೇ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿ ಹಲವಾರು ವಿ?ಯಗಳ ಕುರಿತು ಚರ್ಚಿಸಿದರು. ರಾಣೇಬೆನ್ನೂರು ಜನರು ಹರಿಜನ ನಿಧಿಗೆ ರೂ.೫೧೫ ಅರ್ಪಿಸಿದರು. ಗಾಂಧೀಜಿ ನಂತರ ದಾವಣಗೆರೆಯತ್ತ ಪ್ರಯಾಣ ಬೆಳೆಸಿದರು.
ಹಾವೇರಿ ಜಿಲ್ಲೆಯ ಜನತೆಯ ಔದಾರ್ಯ ಮೆಚ್ಚಿದ ಗಾಂಧೀಜಿ
ಹಾವೇರಿ ಜಿಲ್ಲೆಯಾದ್ಯಂತ ಹೋದಲೆಲ್ಲಾ ಗಾಂಧೀಜಿಗೆ ಹರಿಜನ ನಿಧಿಗೆ ಮಹಿಳೆಯರು ನೀಡಿದ ಒಡವೆಗಳನ್ನು ಸಂಗ್ರಹಿಸಿದರು. ಕರ್ನಾಟಕ ಹೆಣ್ಣುಮಕ್ಕಳ ತ್ಯಾಗಬುದ್ಧಿ ಅವರಿಗೆ ಅಪಾರ ಹರುಷವನ್ನು ತಂದಿತು. ಈ ಜನರ ಔದಾರ್ಯಕ್ಕೆ ಪ್ರತಿಯಾಗಿ ನಾನೇನು ಕೊಡಬಲ್ಲೆ? ಎಂದು ಪದೇ ಪದೇ ಹೇಳುತ್ತಿದ್ದರು.


ಡಾ.ಬಿ.ಆರ್.ರಂಗನಾಥ್,
ಜಿಲ್ಲಾ ವಾರ್ತಾಧಿಕಾರಿಗಳು,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...