ಬೆಳಗಾವಿ ಕಾರ್ಯಕ್ರಮಕ್ಕೆ ತೆರಳಿದ್ದ ಹಾವೇರಿಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತ ಹ್ರದಯಾಗಾತದಿಂದ ಸಾವು
ಹಾವೇರಿ: ಬೆಳಗಾವಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ
ಐತಿಹಾಸಿಕ ಜೈ ಬಾಪು-ಜೈ ಭೀಮ್- ಜೈ ಸಂವಿಧಾನ ಅಭಿಯಾನ ಕಾರ್ಯಕ್ರಮ ಕ್ಕೆತೆರಳಿದ್ದ ಹಾವೇರಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತ ಹ್ರದಯಾಗಾತದಿಂದ ಸಾವನ್ನಪ್ಪಿರು ಘಟನೆ ಮಂಗಳವಾರ ನಡೆದಿದೆ.
ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ನದಿಹರಳಹಳ್ಳಿ ಗ್ರಾಮದ ಬಸಪ್ಪ ಕೆಂಚಪ್ಪ ಪಾಮೇನಹಳ್ಳಿ(೭೫)
ಎಂದು ಗುರುತಿಸಲಾಗಿದೆ.
ನದಿಹರಳಹಳ್ಳಿಗ್ರಾಮದಿಂದ ಮಂಗಳವಾರ ಕಾಂಗ್ರೆಸ್ ಮುಖಂಡರು ಹಾಗೂ ಕಾರಕರ್ತರು ಬಸ್ ನಲ್ಲಿ ಬೆಳಗಾವಿಗೆತೆರಳಿದ್ದರು. ಕಾರ್ಯಕ್ರಮ ದಲ್ಲಿ ಭಾಗವಹಿದ್ದ ಬಸಪ್ಪ ಪಾಮೇನಹಳ್ಳಿಅವರಿಗೆ ಮಂಗಳವಾರ ಮಧ್ಯಾಹ್ನ ೧೩-೩೦ರಸುಮಾರಿಗೆ ಹ್ರದಯಾಗಾತವಾಗಿದೆ. ತಕ್ಷಣ ಇವರನ್ನು ಬೆಳಗಾವಿ ಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ರಾತ್ರಿನ೧೨-೩ಂರ ಸುಮಾರಿಗೆ ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.