“ಬೆಳೆ ವಿಮೆ ೯೦ಕೋಟಿಯ ಬದಲು ರೈತರ ಖಾತೆಗೆ ೯ ಕೋಟಿ” ಮರುಪರಿಶೀಲನೆಗೆ ರೈತರ ಒತ್ತಾಯ

Date:

“ಬೆಳೆ ವಿಮೆ ೯೦ಕೋಟಿಯ ಬದಲು ರೈತರ ಖಾತೆಗೆ ೯ ಕೋಟಿ” ಮರುಪರಿಶೀಲನೆಗೆ ರೈತರ ಒತ್ತಾಯ
ಹಾವೇರಿ: ಬೆಳೆ ವಿಮಾ ವಿತರಣೆಯಲ್ಲಿ ೨೦೨೪-೨೫ ರ ಮುಂಗಾರುಹಂಗಾಮಿನಲ್ಲಿ ಸಾಕಷ್ಟು ತಾರತಮ್ಯ ನಡೆದಿದ್ದು, ಬೆಳೆ ವಿಮಾ ಹೊಸ ನೀತಿ ಅನುಸರಿಸಿ ೯೦ ಕೋಟಿ ರೂಪಾಯಿ ಕೊಡುವುದರ ಬದಲಾಗಿ ೯ ಕೋಟಿ ಕೊಟ್ಟು ಅನ್ನದಾತರಿಗೆ ವಿಮಾ ಕಂಪನಿ ಮೋಸ ಮಾಡಿದ್ದು, ರೈತರಿಗೆ ದ್ರೋಹ ಬಗೆದ ವಿಮಾ ಕಂಪನಿಯವರನ್ನು ಕರೆಸಿ ಮರುಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕೆಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕವು ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಅರ್ಪಿಸಿ ಒತ್ತಾಯಿಸಿದೆ.
ಸೋಮವಾರ ಇಲ್ಲಿನ ಮುರುಘಾಮಠದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಹಳೆ ಪಿ.ಬಿ.ರಸ್ತೆಯನ್ನು ಅರ್ಧಗಂಟೆಗೂ ಹೆಚ್ಚುಕಾಲ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಡಳಿತ ಭವನನಕ್ಕೆ ತೆರಳಿದ ರೈತರು ಅಲ್ಲಿ ಧರಣಿ ನಡೆಸಿ ಬ್ಯಾಂಕ್‌ರ್‍ಸ್ ಸಭೆಗೆ ಆಗಮಿಸಿದ್ದ ಸಂದರಿಗೆ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಈ ಬಗ್ಗೆ ಮನವಿ ಅರ್ಪಿಸಿದರು.
ಹಾವೇರಿ ಜಿಲ್ಲೆಯ ರೈತರು ಬರಗಾಲ ಎದುರಿಸುತ್ತಿದ್ದು, ರೈತರ ಬಹುದಿನದ ಬೇಡಿಕೆಯಾದ ಬೇಡ್ತಿ- ವರದಾ ನದಿ ಜೋಡಣೆ ಮಾಡಬೇಕು. ಜಿಲ್ಲೆಯಲ್ಲಿ ರೈತರು
ಬ್ಯಾಂಕ್ ಹಾಗೂ ಖಾಸಗಿ ಸಾಲ ಪಡೆದು ಶುಂಠಿ ಬೆಳೆಯನ್ನು ಬೆಳೆದಿದು, ಮಾರುಕಟ್ಟೆಯಲ್ಲಿ ಶುಂಠಿ ಬೆಲೆ ಕುಸಿತವಾಗಿ ಹಾಕಿದ ಬಂಡವಾಳವು ಬಾರದಂತಾಗಿದ್ದು, ರೈತರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಪ್ರತಿ ಕ್ವಿಂಟಲ್ ಶುಂಠಿ ಗೆ ೧೦೦೦೦ರೂ ಬೆಲೆ ನಿಗದಿ ಮಾಡಿ ಸರ್ಕಾರ ಖರೀದಿ ಕೇಂದ್ರ ಸ್ಥಾಪಿಸಿ ರೈತರನ್ನು ರಕ್ಷಣೆ ಮಾಡಬೇಕು. ಕಳೆದ ಮುಂಗಾರಿನಲ್ಲಿ ಅತಿವೃಷ್ಟಿ ಮಳೆಯಿಂದ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ದುಡಿಯುವ ರೈತ ಹತಾಶನಾಗಿದ್ದು ಸರ್ಕಾರ ಕೆಲವೇ ರೈತರಿಗೆ ಪರಿಹಾರ ಕೊಟ್ಟಿದ್ದು ಬೆಳೆ ಕಳೆದುಕೊಂಡ ರೈತರಿಗೆ ಪ್ರತಿ ಹೆಕ್ಟೇರ್ ಗೆ ೮೫೦ ರೂಪಾಯಿ ಪರಿಹಾರ ಕೊಡಬೇಕೆಂದು ಜಿಲ್ಲಾ ರೈತ ಸಂಘ ಒತ್ತಾಯಿಸಿದೆ. ರೈತರ ಎಲ್ಲಾ ಬೇಡಿಕೆಗಳನ್ನು ಎರಡು ತಿಂಗಳಲ್ಲಿ ಈಡೇರಿಸದಿದ್ದರೆ ಹಾವೇರಿ ಜಿಲ್ಲಾ ರೈತ ಸಂಘವು ಮುಂದಿನ ದಿನಗಳಲ್ಲಿ ಹೆದ್ದಾರಿ ತಡೆ ನಡೆಸಿ ಉಗ್ರ ಹೋರಾಟ ಮಾಡಲಾಗುವುದೆಂದು ಹಾವೇರಿ ಜಿಲ್ಲಾಧಿಕಾರಿಗಳಿಗೆ ಮನವಿಯಲ್ಲಿ ಹಕ್ಕೊತ್ತಾಯ ಮಾಡಲಾಗಿದೆ.
ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ರಾಮಣ್ಣ ಕೆಂಚಳ್ಳೆರ, ಪ್ರ, ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಹೆಚ್.ಹೆಚ್. ಮುಲ್ಲಾ, ರುದ್ರಗೌಡ ಕಾಡನಗೌಡ್ರ, ಶಿವಯೋಗಿ ಹೊಸಗೌಡ್ರ, ಮುತ್ತಪ್ಪ ಗುಡಗೇರಿ, ಚನ್ನಪ್ಪ ಮರಡೂರ, ರಾಜು ತರ್ಲಗಟ್ಟ, ಈರಣ್ಣ ಚಕ್ರಸಾಲಿ, ಗುಡ್ಡನಗೌಡ ಪ್ಯಾಟಿಗೌಡ್ರ, ಶಂಕ್ರಣ್ಣ ಶಿರಗೂಂಬಿ, ಸುರೇಶ ಚಲವಾದಿ, ಬಸನಗೌಡ ಗಂಗಪ್ಪನವರ, ಮೊಹಮ್ಮದ್ ಗೌಸ್ ಪಾಟೀಲ್, ಮಾಲತೇಶ ಪೂಜಾರ, ಕರಿಬಸಪ್ಪ ಅಗಸಿಬಾಗಿಲ, ಭುವನೇಶ್ವರ ಶಿಡ್ಲಾಪೂರ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

“ಬೆಳೆ ವಿಮೆ ೯೦ಕೋಟಿಯ ಬದಲು ರೈತರ ಖಾತೆಗೆ ೯ ಕೋಟಿ” ಮರುಪರಿಶೀಲನೆಗೆ ರೈತರ ಒತ್ತಾಯ
ಹಾವೇರಿ: ಬೆಳೆ ವಿಮಾ ವಿತರಣೆಯಲ್ಲಿ ೨೦೨೪-೨೫ ರ ಮುಂಗಾರುಹಂಗಾಮಿನಲ್ಲಿ ಸಾಕಷ್ಟು ತಾರತಮ್ಯ ನಡೆದಿದ್ದು, ಬೆಳೆ ವಿಮಾ ಹೊಸ ನೀತಿ ಅನುಸರಿಸಿ ೯೦ ಕೋಟಿ ರೂಪಾಯಿ ಕೊಡುವುದರ ಬದಲಾಗಿ ೯ ಕೋಟಿ ಕೊಟ್ಟು ಅನ್ನದಾತರಿಗೆ ವಿಮಾ ಕಂಪನಿ ಮೋಸ ಮಾಡಿದ್ದು, ರೈತರಿಗೆ ದ್ರೋಹ ಬಗೆದ ವಿಮಾ ಕಂಪನಿಯವರನ್ನು ಕರೆಸಿ ಮರುಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕೆಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕವು ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಅರ್ಪಿಸಿ ಒತ್ತಾಯಿಸಿದೆ.
ಸೋಮವಾರ ಇಲ್ಲಿನ ಮುರುಘಾಮಠದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಹಳೆ ಪಿ.ಬಿ.ರಸ್ತೆಯನ್ನು ಅರ್ಧಗಂಟೆಗೂ ಹೆಚ್ಚುಕಾಲ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಡಳಿತ ಭವನನಕ್ಕೆ ತೆರಳಿದ ರೈತರು ಅಲ್ಲಿ ಧರಣಿ ನಡೆಸಿ ಬ್ಯಾಂಕ್‌ರ್‍ಸ್ ಸಭೆಗೆ ಆಗಮಿಸಿದ್ದ ಸಂದರಿಗೆ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಈ ಬಗ್ಗೆ ಮನವಿ ಅರ್ಪಿಸಿದರು.
ಹಾವೇರಿ ಜಿಲ್ಲೆಯ ರೈತರು ಬರಗಾಲ ಎದುರಿಸುತ್ತಿದ್ದು, ರೈತರ ಬಹುದಿನದ ಬೇಡಿಕೆಯಾದ ಬೇಡ್ತಿ- ವರದಾ ನದಿ ಜೋಡಣೆ ಮಾಡಬೇಕು. ಜಿಲ್ಲೆಯಲ್ಲಿ ರೈತರು
ಬ್ಯಾಂಕ್ ಹಾಗೂ ಖಾಸಗಿ ಸಾಲ ಪಡೆದು ಶುಂಠಿ ಬೆಳೆಯನ್ನು ಬೆಳೆದಿದು, ಮಾರುಕಟ್ಟೆಯಲ್ಲಿ ಶುಂಠಿ ಬೆಲೆ ಕುಸಿತವಾಗಿ ಹಾಕಿದ ಬಂಡವಾಳವು ಬಾರದಂತಾಗಿದ್ದು, ರೈತರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಪ್ರತಿ ಕ್ವಿಂಟಲ್ ಶುಂಠಿ ಗೆ ೧೦೦೦೦ರೂ ಬೆಲೆ ನಿಗದಿ ಮಾಡಿ ಸರ್ಕಾರ ಖರೀದಿ ಕೇಂದ್ರ ಸ್ಥಾಪಿಸಿ ರೈತರನ್ನು ರಕ್ಷಣೆ ಮಾಡಬೇಕು. ಕಳೆದ ಮುಂಗಾರಿನಲ್ಲಿ ಅತಿವೃಷ್ಟಿ ಮಳೆಯಿಂದ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ದುಡಿಯುವ ರೈತ ಹತಾಶನಾಗಿದ್ದು ಸರ್ಕಾರ ಕೆಲವೇ ರೈತರಿಗೆ ಪರಿಹಾರ ಕೊಟ್ಟಿದ್ದು ಬೆಳೆ ಕಳೆದುಕೊಂಡ ರೈತರಿಗೆ ಪ್ರತಿ ಹೆಕ್ಟೇರ್ ಗೆ ೮೫೦ ರೂಪಾಯಿ ಪರಿಹಾರ ಕೊಡಬೇಕೆಂದು ಜಿಲ್ಲಾ ರೈತ ಸಂಘ ಒತ್ತಾಯಿಸಿದೆ. ರೈತರ ಎಲ್ಲಾ ಬೇಡಿಕೆಗಳನ್ನು ಎರಡು ತಿಂಗಳಲ್ಲಿ ಈಡೇರಿಸದಿದ್ದರೆ ಹಾವೇರಿ ಜಿಲ್ಲಾ ರೈತ ಸಂಘವು ಮುಂದಿನ ದಿನಗಳಲ್ಲಿ ಹೆದ್ದಾರಿ ತಡೆ ನಡೆಸಿ ಉಗ್ರ ಹೋರಾಟ ಮಾಡಲಾಗುವುದೆಂದು ಹಾವೇರಿ ಜಿಲ್ಲಾಧಿಕಾರಿಗಳಿಗೆ ಮನವಿಯಲ್ಲಿ ಹಕ್ಕೊತ್ತಾಯ ಮಾಡಲಾಗಿದೆ.
ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ರಾಮಣ್ಣ ಕೆಂಚಳ್ಳೆರ, ಪ್ರ, ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಹೆಚ್.ಹೆಚ್. ಮುಲ್ಲಾ, ರುದ್ರಗೌಡ ಕಾಡನಗೌಡ್ರ, ಶಿವಯೋಗಿ ಹೊಸಗೌಡ್ರ, ಮುತ್ತಪ್ಪ ಗುಡಗೇರಿ, ಚನ್ನಪ್ಪ ಮರಡೂರ, ರಾಜು ತರ್ಲಗಟ್ಟ, ಈರಣ್ಣ ಚಕ್ರಸಾಲಿ, ಗುಡ್ಡನಗೌಡ ಪ್ಯಾಟಿಗೌಡ್ರ, ಶಂಕ್ರಣ್ಣ ಶಿರಗೂಂಬಿ, ಸುರೇಶ ಚಲವಾದಿ, ಬಸನಗೌಡ ಗಂಗಪ್ಪನವರ, ಮೊಹಮ್ಮದ್ ಗೌಸ್ ಪಾಟೀಲ್, ಮಾಲತೇಶ ಪೂಜಾರ, ಕರಿಬಸಪ್ಪ ಅಗಸಿಬಾಗಿಲ, ಭುವನೇಶ್ವರ ಶಿಡ್ಲಾಪೂರ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...