ಬ್ಯಾಡಗಿ ಶಾಸಕ ಬಳ್ಳಾರಿ ಅವರ ಸಹೋದರ ಸಿ.ಆರ್.ಬಳ್ಳಾರಿ ಕಾಂಗ್ರೆಸ್ಗೆ ಸೇರ್ಪಡೆ
ಹಾವೇರಿ : ವಿಧಾನಸಭಾ ಚುಣಾವಣೆಗೆ ದಿನಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಪಕ್ಷಾಂತರ ಪರ್ವ ಜೋರಾಗಿ ನಡೆದಿದೆ. ಪ್ರಮುಖರುಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವುದು, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಆದರೆ ಬ್ಯಾಡಗಿ ವಿಧಾನಸಬಾ ಕ್ಷೇತ್ರದ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರ ಸಹೋದರ, ನಿವೃತ್ತ ಅಧಿಕಾರಿ ಸಿ.ಆರ್.ಬಳ್ಳಾರಿ ಅವರು ಕಾಂಗ್ರೆಸ್ಪಕ್ಷ ಸೇರ್ಪಡೆಯಾಗಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ನಿವೃತ್ತ ಇಂಜನೀಯರ ಸಿ.ಆರ್.ಬಳ್ಳಾರಿ, ತಾಲೂಕಾ ಬಿಜೆಪಿ ಉಪಾಧ್ಯಕ್ಷ ಗಿರೀಶಸ್ವಾಮಿ ಇಂಡಿಮಠ, ರಾಮಣ್ಣ ಉಕ್ಕುಂದ, ರವಿ ಪೂಜಾರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದು, ಇವರನ್ನು ಕಾಂಗ್ರೆಸ್ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ,ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ,ಸಮಾಜದ ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳು ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಓಡುವ ಕುದುರೆಯನ್ನು ತಡೆಯಲು ಸಾಧ್ಯವಿಲ್ಲ. ಅದೇರಿತಿ ಕಾಂಗ್ರೆಸ್ ಗೆಲುವನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಬ್ಯಾಡಗಿ ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಬಿಜೆಪಿ ಮುಖಂಡರು ಬಿಜೆಪಿ ತೊರೆದು ಕಾಂಗ್ರೇಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಬಲ್ ಇಂಜಿನ್ ಸರ್ಕಾರದ ಹಳಿ ತಪ್ಪಿದೆ. ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಮಾಡದ ಇವರಿಗೆ ಮತ ಕೇಳುವ ನೈತಿಕ ಹಕ್ಕನ್ನು ಉಳಿಸಿಕೊಂಡಿಲ್ಲ. ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಯಾವುದೇ ಬಿಜೆಪಿ ಅಭ್ಯರ್ಥಿಗಳು ಮತ ಕೇಳುತ್ತಿಲ್ಲ. ಮೋದಿ ಎನ್ನುವ ಫೋಟೋ ತೊರಿಸಿ ಮತವನ್ನು ಕೇಳುತಿದ್ದಾರೆ. ಅಭಿವೃದ್ಧಿ ವಿಚಾರವಾಗಿ ಮತವನ್ನು ಕೇಳಲಿ ಎಂದು ಆರೋಪಿಸಿದರು.
ಬಿಜೆಪಿಯ ಪ್ರಮುಖ ಮುಖಂಡರು ಕಾಂಗ್ರೇಸ್ನ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಕಾಂಗ್ರೇಸ್ನತ್ತ ಮುಖ ಮಾಡಿದ್ದಾರೆ. ವಾಮ ಮಾರ್ಗದಿಂದ ಅಧಿಕಾರ ಹಿಡಿಯುವ ಬಿಜೆಪಿಯವರ ಆಟ ಇನ್ಮೂಂದೆ ನಡೆಯಲ್ಲ. ೪೦.ಪರಶೆಂಟ್ ಭ್ರಷ್ಟಾಚಾರಕ್ಕೆ ಜನತೆ ಇವರ ಮೇಲಿನ ನಂಬಿಕೆಯನ್ನು ಕಳೇದುಕೊಂಡಿದ್ದಾರೆ ಎಂದು ಆರೋಪಿಸಿದರಲ್ಲದೇ, ಕಾಂಗ್ರೇಸ್ ಅವದಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಾಗಿವೆ ಎಂದರು.
ಈ ಸಂದರ್ಭದಲ್ಲಿ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ, ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಉಪಾಧ್ಯಕ್ಷ ಸುರೇಶಗೌಡ್ರ ಪಾಟೀಲ, ತಾಲೂಕಾಧ್ಯಕ್ಷ ದಾನಪ್ಪ ಚೂರಿ, ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಶಿವನಗೌಡ ಪಾಟೀಲ, ನಾಗರಾಜ ಆನ್ವೇರಿ, ರಮೇಶ ಸುತ್ತಕೋಟಿ, ಶಿವಪುತ್ರಪ್ಪ ಅಗಡಿ, ಡಿ.ಎಚ್.ಬುಡ್ಡನಗೌಡ್ರ, ಮಂಜುನಾತ ಬೋವಿ, ರಾಜೆಸಾಬ ಕಳ್ಯಾಳ, ದುಗೇಶ ಗೊಣೆಮ್ಮನವರ, ಡಾ.ಎ.ಎಂ.ಸೌದಾಗರ, ಬೀರಪ್ಪಜ್ಜ ಬಣಕಾರ, ಖಾದರಸಾಬ ದೊಡ್ಡಮನಿ, ರಾಜು ಶಿವಣ್ಣನವರ ಸೇರಿದಂತೆ ಇನ್ನಿತರರು ಇದ್ದರು.
ಬ್ಯಾಡಗಿ ಶಾಸಕ ಬಳ್ಳಾರಿ ಅವರ ಸಹೋದರ ಸಿ.ಆರ್.ಬಳ್ಳಾರಿ ಕಾಂಗ್ರೆಸ್ಗೆ ಸೇರ್ಪಡೆ
Date:
ಬ್ಯಾಡಗಿ ಶಾಸಕ ಬಳ್ಳಾರಿ ಅವರ ಸಹೋದರ ಸಿ.ಆರ್.ಬಳ್ಳಾರಿ ಕಾಂಗ್ರೆಸ್ಗೆ ಸೇರ್ಪಡೆ
ಹಾವೇರಿ : ವಿಧಾನಸಭಾ ಚುಣಾವಣೆಗೆ ದಿನಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಪಕ್ಷಾಂತರ ಪರ್ವ ಜೋರಾಗಿ ನಡೆದಿದೆ. ಪ್ರಮುಖರುಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವುದು, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಆದರೆ ಬ್ಯಾಡಗಿ ವಿಧಾನಸಬಾ ಕ್ಷೇತ್ರದ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರ ಸಹೋದರ, ನಿವೃತ್ತ ಅಧಿಕಾರಿ ಸಿ.ಆರ್.ಬಳ್ಳಾರಿ ಅವರು ಕಾಂಗ್ರೆಸ್ಪಕ್ಷ ಸೇರ್ಪಡೆಯಾಗಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ನಿವೃತ್ತ ಇಂಜನೀಯರ ಸಿ.ಆರ್.ಬಳ್ಳಾರಿ, ತಾಲೂಕಾ ಬಿಜೆಪಿ ಉಪಾಧ್ಯಕ್ಷ ಗಿರೀಶಸ್ವಾಮಿ ಇಂಡಿಮಠ, ರಾಮಣ್ಣ ಉಕ್ಕುಂದ, ರವಿ ಪೂಜಾರ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದು, ಇವರನ್ನು ಕಾಂಗ್ರೆಸ್ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ,ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ,ಸಮಾಜದ ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳು ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಓಡುವ ಕುದುರೆಯನ್ನು ತಡೆಯಲು ಸಾಧ್ಯವಿಲ್ಲ. ಅದೇರಿತಿ ಕಾಂಗ್ರೆಸ್ ಗೆಲುವನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಬ್ಯಾಡಗಿ ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಬಿಜೆಪಿ ಮುಖಂಡರು ಬಿಜೆಪಿ ತೊರೆದು ಕಾಂಗ್ರೇಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಬಲ್ ಇಂಜಿನ್ ಸರ್ಕಾರದ ಹಳಿ ತಪ್ಪಿದೆ. ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಮಾಡದ ಇವರಿಗೆ ಮತ ಕೇಳುವ ನೈತಿಕ ಹಕ್ಕನ್ನು ಉಳಿಸಿಕೊಂಡಿಲ್ಲ. ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಯಾವುದೇ ಬಿಜೆಪಿ ಅಭ್ಯರ್ಥಿಗಳು ಮತ ಕೇಳುತ್ತಿಲ್ಲ. ಮೋದಿ ಎನ್ನುವ ಫೋಟೋ ತೊರಿಸಿ ಮತವನ್ನು ಕೇಳುತಿದ್ದಾರೆ. ಅಭಿವೃದ್ಧಿ ವಿಚಾರವಾಗಿ ಮತವನ್ನು ಕೇಳಲಿ ಎಂದು ಆರೋಪಿಸಿದರು.
ಬಿಜೆಪಿಯ ಪ್ರಮುಖ ಮುಖಂಡರು ಕಾಂಗ್ರೇಸ್ನ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಕಾಂಗ್ರೇಸ್ನತ್ತ ಮುಖ ಮಾಡಿದ್ದಾರೆ. ವಾಮ ಮಾರ್ಗದಿಂದ ಅಧಿಕಾರ ಹಿಡಿಯುವ ಬಿಜೆಪಿಯವರ ಆಟ ಇನ್ಮೂಂದೆ ನಡೆಯಲ್ಲ. ೪೦.ಪರಶೆಂಟ್ ಭ್ರಷ್ಟಾಚಾರಕ್ಕೆ ಜನತೆ ಇವರ ಮೇಲಿನ ನಂಬಿಕೆಯನ್ನು ಕಳೇದುಕೊಂಡಿದ್ದಾರೆ ಎಂದು ಆರೋಪಿಸಿದರಲ್ಲದೇ, ಕಾಂಗ್ರೇಸ್ ಅವದಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಾಗಿವೆ ಎಂದರು.
ಈ ಸಂದರ್ಭದಲ್ಲಿ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ, ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಉಪಾಧ್ಯಕ್ಷ ಸುರೇಶಗೌಡ್ರ ಪಾಟೀಲ, ತಾಲೂಕಾಧ್ಯಕ್ಷ ದಾನಪ್ಪ ಚೂರಿ, ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಶಿವನಗೌಡ ಪಾಟೀಲ, ನಾಗರಾಜ ಆನ್ವೇರಿ, ರಮೇಶ ಸುತ್ತಕೋಟಿ, ಶಿವಪುತ್ರಪ್ಪ ಅಗಡಿ, ಡಿ.ಎಚ್.ಬುಡ್ಡನಗೌಡ್ರ, ಮಂಜುನಾತ ಬೋವಿ, ರಾಜೆಸಾಬ ಕಳ್ಯಾಳ, ದುಗೇಶ ಗೊಣೆಮ್ಮನವರ, ಡಾ.ಎ.ಎಂ.ಸೌದಾಗರ, ಬೀರಪ್ಪಜ್ಜ ಬಣಕಾರ, ಖಾದರಸಾಬ ದೊಡ್ಡಮನಿ, ರಾಜು ಶಿವಣ್ಣನವರ ಸೇರಿದಂತೆ ಇನ್ನಿತರರು ಇದ್ದರು.