
ಹಾವೇರಿ: ಲೋಕಸಭಾ ಚುನಾವಣೆಗೆ ದಿನಗಳ ಏಣಿಕೆ ಆರಂಭವಾಗಿದ್ದು, ಈ ಮಧ್ಯೆ ಹಾವೇರಿಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿರುವ ಬಿಜೆಪಿ ಪಕ್ಷದ ಪ್ರಭಲ ಟಿಕೆಟ್ ಆಕಾಂಕ್ಷಿ, ಸ್ಥಳೀಯನಾಗಿರುವ ಬಿಜೆಪಿ ಯುವ ಮುಖಂಡ ಮಂಜುನಾಥ ಮಡಿವಾಳರ ಭಾನುವಾರ ಚಿತ್ರದುರ್ಗಕ್ಕೆ ತೆರಳಿ ಶ್ರೀಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಜಿ ಅವರನ್ನು ಭೇಟಿಯಾಗಿ ತಾವು ಹಾವೇರಿಲೋಕಸಭಾ ಕ್ಷೇತ್ರದ ಬಿಜೆಪಿಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು, ತಮ್ಮನ್ನು ಆಶೀರ್ವದಿಸುವಂತೆ ಕೋರಿ ಆಶೀರ್ವಾದ ಪಡೆದುಕೊಂಡರು.
ಪೂಜ್ಯರನ್ನು ಈ ಸಂದರ್ಭದಲ್ಲಿ ಅವರು ಸನ್ಮಾನಿಸಿದರು. ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಅಹಿಂದ ವರ್ಗಗಳ ಒಕ್ಕೂಟದ ಹಾವೇರಿ ಜಿಲ್ಲಾಧ್ಯಕ್ಷ ಮಹದೇವಪ್ಪ ವಡ್ಡರ, ಬಣಜಿಗ ಸಮಾಜದ ಹಾವೇರಿ ಜಿಲ್ಲಾ ಮುಖಂಡ ಶಿವಬಸವ ಚೌಶೆಟ್ಟಿ, ಸಾದರ ಸಮಾಜದ ಯುವಮುಖಂಡ ಚನ್ನಬಸಪ್ಪ ಹುರಳಿ, ಅಲೆಮಾರಿ ಸಮಾಜದ ಹಾವೇರಿಜಿಲ್ಲಾ ಅಧ್ಯಕ್ಷ ಶೆಟ್ಟಿ ವಿಭೂತಿ, ದಲಿತ ಯುವ ಮುಖಂಡ ಸುರೇಶ ಹರಿಜನ ಮತ್ತಿತರರು ಹಾಜರಿದ್ದರು.