ಮಹಾಕುಂಭ ಮೇಳದಲ್ಲಿ ಭೀಕರ ಕಾಲ್ತುಳಿತ; ಹಾವೇರಿಯ ಭಕ್ತರು ಸುರಕ್ಷಿತ
ಹಾವೇರಿ: ಉತ್ತರ ಪ್ರದೇಶ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ನಡೆದಿರುವ ಪವಿತ್ರ ಮಹಾಕುಂಭ ಮೇಳದ ತ್ರಿವೇಣಿ ಸಂಗಮದ ಸಮೀಪ ಬುಧವಾರ ಬೆಳಗಿನಜಾವ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ೧೭ ಮಂದಿ ಭಕ್ತರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇದೇ ವೇಳೆ ೫೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ ಎನ್ನುವ ವದರಿಗಳ ಬಿತ್ತರವಾಗಿದ್ದು, ಈಮಧ್ಯೆ ಹಾವೇರಿಯಿಂದ ತೆರಳಿದ್ದ ಭಕ್ತಾದಿಗಳು ಸುರಕ್ಷಿತವಾಗಿರುವವ ಬಗ್ಗೆ ಪ್ರಯಾಗರಾಜ್ನಲ್ಲಿರುವ ಹಾವೇರಿಯ ಮಂಜುನಾಥ್ ಜೋಶಿ ದೂರವಾಣಿಯ ಮೂಲಕ ತಾವು ತಮ್ಮ ತಂಡದೊಂದಿಗೆ ಸುರಕ್ಷಿತವಾಗಿರುವುದಾಗಿ ಮಾಹಿತಿ ನೀಡಿದ್ದಾರೆ.
ಎರಡುಕಾರುಗಳಲ್ಲಿ ಜ.೨೬ರಂದು ಹಾವೇರಿಯಿಂದಪ್ರಯಾಗರಾಜ್ಗೆ ಪ್ರಯಾಣಿ ಬೆಳಸಿದ್ದ ಅನಂತ ಇಟಗಿ, ನಾಗರಾಜ ಹಿರೇಮಠ, ಕಿರಣ ಬೊಳಕಟ್ಟಿ, ದ್ಯಾಮಣ್ಣ ಕೊಟ್ಟೂರ, ಬಸವರಾಜ ಗೌಳಿ, ಹೊನ್ನಪ್ಪ ಗೊಣೆಮ್ಮನವರ, ರವಿ ಇಟಗಿ, ಮಹೇಶದತ್ತ ಜೋಶಿ, ಆನಂದ ಹೇಜೀಬ ಅವರೊಂದಿಗೆ ಜ.೨೮ರಂದು ಪ್ರಯಾಗರಾಜ ತಲುಪಿದ್ದು, ನಾವುಗಳು ದುರ್ಘಟನೆ ನಡೆದ ಸ್ಥಳದಿಂದ ೧ಕಿ.ಮೀದೂರದಲ್ಲಿದ್ದೆವು. ಹಾವೇರಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪ್ರಯಾಗರಾಜಗೆ ಆಗಮಿಸಿದ್ದಾರೆ. ಕೆಲವರು ನಮಗೆ ಭೇಟಿಯಾಗಿದ್ದರು. ಅವರೆಲ್ಲರು ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಳಗಿನಹೊತ್ತು ಕಾಲ್ತುಳಿತದ ವೇಳೆ ನೂಕುನುಗ್ಗಲು ಉಂಟಾದಾಗ ಸ್ನಾನಕ್ಕೆ ಸೇರಿದ್ದ ಭಕ್ತರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಸಂತರು ಸ್ನಾನಕ್ಕೆಂದು ತ್ರಿವೇಣಿ ಸಂಗದ ಬಳಿ ಆಗಮಿಸಿದ ವೇಳೆ ಅವರನ್ನು ನೋಡಲು, ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಈ ವೇಳೆ ಕೆಲವರು ಸಂಗಮದಬಳಿ ನಿದ್ದೆಮಾಡುತ್ತಿದ್ದರು. ಈ ವೇಳೆ ಏಕಾ ಏಕಿ ಉಂಟಾದ ಕಾಲ್ತುಳಿತದ ವೇಳೆ ಈ ಅವಘಡ ಸಂಭವಿಸಿದೆ. “ನಾವು ಎರಡು ಕಾರುಗಳಲ್ಲಿ ಮಹಾಕುಂಭ ಮೇಳಕ್ಕೆ ಬಂದಿದ್ದೇವೆ. ಪುಣ್ಯಸ್ಥಾನಮಾಡಿದ್ದೇವೆ. ನಾವು ಸುರಕ್ಷಿತವಾಗಿದ್ದೇವೆ ಎಂದು ಮಾಹಿತಿ ನೀಡಿದರು.