ಮಾಜಿ ಸಿಎಂ, ಮಾಜಿ ಸಚಿವರ ಕಾಲಿಗೆ ಬಿಳೋದು ಅಂದ್ರೆ ಸುಮ್ಮನೇನಾ…..
ಹಾವೇರಿ: ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ಪಕ್ಷಗಳು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆಮಾಡಿದ್ದು, ಎರಡು ಪಕ್ಷಗಳ ಅಭ್ಯರ್ಥಿಗಳು ಮತದಾರರ, ಮುಖಂಡರ ಮನ ಗೆಲ್ಲಲು ತಾಲೀಮು ನಡೆಸಿದ್ದಾರೆ. ಈ ತಾಲೀಮು ಯಾವ ಮಟ್ಟಿಗೆ ನಡೆದಿದೆ ಎಂದರೇ, ರಾಜ್ಯದ ಮಾಜಿ ಮುಖ್ಯಮಂತಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಅವರದ್ದೇ ಸಚಿವ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದ ಬಿ.ಸಿ.ಪಾಟೀಲರ ಕಾಲಿಗೆ ಬಿದ್ದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನೆಟ್ಟಿಗರು ಈ ವಿಡಿಯೋಕ್ಕೆ ನಾನಾ ರೀತಿಯಿಂದ ವ್ಯಾಖ್ಯಾನಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಬಿಜೆಪಿ ಹಾವೇರಿಲೋಕಸಭಾ ಕ್ಷೇತ್ರಕ್ಕೆ ಅಂತಿಮಗೊಳಿಸಿ ಘೋಷಣೆಮಾಡಿದ ಬೆನ್ನಲ್ಲಿ ಮತಬೇಟೆ ಆರಂಭಿಸಿರುವ ಬಸವರಾಜ ಬೊಮ್ಮಾಯಿ ಅವರು ಲೋಕಸಭಾ ಕ್ಷೇತ್ರದಲ್ಲಿನ ಬಿಜೆಪಿಯ ಹಾಲಿ ಮತ್ತು ಮಾಜಿ ಸಚಿವರ, ಶಾಸಕರನ್ನು ಬೇಟಿಯಾಗಿ ತಮ್ಮ ಪರ ಚನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ.
ಮಾಜಿ ಸಚಿವ ಬಿ.ಸಿ.ಪಾಟೀಲರು ಸಹ ಹಾವೇರಿಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹೀಗಾಗಿ ಅವರನ್ನು ಭೇಟಿಮಾಡಿದ ವೇಳೆ ಬಸವರಾಜ ಬೊಮ್ಮಾಯಿ ಅವರು ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಪಾಟೀಲರ ಕಾಲಿಗೆ ಬಿಳಲು ಮುಂದಾಗುತ್ತಾರೆ. ಅದನ್ನು ತಡೆದ ಪಾಟೀಲರು ಬೊಮ್ಮಾಯಿ ಅವರು ಪರಸ್ಪರ ಕೈಹಿಡಿಯುತ್ತಾರೆ, ಮಾತನಾಡುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಬಗ್ಗೆ ನೆಟ್ಟಿಗರು ಮಾಜಿ ಸಿಎಂ, ಮಾಜಿ ಸಚಿವರ ಕಾಲಿಗೆ ಬಿಳೋದು ಅಂದ್ರೆ ಸುಮ್ಮನೇನಾ ಎಂದು ವ್ಯಾಖ್ಯಾನಿಸಿದ್ದಾರೆ.
ಮಾಜಿ ಸಿಎಂ, ಮಾಜಿ ಸಚಿವರ ಕಾಲಿಗೆ ಬಿಳೋದು ಅಂದ್ರೆ ಸುಮ್ಮನೇನಾ…..
Date:
ಮಾಜಿ ಸಿಎಂ, ಮಾಜಿ ಸಚಿವರ ಕಾಲಿಗೆ ಬಿಳೋದು ಅಂದ್ರೆ ಸುಮ್ಮನೇನಾ…..
ಹಾವೇರಿ: ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ಪಕ್ಷಗಳು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆಮಾಡಿದ್ದು, ಎರಡು ಪಕ್ಷಗಳ ಅಭ್ಯರ್ಥಿಗಳು ಮತದಾರರ, ಮುಖಂಡರ ಮನ ಗೆಲ್ಲಲು ತಾಲೀಮು ನಡೆಸಿದ್ದಾರೆ. ಈ ತಾಲೀಮು ಯಾವ ಮಟ್ಟಿಗೆ ನಡೆದಿದೆ ಎಂದರೇ, ರಾಜ್ಯದ ಮಾಜಿ ಮುಖ್ಯಮಂತಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಅವರದ್ದೇ ಸಚಿವ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದ ಬಿ.ಸಿ.ಪಾಟೀಲರ ಕಾಲಿಗೆ ಬಿದ್ದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನೆಟ್ಟಿಗರು ಈ ವಿಡಿಯೋಕ್ಕೆ ನಾನಾ ರೀತಿಯಿಂದ ವ್ಯಾಖ್ಯಾನಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಬಿಜೆಪಿ ಹಾವೇರಿಲೋಕಸಭಾ ಕ್ಷೇತ್ರಕ್ಕೆ ಅಂತಿಮಗೊಳಿಸಿ ಘೋಷಣೆಮಾಡಿದ ಬೆನ್ನಲ್ಲಿ ಮತಬೇಟೆ ಆರಂಭಿಸಿರುವ ಬಸವರಾಜ ಬೊಮ್ಮಾಯಿ ಅವರು ಲೋಕಸಭಾ ಕ್ಷೇತ್ರದಲ್ಲಿನ ಬಿಜೆಪಿಯ ಹಾಲಿ ಮತ್ತು ಮಾಜಿ ಸಚಿವರ, ಶಾಸಕರನ್ನು ಬೇಟಿಯಾಗಿ ತಮ್ಮ ಪರ ಚನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ.
ಮಾಜಿ ಸಚಿವ ಬಿ.ಸಿ.ಪಾಟೀಲರು ಸಹ ಹಾವೇರಿಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹೀಗಾಗಿ ಅವರನ್ನು ಭೇಟಿಮಾಡಿದ ವೇಳೆ ಬಸವರಾಜ ಬೊಮ್ಮಾಯಿ ಅವರು ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಪಾಟೀಲರ ಕಾಲಿಗೆ ಬಿಳಲು ಮುಂದಾಗುತ್ತಾರೆ. ಅದನ್ನು ತಡೆದ ಪಾಟೀಲರು ಬೊಮ್ಮಾಯಿ ಅವರು ಪರಸ್ಪರ ಕೈಹಿಡಿಯುತ್ತಾರೆ, ಮಾತನಾಡುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಬಗ್ಗೆ ನೆಟ್ಟಿಗರು ಮಾಜಿ ಸಿಎಂ, ಮಾಜಿ ಸಚಿವರ ಕಾಲಿಗೆ ಬಿಳೋದು ಅಂದ್ರೆ ಸುಮ್ಮನೇನಾ ಎಂದು ವ್ಯಾಖ್ಯಾನಿಸಿದ್ದಾರೆ.