ಮಾದಿಗರನ್ನು ಮರೆತ ಮೋದಿ ಸರ್ಕಾರ: ಡಿ.ಎಸ್.ಮಾಳಗಿ
ಹಾವೇರಿ; ಮೂರನೇ ಬಾರಿಗೆ ಪ್ರಧಾನ ಮಂತ್ರಿ ಹುದ್ದೆಯನ್ನು ಅಲಂಕರಿಸಿರುವ ನರೇಂದ್ರ ಮೋದಿ ಅವರ ನೇತೃತ್ವದ
ಕೇಂದ್ರ ಸರ್ಕಾರದಲ್ಲಿ ಮಾದಿಗ ಸಮಾಜಕ್ಕೆ ಮಂತ್ರಿ ಸ್ಥಾನ ನೀಡದೇ ಮಾದಿಗರನ್ನು ಕಡೆಗಣಿಸಲಾಗಿದೆ ಎಂದು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಶ್ರೀ ರಾಮಚಂದ್ರನ ಧರ್ಮ ಪತ್ನಿ ಸೀತಾ ಮಾತೆಯನ್ನು ಕರೆತರಲು ನಾಯಕತ್ವ ವಹಿಸಿದ ಜಾಂಬವಂತ ಕುಲದ ಮಾದಿಗ ಸಮಾಜದವರಿಗೆ ಈ ಬಾರಿ ಮೋದಿ ಅವರ ಸಚಿವ ಸಂಪುಟದಲ್ಲಿ ಸಚಿವಸ್ಥಾನವನ್ನು ನೀಡಿರುವುದಿಲ್ಲ. ಶ್ರೀರಾಮ ಚಂದ್ರನ ಪರಮ ಭಕ್ತರಾದ ಜಾಂಬವ ಕುಲಕ್ಕೆ ಮೋದಿ ಅವರು ಆದ್ಯತೆ ನಿಡಬೇಕಾಗಿತ್ತು.
ಈ ಜಾಂಭವ ಕುಲದ ರಮೇಶ ಜಗಹಣಗಿ ಅವರು ೭ ಬಾರಿ ಲೋಕ ಸಭಾ ಸದಸ್ಯರು ಇದ್ದು, ರಾಜ್ಯದಲ್ಲಿ ಶಾಸಕರಾಗಿ ರಾಜ್ಯ/ಕೇಂದ್ರ ಸರ್ಕಾರದ ಮಂತ್ರಿಯಾಗಿ ಸೇವೆ ಮಾಡಿದ ಹಿರಿಯ ನಾಯಕರಾದ ಮಾದಿಗ ಸಮಾಜದ ಅತ್ಯುನ್ನತ ಬಹುಭಾಷೆ ಪಂಡಿತ, ವಿದ್ಯಾವಂತ, ಸರ್ವ ಧರ್ಮ ಸಮನ್ವಯತೆಯನ್ನು ಕಾಪಾಡಿಕೊಂಡಂತ ರಮೇಶ ಜಿಗಜಿಣಗಿ ಅವರನ್ನು ಈಗಲಾದರೂ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು.
ಬಸವರಾಜ ಬೊಮ್ಮಾಯಿ ಅವರು ಮುಖ್ಯ ಮಂತ್ರಿ ಇದ್ದ ಸಂದರ್ಭದಲ್ಲಿ ನಮ್ಮ ಸಮಾಜಕ್ಕೆ ಒಳ ಮೀಸಲಾತಿ, ೨೪,೦೦೦ ಪೌರ ಕಾರ್ಮಿಕರ ನೇಮಕಾತಿ, ಮಾದಾರ ಚನ್ನಯ್ಯ ಗುರುಪೀಠಕ್ಕೆ ೮೧ಎಕರೆ-೨೩ಗುಂಠೆ ಜಮೀನು ನೀಡಿದ್ದರು. ಭಾರತೀಯ ಜನತಾ ಪಕ್ಷದ, ಬಸವರಾಜ ಬೊಮ್ಮಾಯಿಅ ವರ ಋಣ ತೀರಿಸಲು ಕರ್ನಾಟಕ ರಾಜ್ಯ ಸಮಸ್ತ ಮಾದಿಗ ಜನಾಂಗದವರು ಭಾರತೀಯ ಜನತಾ ಪಕ್ಷವನ್ನ ಬೆಂಬಲಿಸಿದ್ದಾರೆ.
ಮುಂಬೈ ಕರ್ನಾಟಕ ಪ್ರದೇಶದಲ್ಲಿ ಬಹುದೊಡ್ಡ ಅಂಗಾಯತ ಸಮಾಜವಿದ್ದು , ಈ ಸಮುದಾಯದ ಮಾಜಿ ಮುಖ್ಯ ಮಂತ್ರಿ , ನೀರಾವರಿ ತಜ್ಞ, ದೂರ ದೃಷ್ಟಿಯ ನಾಯಕ, ರೈತರ ಕಣ್ಮಣಿ, ಬಹುಬಾಷೆಯ ಪರಿಣಿತರಾದ ಬಸವರಾ ಬೊಮ್ಮಾಯಿ ಅವರನ್ನು ಕೇಂದ್ರ ಸರ್ಕಾರದಲ್ಲಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕಾಗಿತ್ತು. ಬೊಮ್ಮಾಯಿ ಅವರಿಗೆ ಸಚಿವ ಸ್ಥಾನ ನೀಡದಿರುವುದು ಅವರ ಅಭಿಮಾನಿಗಳ ಬಳಗಕ್ಕೆ ಬಹಳ ಬೇಜಾರವಾಗಿದೆ.
ಈ ವಿಷಯ ಕುರಿತು ರಾಜ್ಯದ ಹಿರಿಯರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮತ್ತಿತರ ನಾಯಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಬಸವರಾಜ ಬೊಮ್ಮಾಯಿ ಅವರಿಗೆ, ಜಗಜಗಣಿ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ದೊರಕಿಸಲು ಪಕ್ಷದ ಹೈಕಮಾಂಡನ್ನು ಒತ್ತಾಯಿಸುವಂತೆ ಡಿ.ಎಸ್. ಮಾಳಗಿ ಆಗ್ರಹಿಸಿದ್ದಾರೆ.
ಮಾದಿಗರನ್ನು ಮರೆತ ಮೋದಿ ಸರ್ಕಾರ: ಡಿ.ಎಸ್.ಮಾಳಗಿ
Date:
ಮಾದಿಗರನ್ನು ಮರೆತ ಮೋದಿ ಸರ್ಕಾರ: ಡಿ.ಎಸ್.ಮಾಳಗಿ
ಹಾವೇರಿ; ಮೂರನೇ ಬಾರಿಗೆ ಪ್ರಧಾನ ಮಂತ್ರಿ ಹುದ್ದೆಯನ್ನು ಅಲಂಕರಿಸಿರುವ ನರೇಂದ್ರ ಮೋದಿ ಅವರ ನೇತೃತ್ವದ
ಕೇಂದ್ರ ಸರ್ಕಾರದಲ್ಲಿ ಮಾದಿಗ ಸಮಾಜಕ್ಕೆ ಮಂತ್ರಿ ಸ್ಥಾನ ನೀಡದೇ ಮಾದಿಗರನ್ನು ಕಡೆಗಣಿಸಲಾಗಿದೆ ಎಂದು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಶ್ರೀ ರಾಮಚಂದ್ರನ ಧರ್ಮ ಪತ್ನಿ ಸೀತಾ ಮಾತೆಯನ್ನು ಕರೆತರಲು ನಾಯಕತ್ವ ವಹಿಸಿದ ಜಾಂಬವಂತ ಕುಲದ ಮಾದಿಗ ಸಮಾಜದವರಿಗೆ ಈ ಬಾರಿ ಮೋದಿ ಅವರ ಸಚಿವ ಸಂಪುಟದಲ್ಲಿ ಸಚಿವಸ್ಥಾನವನ್ನು ನೀಡಿರುವುದಿಲ್ಲ. ಶ್ರೀರಾಮ ಚಂದ್ರನ ಪರಮ ಭಕ್ತರಾದ ಜಾಂಬವ ಕುಲಕ್ಕೆ ಮೋದಿ ಅವರು ಆದ್ಯತೆ ನಿಡಬೇಕಾಗಿತ್ತು.
ಈ ಜಾಂಭವ ಕುಲದ ರಮೇಶ ಜಗಹಣಗಿ ಅವರು ೭ ಬಾರಿ ಲೋಕ ಸಭಾ ಸದಸ್ಯರು ಇದ್ದು, ರಾಜ್ಯದಲ್ಲಿ ಶಾಸಕರಾಗಿ ರಾಜ್ಯ/ಕೇಂದ್ರ ಸರ್ಕಾರದ ಮಂತ್ರಿಯಾಗಿ ಸೇವೆ ಮಾಡಿದ ಹಿರಿಯ ನಾಯಕರಾದ ಮಾದಿಗ ಸಮಾಜದ ಅತ್ಯುನ್ನತ ಬಹುಭಾಷೆ ಪಂಡಿತ, ವಿದ್ಯಾವಂತ, ಸರ್ವ ಧರ್ಮ ಸಮನ್ವಯತೆಯನ್ನು ಕಾಪಾಡಿಕೊಂಡಂತ ರಮೇಶ ಜಿಗಜಿಣಗಿ ಅವರನ್ನು ಈಗಲಾದರೂ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು.
ಬಸವರಾಜ ಬೊಮ್ಮಾಯಿ ಅವರು ಮುಖ್ಯ ಮಂತ್ರಿ ಇದ್ದ ಸಂದರ್ಭದಲ್ಲಿ ನಮ್ಮ ಸಮಾಜಕ್ಕೆ ಒಳ ಮೀಸಲಾತಿ, ೨೪,೦೦೦ ಪೌರ ಕಾರ್ಮಿಕರ ನೇಮಕಾತಿ, ಮಾದಾರ ಚನ್ನಯ್ಯ ಗುರುಪೀಠಕ್ಕೆ ೮೧ಎಕರೆ-೨೩ಗುಂಠೆ ಜಮೀನು ನೀಡಿದ್ದರು. ಭಾರತೀಯ ಜನತಾ ಪಕ್ಷದ, ಬಸವರಾಜ ಬೊಮ್ಮಾಯಿಅ ವರ ಋಣ ತೀರಿಸಲು ಕರ್ನಾಟಕ ರಾಜ್ಯ ಸಮಸ್ತ ಮಾದಿಗ ಜನಾಂಗದವರು ಭಾರತೀಯ ಜನತಾ ಪಕ್ಷವನ್ನ ಬೆಂಬಲಿಸಿದ್ದಾರೆ.
ಮುಂಬೈ ಕರ್ನಾಟಕ ಪ್ರದೇಶದಲ್ಲಿ ಬಹುದೊಡ್ಡ ಅಂಗಾಯತ ಸಮಾಜವಿದ್ದು , ಈ ಸಮುದಾಯದ ಮಾಜಿ ಮುಖ್ಯ ಮಂತ್ರಿ , ನೀರಾವರಿ ತಜ್ಞ, ದೂರ ದೃಷ್ಟಿಯ ನಾಯಕ, ರೈತರ ಕಣ್ಮಣಿ, ಬಹುಬಾಷೆಯ ಪರಿಣಿತರಾದ ಬಸವರಾ ಬೊಮ್ಮಾಯಿ ಅವರನ್ನು ಕೇಂದ್ರ ಸರ್ಕಾರದಲ್ಲಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕಾಗಿತ್ತು. ಬೊಮ್ಮಾಯಿ ಅವರಿಗೆ ಸಚಿವ ಸ್ಥಾನ ನೀಡದಿರುವುದು ಅವರ ಅಭಿಮಾನಿಗಳ ಬಳಗಕ್ಕೆ ಬಹಳ ಬೇಜಾರವಾಗಿದೆ.
ಈ ವಿಷಯ ಕುರಿತು ರಾಜ್ಯದ ಹಿರಿಯರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮತ್ತಿತರ ನಾಯಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಬಸವರಾಜ ಬೊಮ್ಮಾಯಿ ಅವರಿಗೆ, ಜಗಜಗಣಿ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ದೊರಕಿಸಲು ಪಕ್ಷದ ಹೈಕಮಾಂಡನ್ನು ಒತ್ತಾಯಿಸುವಂತೆ ಡಿ.ಎಸ್. ಮಾಳಗಿ ಆಗ್ರಹಿಸಿದ್ದಾರೆ.