
ಲಂಚಕ್ಕೆ ಸ್ವೀಕರಿಸುವಾಗ ಸವಣೂರು Zp
AEE ನಿಂಬಣ್ಣ ಹೊಸಮನಿ ಬಂಧನ
ಹಾವೇರಿ: ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಂಜಿನಿಯರಿಂಗ್ ಉಪವಿಭಾಗ ಸವಣೂರು ನಿಂಬಣ್ಣ ಹೊಸಮನಿ ಇವರು ಲಚ್ಚಪ್ಪ ದುರ್ಗಪ್ಪ ಕನವಳ್ಳಿ ಅವರಿಂದ ರೂ 40,000/- ಹಣಕ್ಕೆ ಬೇಡಿಕೆ ಇಟ್ಟು, ರೂ 30,000/- ಲಂಚದ ಹಣ ಸ್ವೀಕರಿಸುವಾಗ ಫೆ೧೪ ರಂದು
ಹಾವೇರಿ ಜಿಲ್ಲೆಯ ಲೋಕಾಯುಕ್ತ ಅಧಿಕಾರಿ ಹಾಗೂ ಸಿಬ್ಬಂದಿ ಅವರು ಟ್ರ್ಯಾಪ್ ಮಾಡಿ ಆಪಾಧಿತನನ್ನು ಬಂಧಿಸಿರುತ್ತಾರೆ.
ಲಚ್ಚಪ್ಪ ದುರ್ಗಪ್ಪ ಕನವಳ್ಳಿ
RDPR ಸವಣೂರು ಉಪವಿಭಾಗ ವ್ಯಾಪ್ತಿಯಲ್ಲಿ 02 ಕಾಮಗಾರಿಗಳನ್ನು ಮಾಡಿದ್ದು, ಸದರಿ ಕಾಮಗಾರಿಗಳ ಹಣ ಬಿಡುಗಡೆ ಮಾಡುವಂತೆ AEE ರವರನ್ನು ಕೋರಿಕೊಂಡಾಗ, ಆಪಾಧಿತ ಅಧಿಕಾರಿಯಾದ AEE ನಿಂಬಣ್ಣ ಹೊಸಮನಿ ಅವರು ಕಾಮಗಾರಿ ಹಣ ಬಿಡುಗಡೆ ಮಾಡಲು ರೂ 40,000/- ಗಳಿಗೆ ಬೇಡಿಕೆ ಇಟ್ಟು, ರೂ 30,000/- ಹಣ ಪಡೆಯುವಾಗ ಪಿರಾದಿ ಲಚ್ಚಪ್ಪ ಕನವಳ್ಳಿ ಸಾ ಸವಣೂರು ರವರು ನೀಡಿದ ದೂರಿನ ಆಧಾರದ ಮೇಲೆ ಈ ದಿನ ಅಂದರೆ ದಿ 14-02-2023 ರಂದು ಸದರಿ ಆಪಾದಿತ ಅಧಿಕಾರಿ ರವರು ವಿದ್ಯಾದಿ ರವರಿಂದ 30,000/- ಹಣ ಪಡೆಯುವ ಕಾಲಕ್ಕೆ ಹಾವೇರಿ ಜಿಲ್ಲೆಯ ಲೋಕಾಯುಕ್ತ ಡಿವೈಎಸ್ಪಿ ಬಿ ಪಿ ಚಂದ್ರಶೇಖರ ನೇತೃತ್ವದಲ್ಲಿ ತನಿಖಾಧಿಕಾರಿಯಾದ ಮುಸ್ತಾಖಹ್ಮದ್ ಶೇಖ, ಮಧುಸೂಧನ ಹಾಗೂ ಮಂಜುನಾಥ ನಡುವಿನಮನಿ ನಿರೀಕ್ಷಕರು, ಕಲೋ ಹಾವೇರಿ ಹಾಗೂ ಸಿಬ್ಬಂದಿ ರವರು ಟ್ರ್ಯಾಪ್ ಮಾಡಿ ಲಂಚದ ಹಣವನ್ನು ವಶಪಡಿಸಿಕೊಂಡು ಆಪಾದಿತ ಅಧಿಕಾರಿಯ ಕಛೇರಿ ಹಾಗೂ ಮನೆಯನ್ನು ತಪಾಸಣೆ ಮಾಡಲಾಗುತ್ತಿದ್ದು, ತನಿಖೆ ಮುಂದುವರೆದಿರುತ್ತದೆ.
ಕರ್ನಾಟಕ ಲೋಕಾಯುಕ್ತ, ಹಾವೇರಿ,
ಕರ್ನಾಟಕ ರಾಜ್ಯದ ಲೋಕಾಯುಕ್ತರು ಹಾಗೂ ಎಡಿಜಿಪಿ, ಕಲೋ ಬೆಂಗಳೂರು ಹಾಗೂ ಐಜಿಪಿ, ಕಲೋ ಬೆಂಗಳೂರು ಹಾಗೂ ಮಾನ್ಯ ಎಸ್.ಪಿ, ಕಲೋ ದಾವಣಗೆರೆ ಅವರ ಮಾರ್ಗದರ್ಶನದಲ್ಲಿ, ಈ ದಾಳಿ ನಡೆದಿದೆ