ವಿವಿಧ ಆನ್‌ಲೈನ್ ಅರ್ಜಿಗಳ ವಿಲೇವಾರಿಯಲ್ಲಿ ರಾಜ್ಯದಲ್ಲೇ ಹಾವೇರಿ.ಜಿಲ್ಲೆ ಪ್ರಥಮ -ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ

Date:

ವಿವಿಧ ಆನ್‌ಲೈನ್ ಅರ್ಜಿಗಳ ವಿಲೇವಾರಿಯಲ್ಲಿ ರಾಜ್ಯದಲ್ಲೇ ಹಾವೇರಿ.ಜಿಲ್ಲೆ ಪ್ರಥಮ
-ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ
ಹಾವೇರಿ : ಕಳೆದ ಒಂದು ವರ್ಷದಿಂದ ಜನಸಾಮಾನ್ಯರ ಸಮಸ್ಯೆಗಳನ್ನು ಕಾಲ ಮಿತಿಯೊಳಗೆ ಇತ್ಯರ್ಥಪಡಿಸುವಲ್ಲಿ ಹಾವೇರಿ ಜಿಲ್ಲೆ ಮಹತ್ತರವಾದ ಹೆಜ್ಜೆಯನ್ನಿಟ್ಟಿದೆ. ವಿವಿಧ ಆನ್‌ಲೈನ್ ಸೇವೆಗಳಾದ ಆದಾಯ, ಜಾತಿ ಪ್ರಮಾಣಪತ್ರಗಳು, ಮಾಶಾಸನಗಳು ಸೇರಿದಂತೆ ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ವಿವಿಧ ಸೇವೆಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡುವುದರೊಂದಿಗೆ ರಾಜ್ಯದಲ್ಲಿಯೇ ಜಿಲ್ಲೆ ಮೊದಲನೇ ಸ್ಥಾನಲ್ಲಿದೆ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರು ಹೇಳಿದರು.
ಶಿಗ್ಗಾಂವ ತಹಶೀಲ್ದಾರ ಕಚೇರಿಯಲ್ಲಿ ಶುಕ್ರವಾರ ಜರುಗಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಮಾತನಾಡಿದ ಅವರು, ಕಳೆದ ೩೦ ದಿನಗಳಲ್ಲಿ ಜಿಲ್ಲೆಯ ೧೯ ನಾಡಕಚೇರಿಗಳಲ್ಲಿ ಹಾಗೂ ವಿವಿಧ ಆನ್‌ಲೈನ್ ಕೇಂದ್ರಗಳ ಮೂಲಕ ಸ್ವೀಕೃತವಾದ ಒಟ್ಟು ೨೧,೨೪೯ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.
ಪಹಣಿ ಪತ್ರಿಕೆಯ ಕಾಲಂ ೩ ರಲ್ಲಿನ ಒಟ್ಟು ಕ್ಷೇತ್ರಕ್ಕೂ ಕಾಲಂ ೯ರಲ್ಲಿನ ಕ್ಷೇತ್ರಕ್ಕೂ ಇರುವ ವ್ಯತ್ಯಾಸವಿರುವ ಅಧಿಕ ಪ್ರಕರಣಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದ್ದು, ರಾಜ್ಯದಲ್ಲಿಯೇ ಅತೀ ಕಡಿಮೆ ಬಾಕಿ ಪ್ರಕರಣಗಳಿರುವ ಜಿಲ್ಲೆ ಹಾವೇರಿಯಾಗಿದೆ ಎಂದರು.
ಅದೇರೀತಿ ಸರ್ವೆ ದಾಖಲೆಯ ಕ್ಷೇತ್ರಕ್ಕೂ ಪಹಣಿ ಪತ್ರಿಕೆಯ ಕ್ಷೇತ್ರಕ್ಕೂ ವ್ಯತ್ಯಾಸವಿರುವ ಪಹಣಿಗಳಲ್ಲಿ ೧೧ಇ ನಕ್ಷೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪಹಣಿ ತಿದ್ದುಪಡಿಮಾಡಿ ಸಕಾಲದಲ್ಲಿ ನಕ್ಷೆಗಳನ್ನು ನೀಡುವ ಮೂಲಕ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಸದ್ಯ ಜಿಲ್ಲೆಯಲ್ಲಿ ೨೪೩ ಪ್ರಕರಣಗಳು ಮಾತ್ರ ಬಾಕಿ ಇದ್ದು, ರಾಜ್ಯದಲ್ಲಿ ಅತೀ ಕಡಿಮೆ ಇರುವ ಎರಡನೇ ಜಿಲ್ಲೆಯಾಗಿದೆ. ಈ ಪ್ರಕರಣಗಳನ್ನೂ ಸಹ ತೀವ್ರ ವಿಲೇವಾರಿಗೆ ಕಾರ್ಯತಂತ್ರ ರೂಪಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಆಸ್ತಿಗಳ ಸಂರಕ್ಷಣೆ ಮಾಡಲು ಸರ್ಕಾರವು ಲ್ಯಾಂಡ್ ಬೀಟ್ ಅನ್ನುವ ಹೊಸ ತಂತ್ರಾಂಶದ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶದ ಮೂಲಕ ಗ್ರಾಮ ಆಡಳಿತ ಅಧಿಕಾರಿಯು ಸರ್ಕಾರದ ಎಲ್ಲ ಜಮೀನುಗಳಿಗೆ ಜಿಯೋ ಫೆನ್ಸಿಂಗ್ ಮಾಡಬಹುದಾಗಿರುತ್ತದೆ. ಈ ದಿಶೆಯಲ್ಲಿ ಜಿಲ್ಲೆಯಲ್ಲಿರುವ ೩೫,೨೭೫ ಸರ್ಕಾರಿ ಆಸ್ತಿಗಳ ಪೈಕಿ ಈಗಾಗಲೇ ಶೇ.೮೬.೮೬ ರ? ಅಂದರೆ ೩೦,೬೪೧ ಪ್ರಕರಣಗಳನ್ನು ಸರ್ವೇ ಮಾಡಿ ಜಿಯೋ ಫೆನ್ಸಿಂಗ್ ದಾಖಲಿಸಲಾಗಿದ್ದು, ರಾಜ್ಯದಲ್ಲಿ ೩ನೇ ಸ್ಥಾನದಲ್ಲಿದೆ ಎಂದರು.
ತಕರಾರು ರಹಿತ ಭೂಮಾಲೀಕತ್ವಕ್ಕೆ ಸಂಬಂಧಿಸಿದ ಹಕ್ಕು ಬದಲಾವಣೆಗಳನ್ನು ಈ ಹಿಂದೆ ನೋಟೀಸು ಅವಧಿಯ ನಂತರ ೧೫ ರಿಂದ ೨೦ ದಿನಗಳು ತೆಗೆದುಕೊಳ್ಳಲಾಗುತ್ತಿತ್ತು. ಈ ಕಾಲಾವಧಿಯನ್ನು ನೋಟೀಸು ಅವಧಿ ಮುಕ್ತಾಯದ ಮರುದಿನವೇ ವಿಲೇವಾರಿ ಮಾಡುವ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಹಕ್ಕುಬದಲಾವಣೆಗಳನ್ನು ಮಾಡಲಾಗುತ್ತಿದ್ದು, ಇದರಿಂದಾಗಿ ಸಾರ್ವಜನಿಕರಿಕರಿಗೆ ಸಾಕ? ರೀತಿಯಲ್ಲಿ ಅನುಕೂಲವಾಗಿರುತ್ತದೆ ಎಂದು ಹೇಳಿದರು.
ಇಂದು ವಿವಿಧ ಇಲಾಖೆಗೆ ಸಂಬಂಧಪಟ್ಟಂತೆ ೨೮ ಅರ್ಜಿಗಳನ್ನು ಸ್ವೀಕೃತವಾಗಿದ್ದು, ಈ ಅರ್ಜಿಗಳನ್ನು ೧೫ ದಿನದೊಳಗಾಗಿ ಇತ್ಯರ್ಥಪಡಿಸಬೇಕು. ಅಧಿಕಾರಿಗಳ ಹಂತದಲ್ಲಿ ವಿಲೇಮಾಡುವ ಅರ್ಜಿಗಳನ್ನು ಕೂಡಲೇ ಇತ್ಯರ್ಥಕ್ಕೆ ಕ್ರಮವಹಿಸಬೇಕು. ಸರ್ಕಾರ ಹಂತದಲ್ಲಿ ತೀರ್ಮಾನಿಸುವ ಅರ್ಜಿಗಳ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
೨೮ ಅರ್ಜಿ: ವೈಯಕ್ತಿಕ ಹಾಗೂ ಸಾರ್ವಜನಿಕ ಸಮಸ್ಯೆಗಳ ಒಟ್ಟು ೨೮ ಅರ್ಜಿಗಳ ಪೈಕಿ ಕಂದಾಯ ಇಲಾಖೆ-೮, ಪಂಚಾಯತ್ ರಾಜ್ ಹಾಗೂ ಕೃಷಿ ಇಲಾಖೆಯ ತಲಾ ಎರಡು, ಪುರಸಭೆ, ಸಣ್ಣ ನೀರಾವರಿ ಹಾಗೂ ಆಹಾರ ಇಲಾಖೆಯ ತಲಾ ನಾಲ್ಕು, ಅರಣ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಹೆಸ್ಕಾಂ ಇಲಾಖೆಯ ತಲಾ ಒಂದು ಅರ್ಜಿಗಳು ಸಲ್ಲಿಕೆಯಾಗಿದೆ.
ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಜಿ.ಮುಳ್ಳಳ್ಳಿ, ಸವಣೂರ ಉಪವಿಭಾಗಾಧಿಕಾರಿ ಮಹ್ಮದ್ ಖಿಜರ್, ಶಿಗ್ಗಾಂವ ತಹಶೀಲ್ದಾರ ಸಂತೋಷ್ ಹಿರೇಮಠ, ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

 

LEAVE A REPLY

Please enter your comment!
Please enter your name here

Subscribe

spot_imgspot_img

Popular

ವಿವಿಧ ಆನ್‌ಲೈನ್ ಅರ್ಜಿಗಳ ವಿಲೇವಾರಿಯಲ್ಲಿ ರಾಜ್ಯದಲ್ಲೇ ಹಾವೇರಿ.ಜಿಲ್ಲೆ ಪ್ರಥಮ
-ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ
ಹಾವೇರಿ : ಕಳೆದ ಒಂದು ವರ್ಷದಿಂದ ಜನಸಾಮಾನ್ಯರ ಸಮಸ್ಯೆಗಳನ್ನು ಕಾಲ ಮಿತಿಯೊಳಗೆ ಇತ್ಯರ್ಥಪಡಿಸುವಲ್ಲಿ ಹಾವೇರಿ ಜಿಲ್ಲೆ ಮಹತ್ತರವಾದ ಹೆಜ್ಜೆಯನ್ನಿಟ್ಟಿದೆ. ವಿವಿಧ ಆನ್‌ಲೈನ್ ಸೇವೆಗಳಾದ ಆದಾಯ, ಜಾತಿ ಪ್ರಮಾಣಪತ್ರಗಳು, ಮಾಶಾಸನಗಳು ಸೇರಿದಂತೆ ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ವಿವಿಧ ಸೇವೆಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡುವುದರೊಂದಿಗೆ ರಾಜ್ಯದಲ್ಲಿಯೇ ಜಿಲ್ಲೆ ಮೊದಲನೇ ಸ್ಥಾನಲ್ಲಿದೆ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರು ಹೇಳಿದರು.
ಶಿಗ್ಗಾಂವ ತಹಶೀಲ್ದಾರ ಕಚೇರಿಯಲ್ಲಿ ಶುಕ್ರವಾರ ಜರುಗಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಮಾತನಾಡಿದ ಅವರು, ಕಳೆದ ೩೦ ದಿನಗಳಲ್ಲಿ ಜಿಲ್ಲೆಯ ೧೯ ನಾಡಕಚೇರಿಗಳಲ್ಲಿ ಹಾಗೂ ವಿವಿಧ ಆನ್‌ಲೈನ್ ಕೇಂದ್ರಗಳ ಮೂಲಕ ಸ್ವೀಕೃತವಾದ ಒಟ್ಟು ೨೧,೨೪೯ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.
ಪಹಣಿ ಪತ್ರಿಕೆಯ ಕಾಲಂ ೩ ರಲ್ಲಿನ ಒಟ್ಟು ಕ್ಷೇತ್ರಕ್ಕೂ ಕಾಲಂ ೯ರಲ್ಲಿನ ಕ್ಷೇತ್ರಕ್ಕೂ ಇರುವ ವ್ಯತ್ಯಾಸವಿರುವ ಅಧಿಕ ಪ್ರಕರಣಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದ್ದು, ರಾಜ್ಯದಲ್ಲಿಯೇ ಅತೀ ಕಡಿಮೆ ಬಾಕಿ ಪ್ರಕರಣಗಳಿರುವ ಜಿಲ್ಲೆ ಹಾವೇರಿಯಾಗಿದೆ ಎಂದರು.
ಅದೇರೀತಿ ಸರ್ವೆ ದಾಖಲೆಯ ಕ್ಷೇತ್ರಕ್ಕೂ ಪಹಣಿ ಪತ್ರಿಕೆಯ ಕ್ಷೇತ್ರಕ್ಕೂ ವ್ಯತ್ಯಾಸವಿರುವ ಪಹಣಿಗಳಲ್ಲಿ ೧೧ಇ ನಕ್ಷೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪಹಣಿ ತಿದ್ದುಪಡಿಮಾಡಿ ಸಕಾಲದಲ್ಲಿ ನಕ್ಷೆಗಳನ್ನು ನೀಡುವ ಮೂಲಕ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಸದ್ಯ ಜಿಲ್ಲೆಯಲ್ಲಿ ೨೪೩ ಪ್ರಕರಣಗಳು ಮಾತ್ರ ಬಾಕಿ ಇದ್ದು, ರಾಜ್ಯದಲ್ಲಿ ಅತೀ ಕಡಿಮೆ ಇರುವ ಎರಡನೇ ಜಿಲ್ಲೆಯಾಗಿದೆ. ಈ ಪ್ರಕರಣಗಳನ್ನೂ ಸಹ ತೀವ್ರ ವಿಲೇವಾರಿಗೆ ಕಾರ್ಯತಂತ್ರ ರೂಪಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಆಸ್ತಿಗಳ ಸಂರಕ್ಷಣೆ ಮಾಡಲು ಸರ್ಕಾರವು ಲ್ಯಾಂಡ್ ಬೀಟ್ ಅನ್ನುವ ಹೊಸ ತಂತ್ರಾಂಶದ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶದ ಮೂಲಕ ಗ್ರಾಮ ಆಡಳಿತ ಅಧಿಕಾರಿಯು ಸರ್ಕಾರದ ಎಲ್ಲ ಜಮೀನುಗಳಿಗೆ ಜಿಯೋ ಫೆನ್ಸಿಂಗ್ ಮಾಡಬಹುದಾಗಿರುತ್ತದೆ. ಈ ದಿಶೆಯಲ್ಲಿ ಜಿಲ್ಲೆಯಲ್ಲಿರುವ ೩೫,೨೭೫ ಸರ್ಕಾರಿ ಆಸ್ತಿಗಳ ಪೈಕಿ ಈಗಾಗಲೇ ಶೇ.೮೬.೮೬ ರ? ಅಂದರೆ ೩೦,೬೪೧ ಪ್ರಕರಣಗಳನ್ನು ಸರ್ವೇ ಮಾಡಿ ಜಿಯೋ ಫೆನ್ಸಿಂಗ್ ದಾಖಲಿಸಲಾಗಿದ್ದು, ರಾಜ್ಯದಲ್ಲಿ ೩ನೇ ಸ್ಥಾನದಲ್ಲಿದೆ ಎಂದರು.
ತಕರಾರು ರಹಿತ ಭೂಮಾಲೀಕತ್ವಕ್ಕೆ ಸಂಬಂಧಿಸಿದ ಹಕ್ಕು ಬದಲಾವಣೆಗಳನ್ನು ಈ ಹಿಂದೆ ನೋಟೀಸು ಅವಧಿಯ ನಂತರ ೧೫ ರಿಂದ ೨೦ ದಿನಗಳು ತೆಗೆದುಕೊಳ್ಳಲಾಗುತ್ತಿತ್ತು. ಈ ಕಾಲಾವಧಿಯನ್ನು ನೋಟೀಸು ಅವಧಿ ಮುಕ್ತಾಯದ ಮರುದಿನವೇ ವಿಲೇವಾರಿ ಮಾಡುವ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಹಕ್ಕುಬದಲಾವಣೆಗಳನ್ನು ಮಾಡಲಾಗುತ್ತಿದ್ದು, ಇದರಿಂದಾಗಿ ಸಾರ್ವಜನಿಕರಿಕರಿಗೆ ಸಾಕ? ರೀತಿಯಲ್ಲಿ ಅನುಕೂಲವಾಗಿರುತ್ತದೆ ಎಂದು ಹೇಳಿದರು.
ಇಂದು ವಿವಿಧ ಇಲಾಖೆಗೆ ಸಂಬಂಧಪಟ್ಟಂತೆ ೨೮ ಅರ್ಜಿಗಳನ್ನು ಸ್ವೀಕೃತವಾಗಿದ್ದು, ಈ ಅರ್ಜಿಗಳನ್ನು ೧೫ ದಿನದೊಳಗಾಗಿ ಇತ್ಯರ್ಥಪಡಿಸಬೇಕು. ಅಧಿಕಾರಿಗಳ ಹಂತದಲ್ಲಿ ವಿಲೇಮಾಡುವ ಅರ್ಜಿಗಳನ್ನು ಕೂಡಲೇ ಇತ್ಯರ್ಥಕ್ಕೆ ಕ್ರಮವಹಿಸಬೇಕು. ಸರ್ಕಾರ ಹಂತದಲ್ಲಿ ತೀರ್ಮಾನಿಸುವ ಅರ್ಜಿಗಳ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
೨೮ ಅರ್ಜಿ: ವೈಯಕ್ತಿಕ ಹಾಗೂ ಸಾರ್ವಜನಿಕ ಸಮಸ್ಯೆಗಳ ಒಟ್ಟು ೨೮ ಅರ್ಜಿಗಳ ಪೈಕಿ ಕಂದಾಯ ಇಲಾಖೆ-೮, ಪಂಚಾಯತ್ ರಾಜ್ ಹಾಗೂ ಕೃಷಿ ಇಲಾಖೆಯ ತಲಾ ಎರಡು, ಪುರಸಭೆ, ಸಣ್ಣ ನೀರಾವರಿ ಹಾಗೂ ಆಹಾರ ಇಲಾಖೆಯ ತಲಾ ನಾಲ್ಕು, ಅರಣ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಹೆಸ್ಕಾಂ ಇಲಾಖೆಯ ತಲಾ ಒಂದು ಅರ್ಜಿಗಳು ಸಲ್ಲಿಕೆಯಾಗಿದೆ.
ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಜಿ.ಮುಳ್ಳಳ್ಳಿ, ಸವಣೂರ ಉಪವಿಭಾಗಾಧಿಕಾರಿ ಮಹ್ಮದ್ ಖಿಜರ್, ಶಿಗ್ಗಾಂವ ತಹಶೀಲ್ದಾರ ಸಂತೋಷ್ ಹಿರೇಮಠ, ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

 

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...