ವೀರಪ್ಪ ಹಂಚಿನಮನಿಗೆ ಅಂತರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ೩ ವಿಭಾಗದಲ್ಲಿ ಪ್ರಶಸ್ತಿ

Date:

ವೀರಪ್ಪ ಹಂಚಿನಮನಿಗೆ ಅಂತರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ೩ ವಿಭಾಗದಲ್ಲಿ ಪ್ರಶಸ್ತಿ
ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಮುಳಥಳ್ಳಿ ಗ್ರಾಮದ ನಿವೃತ್ತ ದೈಹಿಕ ಶಿಕ್ಷಕ ವೀರಪ್ಪ ಹಂಚಿನಮನಿ ಥೈಲ್ಯಾಂಡ್‌ನಲ್ಲಿ ನಡೆದ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಮೂರು ವಿಭಾಗಗಳಲ್ಲಿ ತ್ರತೀಯ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡು ಬಂದಿದ್ದಾರೆ.
ಪೆ:೨೭ ರಿಂದ ಮಾರ್ಚ ೧ ರವರೆಗೆ ಥೈಲ್ಯಾಂಡ್‌ನ ಚಾಂಗಮಯಿ ಮುನಿಸಿಪಾಲಿಟಿ ಸ್ಟೇಡಿಯಂನಲ್ಲಿ ನಡೆದ ಮಾಸ್ಟರ್ಸ್ ಅಥ್ಲೆಟಿಕ್ಸ್ (೫೫-೬೦) ಕ್ರೀಡಾಕೂಟದಲ್ಲಿ ವೀರಪ್ಪ ಹಂಚಿನಮನಿ ೧೦೦ಮೀಟರ್ ಓಟದಲ್ಲಿ ತೃತೀಯ, ಜಾವಲಿನ್ ಥ್ರೋದಲ್ಲಿ ದ್ವಿತೀಯ, ಡಿಸ್ಕಸ್ ಥ್ರೋನಲ್ಲಿ,ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಕರ್ನಾಟಕದ೭೨ ಆಟಗಾರರು ಭಾಗವಹಿಸಿದ್ದರು. ಇವರಲ್ಲಿ ಹಂಚಿನಮನಿ ಅವರ ಮೂರು ವಿಭಾಗಗಳಲ್ಲಿ ತ್ರತೀಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ವೀರಪ್ಪ ಹಂಚಿನಮನಿ ಅವರಿಗೆ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಗೆಲ್ಲಬೇಕೆನ್ನುವುದು ಇವರ ಬಹದಿನದ ಕನಸಾಗಿತ್ತು. ಆದರೆ ಅವಕಾಶ ದೊರೆತಿರಲಿಲ್ಲ. ಈ ಮೊದಲು ಧಾರವಾಡದಲ್ಲಿ ಮಾಸ್ಟರ್ಸ್ ಗೇಮ್ ಫೆಡರೇಶನ್ ಆಯೋಜಿಸಿದ್ದ ಕರ್ನಾಟಕ ಮುಕ್ತ ರಾಷ್ಟ್ರೀಯ ಮಾಸ್ಟರ್ಸ್-೨೦೨೩ರಲ್ಲಿ ನಾಲ್ಕು ಪ್ರಶಸ್ತಿ ಯಲ್ಲಿ ಗೆದ್ದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದ ಇವರು ಥೈಲ್ಯಾಂಡ್‌ನಲ್ಲಿ ನಡೆಯುವ ಅಂತರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡೆಯ ಬಗ್ಗೆ ಆನಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇವರ ದಾಖಲೆಗಳನ್ನು ಪರಿಶೀಲಿಸಿದ ಅಂತರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಸಂಸ್ಥೆಯವರು ಇವರನ್ನು ಥೈಲ್ಯಾಂಡ್‌ನಲ್ಲಿ ನಡೆದ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಮಾಡಿದ್ದರು.
ಥೈಲ್ಯಾಂಡ್‌ಗೆ ಹೋಗಿ ಬರಲು ಖರ್ಚಿಗೆ ಸಂಬಂಧಿಸಿದಂತೆ ಕ್ರೀಡೆ ಆಯೋಜಕರು ಅರ್ಧ ಹಣಕಾಸಿನ ವ್ಯವಸ್ಥೆ ಮಾಡಿದ್ದರು. ಉಳಿದ ಹಣ ಹೊಂದಿಸಲು ಸಮಸ್ಯೆ ಎದುರಾದ ವೇಳೆ ಇವರ ನೆರವಿಗೆ ಧಾವಿಸಿದವರು ಹುಬ್ಬಳ್ಳಿಯ ಬಿಇಓ ಕೆಂಚಪ್ಪಗೌಡ್ರ,ಹಾವೇರಿಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಿವೃತ್ತ ಉಪನ್ಯಾಸಕರಾದ ಎನ್. ಕೆಂಚವೀರಪ್ಪ, ಕಂಬಾಳಿಮಠ, ಬನ್ನೂರ,ಹಾಗೂ ಮೃತ್ಯಂಜಯ ಹಿರೇಮಠ, ವೀರಭದ್ರಪ್ಪ ಮತ್ತಿಹಳ್ಳಿ, ಮಲ್ಲಪ್ಪ ಪೂಜಾರ್,1983.84 ನೇ ಸಾಲಿನ್ NCJC ಪ್ರೌಢಶಾಲಾ ಹಾನಗಲ್ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳ ಸಹಾಯ ಸಹಕಾರ, ಶ್ರೀಮತಿ ರೂಪ ಕೆಂಭಾವಿ ಸಹಶಿಕ್ಷಕಿ ಹುಬ್ಬಳ್ಳಿ.ಶ್ರೀಮತಿ ಶಾರದಾ ಪಾಟೀಲ. ಹಾವೇರಿ ಅವರು.ಹಂಚಿನಮನಿ ಅವರು ಮುಖ್ಯ ಶಿಕ್ಷಕರಾಗಿ ಸೇವೆಸಲ್ಲಿಸಿದ್ದ ಹುಬ್ಬಳ್ಳಿಯ ರಾಮನಗರದ ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆಯ ಸಿಬ್ಬಂದಿ ಆರ್ಥಿಕ ನೆರವು ನೀಡಿದ್ದರು.

ಸ್ನೇಹಿತರ , ಹಿತೈಷಿಗಳ ಸಹಕಾರದಿಂದ ಥೈಲ್ಯಾಂಡ್‌ಗೆ ತೆರಳಿದ ಹಂಚಿನಮನಿ ಅವರು ಕ್ರೀಡಾ ಕೂಟದ ಮೂರು ವಿಭಾಗಗಳಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿ, ಫಲಕಗಳನ್ನು ಮುಡಿಗೇರಿಸಿಕೊಂಡು ತಮ್ಮ ಬಹುದಿನದ ಕನಸನ್ನು ನನಸುಮಾಡಿಕೊಂಡು ತಾಯಿನಾಡಿಗೆ ಮರಳಿದರು.
ವೀರಪ್ಪ ಹಂಚಿನಮನಿ ಮೂಲತಃ ಹಾನಗಲ್ ತಾಲೂಕಿನ ಪುಟ್ಟ ಗ್ರಾಮ ಮುಳಥಳ್ಳಿಗ್ರಾಮದವರಾಗಿದ್ದು, ಗುಡ್ಡಗಾಡು ಭಾಗದ, ಹಿಂದುಳಿದ ಪ್ರದೇಶದ ಪ್ರತಿಭೆಯಾಗಿ ಹೊರಹೊಮ್ಮಿ ಇಲ್ಲಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದ್ದಾರೆ. ಇವರ ಸಾಧನೆಗೆ ಇವರ ಪತ್ನಿ ಲಕ್ಷ್ಮೀಯವರು, ಹಾಗೂ ಇವರ ಸಹೋದರ ಡಾ.ರಾಮಪ್ಪ ರೇಣುಕಾ ದಂಪತಿಗಳು ಮತ್ತು ಮಕ್ಕಳು, ಬಂಧುಗಳ, ಸ್ನೇಹಿತರ ಸಹಕಾರವನ್ನು ಸ್ಮರಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ವೀರಪ್ಪ ಹಂಚಿನಮನಿಗೆ ಅಂತರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ೩ ವಿಭಾಗದಲ್ಲಿ ಪ್ರಶಸ್ತಿ
ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಮುಳಥಳ್ಳಿ ಗ್ರಾಮದ ನಿವೃತ್ತ ದೈಹಿಕ ಶಿಕ್ಷಕ ವೀರಪ್ಪ ಹಂಚಿನಮನಿ ಥೈಲ್ಯಾಂಡ್‌ನಲ್ಲಿ ನಡೆದ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಮೂರು ವಿಭಾಗಗಳಲ್ಲಿ ತ್ರತೀಯ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡು ಬಂದಿದ್ದಾರೆ.
ಪೆ:೨೭ ರಿಂದ ಮಾರ್ಚ ೧ ರವರೆಗೆ ಥೈಲ್ಯಾಂಡ್‌ನ ಚಾಂಗಮಯಿ ಮುನಿಸಿಪಾಲಿಟಿ ಸ್ಟೇಡಿಯಂನಲ್ಲಿ ನಡೆದ ಮಾಸ್ಟರ್ಸ್ ಅಥ್ಲೆಟಿಕ್ಸ್ (೫೫-೬೦) ಕ್ರೀಡಾಕೂಟದಲ್ಲಿ ವೀರಪ್ಪ ಹಂಚಿನಮನಿ ೧೦೦ಮೀಟರ್ ಓಟದಲ್ಲಿ ತೃತೀಯ, ಜಾವಲಿನ್ ಥ್ರೋದಲ್ಲಿ ದ್ವಿತೀಯ, ಡಿಸ್ಕಸ್ ಥ್ರೋನಲ್ಲಿ,ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಕರ್ನಾಟಕದ೭೨ ಆಟಗಾರರು ಭಾಗವಹಿಸಿದ್ದರು. ಇವರಲ್ಲಿ ಹಂಚಿನಮನಿ ಅವರ ಮೂರು ವಿಭಾಗಗಳಲ್ಲಿ ತ್ರತೀಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ವೀರಪ್ಪ ಹಂಚಿನಮನಿ ಅವರಿಗೆ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಗೆಲ್ಲಬೇಕೆನ್ನುವುದು ಇವರ ಬಹದಿನದ ಕನಸಾಗಿತ್ತು. ಆದರೆ ಅವಕಾಶ ದೊರೆತಿರಲಿಲ್ಲ. ಈ ಮೊದಲು ಧಾರವಾಡದಲ್ಲಿ ಮಾಸ್ಟರ್ಸ್ ಗೇಮ್ ಫೆಡರೇಶನ್ ಆಯೋಜಿಸಿದ್ದ ಕರ್ನಾಟಕ ಮುಕ್ತ ರಾಷ್ಟ್ರೀಯ ಮಾಸ್ಟರ್ಸ್-೨೦೨೩ರಲ್ಲಿ ನಾಲ್ಕು ಪ್ರಶಸ್ತಿ ಯಲ್ಲಿ ಗೆದ್ದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದ ಇವರು ಥೈಲ್ಯಾಂಡ್‌ನಲ್ಲಿ ನಡೆಯುವ ಅಂತರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡೆಯ ಬಗ್ಗೆ ಆನಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇವರ ದಾಖಲೆಗಳನ್ನು ಪರಿಶೀಲಿಸಿದ ಅಂತರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಸಂಸ್ಥೆಯವರು ಇವರನ್ನು ಥೈಲ್ಯಾಂಡ್‌ನಲ್ಲಿ ನಡೆದ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಮಾಡಿದ್ದರು.
ಥೈಲ್ಯಾಂಡ್‌ಗೆ ಹೋಗಿ ಬರಲು ಖರ್ಚಿಗೆ ಸಂಬಂಧಿಸಿದಂತೆ ಕ್ರೀಡೆ ಆಯೋಜಕರು ಅರ್ಧ ಹಣಕಾಸಿನ ವ್ಯವಸ್ಥೆ ಮಾಡಿದ್ದರು. ಉಳಿದ ಹಣ ಹೊಂದಿಸಲು ಸಮಸ್ಯೆ ಎದುರಾದ ವೇಳೆ ಇವರ ನೆರವಿಗೆ ಧಾವಿಸಿದವರು ಹುಬ್ಬಳ್ಳಿಯ ಬಿಇಓ ಕೆಂಚಪ್ಪಗೌಡ್ರ,ಹಾವೇರಿಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಿವೃತ್ತ ಉಪನ್ಯಾಸಕರಾದ ಎನ್. ಕೆಂಚವೀರಪ್ಪ, ಕಂಬಾಳಿಮಠ, ಬನ್ನೂರ,ಹಾಗೂ ಮೃತ್ಯಂಜಯ ಹಿರೇಮಠ, ವೀರಭದ್ರಪ್ಪ ಮತ್ತಿಹಳ್ಳಿ, ಮಲ್ಲಪ್ಪ ಪೂಜಾರ್,1983.84 ನೇ ಸಾಲಿನ್ NCJC ಪ್ರೌಢಶಾಲಾ ಹಾನಗಲ್ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳ ಸಹಾಯ ಸಹಕಾರ, ಶ್ರೀಮತಿ ರೂಪ ಕೆಂಭಾವಿ ಸಹಶಿಕ್ಷಕಿ ಹುಬ್ಬಳ್ಳಿ.ಶ್ರೀಮತಿ ಶಾರದಾ ಪಾಟೀಲ. ಹಾವೇರಿ ಅವರು.ಹಂಚಿನಮನಿ ಅವರು ಮುಖ್ಯ ಶಿಕ್ಷಕರಾಗಿ ಸೇವೆಸಲ್ಲಿಸಿದ್ದ ಹುಬ್ಬಳ್ಳಿಯ ರಾಮನಗರದ ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆಯ ಸಿಬ್ಬಂದಿ ಆರ್ಥಿಕ ನೆರವು ನೀಡಿದ್ದರು.

ಸ್ನೇಹಿತರ , ಹಿತೈಷಿಗಳ ಸಹಕಾರದಿಂದ ಥೈಲ್ಯಾಂಡ್‌ಗೆ ತೆರಳಿದ ಹಂಚಿನಮನಿ ಅವರು ಕ್ರೀಡಾ ಕೂಟದ ಮೂರು ವಿಭಾಗಗಳಲ್ಲಿ ತೃತೀಯ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿ, ಫಲಕಗಳನ್ನು ಮುಡಿಗೇರಿಸಿಕೊಂಡು ತಮ್ಮ ಬಹುದಿನದ ಕನಸನ್ನು ನನಸುಮಾಡಿಕೊಂಡು ತಾಯಿನಾಡಿಗೆ ಮರಳಿದರು.
ವೀರಪ್ಪ ಹಂಚಿನಮನಿ ಮೂಲತಃ ಹಾನಗಲ್ ತಾಲೂಕಿನ ಪುಟ್ಟ ಗ್ರಾಮ ಮುಳಥಳ್ಳಿಗ್ರಾಮದವರಾಗಿದ್ದು, ಗುಡ್ಡಗಾಡು ಭಾಗದ, ಹಿಂದುಳಿದ ಪ್ರದೇಶದ ಪ್ರತಿಭೆಯಾಗಿ ಹೊರಹೊಮ್ಮಿ ಇಲ್ಲಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದ್ದಾರೆ. ಇವರ ಸಾಧನೆಗೆ ಇವರ ಪತ್ನಿ ಲಕ್ಷ್ಮೀಯವರು, ಹಾಗೂ ಇವರ ಸಹೋದರ ಡಾ.ರಾಮಪ್ಪ ರೇಣುಕಾ ದಂಪತಿಗಳು ಮತ್ತು ಮಕ್ಕಳು, ಬಂಧುಗಳ, ಸ್ನೇಹಿತರ ಸಹಕಾರವನ್ನು ಸ್ಮರಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...