ಶಿಗ್ಗಾವಿಯಲ್ಲಿ ಹಾಡಹಗಲೇ ಗುತ್ತಿಗೆದಾರನ ಭೀಕರ ಹತ್ಯೆ..!

Date:

ಶಿಗ್ಗಾವಿಯಲ್ಲಿ ಹಾಡಹಗಲೇ ಗುತ್ತಿಗೆದಾರನ ಭೀಕರ ಹತ್ಯೆ..!
ಹಾವೇರಿ:ಜಿಲ್ಲೆಯಲ್ಲಿ ದಿನ ನಿತ್ಯ ಅಪರಾಧಕೃತ್ಯಗಳು ನಡೆಯುತ್ತಲೇ ಇದ್ದು, ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಪ್ರಮುಖ ಸರ್ಕಲ್ ನಲ್ಲಿ ಜೂ.೨೪ರಂದು ಮಂಗಳವಾರ ಮಧ್ಯಾಹ್ನ ೨ಕ್ಕೆ ಪ್ರಥಮ ದರ್ಜೆ ಗುತ್ತಿಗೆದಾರನನ್ನು  ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿ  ಪರಾರಿ ಯಾಗಿದ್ದಾರೆ. ಕೊಲೆಯಾಗಿರುವವನನ್ನು ಗುತ್ತಿಗೆದಾರನಾಗಿದ್ದ ೪೦ ವರ್ಷದ  ಶಿವಾನಂದ ಕುನ್ನೂರು ಎಂದು ತಿಳಿದು ಬಂದಿದೆ. ಇತನ ಜೊತೆಗಿದ್ದ   ಜಂಪನಗೌಡ ಭಯಗೊಂಡು ಶಿಗ್ಗಾಂವಿ ಪೊಲೀಸ್ ಠಾಣೆಗೆ ಓಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಊಟ ಮಾಡಿ ಹೊರಟವನ ರಕ್ತದೋಕುಳಿ: ಶಿವಾನಂದ ಕುನ್ನೂರು ಶಿಗ್ಗಾಂವಿ ಪಟ್ಟಣದ ಕ್ಲಾಸ್ ಒನ್ ಕಾಂಟ್ರಾಕ್ಟರ್‌ಆಗಿದ್ದರು. ಉತ್ತಮ ಸ್ಥಿತಿಯಲ್ಲಿರು. ಮಂಗಳವಾರ ಮಧ್ಯಾಹ್ನ  ದಾಭಾದಲ್ಲಿ  ಊಟ ಮಾಡಿ ಕಾರ್ ಹತ್ತುತ್ತಿದ್ದ ವೇಳೆ ನಾಗರಾಜ ಪ್ರಕಾಶ ಸವದತ್ತಿ ಹಾಗೂ ಈತನ ಸಂಗಡಿಗರಾದ ಹನುಮಂತ , ಅಶ್ರಫ,  ಸುದೀಪ ಸುರೇಶ ಹಾಗೂ ಇತರರು ಸಾ: ಎಲ್ಲರೂ ಶಿಗ್ಗಾವಿ ತಾ: ಶಿಗ್ಗಾವಿ ದುಷ್ಕರ್ಮಿಗಳ ಗುಂಪು ಏಕಾಎಕಿ  ಶಿವಾನಂದ ಮೇಲೆ ಎರಗಿ ಮಾರಕಾಸ್ತ್ರಗಳಿಂದ  ಮನಬಂದಂತೆ . ಕೊಚ್ಚಿ ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದಾರೆ.
ಮಧ್ಯಾಹ್ನ ೨ ಗಂಟೆಗೆ  ಶಿಗ್ಗಾoವಿ ಪಟ್ಟಣದ ಗಂಗಿಬಾವಿ ಸರ್ಕಲ್ ನಲ್ಲಿರುವ ಮಹೇಶ್ ದಾಭಾದಲ್ಲಿ ಊಟ ಮುಗಿಸಿ ಹೊರಬಂದ ಶಿವಾನಂದ ಕುನ್ನೂರು ಮೇಲೆ ೪ ಜನ ಹಂತಕರ ಗುಂಪು  ಕತ್ತು, ತಲೆ , ಎದೆ ಭಾಗಕ್ಕೆ ರಾಡ್, ತಲ್ವಾರ್   ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ದುಷ್ಕರ್ಮಿಗಳು ಓಡಿಹೋಗಿದ್ದಾರೆ. ಈ ವೇಳೆ ಶಿವಾನಂದ ಜೊತೆಗಿದ್ದ ಜಂಪನಗೌಡ ಭಯಗೊಂಡು ಶಿಗ್ಗಾಂವಿ ಪೊಲೀಸ್ ಠಾಣೆಗೆ ಓಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಹತ್ಯೆಯಾದ ಶಿವಾನಂದ ಕುನ್ನೂರು ಹಲವು ಜನರೊಂದಿಗೆ ಹಣಕಾಸು ವ್ಯವಹಾರ ಹೊಂದಿದ್ದರೆಂದು, ಕೆಲವು ವರ್ಷಗಳ ಹಿಂದೆ ಶಿಗ್ಗಾವಿ ಪಟ್ಟಣದಲ್ಲಿ ೧ ಗುಂಟೆ ಜಾಗ ಖರೀದಿ ಮಾಡಿದ್ದು, ಜಾಗ ಖರೀದಿ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದವು. ಜಾಗದ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು ಎನ್ನಲಾಗಿದೆ. ನ್ಯಾಯಾಲಯದಲ್ಲಿಯೂ ಶಿವಾನಂದ ಕುನ್ನೂರು ಜಯ ಸಾಧಿಸಿದ್ರು ಎನ್ನಲಾಗಿದೆ.
ಜಾಗದ ವಿಚಾರದಲ್ಲಿ ಶಿವಾನಂದ ವಿರೋಧಿಗಳು ದುಷ್ಮನಿ ಮುಂದುವರೆಸಿದ್ದರು. ಈ ಬಗ್ಗೆ ಶಿಗ್ಗಾಂವಿ ಪೊಲೀಸ್ ಠಾಣೆಗೆ ಶಿವಾನಂದ ದೂರು ನೀಡಲು ಮುಂದಾಗಿದ್ದರೆಂದು, ಈ ವಿಚಾರ ಗೊತ್ತಾಗ್ತಿದ್ದಂತೆ ಶಿವಾನಂದ ಕುನ್ನೂರು ಜೊತೆ ಭಿನ್ನಾಭಿಪ್ರಾಯ ಹೊಂದಿದ್ದ ವಿರೋಧಿಗಳೇ ಸುಪಾರಿ ಕೊಟ್ಟು  ಶಿವಾನಂದ ಕುನ್ನೂರು ಹತ್ಯೆ ಮಾಡಿಸಿದ್ದಾರೆ ಎಂದು ಶಿವಾನಂದ ರ ಕುಟುಂಬಸ್ಥರು ಆರೋಪಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ಮೂರು ತಂಡ ರಚನೆ: ಗುತ್ತಿಗೆದಾರ ಶಿವಾನಂದ ಕುನ್ನೂರು ಹತ್ಯೆ ಮಾಡಿರುವ ಆರೋಪಿಗಳ ಬಂಧನಕ್ಕೆ  ಸದ್ಯ ಪೊಲೀಸರ ೩ ತಂಡಗಳನ್ನು ರಚಿಸಲಾಗಿದ್ದು, ಹಂತಕರ ಪತ್ತೆಗೆ  ತಂಡ ಕಾರ್ಯನಿರತವಾಗಿದೆ ಎಂದು ಜಿಲ್ಲಾ ಒಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ತಿಳಿಸಿದ್ದಾರೆ.
 ಮೃತ ಶಿವಾನಂದ ಹಾಗೂ ಆರೋಪಿತರ ಮಧ್ಯ ತಿಗ್ಗಾವಿ ಟಿ.ಎಮ್.ಸಿ ನಂಬರ 1443/ಆ ಇ-ಸ್ವತ್ತು ನಂಬರ 10-1-106 ಕ್ಷೇತ್ರ 11+70* ನೇದವುಗಳ ವಿಷಯವಾಗಿ ತಂಟೆ ತಕರಾರುಗಳು ಇದ್ದು, ಇದೇ ವಿಷಯವಾಗಿ ಆರೋಫಿತರು   ದ್ವೇಷ ಸಾದಿಸುತ್ತಾ ಬಂದಿದ್ದು, ಅದೇ ದ್ವೇಷದಿಂದ ಈ ದಿವಸ ದಿನಾಂಕ: 24-06-2025 ರಂದು ಮಧ್ಯಾಹ್ನ 2-30 ಗಂಟೆಯಿಂದ 2-45 ಗಂಟೆ ನಡುವಿನ ಅವಧಿಯಲ್ಲಿ
ಶಿವಾನಂದ ಅವರನ್ನು ಶಿಗ್ಗಾವಿಯ ಮಹೇಶ ದಾಬಾದಲ್ಲಿ ಊಟ ಮಾಡಿ ತನ್ನ ಕಾರ ಹತ್ತಿರ ಬಂದಾಗ ಆರೋಪಿತರೆಲ್ಲರೂ ಸಂಗನ ಮತ ಮಾಡಿಕೊಂಡು . ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಕೊಲೆಮಾಡಿದ್ದಾರೆ. ಈ ಬಗ್ಗೆ

LEAVE A REPLY

Please enter your comment!
Please enter your name here

Subscribe

spot_imgspot_img

Popular

ಶಿಗ್ಗಾವಿಯಲ್ಲಿ ಹಾಡಹಗಲೇ ಗುತ್ತಿಗೆದಾರನ ಭೀಕರ ಹತ್ಯೆ..!
ಹಾವೇರಿ:ಜಿಲ್ಲೆಯಲ್ಲಿ ದಿನ ನಿತ್ಯ ಅಪರಾಧಕೃತ್ಯಗಳು ನಡೆಯುತ್ತಲೇ ಇದ್ದು, ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಪ್ರಮುಖ ಸರ್ಕಲ್ ನಲ್ಲಿ ಜೂ.೨೪ರಂದು ಮಂಗಳವಾರ ಮಧ್ಯಾಹ್ನ ೨ಕ್ಕೆ ಪ್ರಥಮ ದರ್ಜೆ ಗುತ್ತಿಗೆದಾರನನ್ನು  ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿ  ಪರಾರಿ ಯಾಗಿದ್ದಾರೆ. ಕೊಲೆಯಾಗಿರುವವನನ್ನು ಗುತ್ತಿಗೆದಾರನಾಗಿದ್ದ ೪೦ ವರ್ಷದ  ಶಿವಾನಂದ ಕುನ್ನೂರು ಎಂದು ತಿಳಿದು ಬಂದಿದೆ. ಇತನ ಜೊತೆಗಿದ್ದ   ಜಂಪನಗೌಡ ಭಯಗೊಂಡು ಶಿಗ್ಗಾಂವಿ ಪೊಲೀಸ್ ಠಾಣೆಗೆ ಓಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಊಟ ಮಾಡಿ ಹೊರಟವನ ರಕ್ತದೋಕುಳಿ: ಶಿವಾನಂದ ಕುನ್ನೂರು ಶಿಗ್ಗಾಂವಿ ಪಟ್ಟಣದ ಕ್ಲಾಸ್ ಒನ್ ಕಾಂಟ್ರಾಕ್ಟರ್‌ಆಗಿದ್ದರು. ಉತ್ತಮ ಸ್ಥಿತಿಯಲ್ಲಿರು. ಮಂಗಳವಾರ ಮಧ್ಯಾಹ್ನ  ದಾಭಾದಲ್ಲಿ  ಊಟ ಮಾಡಿ ಕಾರ್ ಹತ್ತುತ್ತಿದ್ದ ವೇಳೆ ನಾಗರಾಜ ಪ್ರಕಾಶ ಸವದತ್ತಿ ಹಾಗೂ ಈತನ ಸಂಗಡಿಗರಾದ ಹನುಮಂತ , ಅಶ್ರಫ,  ಸುದೀಪ ಸುರೇಶ ಹಾಗೂ ಇತರರು ಸಾ: ಎಲ್ಲರೂ ಶಿಗ್ಗಾವಿ ತಾ: ಶಿಗ್ಗಾವಿ ದುಷ್ಕರ್ಮಿಗಳ ಗುಂಪು ಏಕಾಎಕಿ  ಶಿವಾನಂದ ಮೇಲೆ ಎರಗಿ ಮಾರಕಾಸ್ತ್ರಗಳಿಂದ  ಮನಬಂದಂತೆ . ಕೊಚ್ಚಿ ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದಾರೆ.
ಮಧ್ಯಾಹ್ನ ೨ ಗಂಟೆಗೆ  ಶಿಗ್ಗಾoವಿ ಪಟ್ಟಣದ ಗಂಗಿಬಾವಿ ಸರ್ಕಲ್ ನಲ್ಲಿರುವ ಮಹೇಶ್ ದಾಭಾದಲ್ಲಿ ಊಟ ಮುಗಿಸಿ ಹೊರಬಂದ ಶಿವಾನಂದ ಕುನ್ನೂರು ಮೇಲೆ ೪ ಜನ ಹಂತಕರ ಗುಂಪು  ಕತ್ತು, ತಲೆ , ಎದೆ ಭಾಗಕ್ಕೆ ರಾಡ್, ತಲ್ವಾರ್   ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ದುಷ್ಕರ್ಮಿಗಳು ಓಡಿಹೋಗಿದ್ದಾರೆ. ಈ ವೇಳೆ ಶಿವಾನಂದ ಜೊತೆಗಿದ್ದ ಜಂಪನಗೌಡ ಭಯಗೊಂಡು ಶಿಗ್ಗಾಂವಿ ಪೊಲೀಸ್ ಠಾಣೆಗೆ ಓಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಹತ್ಯೆಯಾದ ಶಿವಾನಂದ ಕುನ್ನೂರು ಹಲವು ಜನರೊಂದಿಗೆ ಹಣಕಾಸು ವ್ಯವಹಾರ ಹೊಂದಿದ್ದರೆಂದು, ಕೆಲವು ವರ್ಷಗಳ ಹಿಂದೆ ಶಿಗ್ಗಾವಿ ಪಟ್ಟಣದಲ್ಲಿ ೧ ಗುಂಟೆ ಜಾಗ ಖರೀದಿ ಮಾಡಿದ್ದು, ಜಾಗ ಖರೀದಿ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದವು. ಜಾಗದ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು ಎನ್ನಲಾಗಿದೆ. ನ್ಯಾಯಾಲಯದಲ್ಲಿಯೂ ಶಿವಾನಂದ ಕುನ್ನೂರು ಜಯ ಸಾಧಿಸಿದ್ರು ಎನ್ನಲಾಗಿದೆ.
ಜಾಗದ ವಿಚಾರದಲ್ಲಿ ಶಿವಾನಂದ ವಿರೋಧಿಗಳು ದುಷ್ಮನಿ ಮುಂದುವರೆಸಿದ್ದರು. ಈ ಬಗ್ಗೆ ಶಿಗ್ಗಾಂವಿ ಪೊಲೀಸ್ ಠಾಣೆಗೆ ಶಿವಾನಂದ ದೂರು ನೀಡಲು ಮುಂದಾಗಿದ್ದರೆಂದು, ಈ ವಿಚಾರ ಗೊತ್ತಾಗ್ತಿದ್ದಂತೆ ಶಿವಾನಂದ ಕುನ್ನೂರು ಜೊತೆ ಭಿನ್ನಾಭಿಪ್ರಾಯ ಹೊಂದಿದ್ದ ವಿರೋಧಿಗಳೇ ಸುಪಾರಿ ಕೊಟ್ಟು  ಶಿವಾನಂದ ಕುನ್ನೂರು ಹತ್ಯೆ ಮಾಡಿಸಿದ್ದಾರೆ ಎಂದು ಶಿವಾನಂದ ರ ಕುಟುಂಬಸ್ಥರು ಆರೋಪಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ಮೂರು ತಂಡ ರಚನೆ: ಗುತ್ತಿಗೆದಾರ ಶಿವಾನಂದ ಕುನ್ನೂರು ಹತ್ಯೆ ಮಾಡಿರುವ ಆರೋಪಿಗಳ ಬಂಧನಕ್ಕೆ  ಸದ್ಯ ಪೊಲೀಸರ ೩ ತಂಡಗಳನ್ನು ರಚಿಸಲಾಗಿದ್ದು, ಹಂತಕರ ಪತ್ತೆಗೆ  ತಂಡ ಕಾರ್ಯನಿರತವಾಗಿದೆ ಎಂದು ಜಿಲ್ಲಾ ಒಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ತಿಳಿಸಿದ್ದಾರೆ.
 ಮೃತ ಶಿವಾನಂದ ಹಾಗೂ ಆರೋಪಿತರ ಮಧ್ಯ ತಿಗ್ಗಾವಿ ಟಿ.ಎಮ್.ಸಿ ನಂಬರ 1443/ಆ ಇ-ಸ್ವತ್ತು ನಂಬರ 10-1-106 ಕ್ಷೇತ್ರ 11+70* ನೇದವುಗಳ ವಿಷಯವಾಗಿ ತಂಟೆ ತಕರಾರುಗಳು ಇದ್ದು, ಇದೇ ವಿಷಯವಾಗಿ ಆರೋಫಿತರು   ದ್ವೇಷ ಸಾದಿಸುತ್ತಾ ಬಂದಿದ್ದು, ಅದೇ ದ್ವೇಷದಿಂದ ಈ ದಿವಸ ದಿನಾಂಕ: 24-06-2025 ರಂದು ಮಧ್ಯಾಹ್ನ 2-30 ಗಂಟೆಯಿಂದ 2-45 ಗಂಟೆ ನಡುವಿನ ಅವಧಿಯಲ್ಲಿ
ಶಿವಾನಂದ ಅವರನ್ನು ಶಿಗ್ಗಾವಿಯ ಮಹೇಶ ದಾಬಾದಲ್ಲಿ ಊಟ ಮಾಡಿ ತನ್ನ ಕಾರ ಹತ್ತಿರ ಬಂದಾಗ ಆರೋಪಿತರೆಲ್ಲರೂ ಸಂಗನ ಮತ ಮಾಡಿಕೊಂಡು . ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಕೊಲೆಮಾಡಿದ್ದಾರೆ. ಈ ಬಗ್ಗೆ

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಎಸ್‌ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ-ಜಿಲ್ಲಾ ಜಾಗೃತಿ ಸಮಿತಿಗೆ ನೇಮಕ  

ಎಸ್‌ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ-ಜಿಲ್ಲಾ ಜಾಗೃತಿ ಸಮಿತಿಗೆ ನೇಮಕ   ಹಾವೇರಿ: ಪರಿಶಿಷ್ಟ ಜಾತಿ-...

ಇನಸ್ಟಾಗ್ರಾಮ್ ಜ್ಯೋತಿಷಿಗಳಿಂದ ಹಾವೇರಿಯ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿಗೆ ೧೫ ಲಕ್ಷರೂ ವಂಚನೆ

ಇನಸ್ಟಾಗ್ರಾಮ್ ಜ್ಯೋತಿಷಿಗಳಿಂದ ಹಾವೇರಿಯ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿಗೆ ೧೫ ಲಕ್ಷರೂ ವಂಚನೆ ಹಾವೇರಿ:...

ಬಮೂಲ್ ನೂತನ ಅಧ್ಯಕ್ಷ ಡಿ.ಕೆ.ಸುರೇಶ್‌ಗೆ ಸನ್ಮಾನ

ಬಮೂಲ್ ನೂತನ ಅಧ್ಯಕ್ಷ ಡಿ.ಕೆ.ಸುರೇಶ್‌ಗೆ ಸನ್ಮಾನ ಹಾವೇರಿ; ಬಮೂಲ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ...