ಸಂಘಟನೆ, ಹೋರಾಟದಿಂದ ಕಾರ್ಮಿಕರು ಹಕ್ಕುಪಡೆಯಲು ಸಾಧ್ಯ: ದಾವಲಸಾಬ

Date:


ಸಂಘಟನೆ, ಹೋರಾಟದಿಂದ ಕಾರ್ಮಿಕರು ಹಕ್ಕುಪಡೆಯಲು ಸಾಧ್ಯ: ದಾವಲಸಾಬ
ಹಾವೇರಿ: ಇಲ್ಲಿನ ಪ್ರಮುಖ ಕಾರ್ಮಿಕರ ಸಂಘಟನೆಯಾಗಿರುವ ಹಾವೇರಿ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ಪದಾಧಿಕಾರಿಗಳು ಮೇ.೧ ರಂದು ಬಧವಾರ ಬೆಳಿಗ್ಗೆ ವಿಶ್ವಕಾರ್ಮಿಕರ ದಿನಾಚರಣೆಯನ್ನು ಕಾರ್ಮಿಕರ ವೃತ್ತ ಎಂದೆ ಹೆಸರಾಗಿರುವ ಸುಭಾಸ್ ಸರ್ಕಲ್‌ನಲ್ಲಿ ನೂರಾರು ಕಾರ್ಮಿಕರಿಗೆ ಸಿಹಿ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ಅಧ್ಯಕ್ಷ ದಾವಲಸಾಬ ಹಿರೇಮೂಗದೂರ ಮಾತನಾಡಿ ಎಲ್ಲಾ ಶ್ರಮಜೀವಿಗಳನ್ನು ನೆನೆದು ವಿಶ್ವ ಕಾರ್ಮಿಕ ದಿನಚಾರಣೆಯನ್ನು ಆಚರಿಸುತ್ತೇವೆ. ಆದರೆ ದುಡಿಯವ ವರ್ಗದವರ ಭವಣೆ ನಿಂತಿಲ್ಲ. ಕಾರ್ಮಿಕರಿಗಾಗಿ ಸರ್ಕಾರದ ಹತ್ತಾರು ಸೌಲಭ್ಯಗಳಿವೆ. ಆದರೆ ಸಂಘಟನೆ ಮತ್ತು ಹೋರಾಟದ ಕೊರತೆಯಿಂದ ಅರ್ಹ ಕಾರ್ಮಿಕರಿಗೆ ಹಕ್ಕುಗಳು ದೊರೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನಕಲಿ ಕಾರ್ಮಿಕ ಕಾರ್ಡನೆಪದಲ್ಲಿ ಹಾವೇರಿಜಿಲ್ಲೆಯ ಕಾರ್ಮಿಕ ಇಲಾಖೆಯ ಅಧಿಕಾರಿಗಳು ನೂರಾರು ಅರ್ಹ ಕಾರ್ಮಿಕರ ಕಾರ್ಡುಗಳನ್ನು ರದ್ದುಮಾಡುವ ಮೂಲಕ ಶ್ರಮಜೀವಿಗಳಿಗೆ ಅನ್ಯಾಯಮಾಡಿದ್ದಾರೆ. ಅರ್ಹ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ದೊರಯಲೇ ಬೇಕು, ನಾವು ಯಾರ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲ. ಅರ್ಹ ಕಾರ್ಮಿರಿಗೆ ಸರ್ಕಾರದಿಂದ ಸಿಗಬೇಕಾದ ನ್ಯಾಯಯುತ ಹಕ್ಕುಗಳನ್ನು ಕೇಳುತ್ತಿದ್ದೇವೆ. ನಾವು ಸಂಘಟಿತರಾಗಿ ಹೋರಾಟ ಮಾಡಿದರೆ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ಪದಾಧಿಕಾರಿಗಳು ಕಾರ್ಮಿಕರು ಕಾರ್ಯನಿರ್ವಹಿಸುವ ಸ್ಥಳಗಳಿಗೆ ತೆರಳಿ ಅವರಿಗೆ ಸಿಹಿ ಹಂಚುವ ಮೂಲಕ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ದಿನಾಚರಣೆಯ ಶುಭಕೋರಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿದರು.
ಈ ವೇಳೆ ಹಾವೇರಿ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಾರ್ಮಿಕರ ಸಂಘದ ಮುಖಂಡರುಗಳಾದ ನಜೀರಸಾಬ ಪಟೇಲ, ಗುಲ್ಜಾರ ಗಣಜೂರ, ಸಂಜೀವಪ್ಪ ಹರಪನಹಳ್ಳಿ, ಹಸನಸಾಬ ಗಣಜೂರ, ಕುಮಾರಸ್ವಾಮಿ ಹಿರೇಮಠ,ನಾಗರಾಜ ಮಲಗೋಡ, ಮಕಬೂಲಹ್ಮದ ಇನಾಮದಾರ, ಮಾರುತಿ ಕದರಮಂಡಲಗಿ, ರಿಯಾಜ ಅಹ್ಮದ ಕೊಟ್ಟಿಗೇರಿ, ಮಹಮ್ಮದ ರಫೀಕ ದೇವಗಿರಿ, ಗೌಸಅಹ್ಮದ ದೇವಿಹೊಸೂರ, ಅಹ್ಮದ ಪಟೇಲ, ಅಬ್ದುಲ್‌ಕರಿಮಸಾಬ ಸವಣೂರ, ಅಹ್ಮದಬಾಷಾ ಕತೂರ, ಹಜರತ್‌ಅಲಿ ಶೇಕಸನದಿ, ಇಮಾಮಹುಸೇನ ಹತ್ತಿಮತ್ತೂರ ಮೊದಲಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular


ಸಂಘಟನೆ, ಹೋರಾಟದಿಂದ ಕಾರ್ಮಿಕರು ಹಕ್ಕುಪಡೆಯಲು ಸಾಧ್ಯ: ದಾವಲಸಾಬ
ಹಾವೇರಿ: ಇಲ್ಲಿನ ಪ್ರಮುಖ ಕಾರ್ಮಿಕರ ಸಂಘಟನೆಯಾಗಿರುವ ಹಾವೇರಿ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ಪದಾಧಿಕಾರಿಗಳು ಮೇ.೧ ರಂದು ಬಧವಾರ ಬೆಳಿಗ್ಗೆ ವಿಶ್ವಕಾರ್ಮಿಕರ ದಿನಾಚರಣೆಯನ್ನು ಕಾರ್ಮಿಕರ ವೃತ್ತ ಎಂದೆ ಹೆಸರಾಗಿರುವ ಸುಭಾಸ್ ಸರ್ಕಲ್‌ನಲ್ಲಿ ನೂರಾರು ಕಾರ್ಮಿಕರಿಗೆ ಸಿಹಿ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ಅಧ್ಯಕ್ಷ ದಾವಲಸಾಬ ಹಿರೇಮೂಗದೂರ ಮಾತನಾಡಿ ಎಲ್ಲಾ ಶ್ರಮಜೀವಿಗಳನ್ನು ನೆನೆದು ವಿಶ್ವ ಕಾರ್ಮಿಕ ದಿನಚಾರಣೆಯನ್ನು ಆಚರಿಸುತ್ತೇವೆ. ಆದರೆ ದುಡಿಯವ ವರ್ಗದವರ ಭವಣೆ ನಿಂತಿಲ್ಲ. ಕಾರ್ಮಿಕರಿಗಾಗಿ ಸರ್ಕಾರದ ಹತ್ತಾರು ಸೌಲಭ್ಯಗಳಿವೆ. ಆದರೆ ಸಂಘಟನೆ ಮತ್ತು ಹೋರಾಟದ ಕೊರತೆಯಿಂದ ಅರ್ಹ ಕಾರ್ಮಿಕರಿಗೆ ಹಕ್ಕುಗಳು ದೊರೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನಕಲಿ ಕಾರ್ಮಿಕ ಕಾರ್ಡನೆಪದಲ್ಲಿ ಹಾವೇರಿಜಿಲ್ಲೆಯ ಕಾರ್ಮಿಕ ಇಲಾಖೆಯ ಅಧಿಕಾರಿಗಳು ನೂರಾರು ಅರ್ಹ ಕಾರ್ಮಿಕರ ಕಾರ್ಡುಗಳನ್ನು ರದ್ದುಮಾಡುವ ಮೂಲಕ ಶ್ರಮಜೀವಿಗಳಿಗೆ ಅನ್ಯಾಯಮಾಡಿದ್ದಾರೆ. ಅರ್ಹ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ದೊರಯಲೇ ಬೇಕು, ನಾವು ಯಾರ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲ. ಅರ್ಹ ಕಾರ್ಮಿರಿಗೆ ಸರ್ಕಾರದಿಂದ ಸಿಗಬೇಕಾದ ನ್ಯಾಯಯುತ ಹಕ್ಕುಗಳನ್ನು ಕೇಳುತ್ತಿದ್ದೇವೆ. ನಾವು ಸಂಘಟಿತರಾಗಿ ಹೋರಾಟ ಮಾಡಿದರೆ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ಪದಾಧಿಕಾರಿಗಳು ಕಾರ್ಮಿಕರು ಕಾರ್ಯನಿರ್ವಹಿಸುವ ಸ್ಥಳಗಳಿಗೆ ತೆರಳಿ ಅವರಿಗೆ ಸಿಹಿ ಹಂಚುವ ಮೂಲಕ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ದಿನಾಚರಣೆಯ ಶುಭಕೋರಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿದರು.
ಈ ವೇಳೆ ಹಾವೇರಿ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಾರ್ಮಿಕರ ಸಂಘದ ಮುಖಂಡರುಗಳಾದ ನಜೀರಸಾಬ ಪಟೇಲ, ಗುಲ್ಜಾರ ಗಣಜೂರ, ಸಂಜೀವಪ್ಪ ಹರಪನಹಳ್ಳಿ, ಹಸನಸಾಬ ಗಣಜೂರ, ಕುಮಾರಸ್ವಾಮಿ ಹಿರೇಮಠ,ನಾಗರಾಜ ಮಲಗೋಡ, ಮಕಬೂಲಹ್ಮದ ಇನಾಮದಾರ, ಮಾರುತಿ ಕದರಮಂಡಲಗಿ, ರಿಯಾಜ ಅಹ್ಮದ ಕೊಟ್ಟಿಗೇರಿ, ಮಹಮ್ಮದ ರಫೀಕ ದೇವಗಿರಿ, ಗೌಸಅಹ್ಮದ ದೇವಿಹೊಸೂರ, ಅಹ್ಮದ ಪಟೇಲ, ಅಬ್ದುಲ್‌ಕರಿಮಸಾಬ ಸವಣೂರ, ಅಹ್ಮದಬಾಷಾ ಕತೂರ, ಹಜರತ್‌ಅಲಿ ಶೇಕಸನದಿ, ಇಮಾಮಹುಸೇನ ಹತ್ತಿಮತ್ತೂರ ಮೊದಲಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು!

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು! ಹಾವೇರಿ: ದಾಸರು,...

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...