ಸಂಸತ್ ಮೇಲಿನ ದಾಳಿ, ಸಂಸದ ಪ್ರತಾಪ್‌ಸಿಂಹರನ್ನು ತನಿಖೆಗೆ ಒಳಪಡಿಸಲಿ: ಸಂಜಯಗಾಂಧಿ

Date:

ಸಂಸತ್ ಮೇಲಿನ ದಾಳಿ, ಸಂಸದ ಪ್ರತಾಪ್‌ಸಿಂಹರನ್ನು ತನಿಖೆಗೆ ಒಳಪಡಿಸಲಿ: ಸಂಜಯಗಾಂಧಿ
ಹಾವೇರಿ: ಸಂಸತ್ ಸದಸ್ಯ ಪ್ರತಾಪಸಿಂಹ ಅವರ ಹೆಸರಿನ ಪಾಸ್ ಹೊಂದಿದ್ದ ವ್ಯಕ್ತಿ ಸೇರಿ ಹಲವರು ಸಂಸತ್ತಿನ ಮೇಲೆ ಗ್ಯಾಸ್ ಬಾಂಬ್ ಸಿಡಿಸುವ ಮೂಲಕ ದೇಶದ ಪ್ರಜಾಸತ್ಯೆಯ ಮೇಲೆ ದಾಳಿ ಮಾಡಿದ್ದಾರೆ. ಈಬಗ್ಗೆ ಮೈಸೂರ್-ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಸಂಜಯಗಾಂಧಿ ಸಂಜೀವಣ್ಣನವರ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಂಸತ್ ಮೇಲಿನ ದಾಳಿಯ ಬಗ್ಗೆ ಬಿಜೆಪಿ ಸ್ಟಾಂಡ್ ಏನು ಎನ್ನುವುದು ತಿಳೀಯುತ್ತಿಲ್ಲ. ಇದೆ ಪಾಸ್ ಒಂದು ವೇಳೆ ಕಾಂಗ್ರೆಸ್ ಪಕ್ಷದ ಸಂಸದರು ಕೊಟ್ಟಿದ್ದರೆ, ಉಗ್ರಗಾಮಿಗಳು ಎಂದು ಇಲ್ಲವೇ ದೇಶದ್ರೋಹಿಗಳೆಂದು ಪಟ್ಟಕಟ್ಟುತ್ತಿದ್ದುದು ಅಕ್ಷರಶಃ ಸತ್ಯ. ತಮ್ಮ ಪಕ್ಷದವರಿಂದ ಏನೆ ಅವಗಡಗಳು ಕೈ ತಪ್ಪಿನೆಡೆದರೆ, ಅದು ಮನ್ನಿಸಬಹುದಾದ ತಪ್ಪು ಅದೇ ಕಾಂಗ್ರೆಸ್ ಅಥವಾ ಉಳಿದ ವಿರೋಧ ಪಕ್ಷದವರಿಂದ ಆಗಿದ್ದರೆ ಅದು ಈ ಹೊತ್ತಿಗಾಗಲೇ ದೇಶದ್ರೋಹಿ ಚಟುವಟಿಕೆ ಎಂದು ಕಾಡ್ಗಿಚ್ಚಿನಂತೆ ಹಬ್ಬಿಸುತ್ತಿದ್ದರು.
ಈ ಸುದ್ದಿಯನ್ನು ವಾಟ್ಸಾಪ್ ಯುನಿವರ್ಸಿಟಿ ಅವರಂತೂ ಕ್ಷಣಾರ್ಧದಲ್ಲಿ ಮನೆಮನೆಗೆ ತಲುಪಿಸುತ್ತಿದ್ದರು, ತಮಗೊಂದು ನ್ಯಾಯ ಉಳಿದವರಿಗೊಂದು ನ್ಯಾಯ. ನ್ಯಾಯ ಕೊಡುವ ಜಾಗದಲ್ಲಿ ಅನ್ಯಾಯ ಮಾಡಿದರೆ ಹೇಗೆ? ದೇಶದ ಹಲವಾರು ಕಾನೂನು ಜಾರಿ ಮಾಡುವ ಭಾರತದ ಸಂಸತ್ತಿನಲ್ಲಿ, ಭಾರತದ ಹೃದಯ ಭಾಗದಲ್ಲಿ ಹೀಗಾದರೆ ಇದಕ್ಕೆಲ್ಲ ಕಾರಣ ಭದ್ರತಾ ಸಿಬ್ಬಂದಿಯ ವೈಫಲ್ಯ ಎಂದು ಸಂಜಯಗಾಂಧಿ ಸಂಜೀವಣ್ಣನವರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಸಂಸತ್ ಮೇಲಿನ ದಾಳಿ, ಸಂಸದ ಪ್ರತಾಪ್‌ಸಿಂಹರನ್ನು ತನಿಖೆಗೆ ಒಳಪಡಿಸಲಿ: ಸಂಜಯಗಾಂಧಿ
ಹಾವೇರಿ: ಸಂಸತ್ ಸದಸ್ಯ ಪ್ರತಾಪಸಿಂಹ ಅವರ ಹೆಸರಿನ ಪಾಸ್ ಹೊಂದಿದ್ದ ವ್ಯಕ್ತಿ ಸೇರಿ ಹಲವರು ಸಂಸತ್ತಿನ ಮೇಲೆ ಗ್ಯಾಸ್ ಬಾಂಬ್ ಸಿಡಿಸುವ ಮೂಲಕ ದೇಶದ ಪ್ರಜಾಸತ್ಯೆಯ ಮೇಲೆ ದಾಳಿ ಮಾಡಿದ್ದಾರೆ. ಈಬಗ್ಗೆ ಮೈಸೂರ್-ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಸಂಜಯಗಾಂಧಿ ಸಂಜೀವಣ್ಣನವರ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಂಸತ್ ಮೇಲಿನ ದಾಳಿಯ ಬಗ್ಗೆ ಬಿಜೆಪಿ ಸ್ಟಾಂಡ್ ಏನು ಎನ್ನುವುದು ತಿಳೀಯುತ್ತಿಲ್ಲ. ಇದೆ ಪಾಸ್ ಒಂದು ವೇಳೆ ಕಾಂಗ್ರೆಸ್ ಪಕ್ಷದ ಸಂಸದರು ಕೊಟ್ಟಿದ್ದರೆ, ಉಗ್ರಗಾಮಿಗಳು ಎಂದು ಇಲ್ಲವೇ ದೇಶದ್ರೋಹಿಗಳೆಂದು ಪಟ್ಟಕಟ್ಟುತ್ತಿದ್ದುದು ಅಕ್ಷರಶಃ ಸತ್ಯ. ತಮ್ಮ ಪಕ್ಷದವರಿಂದ ಏನೆ ಅವಗಡಗಳು ಕೈ ತಪ್ಪಿನೆಡೆದರೆ, ಅದು ಮನ್ನಿಸಬಹುದಾದ ತಪ್ಪು ಅದೇ ಕಾಂಗ್ರೆಸ್ ಅಥವಾ ಉಳಿದ ವಿರೋಧ ಪಕ್ಷದವರಿಂದ ಆಗಿದ್ದರೆ ಅದು ಈ ಹೊತ್ತಿಗಾಗಲೇ ದೇಶದ್ರೋಹಿ ಚಟುವಟಿಕೆ ಎಂದು ಕಾಡ್ಗಿಚ್ಚಿನಂತೆ ಹಬ್ಬಿಸುತ್ತಿದ್ದರು.
ಈ ಸುದ್ದಿಯನ್ನು ವಾಟ್ಸಾಪ್ ಯುನಿವರ್ಸಿಟಿ ಅವರಂತೂ ಕ್ಷಣಾರ್ಧದಲ್ಲಿ ಮನೆಮನೆಗೆ ತಲುಪಿಸುತ್ತಿದ್ದರು, ತಮಗೊಂದು ನ್ಯಾಯ ಉಳಿದವರಿಗೊಂದು ನ್ಯಾಯ. ನ್ಯಾಯ ಕೊಡುವ ಜಾಗದಲ್ಲಿ ಅನ್ಯಾಯ ಮಾಡಿದರೆ ಹೇಗೆ? ದೇಶದ ಹಲವಾರು ಕಾನೂನು ಜಾರಿ ಮಾಡುವ ಭಾರತದ ಸಂಸತ್ತಿನಲ್ಲಿ, ಭಾರತದ ಹೃದಯ ಭಾಗದಲ್ಲಿ ಹೀಗಾದರೆ ಇದಕ್ಕೆಲ್ಲ ಕಾರಣ ಭದ್ರತಾ ಸಿಬ್ಬಂದಿಯ ವೈಫಲ್ಯ ಎಂದು ಸಂಜಯಗಾಂಧಿ ಸಂಜೀವಣ್ಣನವರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...