ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಸಿಎಂಗೆ ಮನವಿ
ಹಾವೇರಿ : ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವನ್ನು ಶೀಘ್ರದಲ್ಲಿ ಜಾರಿಗೊಳಿಸುವಂತೆ ಒತ್ತಾಯಿಸಿ ಡಿಎಸ್ಎಸ್ ಜಿಲ್ಲಾ ಹಾಗೂ ರಾಜ್ಯ ಸಮಿತಿ ವತಿಯಿಂದ ಶಕ್ರವಾರ ಹಾವೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರದಲ್ಲಿ ಎಡಗೈ ಸಮಾಜದವರು ಕನಿಷ್ಠ ೧೦ ಸಾವಿರದಿಂದ ೩೫ ಸಾವಿರ ಮತದಾರರನ್ನು ಹೊಂದಿದ ಬಹುದೊಡ್ಡ ಸಮಾಜಕ್ಕೆ ಬಹುದೊಡ್ಡ ಅನ್ಯಾಯವಾಗಿದೆ. ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು ರಾಜ್ಯಾದ್ಯಂತ ಪರಿಶಿಷ್ಟ ಜಾತಿಯವರಿಗೆ ಇರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲತ್ತು ಹಾಗೂ ಶೈಕ್ಷಣಿಕ, ಸಾಮಾಜಿಕ, ಮತ್ತು ಔದ್ಯೋಗಿಕ ರಂಗದಲ್ಲಿ ಸಮಗ್ರವಾಗಿ ಪರಿಶೀಲಿಸಿ ಅಧ್ಯಯನ ಮಾಡಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆಯಲ್ಲಿ ೫೭.೨% ರಷ್ಟು ಇರುವ ಮಾದಿಗರು ಹಾಗೂ ಸಂಬಂಧಿಸಿದ ಎಡಗೈ ಜನಾಂಗದವರು ಇದ್ದಾರೆ.
ಅವರ ಸ್ಥಿತಿಗತಿಯನ್ನು ಹಾಗೂ ಕುಲ ಕಸುಬನ್ನು ಅಧ್ಯಯನ ಮಾಡಿ ಈ ಸಮುದಾಯಕ್ಕೆ ಘೋರ ಅನ್ಯಾಯವಾಗಿರುವದನ್ನು ಮನಗಂಡು ಜನ ಸಂಖ್ಯೆಗನುಗುಣವಾಗಿ ೧೫% ರಲ್ಲಿ ೬% ರಷ್ಟು ಎಡಗೈ ಸಮುದಾಯಕ್ಕೆ ಮೀಸಲಾತಿ ನೀಡಲು ಸರ್ಕಾರಕ್ಕೆ ಶೀಫಾರಸ್ಸು ಮಾಡಿದ್ದಾರೆ. ಕೂಡಲೇ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ, ಕಟ್ಟಡ ಕಾರ್ಮಿಕರ ರಾಜ್ಯ ಕಾರ್ಯದರ್ಶಿ ವೈ ಎನ್ ಮಾಸೂರ, ಅಲೆಮಾರಿ ಸಮಾಜದ ಜಿಲ್ಲಾಧ್ಯಕ್ಷ ವಿಬೂತಿ ಶೆಟ್ಟಿ ಮುಖಂಡರಾದ ಮಲ್ಲೇಶ ಕಡಕೋಳ, ಎನ್ ಎನ್ ಗಾಳೆಮ್ಮನವರ,ಶಿವಲಿಂಗಪ್ಪ ನಿಂಗಪ್ಪನವರ, ವಕೀಲರಾದ ಹನಮಂತಪ್ಪ ಸೊಟ್ಟಪ್ಪನವರ, ಶಿವರಾಜ ಹರಿಜನ,ಜಗದೀಶ ಹರಿಜನ,ಮಾರುತಿ ಸೊಟ್ಟಪ್ಪನವರ,ಚಂದ್ರು ಯತ್ನಳ್ಳಿ,ನಾಗಪ್ಪ ಕಾಟೇನಹಳ್ಳಿ ಸೇರಿದಂತೆ ಡಿಎಸ್ ಎಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಸಿಎಂಗೆ ಮನವಿ
Date:
ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಸಿಎಂಗೆ ಮನವಿ
ಹಾವೇರಿ : ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವನ್ನು ಶೀಘ್ರದಲ್ಲಿ ಜಾರಿಗೊಳಿಸುವಂತೆ ಒತ್ತಾಯಿಸಿ ಡಿಎಸ್ಎಸ್ ಜಿಲ್ಲಾ ಹಾಗೂ ರಾಜ್ಯ ಸಮಿತಿ ವತಿಯಿಂದ ಶಕ್ರವಾರ ಹಾವೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರದಲ್ಲಿ ಎಡಗೈ ಸಮಾಜದವರು ಕನಿಷ್ಠ ೧೦ ಸಾವಿರದಿಂದ ೩೫ ಸಾವಿರ ಮತದಾರರನ್ನು ಹೊಂದಿದ ಬಹುದೊಡ್ಡ ಸಮಾಜಕ್ಕೆ ಬಹುದೊಡ್ಡ ಅನ್ಯಾಯವಾಗಿದೆ. ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವು ರಾಜ್ಯಾದ್ಯಂತ ಪರಿಶಿಷ್ಟ ಜಾತಿಯವರಿಗೆ ಇರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲತ್ತು ಹಾಗೂ ಶೈಕ್ಷಣಿಕ, ಸಾಮಾಜಿಕ, ಮತ್ತು ಔದ್ಯೋಗಿಕ ರಂಗದಲ್ಲಿ ಸಮಗ್ರವಾಗಿ ಪರಿಶೀಲಿಸಿ ಅಧ್ಯಯನ ಮಾಡಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆಯಲ್ಲಿ ೫೭.೨% ರಷ್ಟು ಇರುವ ಮಾದಿಗರು ಹಾಗೂ ಸಂಬಂಧಿಸಿದ ಎಡಗೈ ಜನಾಂಗದವರು ಇದ್ದಾರೆ.
ಅವರ ಸ್ಥಿತಿಗತಿಯನ್ನು ಹಾಗೂ ಕುಲ ಕಸುಬನ್ನು ಅಧ್ಯಯನ ಮಾಡಿ ಈ ಸಮುದಾಯಕ್ಕೆ ಘೋರ ಅನ್ಯಾಯವಾಗಿರುವದನ್ನು ಮನಗಂಡು ಜನ ಸಂಖ್ಯೆಗನುಗುಣವಾಗಿ ೧೫% ರಲ್ಲಿ ೬% ರಷ್ಟು ಎಡಗೈ ಸಮುದಾಯಕ್ಕೆ ಮೀಸಲಾತಿ ನೀಡಲು ಸರ್ಕಾರಕ್ಕೆ ಶೀಫಾರಸ್ಸು ಮಾಡಿದ್ದಾರೆ. ಕೂಡಲೇ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ, ಕಟ್ಟಡ ಕಾರ್ಮಿಕರ ರಾಜ್ಯ ಕಾರ್ಯದರ್ಶಿ ವೈ ಎನ್ ಮಾಸೂರ, ಅಲೆಮಾರಿ ಸಮಾಜದ ಜಿಲ್ಲಾಧ್ಯಕ್ಷ ವಿಬೂತಿ ಶೆಟ್ಟಿ ಮುಖಂಡರಾದ ಮಲ್ಲೇಶ ಕಡಕೋಳ, ಎನ್ ಎನ್ ಗಾಳೆಮ್ಮನವರ,ಶಿವಲಿಂಗಪ್ಪ ನಿಂಗಪ್ಪನವರ, ವಕೀಲರಾದ ಹನಮಂತಪ್ಪ ಸೊಟ್ಟಪ್ಪನವರ, ಶಿವರಾಜ ಹರಿಜನ,ಜಗದೀಶ ಹರಿಜನ,ಮಾರುತಿ ಸೊಟ್ಟಪ್ಪನವರ,ಚಂದ್ರು ಯತ್ನಳ್ಳಿ,ನಾಗಪ್ಪ ಕಾಟೇನಹಳ್ಳಿ ಸೇರಿದಂತೆ ಡಿಎಸ್ ಎಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.