ಸಿ.ಟಿ.ರವಿ- ಅಮಿತ್ ಶಾ ವಜಾಕ್ಕೆ ಒತ್ತಾಯಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರತಿಭಟನೆ
ಹಾವೇರಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಅಧಿವೇಶದನದಲ್ಲಿ ಅಶ್ಲೀಲವಾಗಿ ನಿಂದಿಸಿದ್ದು, ಅವರನ್ನು ವಿಧಾನಪರಿಷತ್ ಸದಸ್ಯ ಸ್ಥಾನದಿಂದ ವಜಮಾಡಬೇಕು, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ ಅವರನ್ನು ಅವಮಾನಿಸಿರುವ ಅಮಿತ್ ಶಾ ಅವರನ್ನು ಕೇಂದ್ರ ಗೃಹ ಸಚಿವ ಸ್ಥಾನದಿಂದ ವಜಾಮಾಡುವಂತೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಇಲ್ಲಿನ ಹೊಸಮನಿ ಸಿದ್ದಪ್ಪವೃತ್ತದಲ್ಲಿ ಮಹಿಳಾ ಕಾರ್ಯಕರ್ತರು ರಸ್ತೆಯಲ್ಲೇ ಸಿ.ಟಿ.ರವಿ ಅವರ ಫೋಟೋಗೆ ಪೂಜೆ ಮಾಡುವ ಮೂಲಕ ಹಿಡಿಶಾಪ ಹಾಕುವ ಮೂಲಕ ಧಿಕ್ಕಾರ ಕೂಗಿದರು ಸಿಟಿ ರವಿ ಅವರು ಮಹಿಳೆಯರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದು, ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಪ್ರೇಮಾ ಪಾಟೀಲ ಮಾತನಾಡಿ ಇದು ಕೇವಲ ಸಚಿವೆ ಹೆಬ್ಬಾಳ್ಕರ್ ರವರಿಗೆ ಆದ ಅವಮಾನ ಅಷ್ಟೇ ಅಲ್ಲ, ಇದು ನಾಡಿನ ಲಿಂಗಾಯತ ಸಮುದಾಯದ ಹೆಣ್ಣು ಮಗಳಿಗೆ ಹಾಗೂ ಸರ್ವ ಮಹಿಳೆಯರಿಗೆ, ತಾಯಿ ಸ್ವರೂಪಿಗೆ ಮಾಡಿದ ಅವಮಾನವಾಗಿದೆ. ಸಂವಿಧಾನದ ಮೇಲೆ ನಂಬಿಕೆ ಇರದ ಸದಾ ಗದ್ದಲ,ಗಲಾಟೆ ಮಾಡುವ ಮೂಲಕ ಅಶಾಂತಿಗೆ ಕಾರಣರಾಗಿರುವ ರವಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಎಂ.ಎಂ.ಮೈದೂರ, ಶ್ರೀಧರ ದೊಡ್ಡಮನಿ, ಜಯಶ್ರೀ ಶಿವಪುರ, ಶಾಂತಾಬಾಯಿ ಶೀರೂರ, ಸಂಜಯಗಾಂಧಿ ಸಂಜೀವಣ್ಣನವರ,ಶೇಖರ ಮೆಹರವಾಡೆ, ನಂದಾ, ಗೀತಾ ಪ್ರಕಾಶ್, ಶಿಲ್ಪಾ ಬಡೆಮ್ಮನವರ, ರಾಧಾ ಸವಣೂರ, ಶಶಿಕಲಾ ಹಿರೇಕೆರೂರ, ಅನಸೂಯಾ ಬಳಿಗಾರ, ಗಿರಿಜಾ, ಖಲೀಲ್ ಖಾಜಿ, ಪ್ರಸನ್ನ ಹಿರೇಮಠ, ಶಿವಬಸಮ್ಮ, ದೊಡ್ಮನಿ ಮತ್ತಿತರರು ಭಾಗವಹಿಸಿದ್ದರು.