ಸೆ. ೨೬ಕ್ಕೆ ಯಲಗಚ್ಚಗ್ರಾಮಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್, ಅಪ್ಪು ಪುತ್ಥಳಿ ಅನಾವರಣ
ಹಾವೇರಿ: ಅಭಿಮಾನಿಗಳ ಮನದಲ್ಲಿ ತಮ್ಮ ಅಭಿನಯ, ನಡೆ, ನುಡಿಯ ಮೂಲಕ ಅಜರಾಮರವಾಗಿರುವ ದಿ.ಡಾ. ಪುನೀತ್ ರಾಜಕುಮಾರ್ ಅವರ ದೇವಾಲಯವನ್ನು ಹಾವೇರಿ ತಾಲೂಕಿನ ಯಲಗಚ್ಚಗ್ರಾಮದ ತಮ್ಮ ಸ್ವಂತ ನಿವೇಶನದಲ್ಲಿ ನಿರ್ಮಾಣ ಮಾಡಿದ್ದು, ಆರುವರೆ ಅಡಿ ಪುನೀತ್ ಅವರ ಪುತ್ಥಳಿ ನಿರ್ಮಿಸಿದ್ದು, ಈ ಪುತ್ಥಳಿಯ ಅನಾವರಣವನ್ನು ಸೆ.೨೬ರಂದು ಪುನೀತ್ ರಾಜಕುಮಾರ್ ಅವರ ಪತ್ನಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ನೆರವೇರಿಸಲಿದ್ದಾರೆ ಎಂದು ಪ್ರಕಾಶ ಮೊರಬದ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುನೀತ್ ರಾಜಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ಅತ್ಯುತ್ತಮ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಜನ ಮಾನಸದಲ್ಲಿ ಚಿರಸ್ಥಾಯಿ ಆಗಿದ್ದಾರೆ. ಅವರ ಅಗಲಿಕೆಯ ನಂತರ ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳು ತಿಳಿಯಲಾರಂಭಿಸಿವೆ.
ಅವರ ಅಭಿನಯ ಹಾಗೂ ನಡತೆಯನ್ನು ಗಮನಿಸಿ ಅವರ ಅಪ್ಪಟ ಅಭಿಮಾನಿಯಾಗಿದ್ದ ನನಗೆ ಪುನೀತ್ ರಾಜಕುಮಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದಾಗ ಅವರ ದೇವಾಲಯವನ್ನು ಹಾಗೂ ಪುತ್ಥಳಿಯನ್ನು ನಮ್ಮೂರಲ್ಲಿ ಏಕೆ ನಿರ್ಮಿಸಬಾರದು ಎಂದು ಆಲೋಚಿಸಿ ನಮ್ಮೂರಿನ ಯಲಗಚ್ಚ ಗ್ರಾಮದ ನನ್ನ ಸ್ವಂತ ನಿವೇಶನದಲ್ಲಿ ಸುಮಾರು ೯ ಲಕ್ಷ ರೂಗಳನ್ನು ಖರ್ಚು ಮಾಡಿ ಸುಂದರವಾದ ಸಭಾ ಮಂಟಪ ಹಾಗೂ ಆರೂವರೆ ಅಡಿ ಅಪ್ಪು ಅವರ ಪುತ್ಥಳಿಯನ್ನು ನಿರ್ಮಿಸಿರುವುದಾಗಿ ಅವರು ಹೇಳಿದರು.
ಮೊದಲಿಗೆ ನನ್ನ ಸ್ವಂತ ಹಣದಲ್ಲಿ ಅಪ್ಪು ಅವರ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದೆ. ಮುಂದೆ ಅನೇಕ ರಾಜಕಾರಣಿಗಳು, ಪುನಿತರಾಜಕುಮಾರ ಅವರ ಅಭಿಮಾನಿಗಳು, ಸಾರ್ವಜನಿಕರು ನನ್ನ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಸುಂದರ ಮಂದಿರ ಹಾಗೂ ಪುನೀತ್ ರಾಜಕುಮಾರ್ಅವರ ೬.೫ ಅಡಿ ಪುತ್ಥಳಿ ನಿರ್ಮಾಣಕ್ಕೆ ಅಂದಾಜು ೯ ಲಕ್ಷರೂ ವೆಚ್ಚ ತಗಲಿದೆ. ಪುತ್ಥಳಿ ಆಮಾವರಣ ಮತ್ತು ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಚಲನಚಿತ್ರ ನಟರು, ಕಿರುತರೆಯ ಕಲಾವಿದರು ಭಾಗವಹಿಸಲಿದ್ದಾರೆ, ಅಪ್ಪು ಜೀವನ ಚರಿತ್ರೆ ಪುಸ್ತಕ ಬಿಡುಗಡೆಯಾಗಲಿದೆ ಎಂದು ಪ್ರಕಾಶ ಹೇಳಿದರು.
ಸಂಘಟಕ ಸಂಜಯಗಾಂಧಿ ಸಂಜೀವಣ್ಣನವರ ಮಾತನಾಡಿ ಅಪ್ಪು ಅವರ ಪತ್ನಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸೆ. ೨೬ರಂದು ಬೆಳಗ್ಗೆ ೧೦ ಗಂಟೆಗೆ ಹಾವೇರಿಗೆ ಆಗಮಿಸಿ ಆಗಮಿಸುತ್ತಾg. ಇಲ್ಲಿನ ಹೊಸಮನಿ ಸಿದ್ದಪ್ಪ ವೃತ್ತದ ಮೂಲಕ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಯಲಗಚ್ಚ ಗ್ರಾಮಕ್ಕೆ ಮೆರವಣಿಗೆ ಮೂಲಕ ಅವರನ್ನು ಕರೆದುಕೊಂಡು ಹೋಗಲಾಗುವುದು. ಅಶ್ವಿನಿ ಪುನೀತ್ ರಾಜಕುಮಾರ್ ಗ್ರಾಮದಲ್ಲಿ ದೇವಸ್ಥಾನ ಉದ್ಘಾಟನೆ ಹಾಗೂ ಪ್ರಕಾಶ ಮೊರಬದ ಅವರ ಪುತ್ರಿಗೆ ನಾಮಕರಣ ಮಾಡಿದ ನಂತರ ಗ್ರಾಮದ ಹೈಸ್ಕೂಲ್ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗವಹಿಸುವ ನಿರೀಕ್ಷೆ ಇದ್ದು, ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ, ಶಾಸಕ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ್ ಶಿವಣ್ಣವg, ಮಾಜಿ ಸಚಿವ ಎಚ್. ಆಂಜನೇಯ, ಮಾಜಿ ಶಾಸಕ ನೆಹರು ಓಲೆಕಾರ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಸಚಿವ ಆರ್. ಶಂಕರ್, ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಮತ್ತಿತರರು ಆಗಮಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾದೇವಕ್ಕ ಮೊರಬದ, ಋಷಿ ಮೊರಬದ, ಮಧು, ಆನಂದ ಕುಂಬಾರಿ, ಸತೀಶ್ ಈಳಗೇರ ಮತ್ತಿತರರು ಇದ್ದರು.
ಸೆ. ೨೬ಕ್ಕೆ ಯಲಗಚ್ಚಗ್ರಾಮಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್, ಅಪ್ಪು ಪುತ್ಥಳಿ ಅನಾವರಣ
Date:
ಸೆ. ೨೬ಕ್ಕೆ ಯಲಗಚ್ಚಗ್ರಾಮಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್, ಅಪ್ಪು ಪುತ್ಥಳಿ ಅನಾವರಣ
ಹಾವೇರಿ: ಅಭಿಮಾನಿಗಳ ಮನದಲ್ಲಿ ತಮ್ಮ ಅಭಿನಯ, ನಡೆ, ನುಡಿಯ ಮೂಲಕ ಅಜರಾಮರವಾಗಿರುವ ದಿ.ಡಾ. ಪುನೀತ್ ರಾಜಕುಮಾರ್ ಅವರ ದೇವಾಲಯವನ್ನು ಹಾವೇರಿ ತಾಲೂಕಿನ ಯಲಗಚ್ಚಗ್ರಾಮದ ತಮ್ಮ ಸ್ವಂತ ನಿವೇಶನದಲ್ಲಿ ನಿರ್ಮಾಣ ಮಾಡಿದ್ದು, ಆರುವರೆ ಅಡಿ ಪುನೀತ್ ಅವರ ಪುತ್ಥಳಿ ನಿರ್ಮಿಸಿದ್ದು, ಈ ಪುತ್ಥಳಿಯ ಅನಾವರಣವನ್ನು ಸೆ.೨೬ರಂದು ಪುನೀತ್ ರಾಜಕುಮಾರ್ ಅವರ ಪತ್ನಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ನೆರವೇರಿಸಲಿದ್ದಾರೆ ಎಂದು ಪ್ರಕಾಶ ಮೊರಬದ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುನೀತ್ ರಾಜಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ಅತ್ಯುತ್ತಮ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಜನ ಮಾನಸದಲ್ಲಿ ಚಿರಸ್ಥಾಯಿ ಆಗಿದ್ದಾರೆ. ಅವರ ಅಗಲಿಕೆಯ ನಂತರ ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳು ತಿಳಿಯಲಾರಂಭಿಸಿವೆ.
ಅವರ ಅಭಿನಯ ಹಾಗೂ ನಡತೆಯನ್ನು ಗಮನಿಸಿ ಅವರ ಅಪ್ಪಟ ಅಭಿಮಾನಿಯಾಗಿದ್ದ ನನಗೆ ಪುನೀತ್ ರಾಜಕುಮಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದಾಗ ಅವರ ದೇವಾಲಯವನ್ನು ಹಾಗೂ ಪುತ್ಥಳಿಯನ್ನು ನಮ್ಮೂರಲ್ಲಿ ಏಕೆ ನಿರ್ಮಿಸಬಾರದು ಎಂದು ಆಲೋಚಿಸಿ ನಮ್ಮೂರಿನ ಯಲಗಚ್ಚ ಗ್ರಾಮದ ನನ್ನ ಸ್ವಂತ ನಿವೇಶನದಲ್ಲಿ ಸುಮಾರು ೯ ಲಕ್ಷ ರೂಗಳನ್ನು ಖರ್ಚು ಮಾಡಿ ಸುಂದರವಾದ ಸಭಾ ಮಂಟಪ ಹಾಗೂ ಆರೂವರೆ ಅಡಿ ಅಪ್ಪು ಅವರ ಪುತ್ಥಳಿಯನ್ನು ನಿರ್ಮಿಸಿರುವುದಾಗಿ ಅವರು ಹೇಳಿದರು.
ಮೊದಲಿಗೆ ನನ್ನ ಸ್ವಂತ ಹಣದಲ್ಲಿ ಅಪ್ಪು ಅವರ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದೆ. ಮುಂದೆ ಅನೇಕ ರಾಜಕಾರಣಿಗಳು, ಪುನಿತರಾಜಕುಮಾರ ಅವರ ಅಭಿಮಾನಿಗಳು, ಸಾರ್ವಜನಿಕರು ನನ್ನ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಸುಂದರ ಮಂದಿರ ಹಾಗೂ ಪುನೀತ್ ರಾಜಕುಮಾರ್ಅವರ ೬.೫ ಅಡಿ ಪುತ್ಥಳಿ ನಿರ್ಮಾಣಕ್ಕೆ ಅಂದಾಜು ೯ ಲಕ್ಷರೂ ವೆಚ್ಚ ತಗಲಿದೆ. ಪುತ್ಥಳಿ ಆಮಾವರಣ ಮತ್ತು ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಚಲನಚಿತ್ರ ನಟರು, ಕಿರುತರೆಯ ಕಲಾವಿದರು ಭಾಗವಹಿಸಲಿದ್ದಾರೆ, ಅಪ್ಪು ಜೀವನ ಚರಿತ್ರೆ ಪುಸ್ತಕ ಬಿಡುಗಡೆಯಾಗಲಿದೆ ಎಂದು ಪ್ರಕಾಶ ಹೇಳಿದರು.
ಸಂಘಟಕ ಸಂಜಯಗಾಂಧಿ ಸಂಜೀವಣ್ಣನವರ ಮಾತನಾಡಿ ಅಪ್ಪು ಅವರ ಪತ್ನಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸೆ. ೨೬ರಂದು ಬೆಳಗ್ಗೆ ೧೦ ಗಂಟೆಗೆ ಹಾವೇರಿಗೆ ಆಗಮಿಸಿ ಆಗಮಿಸುತ್ತಾg. ಇಲ್ಲಿನ ಹೊಸಮನಿ ಸಿದ್ದಪ್ಪ ವೃತ್ತದ ಮೂಲಕ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಯಲಗಚ್ಚ ಗ್ರಾಮಕ್ಕೆ ಮೆರವಣಿಗೆ ಮೂಲಕ ಅವರನ್ನು ಕರೆದುಕೊಂಡು ಹೋಗಲಾಗುವುದು. ಅಶ್ವಿನಿ ಪುನೀತ್ ರಾಜಕುಮಾರ್ ಗ್ರಾಮದಲ್ಲಿ ದೇವಸ್ಥಾನ ಉದ್ಘಾಟನೆ ಹಾಗೂ ಪ್ರಕಾಶ ಮೊರಬದ ಅವರ ಪುತ್ರಿಗೆ ನಾಮಕರಣ ಮಾಡಿದ ನಂತರ ಗ್ರಾಮದ ಹೈಸ್ಕೂಲ್ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗವಹಿಸುವ ನಿರೀಕ್ಷೆ ಇದ್ದು, ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ, ಶಾಸಕ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ್ ಶಿವಣ್ಣವg, ಮಾಜಿ ಸಚಿವ ಎಚ್. ಆಂಜನೇಯ, ಮಾಜಿ ಶಾಸಕ ನೆಹರು ಓಲೆಕಾರ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಸಚಿವ ಆರ್. ಶಂಕರ್, ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಮತ್ತಿತರರು ಆಗಮಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾದೇವಕ್ಕ ಮೊರಬದ, ಋಷಿ ಮೊರಬದ, ಮಧು, ಆನಂದ ಕುಂಬಾರಿ, ಸತೀಶ್ ಈಳಗೇರ ಮತ್ತಿತರರು ಇದ್ದರು.