ಹಾಲಿ ಅಧ್ಯಕ್ಷ ಅರಬಗೊಂಡಗೆ ಸೋಲು
ಹಾವೇರಿ: ಹಲವು ಹತ್ತು ಕಾರಣಗಳಿಂದಾಗಿ ಧಾರವಾಡ ಹಾಲು ಒಕ್ಕೂಟಕ್ಕೆ ಸತತ ಎರಡು ಬಾರಿ ಅಧ್ಯಕ್ಷರಾಗಿದ್ದ ಹಾವೇರಿ ತಾಲೂಕಿನ ಕಾಟೇನಹಳ್ಳಿಗ್ರಾಮದ ಬಸವರಾಜ ಅರಬಗೊಂಡ ಕಳೆದ ಮೂರು ವರ್ಷಗಳ ಹಿಂದೆ ಧಾರವಾಡ ಹಾಲು ಒಕ್ಕೂಟದಿಂದ ಪ್ರತ್ಯೇಕಗೊಂಡು ಅಸ್ತಿತ್ವಕ್ಕೆ ಬಂದಿದ್ದ ಹಾವೇರಿ ಹಾಲು ಒಕ್ಕೂಟದ ಪ್ರಥಮ ಅಧ್ಯಕ್ಷರಾಗಿದ್ದ ಹಾಲಿ ಅಧ್ಯಕ್ಷ ಬಸವರಾಜ ಅರಬಗೊಂಡ ಹೀನಾಯವಾಗಿ ಸೋಲನ್ನು ಅನುಭವಿಸಿದ್ದಾರೆ. ಧಾರವಾಡ ಒಕ್ಕೂಟದಲ್ಲಿ ಹಾಗೂ ಪ್ರತ್ಯೇಕ ಹಾವೇರಿ ಒಕ್ಕೂಟದಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಬಸವರಾಜ ಅರಬಗೊಂಡ ಅವರು ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಹಾವೇಮುಲ್ ಮುನ್ನಡೆಸಬೇಕು ಎಂಬ ಆಕಾಂಕ್ಷೆಯಲ್ಲಿ ಮತ್ತೊಮ್ಮೆ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅವರ ಎದುರಾಳಿ ಸಂಗೂರು ಗ್ರಾಮದ ಬಸವೇಶಗೌಡ ಪಾಟೀಲ ೨೯ಮತಗಳನ್ನು ಪಡೆದರೆ, ಅರಬಗೊಂಡ ೨೨ಮತಗಳನ್ನು ಪಡೆದು ಸೋಲನ್ನು ಅನುಭವಿಸಿದರು. ಸೋಲಿನಿಂದ ತೀವೃ ಹತಾಶರಾದವರಂತೆ ಕಂಡು ಬಂದ ಬಸವರಾಜ ಅರಬಗೊಂಡ ಅವರನ್ನು ಕಾಂಗ್ರೆಸ್ ನೂತನ ನಿರ್ದೇಶಕ ಚಂದ್ರಪ್ಪ ಚಾಲಗಾರ ಸಂತೈಸುತ್ತಿದ್ದುದು ಮತ ಏಣಿಕೆ ಕೇಂದ್ರದಲ್ಲಿ ಕಂಡು ಬಂದಿತು.