ಹಾವೇರಿ; ಅಧಿಕಾರಿಗಳಿಗೆ ಚುನಾವಣೆಯ ಜಪ, ಆಕ್ರಮ ಮರಳು ದಂಧೆಕೋರರಿಗೆ ವರ
ಹಳ್ಳವನ್ನೇ ಹೆದ್ದಾರಿಯನ್ನಾಗಿಸಿಕೊಂಡಿರುವ ಖದೀಮರು, ಪೈಪು ಒಡೆದು ಅಪಾರ ಪ್ರಮಾಣದಲ್ಲಿ ರೈತರಿಗೆ ಹಾನಿ
ಹಾವೇರಿ; ಒಂದೆಡೆ ವಿಧಾನಸಭಾ ಚುನಾವಣೆಯ ದಿನಾಂಕ ಹತ್ತಿರವಾಗುತ್ತಿದ್ದು, ಅಧಿಕಾರಿಗಳ ಚುನಾವಣೆಯನ್ನು ಯಶಸ್ವಿಗೊಳಿಸಲು ಕೇಂದ್ರಿಕರಿಸಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಇತ್ತ ಆಕ್ರಮಮರಳು ದಂಧೆಕೋರರು ಅಧಿಕಾರಿಗಳು ಚುನಾವಣೆಯ ಕರ್ತವ್ಯದಲ್ಲಿಇರುವುದರ ಲಾಭ ಪಡೆಯುವ ಉದ್ದೇಶದಿಂದ ಕೋಟ್ಯಾಂತರ ಮೌಲ್ಯದ ನೈಸರ್ಗಿಕ ಮರಳು ಸಂಪತ್ತನ್ನು ಲೂಟಿಮಾಡುವ ಕಾರ್ಯದಲ್ಲಿ ಜಿಲ್ಲೆಯಲ್ಲಿನ ತುಂಗಭದ್ರಾನದಿಯ ಪಾತ್ರದಲ್ಲಿ ಹಗಲುರಾತ್ರಿ ಎನ್ನದೇ ನಿರತರಾಗಿದ್ದಾರೆ.
ಆಕ್ರಮ ಮರಳು ದಂಧೆಕೋರರ ಖದೀಮರು ಮರಳು ಸಾಗಾಣಿಕೆಗೆ ಹಳ್ಳವನ್ನೆ ಹೆದ್ದಾರಿಯನ್ನಾಗಿ ಮಾಡಿಕೊಂಡು ಲಾರಿ, ಟಿಪ್ಪರ್, ಟ್ಯಾಕ್ಟರ್ ಗಳಲ್ಲಿ ಮರಳನ್ನು ಸಾಗಿಸಿ ಹಲವಾರು ರೈತರ ಪೈಪುಗಳನ್ನು ಒಡೆದು ಹಾಕಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ನದಿಹರಳಹಳ್ಳಿಯ ಬಳಿ ಹಾನಿಮಾಡಿರುವ ಘಟನೆ ನಡೆದಿದೆ. ಭಾರೀ ಗಾತ್ರದ ವಾಹನಗಳ ಸಾಗಾಟದ ವೇಳೆ ಸಾಕಷ್ಟ ಸಂಖ್ಯೆಯಲ್ಲಿ ನವಿಲಗಳುಸಹ ಸಾವನ್ನಪ್ಪಿವೆ. ಈ ಬಗ್ಗೆ ಹಲವಾರು ರೈತರು ಜಿಲ್ಲಾಧಿಕಾರಿಗಳಿಗೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ.
ಆಗಿರುವದೇನು?: ರಾಣೇಬೆನ್ನೂರು ತಾಲೂಕಿನ ನದಿಹರಳಹಳ್ಳಿಯ ತುಂಗಭದ್ರಾನದಿಯ ಪಾತ್ರದಲ್ಲಿ ಮರಳು ಗಣಿಗಾರಿಕೆ ನಡೆಸಲು ಟೆಂಡರ್ ಕರೆಯಲಾಗಿತ್ತು, ಎಸ್ಟಿ, ವಿಕಲಚೇತನ, ಸಾಮಾನ್ಯ ಹೀಗೆ ಹಲವಾರು ಪಾಯಿಂಟ್ಗಳನದನು ಮರಳು ಗಣಿಗಾರಿಕೆ ನಡೆಸಲು ನಿಗದಿಪಡಿಸಲಾಗಿತ್ತು. “ಎಸ್ಟಿ ಪಾಯಿಂಟ್ ಗುತ್ತಿಗೆ ಪಡೆದ ಗುತ್ತಿಗದಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ” ಎನ್ನುವ ಕಾರಣವನ್ನು ನೆಪವಾಗಿಟ್ಟುಕೊಂಡು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಈ ಪಾಯಿಂಟ್ ರದ್ದು ಪಡಿಸಿದ್ದರು.
ಈ ಎಸ್ಟಿ ಪಾಯಿಂಟ್ನಲ್ಲಿ ಕೊಟ್ಯಾಂತರ ಮೌಲ್ಯದ ಮರಳು ಸಂಗ್ರಹವಿತ್ತು. ಈ ಪಾಯಿಂಟ್ಗೆ ಹೊಂದಿಕೊಂಡು ವಿಕಲಚೇತನರಿಗೆ ಮೀಸಲಾದ ಪಾಯಿಂಟ್ ಇದ್ದು, ಎಸ್ಟಿ ಪಾಯಿಂಟ್ ರದ್ದಾಗಿರುವದರ ಲಾಭ ಪಡಯುವ ಉದ್ದೇಶದಿಂದ ಯಾರೋ ವಿಕಲಚೇತನ ಪಾಯಿಂಟ್ ಗುತ್ತಿಗೆ ಪಡೆದಿರುವ ವ್ಯಕ್ತಿಯ ಹೆಸರಿನಲ್ಲಿ (ಮೂಲ ಗುತ್ತಿಗೆದಾರನಿಗ ಆಕ್ರಮ ಮರಳು ದಂಧೆ ನಡಸುವ ಖದೀಮರು ಇಂತಿಷ್ಟು ಹಣಕೊಟ್ಟು, ತಕರಾರು ಮಾಡುವವರಿಗೆ ಒಂದಿಷ್ಟು ಹಣಕೊಟ್ಟು ನಿರಂತರವಾಗಿ ನದಿಯಪಾತ್ರದಲ್ಲಿನ ಮರಳನ್ನು ಲೂಠಿಮಾಡುತ್ತಿದ್ದಾರೆ) ಎಸ್ಟಿ ಪಾಯಿಂಟ್ನಲ್ಲಿ ಸಗ್ರಹಿಸಿದ್ದ ಮರಳನ್ನು ಹಾಗ ನಿಗದಿ ಪಡಿಸಿದ ಪಾಯಿಂಟ್ನಿಂದ ನದಿಯಪಾತ್ರದಿಂದ ಲೂಟಿ ಮಾಡುತ್ತಿದ್ದಾರೆ.
“ನದಿಯಪಾತ್ರದಿಂದ ಮರಳನ್ನು ಸಾಗಿಸಲು ರೈತರು ದಾರಿ ನೀಡದ ಕಾರಣಕ್ಕೆ ನದಿಗೆ ಹೊಂದಿಕೊಂಡಿರುವ ಹಳ್ಳವನ್ನೇ ಹೆದ್ದಾರಿಯನ್ನಾಗಿಸಿಕೊಂಡಿರುವ ಆಕ್ರಮ ಮರಳು ದಂಧೆಕೋರರು ನದಿಯಪಾತ್ರದಿಂದ ಎತ್ತುವ ಮರಳನ್ನು ಲಾರಿ, ಟಿಪ್ಪರ್, ನಾಲ್ಕುಚಕ್ರ, ಆರು ಚಕ್ರ, ಎಂಟು ಚಕ್ರದ ವಾಹನಗಳು ಮರಳು ತುಂಬಿಕೊಂಡು ದೂರದ ಬೆಂಗಳೂರು, ದಾವಣಗೆರೆ ಮತ್ತಿತರ ನಗರಗಳಿಗೆ ಸಾಗಿಸಲಾಗುತ್ತಿದೆ”. ಹಿಟಾಚಿಗಳನ್ನು ಬಳಸಿಕೊಂಡುಹಳ್ಳದಲ್ಲಿ ದಾರಿಯನ್ನು ನಿರ್ಮಿಸಲಾಗಿದೆ.
“ಈ ಹಳ್ಳದಲ್ಲಿ ರೈತರು ನದಿಯಿಂದ ಹೊಲಗಳಿಗೆ ನೀರುಹಾಯಿಸಲು ಪೈಪ್ಲೈನ್ ಅಳವಡಿಸಿಕೊಂಡಿದ್ದಾರೆ”. “ಭಾರೀ ಗಾತ್ರದ ನೂರಾರು ವಾಹನಗಳು ನೂರಾರು ಟನ್ ಮರಳನ್ನು ಹಳ್ಳದಮಾರ್ಗದಲ್ಲಿ ಸಾಗಿಸುವ ವೇಳೆ ರೈತರು ಅಳವಡಿಸಿದ ಲಕ್ಷಾಂತರ ಮೌಲ್ಯದ ಪೈಪ್ಗಳು ಒಡೆದು ಪುಡಿ ಪುಡಿಯಾಗಿವೆ”. ಈ ಬಗ್ಗೆ ಪ್ರಶ್ನಿಸಿದ ರೈತರ ಜೊತೆಗೆ ಜಗಳ ಕಾಯುವ ಖದೀಮರು “ರೊಕ್ಕಾಕೊಡುತ್ತೇವೆ, ಹೊಸ ಪೈಪ್ ಹಾಕಿಸಿಕೊಳ್ಳಿ ಎಂದು ಧರ್ಪದ ಮಾತುಗಳನ್ನು ಆಡುತ್ತಾರಂತೆ”.
ಆಕ್ರಮ ಮರಳು ದಂಧೆಕೋರರು ಹಳ್ಳದಲ್ಲಿ ಆಕ್ರಮವಾಗಿ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಇದು ಅಪರಾಧವಾಗಿದೆ. ಈ ವಿಷಯ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಹಾಗಾದರೆ ಹಳ್ಳದಲ್ಲಿ ರಸ್ತೆ ನಿರ್ಮಿಸಿಕೊಳ್ಳಲು ಅನುಮತಿ ನೀಡಿದವರು ಯಾರು? “ಕೋಟಿ ಕೋಟಿ ಮೌಲ್ಯದ ನೈಸರ್ಗಿಕ ಸಂಪತ್ತು ಸಕ್ರಮದ ಹೆಸರಿನಲ್ಲಿ ಲೂಟಿಯಾಗುತ್ತಿದ್ದರೂ ಅಧಿಕಾರಿಗಳು ಕೈಕಟ್ ಬಾಯಿ ಮುಚ್ಚು “ಎನ್ನುವಂತೆ ಇರುವದೇಕೆ. ಈ ಎಲ್ಲ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ಕೊಡಬೇಕು. ನಿಯಮ ಉಲ್ಲಂಘಿಸಿ ಮರಳು ಗಣಿಗಾರಿಕೆ ನಡೆಸಿದವರ ಪರವಾನಿಗೆಯನ್ನ ರದ್ದು ಪಡಿಸುವ ಧೈರ್ಯವನ್ನು ತೋರುವರೇ ಕಾದು ನೋಡಬೇಕಿದೆ.
ಹಾವೇರಿ; ಅಧಿಕಾರಿಗಳಿಗೆ ಚುನಾವಣೆಯ ಜಪ, ಆಕ್ರಮ ಮರಳು ದಂಧೆಕೋರರಿಗೆ ವರ ಹಳ್ಳವನ್ನೇ ಹೆದ್ದಾರಿಯನ್ನಾಗಿಸಿಕೊಂಡಿರುವ ಖದೀಮರು, ಪೈಪು ಒಡೆದು ಅಪಾರ ಪ್ರಮಾಣದಲ್ಲಿ ರೈತರಿಗೆ ಹಾನಿ
Date:
ಹಾವೇರಿ; ಅಧಿಕಾರಿಗಳಿಗೆ ಚುನಾವಣೆಯ ಜಪ, ಆಕ್ರಮ ಮರಳು ದಂಧೆಕೋರರಿಗೆ ವರ
ಹಳ್ಳವನ್ನೇ ಹೆದ್ದಾರಿಯನ್ನಾಗಿಸಿಕೊಂಡಿರುವ ಖದೀಮರು, ಪೈಪು ಒಡೆದು ಅಪಾರ ಪ್ರಮಾಣದಲ್ಲಿ ರೈತರಿಗೆ ಹಾನಿ
ಹಾವೇರಿ; ಒಂದೆಡೆ ವಿಧಾನಸಭಾ ಚುನಾವಣೆಯ ದಿನಾಂಕ ಹತ್ತಿರವಾಗುತ್ತಿದ್ದು, ಅಧಿಕಾರಿಗಳ ಚುನಾವಣೆಯನ್ನು ಯಶಸ್ವಿಗೊಳಿಸಲು ಕೇಂದ್ರಿಕರಿಸಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಇತ್ತ ಆಕ್ರಮಮರಳು ದಂಧೆಕೋರರು ಅಧಿಕಾರಿಗಳು ಚುನಾವಣೆಯ ಕರ್ತವ್ಯದಲ್ಲಿಇರುವುದರ ಲಾಭ ಪಡೆಯುವ ಉದ್ದೇಶದಿಂದ ಕೋಟ್ಯಾಂತರ ಮೌಲ್ಯದ ನೈಸರ್ಗಿಕ ಮರಳು ಸಂಪತ್ತನ್ನು ಲೂಟಿಮಾಡುವ ಕಾರ್ಯದಲ್ಲಿ ಜಿಲ್ಲೆಯಲ್ಲಿನ ತುಂಗಭದ್ರಾನದಿಯ ಪಾತ್ರದಲ್ಲಿ ಹಗಲುರಾತ್ರಿ ಎನ್ನದೇ ನಿರತರಾಗಿದ್ದಾರೆ.
ಆಕ್ರಮ ಮರಳು ದಂಧೆಕೋರರ ಖದೀಮರು ಮರಳು ಸಾಗಾಣಿಕೆಗೆ ಹಳ್ಳವನ್ನೆ ಹೆದ್ದಾರಿಯನ್ನಾಗಿ ಮಾಡಿಕೊಂಡು ಲಾರಿ, ಟಿಪ್ಪರ್, ಟ್ಯಾಕ್ಟರ್ ಗಳಲ್ಲಿ ಮರಳನ್ನು ಸಾಗಿಸಿ ಹಲವಾರು ರೈತರ ಪೈಪುಗಳನ್ನು ಒಡೆದು ಹಾಕಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ನದಿಹರಳಹಳ್ಳಿಯ ಬಳಿ ಹಾನಿಮಾಡಿರುವ ಘಟನೆ ನಡೆದಿದೆ. ಭಾರೀ ಗಾತ್ರದ ವಾಹನಗಳ ಸಾಗಾಟದ ವೇಳೆ ಸಾಕಷ್ಟ ಸಂಖ್ಯೆಯಲ್ಲಿ ನವಿಲಗಳುಸಹ ಸಾವನ್ನಪ್ಪಿವೆ. ಈ ಬಗ್ಗೆ ಹಲವಾರು ರೈತರು ಜಿಲ್ಲಾಧಿಕಾರಿಗಳಿಗೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ.
ಆಗಿರುವದೇನು?: ರಾಣೇಬೆನ್ನೂರು ತಾಲೂಕಿನ ನದಿಹರಳಹಳ್ಳಿಯ ತುಂಗಭದ್ರಾನದಿಯ ಪಾತ್ರದಲ್ಲಿ ಮರಳು ಗಣಿಗಾರಿಕೆ ನಡೆಸಲು ಟೆಂಡರ್ ಕರೆಯಲಾಗಿತ್ತು, ಎಸ್ಟಿ, ವಿಕಲಚೇತನ, ಸಾಮಾನ್ಯ ಹೀಗೆ ಹಲವಾರು ಪಾಯಿಂಟ್ಗಳನದನು ಮರಳು ಗಣಿಗಾರಿಕೆ ನಡೆಸಲು ನಿಗದಿಪಡಿಸಲಾಗಿತ್ತು. “ಎಸ್ಟಿ ಪಾಯಿಂಟ್ ಗುತ್ತಿಗೆ ಪಡೆದ ಗುತ್ತಿಗದಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ” ಎನ್ನುವ ಕಾರಣವನ್ನು ನೆಪವಾಗಿಟ್ಟುಕೊಂಡು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಈ ಪಾಯಿಂಟ್ ರದ್ದು ಪಡಿಸಿದ್ದರು.
ಈ ಎಸ್ಟಿ ಪಾಯಿಂಟ್ನಲ್ಲಿ ಕೊಟ್ಯಾಂತರ ಮೌಲ್ಯದ ಮರಳು ಸಂಗ್ರಹವಿತ್ತು. ಈ ಪಾಯಿಂಟ್ಗೆ ಹೊಂದಿಕೊಂಡು ವಿಕಲಚೇತನರಿಗೆ ಮೀಸಲಾದ ಪಾಯಿಂಟ್ ಇದ್ದು, ಎಸ್ಟಿ ಪಾಯಿಂಟ್ ರದ್ದಾಗಿರುವದರ ಲಾಭ ಪಡಯುವ ಉದ್ದೇಶದಿಂದ ಯಾರೋ ವಿಕಲಚೇತನ ಪಾಯಿಂಟ್ ಗುತ್ತಿಗೆ ಪಡೆದಿರುವ ವ್ಯಕ್ತಿಯ ಹೆಸರಿನಲ್ಲಿ (ಮೂಲ ಗುತ್ತಿಗೆದಾರನಿಗ ಆಕ್ರಮ ಮರಳು ದಂಧೆ ನಡಸುವ ಖದೀಮರು ಇಂತಿಷ್ಟು ಹಣಕೊಟ್ಟು, ತಕರಾರು ಮಾಡುವವರಿಗೆ ಒಂದಿಷ್ಟು ಹಣಕೊಟ್ಟು ನಿರಂತರವಾಗಿ ನದಿಯಪಾತ್ರದಲ್ಲಿನ ಮರಳನ್ನು ಲೂಠಿಮಾಡುತ್ತಿದ್ದಾರೆ) ಎಸ್ಟಿ ಪಾಯಿಂಟ್ನಲ್ಲಿ ಸಗ್ರಹಿಸಿದ್ದ ಮರಳನ್ನು ಹಾಗ ನಿಗದಿ ಪಡಿಸಿದ ಪಾಯಿಂಟ್ನಿಂದ ನದಿಯಪಾತ್ರದಿಂದ ಲೂಟಿ ಮಾಡುತ್ತಿದ್ದಾರೆ.
“ನದಿಯಪಾತ್ರದಿಂದ ಮರಳನ್ನು ಸಾಗಿಸಲು ರೈತರು ದಾರಿ ನೀಡದ ಕಾರಣಕ್ಕೆ ನದಿಗೆ ಹೊಂದಿಕೊಂಡಿರುವ ಹಳ್ಳವನ್ನೇ ಹೆದ್ದಾರಿಯನ್ನಾಗಿಸಿಕೊಂಡಿರುವ ಆಕ್ರಮ ಮರಳು ದಂಧೆಕೋರರು ನದಿಯಪಾತ್ರದಿಂದ ಎತ್ತುವ ಮರಳನ್ನು ಲಾರಿ, ಟಿಪ್ಪರ್, ನಾಲ್ಕುಚಕ್ರ, ಆರು ಚಕ್ರ, ಎಂಟು ಚಕ್ರದ ವಾಹನಗಳು ಮರಳು ತುಂಬಿಕೊಂಡು ದೂರದ ಬೆಂಗಳೂರು, ದಾವಣಗೆರೆ ಮತ್ತಿತರ ನಗರಗಳಿಗೆ ಸಾಗಿಸಲಾಗುತ್ತಿದೆ”. ಹಿಟಾಚಿಗಳನ್ನು ಬಳಸಿಕೊಂಡುಹಳ್ಳದಲ್ಲಿ ದಾರಿಯನ್ನು ನಿರ್ಮಿಸಲಾಗಿದೆ.
“ಈ ಹಳ್ಳದಲ್ಲಿ ರೈತರು ನದಿಯಿಂದ ಹೊಲಗಳಿಗೆ ನೀರುಹಾಯಿಸಲು ಪೈಪ್ಲೈನ್ ಅಳವಡಿಸಿಕೊಂಡಿದ್ದಾರೆ”. “ಭಾರೀ ಗಾತ್ರದ ನೂರಾರು ವಾಹನಗಳು ನೂರಾರು ಟನ್ ಮರಳನ್ನು ಹಳ್ಳದಮಾರ್ಗದಲ್ಲಿ ಸಾಗಿಸುವ ವೇಳೆ ರೈತರು ಅಳವಡಿಸಿದ ಲಕ್ಷಾಂತರ ಮೌಲ್ಯದ ಪೈಪ್ಗಳು ಒಡೆದು ಪುಡಿ ಪುಡಿಯಾಗಿವೆ”. ಈ ಬಗ್ಗೆ ಪ್ರಶ್ನಿಸಿದ ರೈತರ ಜೊತೆಗೆ ಜಗಳ ಕಾಯುವ ಖದೀಮರು “ರೊಕ್ಕಾಕೊಡುತ್ತೇವೆ, ಹೊಸ ಪೈಪ್ ಹಾಕಿಸಿಕೊಳ್ಳಿ ಎಂದು ಧರ್ಪದ ಮಾತುಗಳನ್ನು ಆಡುತ್ತಾರಂತೆ”.
ಆಕ್ರಮ ಮರಳು ದಂಧೆಕೋರರು ಹಳ್ಳದಲ್ಲಿ ಆಕ್ರಮವಾಗಿ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಇದು ಅಪರಾಧವಾಗಿದೆ. ಈ ವಿಷಯ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಹಾಗಾದರೆ ಹಳ್ಳದಲ್ಲಿ ರಸ್ತೆ ನಿರ್ಮಿಸಿಕೊಳ್ಳಲು ಅನುಮತಿ ನೀಡಿದವರು ಯಾರು? “ಕೋಟಿ ಕೋಟಿ ಮೌಲ್ಯದ ನೈಸರ್ಗಿಕ ಸಂಪತ್ತು ಸಕ್ರಮದ ಹೆಸರಿನಲ್ಲಿ ಲೂಟಿಯಾಗುತ್ತಿದ್ದರೂ ಅಧಿಕಾರಿಗಳು ಕೈಕಟ್ ಬಾಯಿ ಮುಚ್ಚು “ಎನ್ನುವಂತೆ ಇರುವದೇಕೆ. ಈ ಎಲ್ಲ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ಕೊಡಬೇಕು. ನಿಯಮ ಉಲ್ಲಂಘಿಸಿ ಮರಳು ಗಣಿಗಾರಿಕೆ ನಡೆಸಿದವರ ಪರವಾನಿಗೆಯನ್ನ ರದ್ದು ಪಡಿಸುವ ಧೈರ್ಯವನ್ನು ತೋರುವರೇ ಕಾದು ನೋಡಬೇಕಿದೆ.