ಹಾವೇರಿ ಕುರಿಗಾರರಿಗೆ ಬರಬೇಕಾದ ೯ಕೋಟಿ ಪರಿಹಾರದ ಹಣ ಬಿಡುಗಡೆಗೆ ಒತ್ತಾಯ

Date:

ಹಾವೇರಿ ಕುರಿಗಾರರಿಗೆ ಬರಬೇಕಾದ ೯ಕೋಟಿ ಪರಿಹಾರದ ಹಣ ಬಿಡುಗಡೆಗೆ ಒತ್ತಾಯ
ಹಾವೇರಿ: ಅನುಗ್ರಹ ಯೋಜಯಡಿಯಲ್ಲಿ ಹಾವೇರಿ ಜಿಲ್ಲೆಯ ಕುರಿಗಾರರಿಗೆ ಬರಬೇಕಾದ ಪರಿಹಾರದ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಭೂಮಿಪುತ್ರ ರೈತ ಸಂಘದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಫಕ್ಕಿರಗೌಡ ಗಾಜಿಗೌಡರ ಈಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವಿವವರಿಸಿ “ಜಿಲ್ಲೆಯಲ್ಲಿ ಅನುಗ್ರಹ ಯೋಜನೆಯಡಿಯಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಡಿಯಲ್ಲಿ ಡಿಸೆಂಬರ್ ೨೦೨೧ ರಿಂದ ಮಾರ್ಚ್ ೨೦೨೩ ರವರೆಗೆ ಜಿಲ್ಲೆಯಲ್ಲಿ ಒಟ್ಟು ೧೬೮೦೫ (ಹದಿನಾರು ಸಾವಿರದಾ ಎಂಟು ನೂರಾ ಐದು) ಫಲಾನುಭವಿಗಳನ್ನು ಗುರುತಿಸಲಾಗಿತ್ತು.
ಅದರಲ್ಲಿ ದೊಡ್ಡ ಕುರಿಗಳು ೧೪೯೫೩ ಮತ್ತು ದೊಡ್ಡ ಮೇಕೆಗಳು ೨೮೭೫ ಸೇರಿದಂತೆ ಒಟ್ಟು ೧೭೮೨೮ ಹಾಗೂ ೩೫೫ ಕುರಿ ಮರಿಗಳು ಮತ್ತು ೧೮೧ ಮೇಕೆ ಮರಿಗಳು ಸೇರಿದಂತೆ ಒಟ್ಟು ೫೩೬ ಮರಿಗಳು ಮೃತಪಟ್ಟಿದ್ದವು. ಅದಕ್ಕೆ ಪರಿಹಾರ ರೂಪದಲ್ಲಿ ಒಟ್ಟು ೯೦೮೯೩೦೦೦=೦೦ (ಒಂಬತ್ತು ಕೋಟಿ ಎಂಟು ಲಕ್ಷ ತೊಂಬತ್ತು ಮೂರು ಸಾವಿರ ರೂ.ಗಳು) ಬಿಡುಗಡೆ ಆಗಬೇಕಾಗಿತ್ತು.
ಆದರೆ ಈವರೆಗೂ ಅನುಗ್ರಹ ಯೋಜನೆಯಡಿಯಲ್ಲಿ ಮೂರು ವರ್ಷಗಳ ಪರಿಹಾರದ ಹಣ ಬಿಡುಗಡೆ ಆಗಿರುವುದಿಲ್ಲ. ಫಲಾನುಭವಿಗಳಿಗೆ ಬಿಡುಗಡೆ ಆಗಬೇಕಾದ ಪರಿಹಾರದ ಕೂಡಲೇ ಸರ್ಕಾರದಿಂದ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಡಳಿತ ಭವನದ ಮುಂದೆ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದವಿವರಿಸಿದ್ದಾರೆ,.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಭೂಮಿಪುತ್ರ ರೈತಸಂಘ ಜಿಲ್ಲಾಧ್ಯಕ್ಷ ಫಕ್ಕಿರಗೌಡ ಗಾಜಿಗೌಡರ, ಕಾರ್ಯದರ್ಶಿ ಸಂಗಮೇಶ ನಾಗನೂರ, ಕಾರ್ಯಾಧ್ಯಕ್ಷ ನೀಲಪ್ಪ ಹುಲಗಮ್ಮನವರ ಸೇರಿದಂತೆ ಹಲವರು ಇದ್ದರು.

 

 

 

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿ ಕುರಿಗಾರರಿಗೆ ಬರಬೇಕಾದ ೯ಕೋಟಿ ಪರಿಹಾರದ ಹಣ ಬಿಡುಗಡೆಗೆ ಒತ್ತಾಯ
ಹಾವೇರಿ: ಅನುಗ್ರಹ ಯೋಜಯಡಿಯಲ್ಲಿ ಹಾವೇರಿ ಜಿಲ್ಲೆಯ ಕುರಿಗಾರರಿಗೆ ಬರಬೇಕಾದ ಪರಿಹಾರದ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಭೂಮಿಪುತ್ರ ರೈತ ಸಂಘದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಫಕ್ಕಿರಗೌಡ ಗಾಜಿಗೌಡರ ಈಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವಿವವರಿಸಿ “ಜಿಲ್ಲೆಯಲ್ಲಿ ಅನುಗ್ರಹ ಯೋಜನೆಯಡಿಯಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಡಿಯಲ್ಲಿ ಡಿಸೆಂಬರ್ ೨೦೨೧ ರಿಂದ ಮಾರ್ಚ್ ೨೦೨೩ ರವರೆಗೆ ಜಿಲ್ಲೆಯಲ್ಲಿ ಒಟ್ಟು ೧೬೮೦೫ (ಹದಿನಾರು ಸಾವಿರದಾ ಎಂಟು ನೂರಾ ಐದು) ಫಲಾನುಭವಿಗಳನ್ನು ಗುರುತಿಸಲಾಗಿತ್ತು.
ಅದರಲ್ಲಿ ದೊಡ್ಡ ಕುರಿಗಳು ೧೪೯೫೩ ಮತ್ತು ದೊಡ್ಡ ಮೇಕೆಗಳು ೨೮೭೫ ಸೇರಿದಂತೆ ಒಟ್ಟು ೧೭೮೨೮ ಹಾಗೂ ೩೫೫ ಕುರಿ ಮರಿಗಳು ಮತ್ತು ೧೮೧ ಮೇಕೆ ಮರಿಗಳು ಸೇರಿದಂತೆ ಒಟ್ಟು ೫೩೬ ಮರಿಗಳು ಮೃತಪಟ್ಟಿದ್ದವು. ಅದಕ್ಕೆ ಪರಿಹಾರ ರೂಪದಲ್ಲಿ ಒಟ್ಟು ೯೦೮೯೩೦೦೦=೦೦ (ಒಂಬತ್ತು ಕೋಟಿ ಎಂಟು ಲಕ್ಷ ತೊಂಬತ್ತು ಮೂರು ಸಾವಿರ ರೂ.ಗಳು) ಬಿಡುಗಡೆ ಆಗಬೇಕಾಗಿತ್ತು.
ಆದರೆ ಈವರೆಗೂ ಅನುಗ್ರಹ ಯೋಜನೆಯಡಿಯಲ್ಲಿ ಮೂರು ವರ್ಷಗಳ ಪರಿಹಾರದ ಹಣ ಬಿಡುಗಡೆ ಆಗಿರುವುದಿಲ್ಲ. ಫಲಾನುಭವಿಗಳಿಗೆ ಬಿಡುಗಡೆ ಆಗಬೇಕಾದ ಪರಿಹಾರದ ಕೂಡಲೇ ಸರ್ಕಾರದಿಂದ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಡಳಿತ ಭವನದ ಮುಂದೆ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದವಿವರಿಸಿದ್ದಾರೆ,.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಭೂಮಿಪುತ್ರ ರೈತಸಂಘ ಜಿಲ್ಲಾಧ್ಯಕ್ಷ ಫಕ್ಕಿರಗೌಡ ಗಾಜಿಗೌಡರ, ಕಾರ್ಯದರ್ಶಿ ಸಂಗಮೇಶ ನಾಗನೂರ, ಕಾರ್ಯಾಧ್ಯಕ್ಷ ನೀಲಪ್ಪ ಹುಲಗಮ್ಮನವರ ಸೇರಿದಂತೆ ಹಲವರು ಇದ್ದರು.

 

 

 

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್ ಶಿವಣ್ಣನವರ

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್...

ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ

  ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ ಹಾವೇರಿ : ಜಿಲ್ಲಾ...

ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ

  ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ ಹಾವೇರಿ: ಜಿಲ್ಲೆಯ ಸರ್ವಾಂಗಿಣ...