ಹಾವೇರಿ-ಗುತ್ತಲಕ್ಕೆ ೧೫೦ಕೋಟಿರೂ ವೆಚ್ಚದ ಅಮೃತ-೨ ಯೋಜನೆ ಮಂಜೂರಿ: ರುದ್ರಪ್ಪ ಲಮಾಣಿ
ಹಾವೇರಿ: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲಾ ಕೇಂದ್ರ ಸ್ಥಳವಾದ ಹಾವೇರಿ ನಗರಕ್ಕೆ ಹಾಗೂ ತಾಲೂಕಿನ ಗುತ್ತಲ ಪಟ್ಟಣಕ್ಕೆ ೧೫೦ಕೋಟಿರೂಗಳ ಅಮೃತ-೨ ಕುಡಿಯವ ನೀರಿನ ಯೋಜನೆ ಮಂಜೂರಿಯಾಗಿದೆ. ಒಂದುವಾರದಲ್ಲಿ ಟೆಂಡರ ಪ್ರಕ್ರಿಯೆ ಆರಂಭವಾಗಲಿದೆ ಎಂದು ಉಪಸಭಾಪತಿ ರುದ್ರಪ್ಪ ಲಮಾಣಿ ತಿಳಿಸಿದರು.
ಸೋಮವಾರ ಇಲ್ಲಿನ ತಾಲೂಕಾ ಪಂಚಾಯತಿ ಆವರಣದಲ್ಲಿ ತಮ್ಮ ಜನಸಂಪರ್ಕ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಈಹಿಂದೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಆರಂಭಿಸಲಾಗಿ ಹಾವೇರಿನಗರದ ಎರಡನೆ ಹಂತದ ೨೪+೭ ಕುಡಿಯುವ ನೀರಿನ ಯೋಜನೆ ಇನ್ನು ಅನುಷ್ಠಾನವಾಗದಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಇದರ ಬಗ್ಗೆ ಮಾತನಾಡಲು ನನಗೆ ಬೇಸರ ಎನಿಸುತ್ತದೆ. ಹಾವೇರಿನಗರ ಹಾಗೂ ಗುತ್ತಲ ಪಟ್ಟಣಗಳಿಗೆ ಕುಡಿಯವ ನೀರು ಸರಬರಾಜು ಯೋಜನೆಯ ಬಗ್ಗೆ ಮುಖ್ಯಮಂತ್ರಿ ಹಾಗೂ ಪೌರಾಡಳಿತ ಸಚಿವರ ಜೊತೆಗೆ ಮಾತನಾಡಿರುವೆ ಎಂದು ಅವರು ಹೇಳಿದರು.
ಹಾವೇರಿನಗರಕ್ಕೆ ಕುಡಿಯುವ ನೀರು ಪೂರೈಕೆ ಯೋಜನೆ ಹಾಗೂ ಯುಜಿಡಿ ಅನುಷ್ಠಾನಗೊಳಿಸುವುದನ್ನು ನಾನು ಚಾಲೇಂಜ್ ಆಗಿ ತಗೆದುಕೊಂಡಿರುವೆ. ತುಂಗಭದ್ರಾನದಿಯ ಸಮೀಪವಿದ್ದರೂ ಸಹ ಗುತ್ತಲ ಪಟ್ಟಣಕ್ಕೆ ನೀರು ಸರಬರಾಜು ಸಾಧ್ಯವಾಗುತ್ತಿಲ್ಲ. ಅಮೃತ-೨ ಯೋಜನೆ ಮಂಜೂರಿಯಾಗಿರುವುದರಿಂದ ನನ್ನ ಅವಧಿಯಲ್ಲಿಯೇ ಈ ಯೋಜನೆ ಪೂರ್ಣಗೊಳಿಸಿ ಹಾವೇರಿನಗರ ಜನತೆಗೆ ಹಾಗೂ ಗುತ್ತಲಪಟ್ಟಣದ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ರುದ್ರಪ್ಪ ಲಮಾಣಿ ತಿಳಿಸಿದರು. ಅವರೊಂದಿಗೆ ಜಿಲ್ಲಾ ಕಾಂಗ್ರೆಸ್ ವಕ್ತಾರ ಸಂಜಯಗಾಂಧಿ ಸಂಜೀವಣ್ಣನವರ ಮತ್ತಿತರರು ಇದ್ದರು.
ಪಟಾಕಿ ದುರಂತದಲ್ಲಿ ಮೃತರ ಕುಟುಂಬಗಳಿಗೆ ಹೆಚ್ಚುವರಿ ೧ಲಕ್ಷರೂ ಪರಿಹಾರ
ಹಾವೇರಿ: ಹಾವೇರಿಯ ಸಮೀಪದ ಆಲದಕಟ್ಟಿಯಲ್ಲಿ ಕಳೆದ ವಾರ ನಡೆದ ಪಟಾಕಿ ದುರಂತದಲ್ಲಿ ನನ್ನ ಮತ ಕ್ಷೇತ್ರದ ಕಾಟೇನಹಳ್ಳಿಗ್ರಾಮದ ಮೂವರು ಯುವಕರು ಮೃತಪಟ್ಟಿದ್ದಾರೆ. ಈ ಘೋರ ಘಟನೆ ನಡೆಯಬಾರದಿತ್ತು. ಈ ದುರ್ಘಟನೆಯಲ್ಲಿ ಮೃತಪಟ್ಟಿರುವ ಮೂವರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ೫ಲಕ್ಷರೂಗಳ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತರ ಕುಟುಂಬಗಳಿಗೆ ಹೆಚ್ಚುವರಿಯಾಗಿ ಇನ್ನು ೧ಲಕ್ಷರೂಗಳ ಪರಿಹಾರವನ್ನು ಸರ್ಕಾರ ಘೋಷಿಸಿದೆ ಎಂದು ಉಪಸಭಾಪತಿ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯ ಶಾಸಕರು ಸೇರಿ ವ್ಯಯಕ್ತಿಕವಾಗಿಯು ಸಹ ಮೃತರ ಕುಟುಂಗಳಿಗೆ ಪರಿಹಾರವನ್ನು ನೀಡುವುದಾಗಿ ಅವರು ಹೇಳಿದರು.