
ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ
ಶೀಘ್ರ ನೋಂದಣಿ- ತುರ್ತು ಚಿಕಿತ್ಸೆಗೆ ಫಾಸ್ಟ್ ಟ್ರ್ಯಾಕ್ ಸೇವೆಗೆ ಕೌಂಟರ್ ಆರಂಭ
-ಶಾಸಕ ನೆಹರು ಓಲೇಕಾರ
ಹಾವೇರಿ : ಜನಸಾಮಾನ್ಯರು, ದೀನದಲಿತರು, ಕಡುಬಡವರು ಫಾಸ್ಟ್ ಟ್ರ್ಯಾಕ್ ಸೇವೆಯ ಮುಖಾಂತರ ಶೀಘ್ರವಾಗಿ ನೋಂದಣಿ ಮಾಡಿಕೊಳ್ಳುವ ಮೂಲಕ ತುರ್ತು ಚಿಕಿತ್ಸೆ ಪಡೆಯಬಹುದು ಎಂದು ರಾಜ್ಯ ಅನುಸೂಚಿತ ಜಾಗತಿಗಳ ಹಾಗೂ ಅನುಸೂಚಿತ ಬುಡಕಟ್ಟು ಆಯೋಗಗಳ ಅಧ್ಯಕ್ಷರಾದ ಶಾಸಕ ನೆಹರು ಓಲೇಕಾರ ಅವರು ಹೇಳಿದರು.
ನಗರದ ವೈದ್ಯಕೀಯ “ಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಶನಿವಾರ ಫಾಸ್ಟ್ ಟ್ರ್ಯಾಕ್ ಸೇವೆ ಕೌಂಟರ್ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸೇವೆ ಆರೋಗ್ಯ ಸುಧಾರಣೆಗೆ ಸರ್ಕಾರ ತೆಗೆದುಕೊಂಡ ಮತ್ತೊಂದು ಮೈಲುಗಲ್ಲಾಗಿದೆ. ಬೇರೆ ಬೇರೆ ರಾಜ್ಯ ಹಾಗೂ ರಾಜ್ಯದ ಕೆಲವೊಂದು ಆಯ್ದ ಜಿಲ್ಲೆಗಳಲ್ಲಿ ಮಾತ್ರ ಫಾಸ್ಟ್ ಟ್ರ್ಯಾಕ್ ಸೇವೆ ಸೌಲಭ್ಯ”ತ್ತು. ಇಂದು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಂಭವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅನೇಕ ದೇಶಗಳಲ್ಲಿ ಕೋ”ಡ್ ಅಲೆ ಹೆಚ್ಚಿರುವುದರಿಂದ ಬರುವ ದಿನಗಳಲ್ಲಿ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಸಾರ್ವಜನಿಕರು ಸಾಮಾಜಿಕ ಅಂತರ, ಮಾಸ್ಕಧಾರಣೆ, ಸ್ಯಾನಿಟೈಸರ್, ಲೇಪನ ಮಾಡಬೇಕು. ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.”ರಕ್ತಿಮಠ ಪ್ರಾಸ್ತಾ”ಕವಾಗಿ ಮಾತನಾಡಿದರು. ಹಾವೇರಿ ವೈದ್ಯಕೀಯ “ಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಉದಯ ಮುಳಗುಂದ, ವೈದ್ಯಕೀಯ ಅಧೀಕ್ಷಕ ಡಾ.ಪಿ.ಆರ್.ಹಾವನೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕುಮಾರಸ್ವಾ”, ಡಾ.ನಿರಂಜನ ಬಣಕಾರ, ನಗರಸಭೆ ಸ್ಥಾ ಸ”ತಿ ಅಧ್ಯಕ್ಷ ಸತೀಶ ಬಂಡಳ, ಈರಣ್ಣಾ ಸಂಗೂರ, ಗಿರೀಶ ತುಪ್ಪದ, ನ್ಯಾಯವಾದಿ ನೀಲಪ್ಪ ಚಾವಡಿ, ಕೆ.ಸಿ.ಕೋರಿ, ಮಂಜುನಾಥ ಇಟಗಿ, ಪರಶುರಾಮ ಹಕ್ಕಿ, ಸುಶೀಲಾ ದೇವಸೂರ ಸೇರಿದಂತೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಇತರರು ಉಪಸ್ಥಿತರಿದ್ದರು. ಸುಧಾಕರ ದೈಜ್ಞ ಕಾರ್ಯಕ್ರಮ ನಿರೂಪಿಸಿದರು. ಡಾ.ಚುರ್ಚಿಹಾಳ ವಂದಿಸಿದರು.