ಹಾವೇರಿ: ಪುನೀತ್ ೫೦ನೇ ಹುಟ್ಟುಹಬ್ಬ ಯಲಗಚ್ಚಲ್ಲಿ ಅರ್ಥ ಪೂರ್ಣ ಆಚರಣೆ
ಹಾವೇರಿ: ತಮ್ಮ ನಡೆ-ನುಡಿಯ ಮೂಲಕ ಕೋಟ್ಯಾಂತರ ಅಭಿಮಾನಿಗಳಲ್ಲಿ ಹಚ್ಚ ಹಸಿರಾಗಿರುವ ದಿ.ಪುನೀತ್ ರಾಜ್ ಕುಮಾರ್ ಅವರ ೫೦ನೇ ವರ್ಷದ ಹುಟ್ಟುಹಬ್ಬವನ್ನು ತಾಲೂಕಿನ ಯಲಗಚ್ಚಗ್ರಾಮದಲ್ಲಿ ಪುನೀತ ಅವರ ಪುತ್ಥಳಿ ನಿರ್ಮಿಸಿರುವ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ಪ್ರಕಾಶ್ ಮರಬದ ಹಾಗೂ ಸಂಜಯಗಾಂಧಿ ಸಂಜೀವಣ್ಣನವರ, ಮಂಜುಳಾ ಕಟ್ಟಿಮನಿ ಸಾವಿರಾರು ಅಭಿಮಾನಿಗಳಿಗೆ ಅರ್ನ ಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಯಲಗಚ್ಚ ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಪುತ್ಥಳಿಯನ್ನು ವಿಶೇವಾಗಿ ಅಲಂಕರಿಸಲಾಗಿತ್ತ, ಸೋಮವಾರ ಬೆಳಿಗ್ಗೆ ಯಿಂದಲೇ ರಾಜ್ಯಾದ್ಯಂತ ಅಭಿಮಾನಿಗಳು ಆಗಮಿಸಿ ಪುನೀತ್ ಪುತ್ಥಳಿಗೆ ಪೂಜೆ- ಪುನಸ್ಕಾರ ನೆರವೇರಿಸಿದರು.
ಗುತ್ತಲ ಪೊಲೀಸ್ ಠಾಣೆಯ ಪಿಎಸ್ಆಯ್ ಬಸನಗೌಡ ಬಿರಾದರ್ ಕಾರ್ಯಕ್ರಮ ಉದ್ಘಾಟಿಸಿ ಮಾಡಿ ಕೇಕ್ ಕಟ್ ಮಾಡಿದರು. ನಂತರ ಅಪ್ಪು ಅಪ್ಪಟ ಅಭಿಮಾನಿ ಆದ ನೃತ್ಯ ನಿರ್ದೇಶಕ ಪ್ರಕಾಶ್ ಮರಬದ, ಸಂಜಯಗಾಂಧಿ ಸಂಜೀವಣ್ಣನವರ, ಮಂಜು ದಡ್ಡೂರ, ನಾಗರಾಜ ಮಾಳಮ್ಮನವರ ಸೇರಿದಂತೆ ಅನೇಕ ಗಣ್ಯರು ಹಾಗೂ ಅನೇಕ ಕಲಾವಿದರು ಸಾವಿರಾರು ಅಭಿಮಾನಿಗಳು ಊರಿನ ಗ್ರಾಮಸ್ಥರು ಅಪ್ಪು ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಸಾವಿರಾರು ಅಭಿಮಾನಿಗಳೊಂದಿಗೆ ಅಪ್ಪು ಸ್ಮರಣೆಮಾಡಿದರು.
ಸರತಿ ಸಾಲಿನಲ್ಲಿ ನಿಂತು ಹೊಳಿಗೆ ಊಟ ಸವಿದ ಅಭಿಮಾನಿಗಳು: ಪುನೀತ್ ರಾಜಕುಮಾರ ಅವರ ೫೦ನೇ ಹುಟ್ಟುಹಬದ ಹಬ್ಬದ ಹಿನ್ನಲೆಯಲ್ಲಿ ಅಭಿಮಾನಿ ಪ್ರಕಾಶ್ ಮತ್ತು ಅವರ ಸ್ನೇಹಿತರು ಆಗಮಿಸಿದ ಸಾವಿರಾರು ಅಭಿಮಾನಿಗಳಿಗೆ ಹೋಳಿಗೆ ಊಟದ ಮೂಲಕ ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಸರತಿ ಸಾಲಿನಲ್ಲಿ ಆಗಮಿಸಿದ ಅಭಿಮಾನಿಗಳು ಹೋಳಿಗೆ ಊಟ ಸವಿದ ಅಪ್ಪು ಅಭಿಮಾನಿಗಳು ಅಪ್ಪು ಅಜರಾಮರ ಎಂಬ ಘೋಷಣೆ ಮೊಳಗಿಸಿದರು.
ಹಾವೇರಿ: ಪುನೀತ್ ೫೦ನೇ ಹುಟ್ಟುಹಬ್ಬ ಯಲಗಚ್ಚಲ್ಲಿ ಅರ್ಥ ಪೂರ್ಣ ಆಚರಣೆ
Date:
ಹಾವೇರಿ: ಪುನೀತ್ ೫೦ನೇ ಹುಟ್ಟುಹಬ್ಬ ಯಲಗಚ್ಚಲ್ಲಿ ಅರ್ಥ ಪೂರ್ಣ ಆಚರಣೆ
ಹಾವೇರಿ: ತಮ್ಮ ನಡೆ-ನುಡಿಯ ಮೂಲಕ ಕೋಟ್ಯಾಂತರ ಅಭಿಮಾನಿಗಳಲ್ಲಿ ಹಚ್ಚ ಹಸಿರಾಗಿರುವ ದಿ.ಪುನೀತ್ ರಾಜ್ ಕುಮಾರ್ ಅವರ ೫೦ನೇ ವರ್ಷದ ಹುಟ್ಟುಹಬ್ಬವನ್ನು ತಾಲೂಕಿನ ಯಲಗಚ್ಚಗ್ರಾಮದಲ್ಲಿ ಪುನೀತ ಅವರ ಪುತ್ಥಳಿ ನಿರ್ಮಿಸಿರುವ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ಪ್ರಕಾಶ್ ಮರಬದ ಹಾಗೂ ಸಂಜಯಗಾಂಧಿ ಸಂಜೀವಣ್ಣನವರ, ಮಂಜುಳಾ ಕಟ್ಟಿಮನಿ ಸಾವಿರಾರು ಅಭಿಮಾನಿಗಳಿಗೆ ಅರ್ನ ಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಯಲಗಚ್ಚ ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಪುತ್ಥಳಿಯನ್ನು ವಿಶೇವಾಗಿ ಅಲಂಕರಿಸಲಾಗಿತ್ತ, ಸೋಮವಾರ ಬೆಳಿಗ್ಗೆ ಯಿಂದಲೇ ರಾಜ್ಯಾದ್ಯಂತ ಅಭಿಮಾನಿಗಳು ಆಗಮಿಸಿ ಪುನೀತ್ ಪುತ್ಥಳಿಗೆ ಪೂಜೆ- ಪುನಸ್ಕಾರ ನೆರವೇರಿಸಿದರು.
ಗುತ್ತಲ ಪೊಲೀಸ್ ಠಾಣೆಯ ಪಿಎಸ್ಆಯ್ ಬಸನಗೌಡ ಬಿರಾದರ್ ಕಾರ್ಯಕ್ರಮ ಉದ್ಘಾಟಿಸಿ ಮಾಡಿ ಕೇಕ್ ಕಟ್ ಮಾಡಿದರು. ನಂತರ ಅಪ್ಪು ಅಪ್ಪಟ ಅಭಿಮಾನಿ ಆದ ನೃತ್ಯ ನಿರ್ದೇಶಕ ಪ್ರಕಾಶ್ ಮರಬದ, ಸಂಜಯಗಾಂಧಿ ಸಂಜೀವಣ್ಣನವರ, ಮಂಜು ದಡ್ಡೂರ, ನಾಗರಾಜ ಮಾಳಮ್ಮನವರ ಸೇರಿದಂತೆ ಅನೇಕ ಗಣ್ಯರು ಹಾಗೂ ಅನೇಕ ಕಲಾವಿದರು ಸಾವಿರಾರು ಅಭಿಮಾನಿಗಳು ಊರಿನ ಗ್ರಾಮಸ್ಥರು ಅಪ್ಪು ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಸಾವಿರಾರು ಅಭಿಮಾನಿಗಳೊಂದಿಗೆ ಅಪ್ಪು ಸ್ಮರಣೆಮಾಡಿದರು.
ಸರತಿ ಸಾಲಿನಲ್ಲಿ ನಿಂತು ಹೊಳಿಗೆ ಊಟ ಸವಿದ ಅಭಿಮಾನಿಗಳು: ಪುನೀತ್ ರಾಜಕುಮಾರ ಅವರ ೫೦ನೇ ಹುಟ್ಟುಹಬದ ಹಬ್ಬದ ಹಿನ್ನಲೆಯಲ್ಲಿ ಅಭಿಮಾನಿ ಪ್ರಕಾಶ್ ಮತ್ತು ಅವರ ಸ್ನೇಹಿತರು ಆಗಮಿಸಿದ ಸಾವಿರಾರು ಅಭಿಮಾನಿಗಳಿಗೆ ಹೋಳಿಗೆ ಊಟದ ಮೂಲಕ ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಸರತಿ ಸಾಲಿನಲ್ಲಿ ಆಗಮಿಸಿದ ಅಭಿಮಾನಿಗಳು ಹೋಳಿಗೆ ಊಟ ಸವಿದ ಅಪ್ಪು ಅಭಿಮಾನಿಗಳು ಅಪ್ಪು ಅಜರಾಮರ ಎಂಬ ಘೋಷಣೆ ಮೊಳಗಿಸಿದರು.