ಹಾವೇರಿ ಬಸ್ ನಿಲ್ದಾಣದಲ್ಲಿ 9.45 ಲಕ್ಷ ರೂ.ಗಳ ಚಿನ್ನಾಭರಣ ಕಳವು
ಹಾವೇರಿ; ಇಲ್ಲಿನ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ದಲ್ಲಿ ಹಾವೇರಿ -ರಾಣೇಬೆನ್ನೂರು ಬಸ್ ನಿಲ್ಲುವ ಅಂಕಣದಲ್ಲಿ ನಿಲುಗಡೆ ಯಾಗಿದ್ದ ಬೆಂಗಳೂರು ಕಡೆಗೆ ಹೋಗುವ ಬಸ್ಸನ್ನು ರಾಣೇಬೆನ್ನೂರು ನಿವಾಸಿ ಸುನೀತಾ ಪೊಲೀಸಗೌಡ್ರ
ಹತ್ತುವಾಗ ಯಾರೋ ಕಳ್ಳರು ಅವರ ಬಳಿ ಇದ್ದ ಬ್ಯಾಗಿನ ಜೀಪನ್ನು ಅವರಿಗೆ ಗೊತ್ತಾಗದಂತೆ ತೆಗೆದು ಅದರಲ್ಲಿದ್ದ 9.45,000/- ರೂ.ಗಳ ಕಿಮ್ಮತ್ತಿನ ಸುಮಾರು 210 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಸುಮಾರು 40 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಜೈನ್ ಸರ, ಅ:ಕಿ: 1,80,000/-,
ಸುಮಾರು 40 ಗ್ರಾಂ ತೂಕದ ಬಂಗಾರದೆ ಲಾಂಗ್ ಜೈನ್ ಸರ ಪದಕೆ ಸಮೇತ ಅ:ಕಿ: 1,80,000/- , ಸುಮಾರು 20 ಗ್ರಾಂ ತೂಕದ ಬಂಗಾರದ ನೆಕ್ಸಸ್ ಆ:ಕಿ: 90,000/- ರೂ ಗಳು. ಸುಮಾರು 15 ಗ್ರಾಂ ತೂಕದ 06 ಬಂಗಾರದ ಬಳೆಗಳು ಅ:ಕಿ: 4.0.5000/- ರೂ ಗಳು. ಸುಮಾರು 02 ಗ್ರಾಂ ತೂಕದ ಬಂಗಾರದ ಸ್ಟೋನ್ ಇರುವ ಸರ ಅ:ಕಿ: 9,000/- ರೂ ಗಳು. ಸುಮಾರು 05 ಗ್ರಾಂ ತೂಕದ 02 ಬಂಗಾರದೆ ಕಿಯೋಲೆಗಳು ಅಕಿ: 45,000/- ರೂ ಗಳು.ಸುಮಾರು 04 ಗ್ರಾಮ ತೂಕ ಇರುವ 02 ಕಿವಿಯೋಲೆಗಳು ಅ:ಕಿ: 36,000/-, ರೂ ಗಳು. ಹೀಗೆ ಒಟ್ಟು ಸಮಾರು 210 ಗ್ರಾಂ ತೂಕದ 9.45 ಲಕ್ಷ ಮೌಲ್ಯದ
ಬಂಗಾರದ ಆಭರಣಗಳು ಕಳವಾಗಿವೆ. ಈ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.
ಅಪರಾಧ ಚಟುವಟಿಕೆಗಳ ತಾಣವಾಗಿರುವ ಬಸ್ ನಿಲ್ದಾಣ: ಹಾವೇರಿ ಬಸ್ ನಿಲ್ದಾಣಕ್ಕೆ ನಿತ್ಯ ಹತ್ತಾರು ಸಾವಿರ ಪ್ರಯಾಣಿಕರು ಬರುತ್ತಾರೆ, ಇಲ್ಲಿಂದ ಬೇರೆ ಬೇರೆ ಊರುಗಳಿಗೆ ಪ್ರಯಾಣಿಸುತ್ತಾರೆ. ಬಸ್ನಿಲ್ದಾಣದಲ್ಲಿ ಕಳ್ಳ ಕಾಕರ ಕಾಟ
ವಿಪರೀತವಾಗಿ ಹೆಚ್ಚಾಗಿದೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಪ್ರಯಾಣಿಕರ ಸುರಕ್ಷಿತಗೆ ಕಠಿಣ ಕ್ರಮಗಳನ್ನು ಜಾರಿಗೆ ತರಬೇಕಿದೆ.
ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಕಾರಣಕ್ಕಾಗಿ ಬಸ್ ನಲ್ಲಿ ಸಿಟುಹಿಡಿಯಲು ಮಹಿಳೆಯರು ಮುಂದಾದ ಸಂದರ್ಭದಲ್ಲಿ ಅವರ ಗಮ ಬೇರೆ ಕಡೆ ಸೆಳೆದು ಅವರ ಬಳಿ ಇರುವ ನಗದು, ಚಿನ್ನಾಭರಣಗಳನ್ನು ಕದ್ದಿರುವ ಹಲವಾರು ಪ್ರಕರಣ ನಡೆದಿವೆ. ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ, ಕಳ್ಳಕಾಕರ ಹೆಡೆಮುರಿ ಕಟ್ಟಲು ಕಠಿಣ ಕ್ರಮಗಳನ್ನು ಜಾರಿಗೆ ತರಬೇಕೆನ್ನುವುದು ಪ್ರಯಾಣಿಕರ ಆಗ್ರವಾಗಿದೆ.