ಹಾವೇರಿ ಬ್ಲಡ್ ಬ್ಯಾಂಕ್ ಮೆಡಿಕಲ್ ಆಫೀಸರ್ ಡಾ. ಬಸವರಾಜ ತಳವಾರಗೆ ಡಬ್ಲುಬಿಸಿ ಪ್ರಶಸ್ತಿ ಪ್ರದಾನ
ಹಾವೇರಿ: ಇಲ್ಲಿನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜಿಲ್ಲಾ ಆಸ್ಪತ್ರೆಯ ಹಾವೇರಿ ಬ್ಲಡ್ ಬ್ಯಾಂಕ್ ಮೆಡಿಕಲ್ ಆಫೀಸರ್ ಡಾ. ಬಸವರಾಜ ಹನುಮಂತಪ್ಪ ತಳವಾರ ಅವರಿಗೆ ಡಬ್ಲುಬಿಸಿ ಪ್ರಶಸ್ತಿಯನ್ನು (ಮಹಾತ್ಮಾ ಗಾಂಧೀಜಿ ಹೆಸರಿನಲ್ಲಿ ಬಿಳಿ ರಕ್ತಕಣ ಪ್ರಶಸ್ತಿ) ಜೂ.೨೧ರಂದು ಬೆಂಗಳೂರಿನ ಜಯನಗರದಲ್ಲಿನ ಬಿ.ಇ.ಎಸ್ ಡಿಗ್ರಿ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಕರ್ನಾಟಕ ವಿದ್ಯಾರ್ಥಿ ಕೂಟ ಟ್ರಸ್ಟ್ ಭಾರತ್ ವಿದ್ಯಾ ಸಂಸ್ಥೆ ಆಯೋಜಿಸಿದ್ದ ವಿಶ್ವ ರಕ್ತದಾನಿ ದಿನಾಚರಣೆ-೨೪ ಸಮಾರಂಭದಲ್ಲಿ ಪ್ರದಾನ ಮಾಡಲಾಗಿದೆ.
ಬ್ಲಡ್ ಬ್ಯಾಂಕ್ ಕೇತ್ರದಲ್ಲಿ ಡಾ. ಬಸವರಾಜ ತಳವಾರ ಅವರು ಸಲ್ಲಿಸಿರುವ ಸೇವೆ ಹಾಗೂ ಸಾಧನೆಯನ್ನು ಗುರುತಿಸಿರುವ ಕರ್ನಾಟಕ ವಿದ್ಯಾರ್ಥಿ ಕೂಟ ಟ್ರಸ್ಟ್ ಭಾರತ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ ಆರ್ ನಿರ್ಮಲ್ ಕುಮಾರ್, ಬಿ.ಇ.ಎಸ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಿ.ಸಿ. ಶಿವಲಿಂಗೇಗೌಡ, ಸಂಸ್ಥೆಯ ಮುಖ್ಯಸ್ಥ ಹರ್ಷ ಮತ್ತಿತರರು ಡಾ. ಬಸವರಾಜ ತಳವಾರ ಅವರಿಗೆ ಡಬ್ಲುಬಿಸಿ ಪ್ರಶಸ್ತಿಯನ್ನು ಫಲ-ಪಷ್ಪಗಳೊಂದಿಗೆ ಸನ್ಮಾನಿಸಿ ಪ್ರಶಸ್ತಿ ಫಲಕ ಪ್ರದಾನ ಮಾಡುವ ಮೂಲಕ ಗೌರವಿಸಿದರು.