ಹಾವೇರಿ ಮೀಸಲು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ:ಮೇಗಳಮನಿ
ಹಾವೇರಿ: ಹಂತ ಹಂತವಾಗಿ ರಾಜಕಾರಣದಲ್ಲಿ ಬೆಳೆಯುತ್ತಾ ಬಂದಿರುವ ನಾನು ಜಿ.ಪಂ. ಸದಸ್ಯರಾಗಿ ೨೦೦೫ ರಲ್ಲಿ ಆಯ್ಕೆಯಾದ ನಂತರ, ಜಿ.ಪಂ. ಅಧ್ಯಕ್ಷನಾಗಿ ಹಾವೇರಿಜಿಲ್ಲೆಯ ಹಾಗೂ ಹಾವೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮುಮಾರು ೧೮ ವರ್ಷಗಳಿಂದ ಹಾವೇರಿಯಲ್ಲಿ ವಾಸವಾಗಿದ್ದು, ನನ್ನ ಅಧಿಕಾರ ಅವಧಿಯಲ್ಲಿ ಸರ್ಕಾರ ಹಾಗೂ ಇಲಾಖೆಯ ಯೋಜನೆಗಳನ್ನು ಅನೇಕರಿಗೆ ತಲುಪಿಸುವಲ್ಲಿ ಹಾಗೂ ಹಾವೇರಿ ಅಭಿವೃದ್ಧಿ ಬಗ್ಗೆ ಪ್ರಾಮಾಣಿಕವಾಗಿ ಅಡಳಿತವನ್ನು ನಡೆಸಿದ್ದೇನೆ. ಬಿಜೆಪಿ ಪಕ್ಷವು ಪಕ್ಷದಲ್ಲಿನ ನನ್ನ ಸೇವೆ ಗುರುತಿಸಿ ಟಿಕೆಟ್ ನೀಡಿದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅನೇಖ ಮಹತ್ವದ ಯಜನೆಗಳನ್ನು ಹಾಕಿಕೊಂಡಿರವುದಾಗಿ ಜಿ.ಪಂ.ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಹೇಳಿದರು.
ಬುಧವಾರ ಹಾವೇರಿಯ ಬಸ್ ನಿಲ್ದಾಣದಬಳಿ ಆಟೋ ನಿಲ್ದಾಣದಲ್ಲಿ ಮನೆ ಮನಗೆ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಪ್ರಚಾರ ಹಾಗೂ ನಿಮ್ಮ ಮನಯ ಮಗನಿಗೆ ಆಶೀರ್ವದಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಾ ಮೇಲ್ದಂಡೆ ಯೋಜನೆಯ ಅನುಷ್ಠಾಕ್ಕೆ ಶ್ರಮಿಸಿದ್ದೇನೆ. ಐತಿಹಾಸಿಕ ಹಾವೇರಿಯ ಹೆಗ್ಗೇರೆಕೆರೆ ಅಭಿವೃದ್ಧಿ, ಜಿಲ್ಲಾ ಆಸ್ಪತ್ರೆಯ ನಿರ್ಮಾಣ, ಕೇಂದ್ರ ಬಸ್ ನಿಲ್ದಾಣ, ಡಿ.ಎಚ್.ಓ ಕಛೇರಿ ಸರಿದಂತ ಅನೇಕ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸಿದ್ದೇನೆ. ಸಮಾಜದದಲ್ಲಿನ ಎಲ್ಲ ವರ್ಗಗಳಜೊತೆಗೆ ಸೌಹಾರ್ದ ಸಂಬಂಧಹೊಂದಿರುವ ನನಗೆ ಪಕ್ಷ ಹಾಗೂ ಕ್ಷೇತ್ರದ ಜನತೆ ವಿಧಾನಸಭಾ ಚುನಾವಣೆಯಲ್ಲಿ ನನಗೆ ಅವಕಾಶ ಮಾಡಿಕೊಡಬೇಕೆಂದು ಮೀಸಲು ವಿಧಾನಸಭಾ ಕ್ಷೇತ್ರದ ಮತದಾರಲ್ಲಿ ಮನವಿ ಮಾಡಿದರು.
ಹಾವೇರಿ ಮೀಸಲು ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಅಂದರೆ ೨೦೦೮ರಿಂದ ಈ ಕ್ಷೇತ್ರಕ್ಕೆ ಸಂವಿಧಾನದ ಆಶಯಕ್ಕನುಗುಣವಾಗಿ ಮೂಲ ಅಸ್ಪ್ರಶ್ಯರಿಗೆ ಶಾಸಕರಾಗಲು ಅವಕಾಶ ದೊರೆತಿಲ್ಲ. ಈಬಾರಿ ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜಪಿ ಪಕ್ಷದಿಂದ ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿರುವ ನಾನು ಕ್ಷೇತ್ರದ ಮತದಾರರ ಬೆಂಬಲ, ಆಶೀರ್ವಾದ ಕೋರಿ ಕೈಗೊಂಡಿರುವ ಮನೆ ಮನೆಗೆ ಮೇಗಳಮನಿ ಅಭಿಯಾನಕ್ಕೆ ಅಪಾರ ಪ್ರಮಾಣದಲ್ಲಿ ಜನಬೆಂಬಲ ವ್ಯಕ್ತವಾಗಿದ್ದು, ಈಅಭಿಯಾನದಲ್ಲಿ ಕೇಂದ್ರ ಹಾಗ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸುವದರ ಜೊತೆಗೆ ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನ ಮಾಡತ್ತಿರುವೆ.
ಬಜೆಟ್ನಲ್ಲಿ ಹಾವೇರಿ ಜಿಲ್ಲೆಗೆ ತಾಯಿ ಮಕ್ಕಳ ಆಸ್ಪತ್ರೆ, ಬಂಕಾಪೂರ ಪಾಲಿಟೆಕ್ನಿಕ್ ಕಾಲೇಜನ್ನು ಸರ್ಕಾರಿ ಇಂಜನೀಯರಿಂಗ್ ಕಾಲೇಜಆಗಿ ಮೇಲ್ದರ್ಜೆಗೆ ಏರಿಸುವುದು, ಬಂಕಾಪೂರದ ೧೦೧ ಕಂಬಗಳ ನಗರೇಶ್ವರ ದೇವಸ್ಥಾನವನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿ ಪಡಿಸುವುದು, ಹಾನಗಲ್ಲ ತಾಲೂಕಿನ ಬಾಳಬೀಡ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವುದು, ಮೀನು ಮರಿ ಉತ್ಪಾದನಾ ಮತ್ತು ಪಾಲಾನಾ ಕೇಂದ್ರ ಪ್ರಾರಂಬಿಸುವುದು, ಆಧುನಿಕ ತಂತ್ರಜ್ಞಾನ ಆಧಾರಿತ ಹೂವಿನ ಚಿಲ್ಲರೆ ಮಾರುಕಟ್ಟೆ, ಹಾವೇರಿ ಸರ್ಕಾರಿ ಇಂಜನೀಯರಿಂಗ ಕಾಲೇಜನ್ನು ಕೆ.ಐ.ಟಿ ಆಗಿ ಉನ್ನತಿಕರಿಸಲು ೬ ಕೋಟಿ, ಹಾವೇರಿಯ ಗಾಂಧಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ೨ ಕೋಟಿ, ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ವಿಧ್ಯಾರ್ಥಿನಿಯರಿಗೆ ಉಚಿತ ಬಸ ಪಾಸ್ ಸೌಲಭ್ಯ, ಹಾವೇರಿ, ರಾಣೇಬೆನ್ನೂರ ನಗರಗಳಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷೆ ಪಥಗಳನ್ನು ನೀಡಲಾಗಿದೆ. ಹಾವೇರಿಯಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿ ಸ್ಥಾಪನೆಗೆ ೯೦ ಕೋಟಿ ಅನುದಾನ ನೀಡುವ ಮೂಲಕ ಹಾವೇರಿಜಿಲ್ಲೆಯನ್ನು ಹಾಗ ಹಾವೇರಿ ಮೀಸಲ ವಿಧಾನಸಭಾ ಕ್ಷೇತ್ರವನ್ನ ಅಭಿವೃದ್ಧಿ ಪಥದತ್ತ ತಗೆದಕಂಡ ತ್ತಿರವ ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುವುದಾಗಿ ಪರಮೇಶ್ವರಪ್ಪ ಮೇಗಳಮನಿ ತಿಳಿಸಿದರು.
ಈ ಸಂದರ್ಭದಲ್ಲಿ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಪ್ರಕಾಶ ಉಪಾರ, ಹಾಗೂ ಶಿವು ಮುದಿಮಲ್ಲಣ್ಣನವರ,ಅಣ್ಣಪ್ಪ ಕನ್ನಣ್ಣನವರ,ಸುರೇಶ ಹರಳಹಳ್ಳಿ, ಫಕ್ಕೀರೇಶ ಕಾಳಿ, ಮೈಲೆಪ್ಪ ಹಾಲಗಿ, ಮಾಲತೇಶ ಬಣಕಾರ, ನವೀನ ಸಿದ್ದಣ್ಣನವರ, ದ್ಯಾಮಣ್ಣ ಸಿದ್ದಣ್ಣನವರ. ರಾಜು ಆನವಟ್ಟಿ ಸೇರಿದಂತೆ ಅನೇಕರು ಹಾಜರಿದ್ದರು.
ಹಾವೇರಿ ಮೀಸಲು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ:ಮೇಗಳಮನಿ
Date:
ಹಾವೇರಿ ಮೀಸಲು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ:ಮೇಗಳಮನಿ
ಹಾವೇರಿ: ಹಂತ ಹಂತವಾಗಿ ರಾಜಕಾರಣದಲ್ಲಿ ಬೆಳೆಯುತ್ತಾ ಬಂದಿರುವ ನಾನು ಜಿ.ಪಂ. ಸದಸ್ಯರಾಗಿ ೨೦೦೫ ರಲ್ಲಿ ಆಯ್ಕೆಯಾದ ನಂತರ, ಜಿ.ಪಂ. ಅಧ್ಯಕ್ಷನಾಗಿ ಹಾವೇರಿಜಿಲ್ಲೆಯ ಹಾಗೂ ಹಾವೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮುಮಾರು ೧೮ ವರ್ಷಗಳಿಂದ ಹಾವೇರಿಯಲ್ಲಿ ವಾಸವಾಗಿದ್ದು, ನನ್ನ ಅಧಿಕಾರ ಅವಧಿಯಲ್ಲಿ ಸರ್ಕಾರ ಹಾಗೂ ಇಲಾಖೆಯ ಯೋಜನೆಗಳನ್ನು ಅನೇಕರಿಗೆ ತಲುಪಿಸುವಲ್ಲಿ ಹಾಗೂ ಹಾವೇರಿ ಅಭಿವೃದ್ಧಿ ಬಗ್ಗೆ ಪ್ರಾಮಾಣಿಕವಾಗಿ ಅಡಳಿತವನ್ನು ನಡೆಸಿದ್ದೇನೆ. ಬಿಜೆಪಿ ಪಕ್ಷವು ಪಕ್ಷದಲ್ಲಿನ ನನ್ನ ಸೇವೆ ಗುರುತಿಸಿ ಟಿಕೆಟ್ ನೀಡಿದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅನೇಖ ಮಹತ್ವದ ಯಜನೆಗಳನ್ನು ಹಾಕಿಕೊಂಡಿರವುದಾಗಿ ಜಿ.ಪಂ.ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಹೇಳಿದರು.
ಬುಧವಾರ ಹಾವೇರಿಯ ಬಸ್ ನಿಲ್ದಾಣದಬಳಿ ಆಟೋ ನಿಲ್ದಾಣದಲ್ಲಿ ಮನೆ ಮನಗೆ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಪ್ರಚಾರ ಹಾಗೂ ನಿಮ್ಮ ಮನಯ ಮಗನಿಗೆ ಆಶೀರ್ವದಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಾ ಮೇಲ್ದಂಡೆ ಯೋಜನೆಯ ಅನುಷ್ಠಾಕ್ಕೆ ಶ್ರಮಿಸಿದ್ದೇನೆ. ಐತಿಹಾಸಿಕ ಹಾವೇರಿಯ ಹೆಗ್ಗೇರೆಕೆರೆ ಅಭಿವೃದ್ಧಿ, ಜಿಲ್ಲಾ ಆಸ್ಪತ್ರೆಯ ನಿರ್ಮಾಣ, ಕೇಂದ್ರ ಬಸ್ ನಿಲ್ದಾಣ, ಡಿ.ಎಚ್.ಓ ಕಛೇರಿ ಸರಿದಂತ ಅನೇಕ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸಿದ್ದೇನೆ. ಸಮಾಜದದಲ್ಲಿನ ಎಲ್ಲ ವರ್ಗಗಳಜೊತೆಗೆ ಸೌಹಾರ್ದ ಸಂಬಂಧಹೊಂದಿರುವ ನನಗೆ ಪಕ್ಷ ಹಾಗೂ ಕ್ಷೇತ್ರದ ಜನತೆ ವಿಧಾನಸಭಾ ಚುನಾವಣೆಯಲ್ಲಿ ನನಗೆ ಅವಕಾಶ ಮಾಡಿಕೊಡಬೇಕೆಂದು ಮೀಸಲು ವಿಧಾನಸಭಾ ಕ್ಷೇತ್ರದ ಮತದಾರಲ್ಲಿ ಮನವಿ ಮಾಡಿದರು.
ಹಾವೇರಿ ಮೀಸಲು ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಅಂದರೆ ೨೦೦೮ರಿಂದ ಈ ಕ್ಷೇತ್ರಕ್ಕೆ ಸಂವಿಧಾನದ ಆಶಯಕ್ಕನುಗುಣವಾಗಿ ಮೂಲ ಅಸ್ಪ್ರಶ್ಯರಿಗೆ ಶಾಸಕರಾಗಲು ಅವಕಾಶ ದೊರೆತಿಲ್ಲ. ಈಬಾರಿ ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಬಿಜಪಿ ಪಕ್ಷದಿಂದ ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿರುವ ನಾನು ಕ್ಷೇತ್ರದ ಮತದಾರರ ಬೆಂಬಲ, ಆಶೀರ್ವಾದ ಕೋರಿ ಕೈಗೊಂಡಿರುವ ಮನೆ ಮನೆಗೆ ಮೇಗಳಮನಿ ಅಭಿಯಾನಕ್ಕೆ ಅಪಾರ ಪ್ರಮಾಣದಲ್ಲಿ ಜನಬೆಂಬಲ ವ್ಯಕ್ತವಾಗಿದ್ದು, ಈಅಭಿಯಾನದಲ್ಲಿ ಕೇಂದ್ರ ಹಾಗ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸುವದರ ಜೊತೆಗೆ ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನ ಮಾಡತ್ತಿರುವೆ.
ಬಜೆಟ್ನಲ್ಲಿ ಹಾವೇರಿ ಜಿಲ್ಲೆಗೆ ತಾಯಿ ಮಕ್ಕಳ ಆಸ್ಪತ್ರೆ, ಬಂಕಾಪೂರ ಪಾಲಿಟೆಕ್ನಿಕ್ ಕಾಲೇಜನ್ನು ಸರ್ಕಾರಿ ಇಂಜನೀಯರಿಂಗ್ ಕಾಲೇಜಆಗಿ ಮೇಲ್ದರ್ಜೆಗೆ ಏರಿಸುವುದು, ಬಂಕಾಪೂರದ ೧೦೧ ಕಂಬಗಳ ನಗರೇಶ್ವರ ದೇವಸ್ಥಾನವನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿ ಪಡಿಸುವುದು, ಹಾನಗಲ್ಲ ತಾಲೂಕಿನ ಬಾಳಬೀಡ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವುದು, ಮೀನು ಮರಿ ಉತ್ಪಾದನಾ ಮತ್ತು ಪಾಲಾನಾ ಕೇಂದ್ರ ಪ್ರಾರಂಬಿಸುವುದು, ಆಧುನಿಕ ತಂತ್ರಜ್ಞಾನ ಆಧಾರಿತ ಹೂವಿನ ಚಿಲ್ಲರೆ ಮಾರುಕಟ್ಟೆ, ಹಾವೇರಿ ಸರ್ಕಾರಿ ಇಂಜನೀಯರಿಂಗ ಕಾಲೇಜನ್ನು ಕೆ.ಐ.ಟಿ ಆಗಿ ಉನ್ನತಿಕರಿಸಲು ೬ ಕೋಟಿ, ಹಾವೇರಿಯ ಗಾಂಧಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ೨ ಕೋಟಿ, ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ವಿಧ್ಯಾರ್ಥಿನಿಯರಿಗೆ ಉಚಿತ ಬಸ ಪಾಸ್ ಸೌಲಭ್ಯ, ಹಾವೇರಿ, ರಾಣೇಬೆನ್ನೂರ ನಗರಗಳಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷೆ ಪಥಗಳನ್ನು ನೀಡಲಾಗಿದೆ. ಹಾವೇರಿಯಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿ ಸ್ಥಾಪನೆಗೆ ೯೦ ಕೋಟಿ ಅನುದಾನ ನೀಡುವ ಮೂಲಕ ಹಾವೇರಿಜಿಲ್ಲೆಯನ್ನು ಹಾಗ ಹಾವೇರಿ ಮೀಸಲ ವಿಧಾನಸಭಾ ಕ್ಷೇತ್ರವನ್ನ ಅಭಿವೃದ್ಧಿ ಪಥದತ್ತ ತಗೆದಕಂಡ ತ್ತಿರವ ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುವುದಾಗಿ ಪರಮೇಶ್ವರಪ್ಪ ಮೇಗಳಮನಿ ತಿಳಿಸಿದರು.
ಈ ಸಂದರ್ಭದಲ್ಲಿ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಪ್ರಕಾಶ ಉಪಾರ, ಹಾಗೂ ಶಿವು ಮುದಿಮಲ್ಲಣ್ಣನವರ,ಅಣ್ಣಪ್ಪ ಕನ್ನಣ್ಣನವರ,ಸುರೇಶ ಹರಳಹಳ್ಳಿ, ಫಕ್ಕೀರೇಶ ಕಾಳಿ, ಮೈಲೆಪ್ಪ ಹಾಲಗಿ, ಮಾಲತೇಶ ಬಣಕಾರ, ನವೀನ ಸಿದ್ದಣ್ಣನವರ, ದ್ಯಾಮಣ್ಣ ಸಿದ್ದಣ್ಣನವರ. ರಾಜು ಆನವಟ್ಟಿ ಸೇರಿದಂತೆ ಅನೇಕರು ಹಾಜರಿದ್ದರು.