ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರ: ಟಿಕೆಟ್ಗಾಗಿ ಬಿಜೆಪಿಯಲ್ಲಿ ಬೆಂಗಳೂರು ಚಲೋ ಅಭಿಯಾನ
ಹಾವೇರಿ: ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರ ಅನೇಕ ಕಾರಣಗಳಿಗೆ ರಾಜ್ಯದ ಗಮನ ಸೆಳೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರುಜಿಲ್ಲೆಯಲ್ಲಿ ಟಿಕೆಟ್ಗಾಗಿ ಪೈಪೋಟಿ ಜೋರಾಗಿ ನಡೆದಿದೆ. ಇಷ್ಟು ದಿನ ಚಳಿಗಾಲದ ಕಾರಣಕ್ಕೋ, ಚುನಾವಣೆಯ ಹತ್ತಿರವಾಗಲೆಂದು ತಣ್ಣಗೆ ಇದ್ದ ಕಾರಣಕ್ಕೋ ಏನೋ. ಇದೀಗ ಕ್ಷೇತ್ರದಲ್ಲಿ ಟಿಕೆಟ್ ಪೈಟ್ ಸ್ಪೋಟಗೊಂಡಿದೆ.
ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿನ ಕಮಲಪಾಳೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಸಂಖ್ಯೆ ಹೆಚ್ಚಿದ್ದು, ಆದರೆ ಅನೇಕ ಕಾರಣಗಳಿಂದ ನಾಲ್ವರ ಹೆಸರುಗಳು ಮುನ್ನಲೆಗೆ ಬಂದಿವೆ. ಈ ನಾಲ್ವರು ಸದ್ಯಕ್ಕೆ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಮೇಲಾಗಿ ಬುಧವಾರ ರಾತ್ರಿ ಹತ್ತಾರು ವಾಹನಗಳ ಮೂಲಕ ಇವರುಗಳನ್ನು ಬೆಂಬಲಿಸಿ ಕೆಲವು ಕಾರ್ಯಕರ್ತರು, ಮುಖಂಡರು ಬಸ್ ಮೂಲಕ ಬೆಂಗಳೂರು ಚಲೋ ಅಭಿಯಾನ ಆರಂಭಿಸಿದ್ದಾರೆ. ಬೆಂಗಳುರಿಗೆ ತೆರಳಿ ಬಿಜೆಪಿ ವರಿಷ್ಠರಿಗೆ ಈನಾಲ್ವರ ಬೇಡಿಕೆಯನ್ನು ಮುಟ್ಟಿಸಿ ಬರಲು ತೆರಳಿರುವುದು ಕೂತುಹಲಕ್ಕೆ ಕಾರಣವಾಗಿದೆ.
ಯಾರಿ ನಾಲ್ವರು: ನಾಲ್ವರು ಟಿಕೆಟ್ ಆಕಾಂಕ್ಷಿಳೆಂದರೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ನಗರಸಭೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷರ ಹುದ್ದೆಗೆ ರಾಜೀನಾಮೆ ನೀಡಿರುವ ವೆಂಕಟೇಶ ನಾರಾಯಣಿ, ಎಪಿಎಂಸಿ ಮಾಜಿ ಸದಸ್ಯ ರಾಮು ಮಾಳಗಿ, ಗುತ್ತಿಗೆದಾರ/ರಾಜಕಾರಣಿ ಮಲ್ಲಿಕಾರ್ಜುನ ಕೆ.ಬಿ ಅವರುಗಳು ಪ್ರಮುಖರಾಗಿದ್ದಾರೆ. ಇವರ ಪರವಾಗಿ ವಾಟ್ಸಪ್ ಗುಂಪು ಸಕ್ರೀಯವಾಗಿದ್ದು, ಈ ವಾಟ್ಸಪ್ ಗುಂಪಿಗೆ “ಹಾವೇರಿ ಮೀಸಲು ಕ್ಷೇತ್ರ”ಎಂದು ಹೆಸರಿಡಲಾಗಿದೆ. ಈ ನಾಲ್ವರ ಗುಂಪಿಗೆ ಬೆಂಗಳೂರು ಮೂಲದ ಪ್ರಭಾವಿ ಇಂಜನಿಯರ ಸಂತೋಷರೆಡ್ಡಿ ಎನ್ನುವವರು ಮಾರ್ಗದರ್ಶಕರಾಗಿದ್ದು, ಇವರ ಮಾರ್ಗದರ್ಶನದಲ್ಲಿ ಈ ನಾಲ್ವರು ಟಿಕೆಟ್ ಆಕಾಂಕ್ಷಿಗಳು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಇವರ ಘೋಷಣೆ ಹೀಗಿದೆ ‘ಅಭ್ಯರ್ಥಿ ಬದಲಿಸಿ ಬಿಜೆಪಿ ಗೆಲ್ಲಿಸಿ’ ನಮ್ಮ ನಡೆ ಹಾವೇರಿ ಅಭಿವೃದ್ಧಿ ಕಡೆ, ಹಾವೇರಿ ವಿಧಾನಸಭಾ ಮೀಸಲು ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಕೋರಿ ಬೆಂಗಳೂರು ಚಲೋ ಅಭಿಯಾನ, ದಿನಾಂಕ: ೦೧/೨/೨೦೨೩ ಬುಧವಾರ ಬೆಳಗ್ಗೆ. ಶಾಸಕರು ಅಭಿವೃದ್ಧಿ ಕಡೆಗಣಿಸಿ ಸಚಿವ ಸಂಪುಟದಲ್ಲಿ ಸ್ಥಾನ ಎಂದು ಅವರ ಬೆಂಬಲಿರೊಂದಿಗೆ ಬಿಜೆಪಿ ಪಕ್ಷದ ವಿರುದ್ಧ ಹಾಗೂ ಮುಖ್ಯ ಮಂತ್ರಿಗಳ ವಿರುದ್ಧ ಧಿಕ್ಕಾರ ಹಾಕುವುದು ಸರಿ ಎಂದರೆ? ಬಿಜೆಪಿ ನಿಷ್ಟಾವಂತ ಕಾರ್ಯಕರ್ತರು ತಾಲ್ಲೂಕಿನ ಅಭಿವೃದ್ಧಿ ಪರ ಧ್ವನಿ ಎತ್ತುವುದು ಅಲ್ಲವೇ?ನಮಗೆ ವ್ಯಕ್ತಿ ಪೂಜೆಗಿಂತ ಪಕ್ಷ ಮುಖ್ಯ” ಎಂದಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಸಿರಿ ಇಂತಿ-ಸಂತೋಷ ರೆಡ್ಡಿ(ಬಿಜೆಪಿ ಕಾರ್ಯಕರ್ತ) ಎಂದಿದೆ.
ಇಲ್ಲಿ ಹಾವೇರಿ ಮೀಸಲು ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾದ ಪರಮೇಶ್ವರಪ್ಪ ಮೇಗಳಮನಿ, ವೆಂಕಟೇಶ ನಾರಾಯಣಿ, ರಾಮು ಮಾಳಗಿ, ಮಲ್ಲಿಕಾರ್ಜುನ ಕೆ.ಬಿ ಅವg ಪರ ವಕಲತ್ತು ವಹಿಸುತ್ತಿರುವುದು ಸಂತೋಷ ರೆಡ್ಡಿ ಎನ್ನುವುದು ಸ್ಪಷ್ಟವಾಗುತ್ತದೆ. ಮೇಲಿನ ಘೋಷಣೆಯೊಂದಿಗೆ ಇವರುಗಳ ಪರವಾಗಿ ಹತ್ತಾರು ವಾಹನಗಳಲ್ಲಿ ಸರಿ ಸುಮಾರ ನೂರಕ್ಕೂ ಹೆಚ್ಚಿನ ಬೆಂಬಲಿಗರು ಬಸ್ಗಳಲ್ಲಿ, ಖಾಸಗಿವಾಹನಗಳಲ್ಲಿ ಜ.೩೧ರಂದು ಮಂಗಳವಾರ ರಾತ್ರಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಫೆ.೧ಕ್ಕೆ ಬೆಂಗಳೂರಲ್ಲಿ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಪಕ್ಷದ ರಾಜ್ಯಾಧ್ಯಕ್ಷರನ್ನು, ಪ್ರಮುಖನಾಯಕರನ್ನು ಭೇಟಿಯಾಗಿ ಇವರು ಹಾವೇರಿ ಮೀಸಲು ಕ್ಷೇತ್ರದ ಪ್ರಭಲ ಟಿಕೆಟ್ ಆಕಾಂಕ್ಷಿಗಳಾಗಿರುವ ನಾಲ್ವರಪರ ಅವರ ಬೇಡಕೆಯನ್ನು ಬಿನ್ನಯಿಸಿಕೊಳ್ಳಲಿದ್ದಾರಂತೆ. ಇದಕ್ಕೆ ನಾಯಕತ್ವ ಸಂತೋಷರೆಡ್ಡಿ ಅವರದ್ದು ಎನ್ನಲಾಗುತ್ತಿದೆ.
(ದಿನಾಂಕ:-೦೧/೦೨/೨೦೨೮ ಬುಧವಾರ ಬೆಳಿಗ್ಗೆ ರಾಜ್ಯದ ಬಿಜೆಪಿ ನಾಯಕರಿಗೆ ಹಾವೇರಿ ತಾಲ್ಲೂಕಿನ ನೊಂದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಂದ ಮನವಿ ಸಲ್ಲಿಸುವ ಕಾರ್ಯಕ್ರಮಇದ್ದು. ಬೆಂಗಳೂರು ಚಲೋ ಅಭಿಯಾ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಸಿ: ಸಂತೋಷ ರೆಡ್ಡಿ-೯೮೪೫೬೯೭೪೪೪ ಇವರನ್ನು ಸಂಪರ್ಕಿಸಬಹುದಾಗಿದೆ.)
ಸದ್ಯಕ್ಕೆ ನಾಲ್ವರು ಟಿಕೆಟ್ ಆಕಾಂಕ್ಷಿಗಳು ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಮುಂದೆ ಇದೇ ಒಗ್ಗಟ್ಟು ಇವರಲ್ಲಿರುತ್ತದೆಯೇ? ಉತ್ತರ ಮಾತ್ರ ಬಲು ಕಷ್ಟ. ಎಲ್ಲರೂ ಟಿಕೆಟ್ ಬೇಕೆನ್ನುವವರೆ….. ಟಿಕೆಟ್ ಇರುವುದು ಮಾತ್ರ ಒಂದು, ಅದನ್ನು ಬೇಕ…ಬೇಕೆಂದವರಿಗೆ ಹರಿದುಕೊಡಲು ಬರುವುದಿಲ್ಲ. ಒಂದು ವೇಳೆ, ಆಕಸ್ಮಿಕವಾಗಿ ವರಿಷ್ಠರು ಟಿಕೆಟ್ ನಿಮ್ಮಲ್ಲಿ ಯಾರಿಗೆ ಬೇಕು? ನೀವೇ ನಿರ್ಧರಿಸಿಕೊಂಡು ಒಬ್ಬರ ಹೆಸರನ್ನು ಅಂತಿಮಗೊಳಿಸಿಕೊಂಡು ಬನ್ನಿ ಎಂದರೆ… ಈ ನಾಲ್ವರಲ್ಲಿ ಪೈಪೋಟಿ ಏರ್ಪಡುವುದಂತು ಖಚಿತ. ಈ ಬಗ್ಗೆ ಇವರಲ್ಲಿ ಸ್ಪಸ್ಟ ನಿರ್ಧಾರವಿಲ್ಲ.
ಈಗಾಗಲೇ ಪರಪರಸ್ಪರ ಕಾಲೆಳೆಯುವ ಕಾರ್ಯದಲ್ಲಿ ಕೆಲವರು ನಿರತರಾಗಿದ್ದಾರೆ. ಎಲ್ಲರೂ ಸಹ ನಾ…ಹೆಚ್ಚು, ನಾ ಹೆಚ್ಚು ಎನ್ನುವವರೆ. ಈಗಾಗಲೇ ಹಾಲಿ ಶಾಸಕರಾಗಿರುವ ನೆಹರು ಓಲೇಕಾರ “ನಾನು ಗೆಲ್ಲುವ ಕುದುರೆ, ಹೀಗಾಗಿ ವರಿಷ್ಠರ ನನಗೆ ಟಿಕೆಟ್ ನೀಡುತ್ತಾರೆ” ಎಂದು ತಮಗೆ ಟಿಕೆಟ್ ಸಿಗುವ ಬಗ್ಗೆ ಖಚಿತ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಇವರ ಮಾತಿನಂತೆ ಬಿಜೆಪಿ ಟಿಕೆಟ್ ಇವರಿಗೆ ದೊರೆತರೆ ಈ ನಾಲ್ವರ ನಡೆ ಏನು? ಎನ್ನುವುದನ್ನು ಟಿಕೆಟ್ ಹಂಚಿಕೆಯಾಗುವವರೆಗೆ ಕಾದು ನೋಡಬೇಕಿದೆ. ಸದ್ಯಕಂತು ಈ ನಾಲ್ವರ ನಡೆ ಹಾವೇರಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.