ಹಾವೇರಿ ಯುಎಚ್‌ಟಿ ಘಟಕ ಕೆಎಂಎಫ್‌ಗೆ

Date:

 

ಹಾವೇರಿ ಯುಎಚ್‌ಟಿ ಘಟಕ ಕೆಎಂಎಫ್‌ಗೆ
ನಷ್ಟದಲ್ಲಿರುವ ಹಾಲು ಒಕ್ಕೂಟ ಪುನಶ್ಚೇತನಕ್ಕೆ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ಸಭೆ

ಹಾವೇರಿ: ನಷ್ಟದಲ್ಲಿರುವ ಹಾವೇರಿ ಹಾಲು ಒಕ್ಕೂಟ ಪುನಶ್ಚೇತನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಯುಎಚ್‌ಟಿ ಘಟಕ ನಿರ್ವಹಣೆ ಹೊಣೆಯನ್ನು ಕೆಎಂಎಫ್‌ಗೆ ವಹಿಸುವುದು ಸೇರಿದಂತೆ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಯುಎಚ್‌ಟಿ ಘಟಕ ಲಾಭದಾಯಕ ಸ್ಥಿತಿಗೆ ತಂದ ನಂತರ ಪುನಃ ಹಾವೇರಿ ಹಾಲು ಒಕ್ಕೂಟಕ್ಕೆ ಹಸ್ತಾಂತರ ಮಾಡಲಾಗುವುದು ಹಾಗೂ ನಷ್ಟದಲ್ಲಿರುವ ಒಕ್ಕೂಟವನ್ನು ಲಾಭದ ಹಾದಿಗೆ ತರಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರು ಭರವಸೆ ನೀಡಿದರು.

ಮುಂದಿನ ವಾರ ಹಾವೇರಿ ಮತ್ತು ಧಾರವಾಡ ಎರಡೂ ಹಾಲು ಒಕ್ಕೂಟಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಲಿದ್ದು, ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು. ಆಡಳಿತ ವ್ಯವಸ್ಥೆಯನ್ನು ಸರಿಯಾದ ದಾರಿಗೆ ತರಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶಿವಸ್ವಾಮಿ ಸಚಿವರಿಗೆ ತಿಳಿಸಿದರು.

ನಷ್ಟಕ್ಕೆ ಕಾರಣಗಳ ಮಾಹಿತಿ ಪಡೆದ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು, ಧಾರವಾಡ ಹಾಲು ಒಕ್ಕೂಟವನ್ನು ನಷ್ಟಕ್ಕೆ ದೂಡಿ ಹಾವೇರಿ ಹಾಲು ಒಕ್ಕೂಟವನ್ನು ಲಾಭದಲ್ಲಿ ತರುವುದು ನಮ್ಮ ಉದ್ದೇಶವಾಗಬಾರದು. ಎರಡೂ ಒಕ್ಕೂಟಗಳು ಲಾಭದಲ್ಲಿ ನಡೆಯಬೇಕು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.

ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಅವರು ಅಧಿಕಾರಿಗಳ ಮೇಲೆ ದೂರುಗಳನ್ನು ಹೇಳಿದಾಗ, ಇದುವರೆಗೆ ಏನೇನು ಆಗಿದೆ ಎಂಬ ಬಗ್ಗೆ ಚರ್ಚೆ ಮಾಡಲು ಹೆಚ್ಚು ಸಮಯ ವ್ಯರ್ಥ ಮಾಡುವ ಬದಲಿಗೆ ಏನು ಮಾಡಬೇಕು ಎಂಬ ಬಗ್ಗೆ ಚಿಂತನೆ ಮಾಡುವುದು ಸೂಕ್ತ. ನಮ್ಮ ಚಿಂತನೆಗಳು ಸಕಾರಾತ್ಮಕವಾಗಿರಬೇಕು. ಆಡಳಿತ ವ್ಯವಸ್ಥೆಯಲ್ಲಿ ಲೋಪದೋಷಗಳಿದ್ದರೆ ಸ್ಥಳೀಯವಾಗಿ ಸರಿಪಡಿಸಿಕೊಳ್ಳಿ, ಆಡಳಿತ ವ್ಯವಸ್ಥೆ ಮೇಲೆ ಹಿಡಿತ ಸಾಧಿಸಿ ಎಂದು ಸಚಿವರು ಸಲಹೆ ನೀಡಿದರು.

ಹಾವೇರಿ ಹಾಲು ಒಕ್ಕೂಟಕ್ಕೆ ನೆರೆಯ ಗೋವಾದಲ್ಲಿ ಮಾರುಕಟ್ಟೆ ಒದಗಿಸುವ ಬಗ್ಗೆ ಆಲೋಚನೆ ಮಾಡುವುದು ಸೂಕ್ತ. ಹಾವೇರಿ ಜಿಲ್ಲೆಯಿಂದ ಪ್ರತಿದಿನ ಗೋವಾಗೆ ತರಕಾರಿ ಹೋಗುತ್ತಿದೆ. ಹೀಗಾಗಿ ಹಾಲನ್ನೂ ಗೋವಾ ಮಾರುಕಟ್ಟೆಗೆ ಪೂರೈಕೆ ಮಾಡುವ ಬಗ್ಗೆ ಚಿಂತನೆ ಮಾಡುವುದು ಸೂಕ್ತ ಎಂದು ಸಚಿವ ಶಿವಾನಂದ ಪಾಟೀಲ ಅವರು ಸಲಹೆ ನೀಡಿದರು.

ಈಗಾಗಲೇ ಬೆಳಗಾವಿಯಿಂದ ಪೂರೈಕೆಯಾಗುತ್ತಿದೆ ಎಂದು ಕೆಎಂಎಫ್‌ ಅಧಿಕಾರಿಗಳು ಗಮನಕ್ಕೆ ತಂದಾಗ ಬೆಳಗಾವಿಯ ಸ್ಥಳೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಹಾಗೂ ನೆರೆಯ ಮಹಾರಾಷ್ಟ್ರಕ್ಕೂ ಪೂರೈಕೆಯಾಗುತ್ತಿದೆ ಹೀಗಾಗಿ ಗೋವಾದಲ್ಲಿ ಮಾರುಕಟ್ಟೆ ಕಂಡುಕೊಳ್ಳುವ ಪ್ರಯತ್ನ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಭಾಗವಹಿಸಿದ್ದ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಯು.ಬಿ. ಬಣಕಾರ್‌ ಮತ್ತು ಪ್ರಕಾಶ್‌ ಕೋಳಿವಾಡ ಅವರೂ ಕೂಡ ಹಾವೇರಿ ಹಾಲು ಒಕ್ಕೂಟವನ್ನು ನಷ್ಟದಿಂದ ಹೊರತರಲು ಪ್ರಯತ್ನಿಸಿ ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರಿಗೆ ಸೂಚನೆ ನೀಡಿದರು.
ಹಾವೇರಿ ಜಿಲ್ಲೆಯಲ್ಲಿ ಮಾರುಕಟ್ಟೆ ವ್ಯವಸ್ಥೆ ಹೆಚ್ಚಿಸಲು ಡೀಲರ್‌ಗಳಿಗೆ ಹಾಗೂ ಸೇಲ್ಸ್‌ಗೆ ಪ್ರಚಾರಕ್ಕಾಗಿ ಹೆಚ್ಚಿನ ಅನುದಾನ ನೀಡಲಾಗುವುದು. ನಂದಿನಿ ಪಾರ್ಲರ್‌ಗಳನ್ನು ಹೆಚ್ಚೆಚ್ಚು ಆರಂಭಿಸಲು ಪ್ರೋತ್ಸಾಹ ನೀಡಲಾಗುವುದು ಹಾಗೂ ನಿಯಮಗಳ ಪ್ರಕಾರ ಅಗತ್ಯ ಆರ್ಥಿಕ ನೆರವು ಕಲ್ಪಿಸಲಾಗುವುದು ಎಂದು ಕೆಎಂಎಫ್‌ ಅಧಿಕಾರಿಗಳು ಭರವಸೆ ನೀಡಿದರು.

ಹಾವೇರಿ ಜಿಲ್ಲೆಯ ಹಾಲಿಗೆ ಧಾರವಾಡ ಜಿಲ್ಲೆಯಲ್ಲಿ ಮಾರುಕಟ್ಟೆ ಒದಗಿಸುವುದು ಕಷ್ಟ. ಆದರೆ ನೇರವಾಗಿ ಒಕ್ಕೂಟಕ್ಕೆ ಪೂರೈಕೆ ಮಾಡುವ ಬಗ್ಗೆ ಆಲೋಚನೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಹೊಸ ಒಕ್ಕೂಟವಾಗಿರುವುದರಿಂದ ಐದು ವರ್ಷ ಲೇವಿ ವಿನಾಯಿತಿ ನೀಡಬೇಕು ಎಂಬ ಬೇಡಿಕೆ ಈಡೇರಿಕೆ ಕಷ್ಟಸಾಧ್ಯ. ಆದರೆ ಟ್ರೇಡ್‌ಸ್ಕೀಮ್‌ನಲ್ಲಿ ಆಗುವ ನಷ್ಟಕ್ಕೆ ಅನುದಾನ ನೀಡಬೇಕು ಎಂಬ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ದುಡಿಯುವ ಬಂಡವಾಳಕ್ಕೆ ಸರ್ಕಾರದಿಂದ ಶೇರು ಒದಗಿಸಬೇಕು ಎಂಬ ಬೇಡಿಕೆ ಕೆಎಂಎಫ್‌ ವ್ಯಾಪ್ತಿಗೆ ಬರುವುದಿಲ್ಲ. ಇದಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಬೇಕು. ಆದರೆ ಸರ್ಕಾರ ಇದುವರಗೆ ಯಾವುದೇ ಹಾಲು ಒಕ್ಕೂಟಕ್ಕೆ ಶೇರು ಬಂಡವಾಳ ಒದಗಿಸಿದ ನಿದರ್ಶನ ಇಲ್ಲ ಎಂದು ಕೆಎಂಎಫ್‌ ಅಧಿಕಾರಿಗಳು ತಿಳಿಸಿದರು.

ಹೊಸ ಆಡಳಿತ ಭವನದ ಎದುರು ಇರುವ ಪಶು ಸಂಗೋಪನಾ ಇಲಾಖೆಯ ಜಾಗವನ್ನು ಹಾಲು ಒಕ್ಕೂಟಕ್ಕೆ ಬಿಟ್ಟುಕೊಡಬೇಕು ಎಂಬ ಹಾವೇರಿ ಹಾಲು ಒಕ್ಕೂಟದ ಬೇಡಿಕೆಗೆ ವಿಧಾನಸಭೆ ಉಪಸಭಾಧ್ಯಕ್ಷ, ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಸಹಮತ ವ್ಯಕ್ತಪಡಿಸಿದರು. ಒಕ್ಕೂಟದ ಕಟ್ಟಡಕ್ಕೆ ಸಮನಾಗಿ ಅಗತ್ಯ ಜಾಗ ಬಿಟ್ಟುಕೊಡಲಾಗುವುದು ಎಂದು ಹೇಳಿದರು.
ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಯು.ಬಿ. ಬಣಕಾರ್‌, ಪ್ರಕಾಶ್‌ ಕೋಳಿವಾಡ, ಕೆಎಂಎಫ್‌ ಮಾರುಕಟ್ಟೆ ನಿರ್ದೇಶಕ ಸತೀಶ್‌ ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಅಶೋಕ ಗೌಡ ಸೇರಿದಂತೆ ಕೆಎಂಎಫ್‌ ಮತ್ತು ಹಾವೇರಿ ಹಾಲು ಒಕ್ಕೂಟದ ಅಧಿಕಾರಿಗಳು ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು.

ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಚಿವರು
ಹಾವೇರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಕೆಲವು ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಅಧ್ಯಕ್ಷ ಮಂಜನಗೌಡ ಅವರು ದೂರಿದಾಗ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಒಕ್ಕೂಟವನ್ನು ಲಾಭದಾಯಕವಾಗಿ ನಡೆಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ, ಮುಚ್ಚಿ ಹೋಗುವ ರೀತಿ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಿಂಗಳಲ್ಲಿ ಒಂದು ವಾರ ಮಾತ್ರ ಕೆಲಸ ಮಾಡುತ್ತಾರೆ ಎಂಬ ಆರೋಪ ಇದೆ. ಎಂಡಿ ಆದವರು ಆಡಳಿತ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ದೂರುಗಳು ಬಾರದಂತೆ ಕೆಲಸ ಮಾಡಬೇಕು ಎಂದರು. ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರು ಹಾವೇರಿ ಹಾಲು ಒಕ್ಕೂಟವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಅಗತ್ಯ ಸಹಕಾರದ ಭರವಸೆ ನೀಡಿದ್ದಾರೆ. ನೀವು ಅವರ ಸಂಪರ್ಕದಲ್ಲಿದ್ದು ಜವಾಬ್ದಾರಿ ನಿರ್ವಹಿಸಿ ಎಂದು ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಅವರಿಗೆ ಸಚಿವರು ಸಲಹೆ ನೀಡಿದರು.

 

LEAVE A REPLY

Please enter your comment!
Please enter your name here

Subscribe

spot_imgspot_img

Popular

 

ಹಾವೇರಿ ಯುಎಚ್‌ಟಿ ಘಟಕ ಕೆಎಂಎಫ್‌ಗೆ
ನಷ್ಟದಲ್ಲಿರುವ ಹಾಲು ಒಕ್ಕೂಟ ಪುನಶ್ಚೇತನಕ್ಕೆ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ಸಭೆ

ಹಾವೇರಿ: ನಷ್ಟದಲ್ಲಿರುವ ಹಾವೇರಿ ಹಾಲು ಒಕ್ಕೂಟ ಪುನಶ್ಚೇತನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಯುಎಚ್‌ಟಿ ಘಟಕ ನಿರ್ವಹಣೆ ಹೊಣೆಯನ್ನು ಕೆಎಂಎಫ್‌ಗೆ ವಹಿಸುವುದು ಸೇರಿದಂತೆ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಯುಎಚ್‌ಟಿ ಘಟಕ ಲಾಭದಾಯಕ ಸ್ಥಿತಿಗೆ ತಂದ ನಂತರ ಪುನಃ ಹಾವೇರಿ ಹಾಲು ಒಕ್ಕೂಟಕ್ಕೆ ಹಸ್ತಾಂತರ ಮಾಡಲಾಗುವುದು ಹಾಗೂ ನಷ್ಟದಲ್ಲಿರುವ ಒಕ್ಕೂಟವನ್ನು ಲಾಭದ ಹಾದಿಗೆ ತರಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರು ಭರವಸೆ ನೀಡಿದರು.

ಮುಂದಿನ ವಾರ ಹಾವೇರಿ ಮತ್ತು ಧಾರವಾಡ ಎರಡೂ ಹಾಲು ಒಕ್ಕೂಟಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡಲಿದ್ದು, ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು. ಆಡಳಿತ ವ್ಯವಸ್ಥೆಯನ್ನು ಸರಿಯಾದ ದಾರಿಗೆ ತರಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶಿವಸ್ವಾಮಿ ಸಚಿವರಿಗೆ ತಿಳಿಸಿದರು.

ನಷ್ಟಕ್ಕೆ ಕಾರಣಗಳ ಮಾಹಿತಿ ಪಡೆದ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು, ಧಾರವಾಡ ಹಾಲು ಒಕ್ಕೂಟವನ್ನು ನಷ್ಟಕ್ಕೆ ದೂಡಿ ಹಾವೇರಿ ಹಾಲು ಒಕ್ಕೂಟವನ್ನು ಲಾಭದಲ್ಲಿ ತರುವುದು ನಮ್ಮ ಉದ್ದೇಶವಾಗಬಾರದು. ಎರಡೂ ಒಕ್ಕೂಟಗಳು ಲಾಭದಲ್ಲಿ ನಡೆಯಬೇಕು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.

ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಅವರು ಅಧಿಕಾರಿಗಳ ಮೇಲೆ ದೂರುಗಳನ್ನು ಹೇಳಿದಾಗ, ಇದುವರೆಗೆ ಏನೇನು ಆಗಿದೆ ಎಂಬ ಬಗ್ಗೆ ಚರ್ಚೆ ಮಾಡಲು ಹೆಚ್ಚು ಸಮಯ ವ್ಯರ್ಥ ಮಾಡುವ ಬದಲಿಗೆ ಏನು ಮಾಡಬೇಕು ಎಂಬ ಬಗ್ಗೆ ಚಿಂತನೆ ಮಾಡುವುದು ಸೂಕ್ತ. ನಮ್ಮ ಚಿಂತನೆಗಳು ಸಕಾರಾತ್ಮಕವಾಗಿರಬೇಕು. ಆಡಳಿತ ವ್ಯವಸ್ಥೆಯಲ್ಲಿ ಲೋಪದೋಷಗಳಿದ್ದರೆ ಸ್ಥಳೀಯವಾಗಿ ಸರಿಪಡಿಸಿಕೊಳ್ಳಿ, ಆಡಳಿತ ವ್ಯವಸ್ಥೆ ಮೇಲೆ ಹಿಡಿತ ಸಾಧಿಸಿ ಎಂದು ಸಚಿವರು ಸಲಹೆ ನೀಡಿದರು.

ಹಾವೇರಿ ಹಾಲು ಒಕ್ಕೂಟಕ್ಕೆ ನೆರೆಯ ಗೋವಾದಲ್ಲಿ ಮಾರುಕಟ್ಟೆ ಒದಗಿಸುವ ಬಗ್ಗೆ ಆಲೋಚನೆ ಮಾಡುವುದು ಸೂಕ್ತ. ಹಾವೇರಿ ಜಿಲ್ಲೆಯಿಂದ ಪ್ರತಿದಿನ ಗೋವಾಗೆ ತರಕಾರಿ ಹೋಗುತ್ತಿದೆ. ಹೀಗಾಗಿ ಹಾಲನ್ನೂ ಗೋವಾ ಮಾರುಕಟ್ಟೆಗೆ ಪೂರೈಕೆ ಮಾಡುವ ಬಗ್ಗೆ ಚಿಂತನೆ ಮಾಡುವುದು ಸೂಕ್ತ ಎಂದು ಸಚಿವ ಶಿವಾನಂದ ಪಾಟೀಲ ಅವರು ಸಲಹೆ ನೀಡಿದರು.

ಈಗಾಗಲೇ ಬೆಳಗಾವಿಯಿಂದ ಪೂರೈಕೆಯಾಗುತ್ತಿದೆ ಎಂದು ಕೆಎಂಎಫ್‌ ಅಧಿಕಾರಿಗಳು ಗಮನಕ್ಕೆ ತಂದಾಗ ಬೆಳಗಾವಿಯ ಸ್ಥಳೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಹಾಗೂ ನೆರೆಯ ಮಹಾರಾಷ್ಟ್ರಕ್ಕೂ ಪೂರೈಕೆಯಾಗುತ್ತಿದೆ ಹೀಗಾಗಿ ಗೋವಾದಲ್ಲಿ ಮಾರುಕಟ್ಟೆ ಕಂಡುಕೊಳ್ಳುವ ಪ್ರಯತ್ನ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಭಾಗವಹಿಸಿದ್ದ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಯು.ಬಿ. ಬಣಕಾರ್‌ ಮತ್ತು ಪ್ರಕಾಶ್‌ ಕೋಳಿವಾಡ ಅವರೂ ಕೂಡ ಹಾವೇರಿ ಹಾಲು ಒಕ್ಕೂಟವನ್ನು ನಷ್ಟದಿಂದ ಹೊರತರಲು ಪ್ರಯತ್ನಿಸಿ ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರಿಗೆ ಸೂಚನೆ ನೀಡಿದರು.
ಹಾವೇರಿ ಜಿಲ್ಲೆಯಲ್ಲಿ ಮಾರುಕಟ್ಟೆ ವ್ಯವಸ್ಥೆ ಹೆಚ್ಚಿಸಲು ಡೀಲರ್‌ಗಳಿಗೆ ಹಾಗೂ ಸೇಲ್ಸ್‌ಗೆ ಪ್ರಚಾರಕ್ಕಾಗಿ ಹೆಚ್ಚಿನ ಅನುದಾನ ನೀಡಲಾಗುವುದು. ನಂದಿನಿ ಪಾರ್ಲರ್‌ಗಳನ್ನು ಹೆಚ್ಚೆಚ್ಚು ಆರಂಭಿಸಲು ಪ್ರೋತ್ಸಾಹ ನೀಡಲಾಗುವುದು ಹಾಗೂ ನಿಯಮಗಳ ಪ್ರಕಾರ ಅಗತ್ಯ ಆರ್ಥಿಕ ನೆರವು ಕಲ್ಪಿಸಲಾಗುವುದು ಎಂದು ಕೆಎಂಎಫ್‌ ಅಧಿಕಾರಿಗಳು ಭರವಸೆ ನೀಡಿದರು.

ಹಾವೇರಿ ಜಿಲ್ಲೆಯ ಹಾಲಿಗೆ ಧಾರವಾಡ ಜಿಲ್ಲೆಯಲ್ಲಿ ಮಾರುಕಟ್ಟೆ ಒದಗಿಸುವುದು ಕಷ್ಟ. ಆದರೆ ನೇರವಾಗಿ ಒಕ್ಕೂಟಕ್ಕೆ ಪೂರೈಕೆ ಮಾಡುವ ಬಗ್ಗೆ ಆಲೋಚನೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಹೊಸ ಒಕ್ಕೂಟವಾಗಿರುವುದರಿಂದ ಐದು ವರ್ಷ ಲೇವಿ ವಿನಾಯಿತಿ ನೀಡಬೇಕು ಎಂಬ ಬೇಡಿಕೆ ಈಡೇರಿಕೆ ಕಷ್ಟಸಾಧ್ಯ. ಆದರೆ ಟ್ರೇಡ್‌ಸ್ಕೀಮ್‌ನಲ್ಲಿ ಆಗುವ ನಷ್ಟಕ್ಕೆ ಅನುದಾನ ನೀಡಬೇಕು ಎಂಬ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ದುಡಿಯುವ ಬಂಡವಾಳಕ್ಕೆ ಸರ್ಕಾರದಿಂದ ಶೇರು ಒದಗಿಸಬೇಕು ಎಂಬ ಬೇಡಿಕೆ ಕೆಎಂಎಫ್‌ ವ್ಯಾಪ್ತಿಗೆ ಬರುವುದಿಲ್ಲ. ಇದಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಬೇಕು. ಆದರೆ ಸರ್ಕಾರ ಇದುವರಗೆ ಯಾವುದೇ ಹಾಲು ಒಕ್ಕೂಟಕ್ಕೆ ಶೇರು ಬಂಡವಾಳ ಒದಗಿಸಿದ ನಿದರ್ಶನ ಇಲ್ಲ ಎಂದು ಕೆಎಂಎಫ್‌ ಅಧಿಕಾರಿಗಳು ತಿಳಿಸಿದರು.

ಹೊಸ ಆಡಳಿತ ಭವನದ ಎದುರು ಇರುವ ಪಶು ಸಂಗೋಪನಾ ಇಲಾಖೆಯ ಜಾಗವನ್ನು ಹಾಲು ಒಕ್ಕೂಟಕ್ಕೆ ಬಿಟ್ಟುಕೊಡಬೇಕು ಎಂಬ ಹಾವೇರಿ ಹಾಲು ಒಕ್ಕೂಟದ ಬೇಡಿಕೆಗೆ ವಿಧಾನಸಭೆ ಉಪಸಭಾಧ್ಯಕ್ಷ, ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಸಹಮತ ವ್ಯಕ್ತಪಡಿಸಿದರು. ಒಕ್ಕೂಟದ ಕಟ್ಟಡಕ್ಕೆ ಸಮನಾಗಿ ಅಗತ್ಯ ಜಾಗ ಬಿಟ್ಟುಕೊಡಲಾಗುವುದು ಎಂದು ಹೇಳಿದರು.
ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಯು.ಬಿ. ಬಣಕಾರ್‌, ಪ್ರಕಾಶ್‌ ಕೋಳಿವಾಡ, ಕೆಎಂಎಫ್‌ ಮಾರುಕಟ್ಟೆ ನಿರ್ದೇಶಕ ಸತೀಶ್‌ ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಅಶೋಕ ಗೌಡ ಸೇರಿದಂತೆ ಕೆಎಂಎಫ್‌ ಮತ್ತು ಹಾವೇರಿ ಹಾಲು ಒಕ್ಕೂಟದ ಅಧಿಕಾರಿಗಳು ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು.

ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಚಿವರು
ಹಾವೇರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಕೆಲವು ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಅಧ್ಯಕ್ಷ ಮಂಜನಗೌಡ ಅವರು ದೂರಿದಾಗ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಒಕ್ಕೂಟವನ್ನು ಲಾಭದಾಯಕವಾಗಿ ನಡೆಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ, ಮುಚ್ಚಿ ಹೋಗುವ ರೀತಿ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಿಂಗಳಲ್ಲಿ ಒಂದು ವಾರ ಮಾತ್ರ ಕೆಲಸ ಮಾಡುತ್ತಾರೆ ಎಂಬ ಆರೋಪ ಇದೆ. ಎಂಡಿ ಆದವರು ಆಡಳಿತ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ದೂರುಗಳು ಬಾರದಂತೆ ಕೆಲಸ ಮಾಡಬೇಕು ಎಂದರು. ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರು ಹಾವೇರಿ ಹಾಲು ಒಕ್ಕೂಟವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಅಗತ್ಯ ಸಹಕಾರದ ಭರವಸೆ ನೀಡಿದ್ದಾರೆ. ನೀವು ಅವರ ಸಂಪರ್ಕದಲ್ಲಿದ್ದು ಜವಾಬ್ದಾರಿ ನಿರ್ವಹಿಸಿ ಎಂದು ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಅವರಿಗೆ ಸಚಿವರು ಸಲಹೆ ನೀಡಿದರು.

 

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಡಾಂಗೆ ಎಜ್ಯುಕೇಶನ್ ಸೊಸೈಟಿಯ ಸೇವೆ ವಿಸ್ತಾರಗೊಳ್ಳಲಿ-ರುದ್ರಪ್ಪ ಲಮಣಿ

ಡಾಂಗೆ ಎಜ್ಯುಕೇಶನ್ ಸೊಸೈಟಿಯ ಸೇವೆ ವಿಸ್ತಾರಗೊಳ್ಳಲಿ-ರುದ್ರಪ್ಪ ಲಮಣಿ ಹಾವೇರಿ:...

ಬಹುಮುಖ ಪ್ರತಿಭೆಯ ಸಂವೇದನಾಶೀಲ ವ್ಯೆದ್ಯ ಡಾ. ಸಂಜಯ್ ಡಾಂಗೆ

ಬಹುಮುಖ ಪ್ರತಿಭೆಯ ಸಂವೇದನಾಶೀಲ ವ್ಯೆದ್ಯ ಡಾ. ಸಂಜಯ್ ಡಾಂಗೆ ಸಣ್ಣ ಝರಿಯಾಗಿ ಎಲ್ಲೊ...

ಎಸ್‌ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ-ಜಿಲ್ಲಾ ಜಾಗೃತಿ ಸಮಿತಿಗೆ ನೇಮಕ  

ಎಸ್‌ಸಿ-ಎಸ್ಟಿ ದೌರ್ಜನ್ಯ ನಿಯಂತ್ರಣ-ಜಿಲ್ಲಾ ಜಾಗೃತಿ ಸಮಿತಿಗೆ ನೇಮಕ   ಹಾವೇರಿ: ಪರಿಶಿಷ್ಟ ಜಾತಿ-...

ಇನಸ್ಟಾಗ್ರಾಮ್ ಜ್ಯೋತಿಷಿಗಳಿಂದ ಹಾವೇರಿಯ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿಗೆ ೧೫ ಲಕ್ಷರೂ ವಂಚನೆ

ಇನಸ್ಟಾಗ್ರಾಮ್ ಜ್ಯೋತಿಷಿಗಳಿಂದ ಹಾವೇರಿಯ ಫಾರ್ಮಸಿಸ್ಟ್ ವಿದ್ಯಾರ್ಥಿನಿ ವೈಷ್ಣವಿಗೆ ೧೫ ಲಕ್ಷರೂ ವಂಚನೆ ಹಾವೇರಿ:...