ಹಾವೇರಿ ಲೋಕಸಭಾ ಕ್ಷೇತ್ರ: ೧೪ ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ, ೧೨ ನಾಮಪತ್ರ ತಿರಸ್ಕೃತ,ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸಲ್ಲಿಕೆಯಾಗಿದ್ದ ೨೬ ಅಭ್ಯರ್ಥಿಗಳನಾಮಪತ್ರ ಪರಿಶೀಲನೆ ಶನಿವಾರ ಇಲ್ಲಿನ ಜಿಲ್ಲಾಡಳಿತಭವನದಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು. ನಾಮಪತ್ರ ಸಲ್ಲಿಸಿದ ೨೬ ಅಭ್ಯರ್ಥಿಗಳ ಪೈಕಿ ೧೪ ಅಭ್ಯರ್ಥಿಗಳ ನಾಮಪತ್ರಗಳು ಕ್ರಮ ಬದ್ದವಾಗಿದ್ದರ ಹಿನ್ನಲೆಯಲ್ಲಿ ಅವುಗಳನ್ನು ಅಂಗೀಕಾರಿಸಲಾಯಿತು. ಕ್ರಮ ಬದ್ದವಿರದ ೧೨ ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕೃರಿಸಲಾಗಿದೆ. ಏಪ್ರಿಲ್ ೨೨ ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಅವರು ತಿಳಿಸಿದ್ದಾರೆ.ಹಾವೇರಿ ಲೋಕಸಭಾ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಿದ ೨೬ ಅಭ್ಯರ್ಥಿಗಳ ಪೈಕಿ ೧೪ ಅಭ್ಯರ್ಥಿಗಳ ನಾಮಪತ್ರ ಅಂಗೀಕವಾಗಿದ್ದು, ೧೨ ಅಭ್ಯರ್ಥಿಗಳ೧೯ ನಾಮಪತ್ರಗಳು ತಿರಸ್ಕೃತಗೊಂಡಿವೆ.ಶನಿವಾರ (ಏಪ್ರಿಲ್ ೨೦) ನಾಮಪತ್ರ ಪರಿಶೀಲನೆ ನಡೆಸಲಾಗಿದ್ದು, ೨೬ ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿದ್ದ ೪೭ ನಾಮಪತ್ರಗಳ ಪೈಕಿ ೧೨ ಅಭ್ಯರ್ಥಿಗಳ೧೪ ನಾಮಪತ್ರ ಅಂಗೀಕಾರವಾಗಿದ್ದು, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಭ್ಯರ್ಥಿ ಜಿ.ಜಿ.ಆನಂದಸ್ವಾಮಿ ಗಡ್ಡದೇವರಮಠ, ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಬಸವರಾಜ ಸೋಮಪ್ಪ ಬೊಮ್ಮಾಯಿ, ಸೋಸಿಯಾಲಿಸ್ಟ್ ಪಾರ್ಟಿ(ಇಂಡಿಯಾ) ಅಭ್ಯರ್ಥಿ ಖಾಜಾಮೋಹಿದ್ದೀನ್ ಗುಡಗೇರಿ, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಅಭ್ಯರ್ಥಿ ಗಂಗಾಧರ ಬಡಿಗೇರ, ಕರ್ನಾಟಕ ರಾಷ್ಟç ಸಮಿತಿ ಅಭ್ಯರ್ಥಿ ತನು ಸಿ ಯಾದವ್, ಸಮಾಜವಾದಿ ಜನತಾ ಪಾರ್ಟಿ ಅಭ್ಯರ್ಥಿ (ಕರ್ನಾಟಕ) ಹೆಚ್.ಕೆ.ನರಸಿಂಹಪ್ಪ, ಇಂಡಿಯನ್ ಮೂಮೆಂಟ್ ಪಾರ್ಟಿ ಅಭ್ಯರ್ಥಿ ಶ್ರೀಮತಿ ರಶೀದ ಬೇಗಂ, ಏಕಂ ಸನಾತನ ಭಾರತ ದಳ ಅಭ್ಯರ್ಥಿ ವಿಶ್ವನಾಥ ಶೀರಿ, ಉತ್ತಮ ಪ್ರಜಾಕೀಯ ಪಾರ್ಟಿ ಅಭ್ಯರ್ಥಿ ಸಚಿನಕುಮಾರ ಕರ್ಜೆಕಣ್ಣನವರ, ಪಕ್ಷೇತರ ಅಭ್ಯರ್ಥಿಗಳಾದ ಡಾ.ಗುರಪ್ಪ ಹೆಚ್.ಇಮ್ರಾಪೂರ, ಜಗದೀಶ ಬಂಕಾಪೂರ, ಬಸವರಾಜ ಹಾದಿ, ರುದ್ರಪ್ಪ ಕುಂಬಾರ ಹಾಗೂ ಶ್ರೀಮತಿ ಸುನಂದಾ ಕರಿಯಪ್ಪ ಶಿರಹಟ್ಟಿ ಅವರ ನಾಮಪತ್ರಗಳು ಅಂಗೀಕರಿಸಲಾಗಿದೆ.೧೨ ನಾಮಪತ್ರ ತಿರಸ್ಕೃತ: ಬಹುಜನ ಸಮಾಜ ಪಾರ್ಟಿಯ ಸಣ್ಣಮೌಲಾಸಾಬ, ಶುಭ ಕರ್ನಾಟಕದ ವಾಸು ಮಲಜಿ, ಬಹುಜನ ಸಮಾಜ ಪಾರ್ಟಿಯ ಅಶೋಕ ಮರಿಯಣ್ಣನವರ, ಪಕ್ಷೇತರರಾದ ಶಿವಾನಂದ ರಾಠೋಡ, ವೀರಭದ್ರಪ್ಪ ಕಬ್ಬಿಣದ, ಅನೀಲ ಗುಂಜಳ, ಮಝುನಾಥ ಪಂಚಾನನ, ಶಿದ್ದಪ್ಪ ಪೂಜಾರ, ಮಮ್ಮದಹನೀಪಸಾಬ ಕಲ್ಲಂಗಡಿ, ಶಿದ್ದಪ್ಪ ಹೊಸಳ್ಳಿ, ಮಹಮ್ಮದಶಫಿ ಪಾಟೀಲ ಹಾಗೂ ಸಲೀಂ ನಾಯಕ ಅವರುಗಳ ನಾಮಪತ್ರ ತಿರಸ್ಕೃತಗೊಂಡಿವೆ.
ಹಾವೇರಿ ಲೋಕಸಭಾ ಕ್ಷೇತ್ರ: ೧೪ ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ, ೧೨ ನಾಮಪತ್ರ ತಿರಸ್ಕೃತ,
Date: