ಹಾವೇರಿ :ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಈಗ ಸಂಪೂರ್ಣ ಕಾಗದ ಮುಕ್ತ ಆಸ್ಪತ್ರೆ -ಶೀರ್ಘದಲ್ಲಿಯೇ ಹಲವು ಸೇವೆಗಳ ವಿಸ್ತರಣೆ

Date:

ಹಾವೇರಿ :ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಈಗ ಸಂಪೂರ್ಣ ಕಾಗದ ಮುಕ್ತ ಆಸ್ಪತ್ರೆ -ಶೀರ್ಘದಲ್ಲಿಯೇ ಹಲವು ಸೇವೆಗಳ ವಿಸ್ತರಣೆ
ಹಾವೇರಿ : ಹಾವೇರಿ ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಉತ್ತರ ಕರ್ನಾಟಕದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಾಗದ ಮುಕ್ತ (ಪೇಪರ್ ಲೆಸ್) ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗಿದೆ. ಎಲ್ಲ ಸೇವೆಗಳು ಇನ್ನು ಮುಂದೆ ಡಿಜಲೀಕರಣದ ಮೂಲಕ ನಡೆಯಲಿವೆ. ಆಸ್ಪತ್ರೆ ಆರಂಭಗೊಂಡು ಕೇವಲ ೮ತಿಂಗಳಲ್ಲಿ ಈಸಾಧನೆ ಮಾಡದೆ. ಶೀರ್ಘದಲ್ಲಿಯೇ ಇನ್ನು ಹಲವು ಸೇವೆಗಳನ್ನು ಹಾವೇರಿಜಿಲ್ಲೆಯ ಜನತೆಗೆ ನೀಡುವುದಾಗಿ ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮಧು ಕೆ.ಆರ್ ತಿಳಿಸಿದರು.
ಶುಕ್ರವಾರ ಆಸ್ಪತ್ರೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಶಿವಮೊಗ್ಗದಲ್ಲಿರುವ ನಮ್ಮ ಮುಖ್ಯ ಶಾಖೆ ಸರ್ಜಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕಾಗದ ರಹಿತವಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಸ್ಥಾಪನೆಯಾದ ದಿನದಿಂದ ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಪರಿಸರ ಚಟುವಟಿಕೆಗಳನ್ನು ಮಾಡುತ್ತ ಬರುತ್ತಿದೆ. ಆಸ್ಪತ್ರೆಗೆ ಬರುವ ಒಳ ರೋಗಿಯ ನೊಂದಣಿಯಿಂದ ಹಿಡಿದು ಔಷಧ ವಿತರಣೆವರೆಗೂ ಸಂಪೂರ್ಣ ಕಾಗದ ರಹಿತವಾಗಿ ಎಲ್ಲವನ್ನು ಆನ್‌ಲೈನ್ ಮೂಲಕ ಒದಗಿಸಲಾಗುತ್ತದೆ ಎಂದರು.
ಜಗತ್ತಿನಲ್ಲಿ ಅಂದಾಜಿನ ಪ್ರಕಾರ ಪ್ರತಿ ೨ ಸೆಕೆಂಡ್‌ಗೆ ೧ ಮರ ಪೇಪರ್ ಉತ್ಪಾದನೆ ಸಲುವಾಗಿ ಕಟಾವು ಆಗುತ್ತಿದೆ. ಒಂದು ಟನ್ ಪೇಪರ್ ತಯಾರಿಕೆಗೆ ೨೪ ಮರಗಳನ್ನು ಕಡಿಯಬೇಕಾಗುತ್ತದೆ. ಭಾರತದಲ್ಲಿ ಒಂದು ವರ್ಷಕ್ಕೆ ೪೦.೫ ಕೋಟಿ ಟನ್ ಪೇಪರ್ ಉತ್ಪಾದನೆ ಆಗುತ್ತಿದೆ. ೮,೩೩೩ ಂ೪ ಶೀಟ್‌ಗಳನ್ನು ತಯಾರಿಸಲು ನಾವು ಒಂದು ಸಂಪೂರ್ಣ ಮರವನ್ನು ಕಡಿಯಬೇಕಾಗುತ್ತದೆ. ನಮ್ಮ ಆಸ್ಪತ್ರೆಗೆ ಅಂದಾಜು ತಿಂಗಳಿಗೆ ೧ ಲಕ್ಷದ ೭೪ ಸಾವಿರ ಂ೪ ಶೀಟ್ ಬಳಸಲಾಗುತ್ತಿತ್ತು. ಈಗ ಡಿಜಿಟಲಿಕರಣವಾದ ಮೇಲೆ ಪೇಪರ್ ಬಳಸುವುದು ಸಂಪೂರ್ಣ ನಿಲ್ಲಿಸಿದ್ದೇವೆ ಇದರಿಂದ ನಾವೂ ತಿಂಗಳಿಗೆ ೨೧ ಮರಗಳಲ್ಲಿ ಉಳಿಸಿದಂತಾಗುತ್ತದೆ.
ಮೊದಲು ದಾಖಲಾತಿಗಳನ್ನು ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಕೊಟ್ಟು ಬರುವುದು ಹಾಗೂ ಅಲ್ಲಿಂದ ವಾಪಸು ಸಂಬಂಧಪಟ್ಟ ವೈದ್ಯರಿಗೆ ತೋರಿಸುವುದಕ್ಕೆ ಸಿಬ್ಬಂದಿಯ, ವೈದ್ಯರ, ರೋಗಿಗಳ ಸಮಯ ಬಹಳ ವ್ಯರ್ಥವಾಗುತ್ತಿತ್ತು. ಬಿಲ್ಲಿಂಗ್ ವಿಭಾಗ ಅಥವಾ ಎಂ ಆರ್ ಡಿ, ಪ್ರಯೋಗಾಲಯ ಹೀಗೆ ಪ್ರತಿಯೊಂದು ವಿಭಾಗಕ್ಕೆ ಅಲೆದಾಡುವ ಸಮಯ ಕಡಿಮೆ ಆಗುತ್ತದೆ. ರೋಗಿಗಳ ಜೊತೆಗೆ ಬಂದವರಿಗೆ ರಿಪೋರ್ಟ್ ತೆಗೆದುಕೊಂಡು ಬರುವುದಾಗಲಿ ಹೋಗಬೇಕಿಲ್ಲ, ಆ ಆತಂಕ, ಗಾಬರಿ, ಗಡಿಬಿಡಿ ಅವರಿಗೆ ಇರುವುದಿಲ್ಲ. ಎಲ್ಲ ರಿಪೋರ್ಟ್ ಗಳೂ ಟ್ಯಾಬ್ ಮೂಲಕ ಆಯಾ ವಿಭಾಗಕ್ಕೆ ರವಾನೆ ಆಗಿರುತ್ತದೆ.
ಏಕ ಕಾಲದಲ್ಲಿ ೪ ರಿಂದ ೫ ಜನ ವಿವರಗಳನ್ನು ದಾಖಲಿಸಬಹುದು ಹಾಗೂ ವೀಕ್ಷಣೆ ಮಾಡಬಹುದು. ಜೊತೆಗೆ ಕನ್ನಡದಲ್ಲಿ ದಾಖಲಾತಿಗಳನ್ನು ಓದಬಹುದಾಗಿದೆ ಎಂದರು.
ಹಾವೇರಿ ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಯಲ್ಲಿ ೫೦ಬೆಡ್ ಸೌಲಭ್ಯವಿದ್ದು, ಇದನ್ನು ೧೦೦ಬೆಡ್‌ಗೆ ವಿಸ್ತರಿಸಲಾಗುವುದು. ಹೃದಯ ಚಿಕಿತ್ಸಾ ವಿಭಾಗವನ್ನು ಆಧುನಿಕರಣಗೊಳಿಸಲಾಗುವುದು. ಈಗಾಗಲೇ ಹೃದಯಾಘಾತಕ್ಕೆ ಒಳಪಟ್ಟ ಅನೇಕರಿಗೆ ತುರ್ತು ಚಿಕಿತ್ಸೆ ನೀಡುವ ಮೂಲಕ ಅವರನ್ನು ಸೇವಮಾಡಲಾಗಿದೆ ಎಂದು ಅವರು ಹಾವೇರಿಜಿಲ್ಲೆಯಲ್ಲಿ ೧೭ಲಕ್ಷ ಜನಸಂಖ್ಯೆಯಿದ್ದು, ಜನರ ಅವಶ್ಯಕತೆಗೆ ತಕ್ಕಂತೆ ಸೇವೆ ನೀಡುವ ಆಸ್ಪತ್ರೆಗಳು ಹಾವೇರಿಯಲ್ಲಿ ಇರಲಿಲ್ಲ. ಹಾವೇರಿಯ ಮೊಟ್ಟ ಮೊದಲ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಯಾಗಿದ್ದು, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸೇವೆಯನ್ನು ನೀಡುತ್ತಿರುವುದು ನಮ್ಮ ಆಸ್ಪತ್ರೆ ಎಂದು ಡಾ.ಮಧು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯ ವಿವಿಧ ವಿಭಾಗಗಳ ವೈದ್ಯರುಗಳಾದ ಡಾ.ರಾಘವಾಂಕ, ಡಾ.ನವೀನ್ ಸಿ.ಆರ್, ಡಾ. ರಾಕೇಶ್ ಎಂ.ಕೆ, ಡಾ.ಚೇತನ್ ಕೆ.ಎಂ, ಡಾ.ಸಚಿನ್ ಸಿ ಯು, ಡಾ. ಲಿಖಿತಾ ಆರ್, ಡಿ ಸ್ಕ್ರಿಬ್ ನ ಸಹ ಸಂಸ್ಥಾಪಕರಾದ ಕಾರ್ತಿಕ್, ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ರಂಜಿತಾ ಬಸೇಗಣ್ಣಿ, ಆಡಳಿತಾಧಿಕಾರಿ ಚೈತ್ರ ಗೌಡ, ಸಹಾಯಕ ಆಡಳಿತಾಧಿಕಾರಿ ಪ್ರವೀಣ್ ಚರಂತಿಮಠ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿ :ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಈಗ ಸಂಪೂರ್ಣ ಕಾಗದ ಮುಕ್ತ ಆಸ್ಪತ್ರೆ -ಶೀರ್ಘದಲ್ಲಿಯೇ ಹಲವು ಸೇವೆಗಳ ವಿಸ್ತರಣೆ
ಹಾವೇರಿ : ಹಾವೇರಿ ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಉತ್ತರ ಕರ್ನಾಟಕದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕಾಗದ ಮುಕ್ತ (ಪೇಪರ್ ಲೆಸ್) ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗಿದೆ. ಎಲ್ಲ ಸೇವೆಗಳು ಇನ್ನು ಮುಂದೆ ಡಿಜಲೀಕರಣದ ಮೂಲಕ ನಡೆಯಲಿವೆ. ಆಸ್ಪತ್ರೆ ಆರಂಭಗೊಂಡು ಕೇವಲ ೮ತಿಂಗಳಲ್ಲಿ ಈಸಾಧನೆ ಮಾಡದೆ. ಶೀರ್ಘದಲ್ಲಿಯೇ ಇನ್ನು ಹಲವು ಸೇವೆಗಳನ್ನು ಹಾವೇರಿಜಿಲ್ಲೆಯ ಜನತೆಗೆ ನೀಡುವುದಾಗಿ ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮಧು ಕೆ.ಆರ್ ತಿಳಿಸಿದರು.
ಶುಕ್ರವಾರ ಆಸ್ಪತ್ರೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಶಿವಮೊಗ್ಗದಲ್ಲಿರುವ ನಮ್ಮ ಮುಖ್ಯ ಶಾಖೆ ಸರ್ಜಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕಾಗದ ರಹಿತವಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಸ್ಥಾಪನೆಯಾದ ದಿನದಿಂದ ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಪರಿಸರ ಚಟುವಟಿಕೆಗಳನ್ನು ಮಾಡುತ್ತ ಬರುತ್ತಿದೆ. ಆಸ್ಪತ್ರೆಗೆ ಬರುವ ಒಳ ರೋಗಿಯ ನೊಂದಣಿಯಿಂದ ಹಿಡಿದು ಔಷಧ ವಿತರಣೆವರೆಗೂ ಸಂಪೂರ್ಣ ಕಾಗದ ರಹಿತವಾಗಿ ಎಲ್ಲವನ್ನು ಆನ್‌ಲೈನ್ ಮೂಲಕ ಒದಗಿಸಲಾಗುತ್ತದೆ ಎಂದರು.
ಜಗತ್ತಿನಲ್ಲಿ ಅಂದಾಜಿನ ಪ್ರಕಾರ ಪ್ರತಿ ೨ ಸೆಕೆಂಡ್‌ಗೆ ೧ ಮರ ಪೇಪರ್ ಉತ್ಪಾದನೆ ಸಲುವಾಗಿ ಕಟಾವು ಆಗುತ್ತಿದೆ. ಒಂದು ಟನ್ ಪೇಪರ್ ತಯಾರಿಕೆಗೆ ೨೪ ಮರಗಳನ್ನು ಕಡಿಯಬೇಕಾಗುತ್ತದೆ. ಭಾರತದಲ್ಲಿ ಒಂದು ವರ್ಷಕ್ಕೆ ೪೦.೫ ಕೋಟಿ ಟನ್ ಪೇಪರ್ ಉತ್ಪಾದನೆ ಆಗುತ್ತಿದೆ. ೮,೩೩೩ ಂ೪ ಶೀಟ್‌ಗಳನ್ನು ತಯಾರಿಸಲು ನಾವು ಒಂದು ಸಂಪೂರ್ಣ ಮರವನ್ನು ಕಡಿಯಬೇಕಾಗುತ್ತದೆ. ನಮ್ಮ ಆಸ್ಪತ್ರೆಗೆ ಅಂದಾಜು ತಿಂಗಳಿಗೆ ೧ ಲಕ್ಷದ ೭೪ ಸಾವಿರ ಂ೪ ಶೀಟ್ ಬಳಸಲಾಗುತ್ತಿತ್ತು. ಈಗ ಡಿಜಿಟಲಿಕರಣವಾದ ಮೇಲೆ ಪೇಪರ್ ಬಳಸುವುದು ಸಂಪೂರ್ಣ ನಿಲ್ಲಿಸಿದ್ದೇವೆ ಇದರಿಂದ ನಾವೂ ತಿಂಗಳಿಗೆ ೨೧ ಮರಗಳಲ್ಲಿ ಉಳಿಸಿದಂತಾಗುತ್ತದೆ.
ಮೊದಲು ದಾಖಲಾತಿಗಳನ್ನು ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಕೊಟ್ಟು ಬರುವುದು ಹಾಗೂ ಅಲ್ಲಿಂದ ವಾಪಸು ಸಂಬಂಧಪಟ್ಟ ವೈದ್ಯರಿಗೆ ತೋರಿಸುವುದಕ್ಕೆ ಸಿಬ್ಬಂದಿಯ, ವೈದ್ಯರ, ರೋಗಿಗಳ ಸಮಯ ಬಹಳ ವ್ಯರ್ಥವಾಗುತ್ತಿತ್ತು. ಬಿಲ್ಲಿಂಗ್ ವಿಭಾಗ ಅಥವಾ ಎಂ ಆರ್ ಡಿ, ಪ್ರಯೋಗಾಲಯ ಹೀಗೆ ಪ್ರತಿಯೊಂದು ವಿಭಾಗಕ್ಕೆ ಅಲೆದಾಡುವ ಸಮಯ ಕಡಿಮೆ ಆಗುತ್ತದೆ. ರೋಗಿಗಳ ಜೊತೆಗೆ ಬಂದವರಿಗೆ ರಿಪೋರ್ಟ್ ತೆಗೆದುಕೊಂಡು ಬರುವುದಾಗಲಿ ಹೋಗಬೇಕಿಲ್ಲ, ಆ ಆತಂಕ, ಗಾಬರಿ, ಗಡಿಬಿಡಿ ಅವರಿಗೆ ಇರುವುದಿಲ್ಲ. ಎಲ್ಲ ರಿಪೋರ್ಟ್ ಗಳೂ ಟ್ಯಾಬ್ ಮೂಲಕ ಆಯಾ ವಿಭಾಗಕ್ಕೆ ರವಾನೆ ಆಗಿರುತ್ತದೆ.
ಏಕ ಕಾಲದಲ್ಲಿ ೪ ರಿಂದ ೫ ಜನ ವಿವರಗಳನ್ನು ದಾಖಲಿಸಬಹುದು ಹಾಗೂ ವೀಕ್ಷಣೆ ಮಾಡಬಹುದು. ಜೊತೆಗೆ ಕನ್ನಡದಲ್ಲಿ ದಾಖಲಾತಿಗಳನ್ನು ಓದಬಹುದಾಗಿದೆ ಎಂದರು.
ಹಾವೇರಿ ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಯಲ್ಲಿ ೫೦ಬೆಡ್ ಸೌಲಭ್ಯವಿದ್ದು, ಇದನ್ನು ೧೦೦ಬೆಡ್‌ಗೆ ವಿಸ್ತರಿಸಲಾಗುವುದು. ಹೃದಯ ಚಿಕಿತ್ಸಾ ವಿಭಾಗವನ್ನು ಆಧುನಿಕರಣಗೊಳಿಸಲಾಗುವುದು. ಈಗಾಗಲೇ ಹೃದಯಾಘಾತಕ್ಕೆ ಒಳಪಟ್ಟ ಅನೇಕರಿಗೆ ತುರ್ತು ಚಿಕಿತ್ಸೆ ನೀಡುವ ಮೂಲಕ ಅವರನ್ನು ಸೇವಮಾಡಲಾಗಿದೆ ಎಂದು ಅವರು ಹಾವೇರಿಜಿಲ್ಲೆಯಲ್ಲಿ ೧೭ಲಕ್ಷ ಜನಸಂಖ್ಯೆಯಿದ್ದು, ಜನರ ಅವಶ್ಯಕತೆಗೆ ತಕ್ಕಂತೆ ಸೇವೆ ನೀಡುವ ಆಸ್ಪತ್ರೆಗಳು ಹಾವೇರಿಯಲ್ಲಿ ಇರಲಿಲ್ಲ. ಹಾವೇರಿಯ ಮೊಟ್ಟ ಮೊದಲ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಯಾಗಿದ್ದು, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸೇವೆಯನ್ನು ನೀಡುತ್ತಿರುವುದು ನಮ್ಮ ಆಸ್ಪತ್ರೆ ಎಂದು ಡಾ.ಮಧು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯ ವಿವಿಧ ವಿಭಾಗಗಳ ವೈದ್ಯರುಗಳಾದ ಡಾ.ರಾಘವಾಂಕ, ಡಾ.ನವೀನ್ ಸಿ.ಆರ್, ಡಾ. ರಾಕೇಶ್ ಎಂ.ಕೆ, ಡಾ.ಚೇತನ್ ಕೆ.ಎಂ, ಡಾ.ಸಚಿನ್ ಸಿ ಯು, ಡಾ. ಲಿಖಿತಾ ಆರ್, ಡಿ ಸ್ಕ್ರಿಬ್ ನ ಸಹ ಸಂಸ್ಥಾಪಕರಾದ ಕಾರ್ತಿಕ್, ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ರಂಜಿತಾ ಬಸೇಗಣ್ಣಿ, ಆಡಳಿತಾಧಿಕಾರಿ ಚೈತ್ರ ಗೌಡ, ಸಹಾಯಕ ಆಡಳಿತಾಧಿಕಾರಿ ಪ್ರವೀಣ್ ಚರಂತಿಮಠ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...