ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಲಂಚ, ಹಾವೇರಿಜಿಲ್ಲಾ ಆಸ್ಪತ್ರೆಯ ವೈದ್ಯ ಡಾ.ಉಮೇಶ ಕೆಳಗಿನಮನಿ, ಆಶಾ ಕಾರ್ಯಕರ್ತೆ ದಾಕ್ಷಾಯಣಿ ಲೋಕಾಯುಕ್ತ ಬಲೆಗೆ
ಹಾವೇರಿ: ಸಂತಾನ ಹರಣ ಶಸ್ತ್ರಚಿಕಿತ್ಸೆ ಕ್ಯಗೊಳ್ಳಲು ನಾಲ್ಕು ಸಾವಿರೂಗಳ ಹಣಕ್ಕೆ ಬೇಡಿಕೆ ಇಟ್ಟು, ಎರಡು ಸಾವಿರರೂಗಳನ್ನು ಮುಂಗಡವಾಗಿ ಪಡೆದು ಉಳಿದ ಲಂಚದ ಹಣ೨೦೦೦/-ರೂಗಳನ್ನು ನೀಡಲು ಒತ್ತಾಯಿಸಿ, ಈ೨೦೦೦/-ರಗಳನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿನಡೆಸಿ ಲಂಚಪಡೆಯುತ್ತಿದ್ದ ಹಾವೇರಿಜಿಲ್ಲಾ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯ ಡಾ.ಉಮೇಶ ಕೆಳಗಿನಮನಿ, ಆಶಾ ಕಾರ್ಯಕರ್ತೆ ದಾಕ್ಷಾಯಣಿ ಚಿಕ್ಕನಂದಿ ಅವರನ್ನು ಬಲೆಗೆ ಬಿಳಿಸಿರುವ ಘಟನೆ ಗುರುವಾರ ನಡೆದಿದೆ.
ಫಿರಾದುದಾರರಾದ ವಿರೇಶ ಹಾದರಗೇರಿ ಅವರ ಪತ್ನಿ ಶ್ರೀಮತಿ (ರೂಪಾ) ಅವರಿಗೆ ಮತ್ತು ಸೋದರಿ ಸಂಬಂಧಿಯಾದ ಶ್ರೀಮತಿ ಲಕ್ಷ್ಮೀ ಅವರಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಆಪಾದಿತ-೧ ಉಮೇಶ ಮಾಲಿಂಗಪ್ಪ ಕೆಳಗಿನಮನಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಜಿಲ್ಲಾ ಆಸ್ಪತ್ರೆ, ಹಾವೇರಿ ಹಾಗೂ ಆಪಾದಿತ-೨ ಶ್ರೀಮತಿ ದ್ರಾಕ್ಷಾಯಣಿ ಪುಟ್ಟಪ್ಪ ಚಿಕ್ಕನಂದಿ, ಆಶಾ ಕಾರ್ಯಕರ್ತೆ, ಹೊಮ್ಮರಡಿ ಗ್ರಾಮ ತಾ. ಹಾವೇರಿ ಅವರು ಪಿರ್ಯಾದುದಾರರಿಗೆ ರೂ. ೪೦೦೦/-ಲಂಚದ ಹಣಕ್ಕೆ ಬೇಡಿಕೆ ಇಟ್ಟು ರೂ. ೨೦೦೦/-ಗಳನ್ನು ಮುಂಗಡ ಪಡೆದುಕೊಂಡು, ಉಳಿದ ಲಂಚದ ಹಣ ರೂ. ೨೦೦೦/ಗಳನ್ನು ನೀಡಲು ಒತ್ತಾಯಿಸಿ ಪಿರ್ಯಾದಿದಾರರಿಂದ ಆಪಾದಿತ-೧ ನೇದ್ದವರು ಪಡೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದು ಇರುತ್ತದೆ.
ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೈಗೊಂಡು, ಸದರಿ ಆರೋಪಿತರುಗಳನ್ನು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ದಸ್ತಗಿರಿ ಮಾಡಿದ್ದು, ಹೊಸರಿತ್ತಿ ಗ್ರಾಮದಲ್ಲಿರುವ ವೈದ್ಯರ ಮನೆಯ ಶೋಧನೆಯನ್ನು ಕೈಗೊಂಡು ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದು ತನಿಖೆ ಮುಂದುವರೆದಿದೆ. ೨ ಸಾವಿರ ರುಪಾಯಿ ಲಂಚದ ಹಣ ಪಡೆದುಕೊಳ್ಳುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ರೆಡ್ ಹ್ಯಾಂಡ್ ಆಗಿ ವೈದ್ಯ ಮಹಾಶಯ ಹಾಗೂ ಓರ್ವ ಆಶಾ ಕಾರ್ಯಕತೆಯನ್ನು ಬಂಧಿಸಿದ್ದಾರೆ. ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಹಾವೇರಿಜಿಲ್ಲಾ ಆಸ್ಪತ್ರೆಯ ವೈದ್ಯ ಡಾ.ಉಮೇಶ ಕೆಳಗಿನಮನಿ, ಆಶಾ ಕಾರ್ಯಕರ್ತೆ ದಾಕ್ಷಾಯಣಿ ಲೋಕಾಯುಕ್ತ ಬಲೆಗೆ
Date:
ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಲಂಚ, ಹಾವೇರಿಜಿಲ್ಲಾ ಆಸ್ಪತ್ರೆಯ ವೈದ್ಯ ಡಾ.ಉಮೇಶ ಕೆಳಗಿನಮನಿ, ಆಶಾ ಕಾರ್ಯಕರ್ತೆ ದಾಕ್ಷಾಯಣಿ ಲೋಕಾಯುಕ್ತ ಬಲೆಗೆ
ಹಾವೇರಿ: ಸಂತಾನ ಹರಣ ಶಸ್ತ್ರಚಿಕಿತ್ಸೆ ಕ್ಯಗೊಳ್ಳಲು ನಾಲ್ಕು ಸಾವಿರೂಗಳ ಹಣಕ್ಕೆ ಬೇಡಿಕೆ ಇಟ್ಟು, ಎರಡು ಸಾವಿರರೂಗಳನ್ನು ಮುಂಗಡವಾಗಿ ಪಡೆದು ಉಳಿದ ಲಂಚದ ಹಣ೨೦೦೦/-ರೂಗಳನ್ನು ನೀಡಲು ಒತ್ತಾಯಿಸಿ, ಈ೨೦೦೦/-ರಗಳನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿನಡೆಸಿ ಲಂಚಪಡೆಯುತ್ತಿದ್ದ ಹಾವೇರಿಜಿಲ್ಲಾ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯ ಡಾ.ಉಮೇಶ ಕೆಳಗಿನಮನಿ, ಆಶಾ ಕಾರ್ಯಕರ್ತೆ ದಾಕ್ಷಾಯಣಿ ಚಿಕ್ಕನಂದಿ ಅವರನ್ನು ಬಲೆಗೆ ಬಿಳಿಸಿರುವ ಘಟನೆ ಗುರುವಾರ ನಡೆದಿದೆ.
ಫಿರಾದುದಾರರಾದ ವಿರೇಶ ಹಾದರಗೇರಿ ಅವರ ಪತ್ನಿ ಶ್ರೀಮತಿ (ರೂಪಾ) ಅವರಿಗೆ ಮತ್ತು ಸೋದರಿ ಸಂಬಂಧಿಯಾದ ಶ್ರೀಮತಿ ಲಕ್ಷ್ಮೀ ಅವರಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಆಪಾದಿತ-೧ ಉಮೇಶ ಮಾಲಿಂಗಪ್ಪ ಕೆಳಗಿನಮನಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಜಿಲ್ಲಾ ಆಸ್ಪತ್ರೆ, ಹಾವೇರಿ ಹಾಗೂ ಆಪಾದಿತ-೨ ಶ್ರೀಮತಿ ದ್ರಾಕ್ಷಾಯಣಿ ಪುಟ್ಟಪ್ಪ ಚಿಕ್ಕನಂದಿ, ಆಶಾ ಕಾರ್ಯಕರ್ತೆ, ಹೊಮ್ಮರಡಿ ಗ್ರಾಮ ತಾ. ಹಾವೇರಿ ಅವರು ಪಿರ್ಯಾದುದಾರರಿಗೆ ರೂ. ೪೦೦೦/-ಲಂಚದ ಹಣಕ್ಕೆ ಬೇಡಿಕೆ ಇಟ್ಟು ರೂ. ೨೦೦೦/-ಗಳನ್ನು ಮುಂಗಡ ಪಡೆದುಕೊಂಡು, ಉಳಿದ ಲಂಚದ ಹಣ ರೂ. ೨೦೦೦/ಗಳನ್ನು ನೀಡಲು ಒತ್ತಾಯಿಸಿ ಪಿರ್ಯಾದಿದಾರರಿಂದ ಆಪಾದಿತ-೧ ನೇದ್ದವರು ಪಡೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದು ಇರುತ್ತದೆ.
ಸದರಿ ಪ್ರಕರಣದ ತನಿಖೆಯನ್ನು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೈಗೊಂಡು, ಸದರಿ ಆರೋಪಿತರುಗಳನ್ನು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ದಸ್ತಗಿರಿ ಮಾಡಿದ್ದು, ಹೊಸರಿತ್ತಿ ಗ್ರಾಮದಲ್ಲಿರುವ ವೈದ್ಯರ ಮನೆಯ ಶೋಧನೆಯನ್ನು ಕೈಗೊಂಡು ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದು ತನಿಖೆ ಮುಂದುವರೆದಿದೆ. ೨ ಸಾವಿರ ರುಪಾಯಿ ಲಂಚದ ಹಣ ಪಡೆದುಕೊಳ್ಳುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ರೆಡ್ ಹ್ಯಾಂಡ್ ಆಗಿ ವೈದ್ಯ ಮಹಾಶಯ ಹಾಗೂ ಓರ್ವ ಆಶಾ ಕಾರ್ಯಕತೆಯನ್ನು ಬಂಧಿಸಿದ್ದಾರೆ. ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.