
ಹಾವೇರಿಜಿಲ್ಲೆಯ ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆ: ೨೨೨೭ ಕಡೆ ಗಜಾನನ ಮೂರ್ತಿಗಳ ಪ್ರತಿಷ್ಠಾಪನೆ
*೨೦ಅತೀ ಸೂಕ್ಷ್ಮ* ೫೦೧ಸೂಕ್ಷ್ಮ*೧೭೦೭ ಸಾಧಾರಣ
ಹಾವೇರಿ: ಹಾವೇರಿಜಿಲ್ಲೆಯಾದ್ಯಂತ ಗೌರಿ-ಗಣೇಶೋತ್ಸವಕ್ಕೆ ಭರದ ಸಿದ್ಧತೆಗಳು ಪ್ರಾರಂಭವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಬಹುತೇಕ ಮಂಟಪಗಳ ನಿರ್ಮಾಣಕಾರ್ಯ ಪೂರ್ಣಗೊಂಡಿದ್ದು, ಜಿಲ್ಲೆಯ ೨೨೨೭ ಕಡೆಗಳಲ್ಲಿ ಗಜಾನನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುವುದು. ಈ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲು ಸಮಿತಿಗಳು ಸಜ್ಜಾಗಿವೆ.
ಜಿಲ್ಲೆಯಾದ್ಯಂತ ಆ.೨೭ರ ವಿನಾಯಕ ಚತುರ್ಥಿ ದಿನದಂದು ವಿಘ್ನ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಕೆಲವು ಸಮಿತಿಗಳು ೫ದಿನಕ್ಕೆ, ಇನ್ನು ಕೆಲವರು ೭, ೯, ೧೧ ದಿನ ವಿವಿಧದಿನಾಂಕಗಳಲ್ಲಿ ಹೀಗೆ ವಿಸರ್ಜನೆ ಮಾಡುತ್ತಾರೆ. ಜಿಲ್ಲೆಯಲ್ಲಿ ೨೨೨೭ ಕಡೆ ಗಜಾನನ ಮೂರ್ತಿಗಳ ಪ್ರತಿಷ್ಠಾಪ ಮಾಡಲಾಗುತ್ತಿದ್ದು, ಇದರಲ್ಲಿ ೨೦ ಅತೀ ಸೂಕ್ಷ್ಮ, ೫೦೧ ಸೂಕ್ಷ್ಮ ಹಾಗೂ ೧೭೦೭ ಕಡೆಗಳಲ್ಲಿ ಸಾಧಾರಣ ಎಂದು ಗುರುತಿಸಲಾಗಿರುವ ಸಾರ್ವಜನಿಕ ಸ್ಥಳಗಳಲಿ ಗಜಾನನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ,
ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಅಪ್ಪಟ ಸಂಪ್ರದಾಯಕ್ಕೆ ಒತ್ತು ನೀಡಿ ಗಣೇಶ ಉತ್ಸವವನ್ನು ಆಚರಿಸಲಾಗುತ್ತಿದೆ. ನಗರದ ಎಲ್ಲಭಾಗಗಳಲ್ಲಿ ಗಣೇಶನ ಪ್ರತಿಷ್ಠಾಪನೆ ಭಾದ್ರಪದ ಶುದ್ಧ ಚತುರ್ಥಿ ದಿನದಂದು ಆರಂಭವಾಗುವ ಉತ್ಸವಕ್ಕೆ ಈಗಾಗಲೇ ಮಂಟಪಗಳನ್ನು ಅಲಂಕರಿಸಲಾಗಿದ್ದು, ಗಣೇಶ ಉತ್ಸವ ನಡೆಯುವ ವಿದ್ಯುತ್ ಅಲಂಕೃತ ಮಂಟಪಗಳು, ಬೀದಿಗಳು ವಿದ್ಯುತ್ದೀಪಗಳಿಂದ ಅಲಂಕಾರ ಗೊಂಡು ಝಗಮಗಿಸುತ್ತಿವೆ.
ಬೀಗಿ ಪೊಲೀಸ್ ಭದ್ರತೆ: ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶನ ಮಂಟಪಗಳಿಗೆ ಬೀಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ೪ ಡಿಎಸ್ಪಿ, ೧೪ ಸಿಪಿಐ, ೪೫ ಪಿಎಸ್ಐ,೭೫ ಎಎಸ್ಐ,೫೫೦ ಹೆಡ್ ಕಾನಸ್ಟೇಬಲ್, ಹಾಘೂ ಪಿಸಿ, ೪ ಕೆಎಸ್ಆರ್ಪಿ ೧ಜಿಆರ್ಟಿ,೬ಡಿಎಆರ್, ೪೦೦ಹೋಂಗಾರ್ಡಗಳು ಕರ್ತವ್ಯ ನಿರ್ವಹಿಸಲಿದ್ದಾರೆ.

