ಹಾವೇರಿಭಾಗದಲ್ಲಿ ಪದೇ ಪದೆ ಕಾಣಿಸುತ್ತಿರುವ ಚಿರತೆಗಳು, ಆತಂಕದಲ್ಲಿ ಜನತೆ

Date:

 

ಚಿರತೆ ಸೆರೆಗೆ ಅಳವಡಿಸಿರುವ ಬೋನು.

ಚಿರತೆಯ ಸಾಂದರ್ಭಿಕ ಚಿತ್ರ.

ಹಾವೇರಿಭಾಗದಲ್ಲಿ ಪದೇ ಪದೆ ಕಾಣಿಸುತ್ತಿರುವ ಚಿರತೆಗಳು, ಆತಂಕದಲ್ಲಿ ಜನತೆ
*ಹೆಗ್ಗರೆಕೆರೆ ಪ್ರದೇಶ *ಕುರುಬಗೊಂಡ -ಬನ್ನಿಹಳ್ಳಿ
ಗ್ರಾಮದ ಬಳಿ ಚಿರತೆಗಳ ಓಡಾಟ!
ಹಾವೇರಿ: ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಇತ್ತೀಚೆಗೆ ಹಾವೇರಿ ಸಮೀಪದ ಕುಳೇನೂರು ಗ್ರಾಮದ ಬಳಿ ಜೋಡಿ ಚಿರತೆ ಮರಿಗಳು ಪತ್ತೆಯಾದ ಬೆನ್ನಲ್ಲಿಯೇ ಹಾವೇರಿ ತಾಲೂಕಿನ ಕುರಬಗೊಂಡ- ಬನ್ನಿಹಳ್ಳಿ ಗ್ರಾಮ ಹಾಗೂ ಹಾವೇರಿ ಸಮೀಪದ ಹೆಗ್ಗೆರೆಕೆರೆ ಪ್ರದೇಶದಲ್ಲಿ ಚಿರತೆಗಳ ಓಡಾಟ ಕಂಡು ಬಂದಿದ್ದು, ಕೃಷಿಕರು ಹಾಗೂ ಜನತೆ ಆತಂಕಗೊಂಡಿದ್ದಾರೆ.
ಗುರುವಾರ ರಾತ್ರಿ ತಾಲೂಕಿನ ಕುರುಬಗೊಂಡ -ಬನ್ನಿಹಳ್ಳಿ  ಗ್ರಾಮದ ಬಳಿ ಜೋಡಿ ಚಿರತೆಗಳ ಓಡಾಟವನ್ನು ಗಮನಿಸಿದ ಹೊಲದಲ್ಲಿ ನೀರು ಹಾಯಿಸುತ್ತಿದ್ದ  ರೈತರು
ಗ್ರಾಮಸ್ಥರು ಭಯಗೊಂಡು ಓಡಿ ಹೋಗಿದ್ದಾರೆ. ರಾತ್ರಿಯ ವೇಳೆ ಪದೇ ಪದೆ ಚಿರತೆಗಳು ಕಾಣಿಸಿಕೊಳ್ಳತ್ತಿದ್ದು, ರಾತ್ರಿಯ ವೇಳೆ ಹೊಲಗಳಿಗೆ ನೀರು ಹಾಯಿಸಲು ಹೋಗಲು ರೈತರು ಹೆದರುತ್ತಿದ್ದಾರೆ. ಇತ್ತ ಹಾವೇರಿನಗರಕ್ಕೆ ಸಮೀಪದಲ್ಲಿರುವ ಹೆಗ್ಗೆರೆಕೆರೆಯ ಹಿಂಭಾಗದಲ್ಲಿರುವ ಹಳೆ ಎಸ್‌ಪಿ ಕಚೇರಿ ಬಳಿ , ಕೆರೆಮತ್ತಿಹಳ್ಳಿ ಭಾಗದಲ್ಲಿ ಚಿರತೆಗಳು ಓಡಾಟವನ್ನು ಕೆಲವರು ಗಮನಿಸಿದ್ದಾರೆ.
ಕುಳೇನೂರು ಗ್ರಾಮದ ಬಳಿ ಚಿರತೆಮರಿಗಳು ಪತ್ತೆಯಾಗಿರುವ ಹಿನ್ನಲೆಯಲ್ಲಿ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಎರಡು ಬೋನುಗಳನ್ನು ಇಟ್ಟಿದ್ದಾರೆ. ಆದರೆ ಚಿರತೆಗಳು ಬೋನಿಗೆ ಬಿದ್ದಿಲ್ಲ. ಇದೀಗ ಹಾವೇರಿಯ ಇನ್ನೊಂದು ಭಾಗದಲ್ಲಿ ಚಿರತೆಗಳು ಓಡಾಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಆಹಾರ ಹುಡುಕಿಕೊಂಡು, ಇನ್ಯಾವುದೋ ಕಾರಣಗಳಿಗೆ  ಚಿರತೆಗಳು ಕಾಡಿನಿಂದ ನಾಡಿಗೆ ಹೆಚ್ಚಾಗಿ ಬರುತ್ತಿವೆ. ಅದರಲ್ಲೂ ಹಾವೇರಿ ನಗರದ ಹೊರವಲಯದಲ್ಲಿ ಇರುವ ಕುರಚಲು ಕಾಡು  ಹಾಗೂ ಈ ಬಾರಿ ಮಳೆ ಹೆಚ್ಚಾದ ಕಾರಣಕ್ಕೆ  ಇದ್ದದರಲ್ಲಿ ಕಬ್ಬಿನ ಬೆಳೆ ಉತ್ತಮವಾಗಿದ್ದು, ಈ ಕಾರಣಕ್ಕೆ  ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ. ನಗರದ ವಸತಿ ಪ್ರದೇಶಗಳಲ್ಲಿ ಪದೇ ಪದೆ ಚಿರತೆಗಳು  ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚಿರತೆ ಓಡಾಡುತ್ತಿರುವ ಪ್ರದೇಶಗಳಲ್ಲಿ ಬೋನಗಳನ್ನಿಟ್ಟು ಚಿರತೆಗಳನ್ನು ಕೂಡಲೇ ಸೆರೆ ಹಿಡಿದು ಕಾಡಿಗೆ ಅಥವಾ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವ ಕಾರ್ಯವನ್ನು ತ್ವರಿತವಾಗಿ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಚಿರತೆ ಹಿಡಿಯುವ ಕಾರ್ಯಕ್ಕೆ ವಲಯ ಅರಣ್ಯಾಧಿಕಾರಿ ಮಾಹಾಂತೇಶ‌ ನ್ಯಾಮತಿ, ಉಪ ವಲಯ ಅರಣ್ಯಾಧಿಕಾರಿ ಗಜೇಂದ್ರ, ಗಸ್ತು ಅರಣ್ಯ ಪಾಲಕ ಬಸವಣ್ಣೆಪ್ಪ ಮೆಣಸಿನಕಾಯಿ ಮತ್ತಿತರರು

 ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಚಿರತೆಗಳ ಸೆರೆಗೆ ಬೋನಗಳು
ಹಾವೇರಿ ತಾಲೂಕಿನ ಕುಳೇನೂರುಗ್ರಾಮದ ಬಳಿ ಚಿರತೆಮರಿಗಳು ಪತ್ತೆಯಾದ ಹಿನ್ನಲೆಯಲ್ಲಿ ಚಿರತೆಗಳ ಸೆರೆಗೆ ಎರಡು ಬೋನಗಳನ್ನು ಇಡಲಾಗಿದೆ. ಆದರೆ ಚಿರತೆಗಳು ಸೆರೆಯಾಗಿಲ್ಲ. ಇದೀಗ ಚಿರತೆಗಳು ಕಂಡು ಬಂದಿರುವ ಪ್ರದೇಶಗಳಲ್ಲಿಯೂ ಸಹ  ಚಿರತೆಗಳ ಸೆರೆಗೆ ಬೋನಗಳನ್ನು ಇಡಲಾಗುವುದು ಎಂದು ಉಪ ವಲಯ ಅರಣ್ಯಾಧಿಕಾರಿ ಗಂಜೇಂದ್ರ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

 

ಚಿರತೆ ಸೆರೆಗೆ ಅಳವಡಿಸಿರುವ ಬೋನು.

ಚಿರತೆಯ ಸಾಂದರ್ಭಿಕ ಚಿತ್ರ.

ಹಾವೇರಿಭಾಗದಲ್ಲಿ ಪದೇ ಪದೆ ಕಾಣಿಸುತ್ತಿರುವ ಚಿರತೆಗಳು, ಆತಂಕದಲ್ಲಿ ಜನತೆ
*ಹೆಗ್ಗರೆಕೆರೆ ಪ್ರದೇಶ *ಕುರುಬಗೊಂಡ -ಬನ್ನಿಹಳ್ಳಿ
ಗ್ರಾಮದ ಬಳಿ ಚಿರತೆಗಳ ಓಡಾಟ!
ಹಾವೇರಿ: ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಇತ್ತೀಚೆಗೆ ಹಾವೇರಿ ಸಮೀಪದ ಕುಳೇನೂರು ಗ್ರಾಮದ ಬಳಿ ಜೋಡಿ ಚಿರತೆ ಮರಿಗಳು ಪತ್ತೆಯಾದ ಬೆನ್ನಲ್ಲಿಯೇ ಹಾವೇರಿ ತಾಲೂಕಿನ ಕುರಬಗೊಂಡ- ಬನ್ನಿಹಳ್ಳಿ ಗ್ರಾಮ ಹಾಗೂ ಹಾವೇರಿ ಸಮೀಪದ ಹೆಗ್ಗೆರೆಕೆರೆ ಪ್ರದೇಶದಲ್ಲಿ ಚಿರತೆಗಳ ಓಡಾಟ ಕಂಡು ಬಂದಿದ್ದು, ಕೃಷಿಕರು ಹಾಗೂ ಜನತೆ ಆತಂಕಗೊಂಡಿದ್ದಾರೆ.
ಗುರುವಾರ ರಾತ್ರಿ ತಾಲೂಕಿನ ಕುರುಬಗೊಂಡ -ಬನ್ನಿಹಳ್ಳಿ  ಗ್ರಾಮದ ಬಳಿ ಜೋಡಿ ಚಿರತೆಗಳ ಓಡಾಟವನ್ನು ಗಮನಿಸಿದ ಹೊಲದಲ್ಲಿ ನೀರು ಹಾಯಿಸುತ್ತಿದ್ದ  ರೈತರು
ಗ್ರಾಮಸ್ಥರು ಭಯಗೊಂಡು ಓಡಿ ಹೋಗಿದ್ದಾರೆ. ರಾತ್ರಿಯ ವೇಳೆ ಪದೇ ಪದೆ ಚಿರತೆಗಳು ಕಾಣಿಸಿಕೊಳ್ಳತ್ತಿದ್ದು, ರಾತ್ರಿಯ ವೇಳೆ ಹೊಲಗಳಿಗೆ ನೀರು ಹಾಯಿಸಲು ಹೋಗಲು ರೈತರು ಹೆದರುತ್ತಿದ್ದಾರೆ. ಇತ್ತ ಹಾವೇರಿನಗರಕ್ಕೆ ಸಮೀಪದಲ್ಲಿರುವ ಹೆಗ್ಗೆರೆಕೆರೆಯ ಹಿಂಭಾಗದಲ್ಲಿರುವ ಹಳೆ ಎಸ್‌ಪಿ ಕಚೇರಿ ಬಳಿ , ಕೆರೆಮತ್ತಿಹಳ್ಳಿ ಭಾಗದಲ್ಲಿ ಚಿರತೆಗಳು ಓಡಾಟವನ್ನು ಕೆಲವರು ಗಮನಿಸಿದ್ದಾರೆ.
ಕುಳೇನೂರು ಗ್ರಾಮದ ಬಳಿ ಚಿರತೆಮರಿಗಳು ಪತ್ತೆಯಾಗಿರುವ ಹಿನ್ನಲೆಯಲ್ಲಿ ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಎರಡು ಬೋನುಗಳನ್ನು ಇಟ್ಟಿದ್ದಾರೆ. ಆದರೆ ಚಿರತೆಗಳು ಬೋನಿಗೆ ಬಿದ್ದಿಲ್ಲ. ಇದೀಗ ಹಾವೇರಿಯ ಇನ್ನೊಂದು ಭಾಗದಲ್ಲಿ ಚಿರತೆಗಳು ಓಡಾಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಆಹಾರ ಹುಡುಕಿಕೊಂಡು, ಇನ್ಯಾವುದೋ ಕಾರಣಗಳಿಗೆ  ಚಿರತೆಗಳು ಕಾಡಿನಿಂದ ನಾಡಿಗೆ ಹೆಚ್ಚಾಗಿ ಬರುತ್ತಿವೆ. ಅದರಲ್ಲೂ ಹಾವೇರಿ ನಗರದ ಹೊರವಲಯದಲ್ಲಿ ಇರುವ ಕುರಚಲು ಕಾಡು  ಹಾಗೂ ಈ ಬಾರಿ ಮಳೆ ಹೆಚ್ಚಾದ ಕಾರಣಕ್ಕೆ  ಇದ್ದದರಲ್ಲಿ ಕಬ್ಬಿನ ಬೆಳೆ ಉತ್ತಮವಾಗಿದ್ದು, ಈ ಕಾರಣಕ್ಕೆ  ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ. ನಗರದ ವಸತಿ ಪ್ರದೇಶಗಳಲ್ಲಿ ಪದೇ ಪದೆ ಚಿರತೆಗಳು  ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಚಿರತೆ ಓಡಾಡುತ್ತಿರುವ ಪ್ರದೇಶಗಳಲ್ಲಿ ಬೋನಗಳನ್ನಿಟ್ಟು ಚಿರತೆಗಳನ್ನು ಕೂಡಲೇ ಸೆರೆ ಹಿಡಿದು ಕಾಡಿಗೆ ಅಥವಾ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವ ಕಾರ್ಯವನ್ನು ತ್ವರಿತವಾಗಿ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಚಿರತೆ ಹಿಡಿಯುವ ಕಾರ್ಯಕ್ಕೆ ವಲಯ ಅರಣ್ಯಾಧಿಕಾರಿ ಮಾಹಾಂತೇಶ‌ ನ್ಯಾಮತಿ, ಉಪ ವಲಯ ಅರಣ್ಯಾಧಿಕಾರಿ ಗಜೇಂದ್ರ, ಗಸ್ತು ಅರಣ್ಯ ಪಾಲಕ ಬಸವಣ್ಣೆಪ್ಪ ಮೆಣಸಿನಕಾಯಿ ಮತ್ತಿತರರು

 ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ಚಿರತೆಗಳ ಸೆರೆಗೆ ಬೋನಗಳು
ಹಾವೇರಿ ತಾಲೂಕಿನ ಕುಳೇನೂರುಗ್ರಾಮದ ಬಳಿ ಚಿರತೆಮರಿಗಳು ಪತ್ತೆಯಾದ ಹಿನ್ನಲೆಯಲ್ಲಿ ಚಿರತೆಗಳ ಸೆರೆಗೆ ಎರಡು ಬೋನಗಳನ್ನು ಇಡಲಾಗಿದೆ. ಆದರೆ ಚಿರತೆಗಳು ಸೆರೆಯಾಗಿಲ್ಲ. ಇದೀಗ ಚಿರತೆಗಳು ಕಂಡು ಬಂದಿರುವ ಪ್ರದೇಶಗಳಲ್ಲಿಯೂ ಸಹ  ಚಿರತೆಗಳ ಸೆರೆಗೆ ಬೋನಗಳನ್ನು ಇಡಲಾಗುವುದು ಎಂದು ಉಪ ವಲಯ ಅರಣ್ಯಾಧಿಕಾರಿ ಗಂಜೇಂದ್ರ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...