ಹಾವೇರಿಯ ಡಿಸಿ ಕಚೇರಿರಸ್ತೆಯಲ್ಲಿ ವ್ಯಕ್ತಿಗೆ ಚೂರಿ ಇರಿತ, ಗಾಯಾಳು ಹುಬ್ಬಳ್ಳಿಯ ಕಿಮ್ಸಗೆ
ಹಾವೇರಿ: ಜನನಿಬಿಡರಸ್ತೆಯಾಗಿರುವ ಇಲ್ಲಿನ ಡಿಸಿ ಕಚೇರಿಯ ರಸ್ತೆಯಲ್ಲಿ ವ್ಯಕ್ತಿಯೋರ್ವನಿಗೆ ಬೈಕ್ನಲ್ಲಿ ಬಂದ ಆಗುಂತಕರು ಚೂರಿಇಂದ ಇರಿದ ಘಟನೆ ಗುರುವಾರ ಸಂಜೆ ೫ರ ಸುಮಾರಿಗೆ ನಡೆದಿದೆ. ಚೂರಿ ಇರಿತಕ್ಕೆ ಒಳಗಾದ ವ್ಯಕ್ತಿಯನ್ನು ಹಾವೇರಿಯ ಬಸವೇಶ್ವರನಗರದ ನಿವಾಸಿ ಎಸ್ಬಿಐ ಬ್ಯಾಂಕಿನ ನಿವೃತ್ತ ಉದ್ಯೋಗಿ ೬೧ ವರ್ಷದ ಜಯರಾಮ ಕೊಲ್ಲಾಪುರ ಎಂದು ಗುರುತಿಸಲಾಗಿದೆ.
ಜಯರಾಮ ಕೊಲ್ಲಾಪುರ ಹಾಗೂ ಅವರ ಪುತ್ರ ಡಿಸಿ ಕಚೇರಿಯಿಂದ ನಗರಕ್ಕೆ ಬೈಕ್ನಲ್ಲಿ ಮರಳುತ್ತಿದ್ದ ವೇಳೆ ಇಲ್ಲಿನ ದೇವಗಿರಿಯಲ್ಲಾಪುರಬಳಿಯ ಪೆಟ್ರೋಲ್ ಪಂಪಬಳಿ ಎರಡು ಬೈಕ್ನಲ್ಲಿ ಆಗಮಿಸಿದ ನಾಲ್ವರು ಆಗುಂತಕರು ಜಯಮರಾಮ ಅವರ ಬೆನ್ನಿಗೆ ಚೂರಿಯಿಂದ ಇರಿದಿದ್ದಾರೆ ಎನ್ನಲಾಗಿದೆ.
ತೀವೃಗಾಯದಿಂದ ನರಳುತ್ತಾ ಬಿದ್ದಿದ್ದ ಜಯರಾಮ ಅವರನ್ನು ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗೆ ದಾಖಲಿಸಾಗಿತ್ತೆಂದು, ಚೂರಿ ಇರಿತದಿಂದಾದ ಗಾಯ ತೀವೃವಾಗಿರುವ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆಂದು ಜಯರಾಮ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈಘಟನೆಯಲ್ಲಿ ಜಯರಾಮ ಅವರ ಪುತ್ರ ಅಪಾಯದಿಂದ ಪಾರಾಗಿದ್ದಾನೆಂದು ಹೇಳಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗಣಾರೆ, ಹೆಚ್ಚುವರಿಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್, ಡಿವೈಎಸ್ಒಇ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆಂದು ತಿಳಿದು ಬಂದಿದೆ. ಹಾವೇರಿಗ್ರಾಮೀಣ ಪೊಲೀಸ್ ಠಾಣೆಯವಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.