ಹಾವೇರಿಯ ಹೆಗ್ಗೇರೆಕೆರೆಯ ಬಳಿ “ಹುಲಿಬಣ್ಣದ ಚಿಟ್ಟೆ”

Date:

ಹಾವೇರಿಯ ಹೆಗ್ಗೇರೆಕೆರೆಯ ಬಳಿ “ಹುಲಿಬಣ್ಣದ ಚಿಟ್ಟೆ”
ಹಾವೇರಿ: “ಪಾತರಗಿತ್ತಿ ಪಕ್ಕ ನೋಡಿದೇನಾ ಅಕ್ಕಾ” ಎಂದು ಕವಿತೆ ರಚಿಸಲು ವರಕವಿ ಬೇಂದ್ರೆಯವರಿಗೆ ಸ್ಫೂರ್ತಿ ನೀಡಿದ ಪಾತರಗಿತ್ತಿಗಳ ಲೋಕವೇ ಬಲು ಸೊಗಸು. ನಮ್ಮ ಸುತ್ತ ಮುತ್ತಲೂ ನಮ್ಮದೇ ಬಣ್ಣದ ಲೋಕದಂತೆ ಹಾರಾಡುತ್ತ ಹೂವಿಂದ ಹೂವಿಗೆ ಮೆಲುವಾಗಿ ಏರಿಳಿಯುತ್ತ ಇರುವ ಚಿಟ್ಟೆಗಳ ಚಿತ್ತಾರರ್ಷಕವಾದ ವರ್ಣಮಯ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲದು. ಇದೀಗ ಪರಿಸರದ ವಿಸ್ಮಯಗಳ ಅಲಯ ಹಾವೇರಿಯ ಐತಿಹಾಸಿಕ ಹೆಗ್ಗೇರೆಕೆರೆಯ ದಂಡೆಯಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು ಹಾರಾಟ ನಯನ ಮನೋಹರವಾಗಿದೆ.
‘ಪರಾಗಸ್ಪರ್ಶ ಕ್ರಿಯೆಗಳು ನಡೆಯುವುದು ಇವುಗಳ ಮುಖಾಂತರವೇ. ಹೆಚ್ಚಿನ ಹೂವುಗಳಲ್ಲಿ ಪಾತರಗಿತ್ತಿಗಳ ಮೂಲಕವೇ ಪರಾಗಸ್ಪರ್ಶಗಳಾಗುತ್ತವೆ. ಹೂವಿನ ಮಕರಂದವನ್ನು ಹೀರುವ ಮೂಲಕ ಪರಾಗಸ್ಪರ್ಶವನ್ನು ಸಾಧಿಸುವ ಚಿಟ್ಟೆಗಳು ಪ್ರಮುಖ ಪರಾಗಸ್ಪರ್ಶಿಗಳೂ ಹೌದು ಪರಾಗಸ್ಪರ್ಶವು ಗಿಡದಲ್ಲಿ ಕಾಯಿ, ಹಣ್ಣುಗಳಾಗಲು ಸಹಕಾರಿ. ಅದರಲ್ಲೂ ಅಪರೂಪದ ಸಾದಾ ಹುಲಿಬಣ್ಣದ ಚಿಟ್ಟೆಗಳು ಇಲ್ಲಿ ಜನ್ಮ ತಳೆದಿವೆ. ಬಳಿ, ಹಳದಿ, ಹಸಿರು, ನಸುಗೆಂಪು ಹೀಗೆ ನಾನಾ ನಮೂನಿಯ ಚಿಟ್ಟೆಗಳ ಲೋಕ ಹೆಗ್ಗೇರೆಕೆಎಯ ಪ್ರದೇಶದಲ್ಲಿ ಅನಾವರಣ ಗೊಂಡಿದೆ.
ಮೊಟ್ಟೆಯಿಂದ ಚಿಟ್ಟೆಯಾಗುವ ಬಗೆ: ಚಿಟ್ಟೆಗಳಿಗೆ ಈಗ ವಂಶಾಭಿವೃದ್ಧಿ ಸಮಯ. ಚಿಟ್ಟೆಗಳ ಜೀವನ ಚಕ್ರವು ಒಟ್ಟು ೪ ಹಂತಗಳಲ್ಲಿ ಸಾಗುತ್ತವೆ. ಅವು ಮೊಟ್ಟೆ, ಲಾರ್ವಾ (ಅಥವಾ ಕ್ಯಾಟರ್ಪಿಲ್ಲರ್/ಕಂಬಳಿಹುಳು). ಪ್ಯೂಪಾ ಮತ್ತು ವಯಸ್ಕ ಮೊಟ್ಟೆಗಳು ಸಾಮಾನ್ಯವಾಗಿ ಎಲೆಗ ಕೆಳಭಾಗದಲ್ಲಿ ಅಥವಾ ಕೆಲವು ಸಸ್ಯದ ಕಾಂಡಗಳ ಮೇಲೆ ಬಹಳ ಚಿಕ್ಕದಾಗಿ ಕಾಣಿಸಿಕೊಳ್ಳುತ್ತವೆ. ಒಮ್ಮೆ ಮೊಟ್ಟೆಯೊಳಗೆ ಅಭಿವೃದ್ಧಿ ಹೊಂದಿ, ಮರಿಹುಳಗಳು ಮೊಟ್ಟೆಯಿಂದ ಹೊರಬಂದು ಲಾರ್ವಾ ಹಂತಕ್ಕೆ ಕಾಲಿಡುತ್ತವೆ ಇವುಗಳನ್ನೇ ನಾವು ಕಂಬಳಿಹುಳಗಳ ರೂಪದಲ್ಲಿ ಕಾಣುತ್ತೇವೆ.
ಈ ಹಂತದಲ್ಲಿ ಇದು ಒಂದು ರೀತಿ ಹೊಟ್ಟೆಬಾಕನಂತೆ ತನ್ನದೇ ಚಿಪ್ಪು ಹಾಗೂ ಸಸ್ಯಗಳ ಎಲೆಗಳನ್ನು ತಿಂದು ಅಗತ್ಯವಾದ ಪೋಷಕಾಂಶಗಳನ್ನು ಪಡೆಯುತ್ತದೆ. ನಂತರದ ಒಂದು ರೀತಿಯ ನಾಟಕೀಯ ರೂಪಾಂತರಗೊಳ್ಳುತ್ತದೆ. ಇದು ವಿಶ್ರಾಂತಿಯ ಹಂತವಾಗಿದ್ದು, ಚಲಿಸಲೂ ಸಾಧ್ಯವಿಲ್ಲದೆಯೇ ವಿಶ್ರಾಂತ ಸ್ಥಿತಿಯಲ್ಲಿರುತ್ತವೆ. ಕೊನೆಯ ಹಂತದಲ್ಲಿ ಊದಿಕೊಂಡ ಹೊಟ್ಟೆ ಮತ್ತು ಸುಕ್ಕುಗಟ್ಟಿದ ರೆಕ್ಕೆಗಳೊಂದಿಗೆ ಹೊರಪೊರೆಯಿಂದ ಹೊರಬರುತ್ತದೆ. ಅದರ ವಯಸ್ಥ ಜೀವನದ ಮೊದಲ ಕೆಲವು ಗಂಟೆಗಳ ಕಾಲ ಚಿಟ್ಟೆಯಾಗಿ ಹೊರಹೊಮ್ಮಲು ಹಲವು ನೈಸರ್ಗಿಕ ಮತ್ತು ರಾಸಾಯನಿರ ಪ್ರಕ್ರಿಯೆಗಳನ್ನು ದಾಟಿ, ರೆಕ್ಕೆಗಳನ್ನು ಸಂಪೂರ್ಣವಾಗಿ ಒಣಗಿಸಿ, ವಿಸ್ತರಿಸಿದ ನಂತರ ವಯಸ್ಕ ಚಿಟ್ಟೆಯಾಗಿ ರೂಪುಗೊಳ್ಳುತ್ತದೆ.
ಬೆಳಗಿನ ಹೊತ್ತು ಇವುಗಳ ಚಟುವಟಿಕೆ ಇನ್ನೂ ಹೆಚ್ಚು, ಕಪ್ಪೆ, ಜೇಡ, ಪಕ್ಷಿ ಮೊದಲಾದ ಜೀವ ಜಂತುಗಳಿಗೆ ಆಹಾರದ ಭಾಗವಾಗುವ ಇವು, ಮಕರಂದ ಹೀರುತ್ತ, ಪರಾಗಸ್ಪರ್ಶ ಕ್ರಿಯೆಯ ಮೂಲಕ ತರು-ಲತೆಗಳನ್ನು ಅರಳಿಸುತ್ತವೆ. ಹಾಗಾಗಿ, ಪ್ರಕೃತಿಯ ಸಮತೋಲನದಲ್ಲಿ ಚಿಟ್ಟೆ ಸಂಕುಲಗಳ ಕೊಡುಗೆ ಅಪಾರ’. ಮಳೆಗಾಲ ಪ್ರಕೃತಿಗೆ ಚೆಲುವು ತುಂಬುವ ಕಾಲ. ಈ ಸಮಯ ಚಿಟ್ಟೆಗಳು ಹೂ ಗಿಡಗಳತ್ತ ಜೋತುಬೀಳುತ್ತವೆ. ಕೆಲವು ಪಾತರಗಿತ್ತಿಗಳು ಲಗುಬಗೆಯಿಂದ ಮಣ್ಣು, ಮರಳು, ಹೆಸರು ಸಮೀಪಕುಳಿತು ದೇಹಕ್ಕೆ ಅಗತ್ಯವಾದ ದ್ರವ ಮತ್ತು ಉಪ್ಪಿನ ಅಂಶಗಳನ್ನು ಹೀರುತ್ತವೆ. ಬಹುತೇಕಗಂಡು ಚಿಟ್ಟೆಗಳು ಇಂತಹ ಚಟುವಟಿಕೆಯಲ್ಲಿ ತೊಡಗಿ, ಹೆಣ್ಣು ಪತಂಗಗಳನ್ನು ಆಕರ್ಷಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
ಚಿತ್ರ/ಬರಹ: ಮಾಲತೇಶ ಅಂಗೂರ, ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿಯ ಹೆಗ್ಗೇರೆಕೆರೆಯ ಬಳಿ “ಹುಲಿಬಣ್ಣದ ಚಿಟ್ಟೆ”
ಹಾವೇರಿ: “ಪಾತರಗಿತ್ತಿ ಪಕ್ಕ ನೋಡಿದೇನಾ ಅಕ್ಕಾ” ಎಂದು ಕವಿತೆ ರಚಿಸಲು ವರಕವಿ ಬೇಂದ್ರೆಯವರಿಗೆ ಸ್ಫೂರ್ತಿ ನೀಡಿದ ಪಾತರಗಿತ್ತಿಗಳ ಲೋಕವೇ ಬಲು ಸೊಗಸು. ನಮ್ಮ ಸುತ್ತ ಮುತ್ತಲೂ ನಮ್ಮದೇ ಬಣ್ಣದ ಲೋಕದಂತೆ ಹಾರಾಡುತ್ತ ಹೂವಿಂದ ಹೂವಿಗೆ ಮೆಲುವಾಗಿ ಏರಿಳಿಯುತ್ತ ಇರುವ ಚಿಟ್ಟೆಗಳ ಚಿತ್ತಾರರ್ಷಕವಾದ ವರ್ಣಮಯ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲದು. ಇದೀಗ ಪರಿಸರದ ವಿಸ್ಮಯಗಳ ಅಲಯ ಹಾವೇರಿಯ ಐತಿಹಾಸಿಕ ಹೆಗ್ಗೇರೆಕೆರೆಯ ದಂಡೆಯಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು ಹಾರಾಟ ನಯನ ಮನೋಹರವಾಗಿದೆ.
‘ಪರಾಗಸ್ಪರ್ಶ ಕ್ರಿಯೆಗಳು ನಡೆಯುವುದು ಇವುಗಳ ಮುಖಾಂತರವೇ. ಹೆಚ್ಚಿನ ಹೂವುಗಳಲ್ಲಿ ಪಾತರಗಿತ್ತಿಗಳ ಮೂಲಕವೇ ಪರಾಗಸ್ಪರ್ಶಗಳಾಗುತ್ತವೆ. ಹೂವಿನ ಮಕರಂದವನ್ನು ಹೀರುವ ಮೂಲಕ ಪರಾಗಸ್ಪರ್ಶವನ್ನು ಸಾಧಿಸುವ ಚಿಟ್ಟೆಗಳು ಪ್ರಮುಖ ಪರಾಗಸ್ಪರ್ಶಿಗಳೂ ಹೌದು ಪರಾಗಸ್ಪರ್ಶವು ಗಿಡದಲ್ಲಿ ಕಾಯಿ, ಹಣ್ಣುಗಳಾಗಲು ಸಹಕಾರಿ. ಅದರಲ್ಲೂ ಅಪರೂಪದ ಸಾದಾ ಹುಲಿಬಣ್ಣದ ಚಿಟ್ಟೆಗಳು ಇಲ್ಲಿ ಜನ್ಮ ತಳೆದಿವೆ. ಬಳಿ, ಹಳದಿ, ಹಸಿರು, ನಸುಗೆಂಪು ಹೀಗೆ ನಾನಾ ನಮೂನಿಯ ಚಿಟ್ಟೆಗಳ ಲೋಕ ಹೆಗ್ಗೇರೆಕೆಎಯ ಪ್ರದೇಶದಲ್ಲಿ ಅನಾವರಣ ಗೊಂಡಿದೆ.
ಮೊಟ್ಟೆಯಿಂದ ಚಿಟ್ಟೆಯಾಗುವ ಬಗೆ: ಚಿಟ್ಟೆಗಳಿಗೆ ಈಗ ವಂಶಾಭಿವೃದ್ಧಿ ಸಮಯ. ಚಿಟ್ಟೆಗಳ ಜೀವನ ಚಕ್ರವು ಒಟ್ಟು ೪ ಹಂತಗಳಲ್ಲಿ ಸಾಗುತ್ತವೆ. ಅವು ಮೊಟ್ಟೆ, ಲಾರ್ವಾ (ಅಥವಾ ಕ್ಯಾಟರ್ಪಿಲ್ಲರ್/ಕಂಬಳಿಹುಳು). ಪ್ಯೂಪಾ ಮತ್ತು ವಯಸ್ಕ ಮೊಟ್ಟೆಗಳು ಸಾಮಾನ್ಯವಾಗಿ ಎಲೆಗ ಕೆಳಭಾಗದಲ್ಲಿ ಅಥವಾ ಕೆಲವು ಸಸ್ಯದ ಕಾಂಡಗಳ ಮೇಲೆ ಬಹಳ ಚಿಕ್ಕದಾಗಿ ಕಾಣಿಸಿಕೊಳ್ಳುತ್ತವೆ. ಒಮ್ಮೆ ಮೊಟ್ಟೆಯೊಳಗೆ ಅಭಿವೃದ್ಧಿ ಹೊಂದಿ, ಮರಿಹುಳಗಳು ಮೊಟ್ಟೆಯಿಂದ ಹೊರಬಂದು ಲಾರ್ವಾ ಹಂತಕ್ಕೆ ಕಾಲಿಡುತ್ತವೆ ಇವುಗಳನ್ನೇ ನಾವು ಕಂಬಳಿಹುಳಗಳ ರೂಪದಲ್ಲಿ ಕಾಣುತ್ತೇವೆ.
ಈ ಹಂತದಲ್ಲಿ ಇದು ಒಂದು ರೀತಿ ಹೊಟ್ಟೆಬಾಕನಂತೆ ತನ್ನದೇ ಚಿಪ್ಪು ಹಾಗೂ ಸಸ್ಯಗಳ ಎಲೆಗಳನ್ನು ತಿಂದು ಅಗತ್ಯವಾದ ಪೋಷಕಾಂಶಗಳನ್ನು ಪಡೆಯುತ್ತದೆ. ನಂತರದ ಒಂದು ರೀತಿಯ ನಾಟಕೀಯ ರೂಪಾಂತರಗೊಳ್ಳುತ್ತದೆ. ಇದು ವಿಶ್ರಾಂತಿಯ ಹಂತವಾಗಿದ್ದು, ಚಲಿಸಲೂ ಸಾಧ್ಯವಿಲ್ಲದೆಯೇ ವಿಶ್ರಾಂತ ಸ್ಥಿತಿಯಲ್ಲಿರುತ್ತವೆ. ಕೊನೆಯ ಹಂತದಲ್ಲಿ ಊದಿಕೊಂಡ ಹೊಟ್ಟೆ ಮತ್ತು ಸುಕ್ಕುಗಟ್ಟಿದ ರೆಕ್ಕೆಗಳೊಂದಿಗೆ ಹೊರಪೊರೆಯಿಂದ ಹೊರಬರುತ್ತದೆ. ಅದರ ವಯಸ್ಥ ಜೀವನದ ಮೊದಲ ಕೆಲವು ಗಂಟೆಗಳ ಕಾಲ ಚಿಟ್ಟೆಯಾಗಿ ಹೊರಹೊಮ್ಮಲು ಹಲವು ನೈಸರ್ಗಿಕ ಮತ್ತು ರಾಸಾಯನಿರ ಪ್ರಕ್ರಿಯೆಗಳನ್ನು ದಾಟಿ, ರೆಕ್ಕೆಗಳನ್ನು ಸಂಪೂರ್ಣವಾಗಿ ಒಣಗಿಸಿ, ವಿಸ್ತರಿಸಿದ ನಂತರ ವಯಸ್ಕ ಚಿಟ್ಟೆಯಾಗಿ ರೂಪುಗೊಳ್ಳುತ್ತದೆ.
ಬೆಳಗಿನ ಹೊತ್ತು ಇವುಗಳ ಚಟುವಟಿಕೆ ಇನ್ನೂ ಹೆಚ್ಚು, ಕಪ್ಪೆ, ಜೇಡ, ಪಕ್ಷಿ ಮೊದಲಾದ ಜೀವ ಜಂತುಗಳಿಗೆ ಆಹಾರದ ಭಾಗವಾಗುವ ಇವು, ಮಕರಂದ ಹೀರುತ್ತ, ಪರಾಗಸ್ಪರ್ಶ ಕ್ರಿಯೆಯ ಮೂಲಕ ತರು-ಲತೆಗಳನ್ನು ಅರಳಿಸುತ್ತವೆ. ಹಾಗಾಗಿ, ಪ್ರಕೃತಿಯ ಸಮತೋಲನದಲ್ಲಿ ಚಿಟ್ಟೆ ಸಂಕುಲಗಳ ಕೊಡುಗೆ ಅಪಾರ’. ಮಳೆಗಾಲ ಪ್ರಕೃತಿಗೆ ಚೆಲುವು ತುಂಬುವ ಕಾಲ. ಈ ಸಮಯ ಚಿಟ್ಟೆಗಳು ಹೂ ಗಿಡಗಳತ್ತ ಜೋತುಬೀಳುತ್ತವೆ. ಕೆಲವು ಪಾತರಗಿತ್ತಿಗಳು ಲಗುಬಗೆಯಿಂದ ಮಣ್ಣು, ಮರಳು, ಹೆಸರು ಸಮೀಪಕುಳಿತು ದೇಹಕ್ಕೆ ಅಗತ್ಯವಾದ ದ್ರವ ಮತ್ತು ಉಪ್ಪಿನ ಅಂಶಗಳನ್ನು ಹೀರುತ್ತವೆ. ಬಹುತೇಕಗಂಡು ಚಿಟ್ಟೆಗಳು ಇಂತಹ ಚಟುವಟಿಕೆಯಲ್ಲಿ ತೊಡಗಿ, ಹೆಣ್ಣು ಪತಂಗಗಳನ್ನು ಆಕರ್ಷಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
ಚಿತ್ರ/ಬರಹ: ಮಾಲತೇಶ ಅಂಗೂರ, ಹಾವೇರಿ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...